MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • Garuda Purana: ಸಾವಿನ ಸಮಯದಲ್ಲಿ ಈ ವಸ್ತುಗಳು ಬಳಿಯಿದ್ದರೆ ನೇರ ಸ್ವರ್ಗವೇ ಪ್ರಾಪ್ತಿ!

Garuda Purana: ಸಾವಿನ ಸಮಯದಲ್ಲಿ ಈ ವಸ್ತುಗಳು ಬಳಿಯಿದ್ದರೆ ನೇರ ಸ್ವರ್ಗವೇ ಪ್ರಾಪ್ತಿ!

ಸಾವಿನ ಸಮಯದಲ್ಲಿ ಈ ವಸ್ತುಗಳು ಹತ್ತಿರದಲ್ಲಿದ್ದರೆ, ಯಮದೂತರು ತೊಂದರೆಗೊಳಪಡಿಸುವುದಿಲ್ಲ ಮತ್ತು ಆತ್ಮವು ಸ್ವರ್ಗದಲ್ಲಿ ನೆಲೆಸುತ್ತದೆ ಎನ್ನುತ್ತದೆ ಗರುಡ ಪುರಾಣ. ಯಾವುವು ಈ ವಸ್ತುಗಳು?

2 Min read
Suvarna News
Published : Apr 04 2023, 10:31 AM IST
Share this Photo Gallery
  • FB
  • TW
  • Linkdin
  • Whatsapp
17

ಗರುಡ ಪುರಾಣವು ಹಿಂದೂ ಧರ್ಮದಲ್ಲಿನ 18 ಮಹಾಪುರಾಣ ಗ್ರಂಥಗಳಲ್ಲಿ ಒಂದಾಗಿದೆ. ಗರುಡ ಪುರಾಣ ಪಠ್ಯವು ಅನೇಕ ಆವೃತ್ತಿಗಳಲ್ಲಿದ್ದು, 15000ಕ್ಕೂ ಹೆಚ್ಚು ಪದ್ಯಗಳನ್ನು ಒಳಗೊಂಡಿದೆ. ಸ್ವರ್ಗ, ನರಕ, ಜನ್ಮ, ಆತ್ಮ, ಪುನರ್ಜನ್ಮಗಳ ಸುತ್ತ ಇದರ ಪುರಾಣ ಸುತ್ತುವರಿಯುತ್ತದೆ. ಮುಖ್ಯವಾಗಿ ವಿಷ್ಣುವು ತನ್ನ ವಾಹನ ಗರುಡನಿಗೆ ಸಾವಿನ ನಂತರದ ದಿನಗಳು ಹೇಗಿರುತ್ತವೆ ಎಂಬುದನ್ನು ವಿವರಿಸುವುದನ್ನು ಈ ಪುಸ್ತಕದಲ್ಲಿ ದಾಖಲಿಸಲಾಗಿದೆ. 

27

ಸಾವಿನ ನಂತರ ಸ್ವರ್ಗ ಅಥವಾ ನರಕವು ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ, ಅದು ವ್ಯಕ್ತಿಯ ಕಾರ್ಯಗಳನ್ನು ಆಧರಿಸಿರುತ್ತದೆ. ಗರುಡ ಪುರಾಣದಲ್ಲಿ, ಭಗವಾನ್ ವಿಷ್ಣುವು ಒಬ್ಬ ವ್ಯಕ್ತಿಯು ಮರಣದ ಸಮಯದಲ್ಲಿ ಕೆಲ ವಸ್ತುಗಳನ್ನು ಬಳಿಯಲ್ಲಿ ಹೊಂದಿದ್ದರೆ ಆಗ, ಮರಣದ ನಂತರ ಆತ್ಮವು ದುಃಖವನ್ನು ಅನುಭವಿಸುವುದಿಲ್ಲ ಮತ್ತು ಸ್ವರ್ಗದಲ್ಲಿ ಸ್ಥಾನವನ್ನು ಪಡೆಯುತ್ತದೆ ಎಂದು ಹೇಳುತ್ತಾನೆ.
 

37

ಗರುಡ ಪುರಾಣದ ಒಂಬತ್ತನೇ ಅಧ್ಯಾಯದಲ್ಲಿ ಈ ಪರಿಹಾರವನ್ನು ಉಲ್ಲೇಖಿಸಲಾಗಿದೆ. ಒಬ್ಬ ವ್ಯಕ್ತಿಯು ಮರಣ ಹೊಂದುವಾಗ ಅವನ ಬಳಿ ಇವುಗಳಲ್ಲಿ ಯಾವ ವಸ್ತುವನ್ನಾದರೂ ಇರಿಸಿದರೆ, ಯಮದೂತರು ಅವನನ್ನು ತೊಂದರೆಗೊಳಿಸುವುದಿಲ್ಲ ಮತ್ತು ಆತ್ಮಕ್ಕೆ ಸ್ವರ್ಗದಲ್ಲಿ ಸ್ಥಾನ ಸಿಗುತ್ತದೆ ಎಂದು ಇದರಲ್ಲಿ ಹೇಳಲಾಗಿದೆ. ಇಂಥ ಪವಿತ್ರ ವಸ್ತುಗಳು ಯಾವೆಲ್ಲ ನೋಡೋಣ.

