MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Astrology
  • Festivals
  • ಉತ್ತರಕನ್ನಡ: ಇಡಗುಂಜಿಯಲ್ಲಿ ಚೌತಿಯ ಸಂಭ್ರಮ, ವಿಘ್ನ ನಿವಾರಕನ ದರ್ಶನಕ್ಕೆ ಜನಸಾಗರ

ಉತ್ತರಕನ್ನಡ: ಇಡಗುಂಜಿಯಲ್ಲಿ ಚೌತಿಯ ಸಂಭ್ರಮ, ವಿಘ್ನ ನಿವಾರಕನ ದರ್ಶನಕ್ಕೆ ಜನಸಾಗರ

ಉತ್ತರಕನ್ನಡ(ಆ.31):  ಇಂದು ನಾಡಿನಾದ್ಯಂತ ಗಣೇಶ ಚತುರ್ಥಿಯ ಸಂಭ್ರಮ. ರಾಜ್ಯದ ಮೂಲೆ ಮೂಲೆಯಲ್ಲೂ ಗಣೇಶನ ಮೂರ್ತಿಯನ್ನಿರಿಸಿ ಪೂಜೆ ಸಲ್ಲಿಸಲಾಗುತ್ತಿದ್ರೆ, ಗಣಪತಿ ಕ್ಷೇತ್ರಗಳಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ವಿವಿಧ ಪೂಜೆ, ಪುನಸ್ಕಾರಗಳನ್ನು ನಡೆಸಲಾಗುತ್ತಿದೆ. 

1 Min read
Girish Goudar
Published : Aug 31 2022, 12:36 PM IST
Share this Photo Gallery
  • FB
  • TW
  • Linkdin
  • Whatsapp
15

ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ಇಡಗುಂಜಿ ಕ್ಷೇತ್ರದಲ್ಲಂತೂ ಬೆಳಗ್ಗೆಯಿಂದಲೂ ಜನಸಾಗರ ದೇವರ ದರ್ಶನಕ್ಕೆ ಹರಿಬರುತ್ತಿದ್ದು, ರಾಜ್ಯ, ಹೊರ ರಾಜ್ಯಗಳಿಂದ ಬರುವಂತಹ ಭಕ್ತಾಧಿಗಳು ಶ್ರೀ ಕ್ಷೇತ್ರಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. 

25

ಸುಮಾರು 3 ಕಿ.ಮೀ. ದೂರದಿಂದ ದೇವರ ದರ್ಶನಕ್ಕಾಗಿ ನಡೆದುಕೊಂಡು ಬರುತ್ತಿರುವ ಭಕ್ತಾಧಿಗಳು, ದೇವಳದ ಆವರಣದಲ್ಲಿ ಸಾಲಾಗಿ ಸಾಗಿ ಗಣೇಶನ ದರ್ಶನ ಪಡೆಯುತ್ತಿದ್ದಾರೆ.

35

ಬೆಳಗ್ಗೆ ಸುಮಾರು 4 ಗಂಟೆಯಿಂದಲೇ ದೇವಳಕ್ಕೆ ಸಾವಿರಾರು ಭಕ್ತಾಧಿಗಳ ಆಗಮನವಾಗುತ್ತಿದ್ದು, ಭಕ್ತಾಧಿಗಳ ಭಾರೀ ಸಂಖ್ಯೆಯ ಹಿನ್ನೆಲೆ ಕ್ವಿಂಟಾಲ್‌ಗಟ್ಟಲೇ ಪಂಚಕಜ್ಜಾಯ ತಯಾರಿ ಮಾಡಲಾಗಿದೆ. ಅಲ್ಲದೇ, ಬೆಳಗ್ಗೆಯಿಂದ ಸಂಜೆಯವರೆಗೆ ಇಡಗುಂಜಿ ಕ್ಷೇತ್ರದಲ್ಲಿ 200 ಗಣಹೋಮ ನಡೆಯಲಿದ್ದು, ಸುಮಾರು 30ರಿಂದ 40,000 ತೆಂಗಿನಕಾಯಿ ವಿನಾಯಕನಿಗೆ ಅರ್ಪಣೆ ಮಾಡಲಾಗುತ್ತಿದೆ. 

45

ಹೊನ್ನಾವರದ ಇಡಗುಂಜಿ ಕ್ಷೇತ್ರ ದೇಶದಲ್ಲೇ ಅತೀ ವಿಶಿಷ್ಠವಾಗಿದ್ದು, ದ್ವಿದಂತ ಹಾಗೂ ದ್ವಿಭುಜವಿರುವ ಅತೀ ವಿಶೇಷ ಗಣಪತಿ ಇಲ್ಲಿ ಕಾಣಬಹುದಾಗಿದೆ. ಇನ್ನು ಕಿಲೋಮೀಟರ್‌ಗಟ್ಟಲೇ ಸಾಲಿನಿಂದ ಬರುವ ಭಕ್ತಾಧಿಗಳಿಗಾಗಿ ದೇವಳದ ಸಮೀಪ ಪಾರ್ಕಿಂಗ್ ವ್ಯವಸ್ಥೆ ಮಾಡಿಲ್ಲ, ಪಾನೀಯದ ವ್ಯವಸ್ಥೆ ನಡೆಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

55

ವೃದ್ಧರು, ಸಣ್ಣ ಮಕ್ಕಳು 2-3 ಕಿ.ಮೀ ನಡೆದುಕೊಂಡೇ ಬರಬೇಕಾದ್ದರಿಂದ ಯಾವುದೇ ಸೌಲಭ್ಯವಿಲ್ಲವೆಂದು ಅಸಮಾಧಾನ ತೋರ್ಪಡಿಸಿದ್ದಾರೆ.

About the Author

GG
Girish Goudar
ಏಷ್ಯಾನೆಟ್‌ ಸುವರ್ಣ ನ್ಯೂಸ್‌.ಕಾಮ್‌ನಲ್ಲಿ ಹಿರಿಯ ಉಪ ಸಂಪಾದಕ. ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದೇನೆ. ನನ್ನ ಊರು ಬಾಗಲಕೋಟೆ ಜಿಲ್ಲೆಯ ಹುನಗುಂದ . ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂಎಸ್‌ಸಿ ಎಲೆಕ್ಟ್ರಾನಿಕ್‌ ಮೀಡಿಯಾ ಪದವಿ ಪಡೆದಿದ್ದೇನೆ. ಈಟಿವಿ ಭಾರತ್‌, ವೇ ಟು ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಸಂಪಾದಕನಾಗಿ ಕೆಲಸ ಮಾಡಿದ್ದೇನೆ. ಕ್ರೀಡೆ, ಚಲನಚಿತ್ರ