47

ಒಬ್ಬ ವ್ಯಕ್ತಿ ಸಾಯುವ ಹಂತದಲ್ಲಿದ್ದಾಗ ಅವನನ್ನು ತುಳಸಿ ಗಿಡದ ಬಳಿ ಮಲಗಿಸಬೇಕು. ಇದರೊಂದಿಗೆ ತುಳಸಿ ಎಲೆ ಮತ್ತು ತುಳಸಿ ಬೀಜಗಳನ್ನು ಹಣೆಯ ಮೇಲೆ ಇಡಬೇಕು. ಹೀಗೆ ಮಾಡುವುದರಿಂದ ವ್ಯಕ್ತಿಯ ಆತ್ಮವು ಮರಣಾನಂತರ ಯಮ ಲೋಕಕ್ಕೆ ಹೋಗುವುದಿಲ್ಲ.

57

ಮರಣಾನಂತರ ಸತ್ತವರ ಬಾಯಿಗೆ ಗಂಗಾಜಲ ಮತ್ತು ತುಳಸಿ ಎಲೆಗಳನ್ನು ಹಾಕುವುದು ಮುಖ್ಯವಾಗಿದೆ. ಆದರೆ ಒಬ್ಬ ವ್ಯಕ್ತಿಯ ಮರಣದ ಸಮಯ ಹತ್ತಿರದಲ್ಲಿದ್ದರೆ, ಅದನ್ನು ಸಾಯುವ ಮೊದಲು, ಅವನ ಬಾಯಿಯಲ್ಲಿ ಗಂಗಾ ಜಲವನ್ನು ಹಾಕಿ. ಇದು ಅವನ ಜೀವಮಾನದ ಎಲ್ಲಾ ಪಾಪಗಳನ್ನು ನಾಶಪಡಿಸುತ್ತದೆ ಮತ್ತು ಮರಣದ ನಂತರ ಆತ್ಮವು ಸ್ವರ್ಗದಲ್ಲಿ ಸ್ಥಾನ ಪಡೆಯುತ್ತದೆ..

67

ಕುಶ(ದರ್ಬೆ) ಒಂದು ರೀತಿಯ ಪವಿತ್ರ ಹುಲ್ಲು. ಮರಣದ ಸಮಯದಲ್ಲಿ, ಒಬ್ಬ ವ್ಯಕ್ತಿಯನ್ನು ದರ್ಬೆಯ ಆಸನದ ಮೇಲೆ ಮಲಗಿಸಿ ಮತ್ತು ತುಳಸಿ ಎಲೆಯನ್ನು ಬಾಯಿಯಲ್ಲಿ ಇಟ್ಟರೆ, ಅಂತಹ ವ್ಯಕ್ತಿಯ ಆತ್ಮವು ಸ್ವರ್ಗವನ್ನು ತಲುಪುತ್ತದೆ.

 

77

ಕಪ್ಪು ಎಳ್ಳು ವಿಷ್ಣುವಿನ ಕೊಳಕಿನಿಂದ ಹುಟ್ಟಿಕೊಂಡಿದೆ ಎಂದು ಹೇಳಲಾಗುತ್ತದೆ. ಸಾವಿನ ಮೊದಲು, ವ್ಯಕ್ತಿಯ ಕೈಯಲ್ಲಿ ಕಪ್ಪು ಎಳ್ಳಿನ ದಾನ ಮಾಡಿಸಿ. ಈ ಕಾರಣದಿಂದಾಗಿ, ಯಮದೂತರು ಸಾವಿನ ನಂತರ ಆತ್ಮವನ್ನು ತೊಂದರೆಗೊಳಿಸುವುದಿಲ್ಲ. ಅದೇ ಸಮಯದಲ್ಲಿ, ಅಸುರರು, ದೈತ್ಯರು ಮತ್ತು ದಾನವರು ಎಲ್ಲರೂ ವ್ಯಕ್ತಿಯಿಂದ ದೂರ ಓಡಿ ಹೋಗುತ್ತಾರೆ

About the Author

SN
Suvarna News

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved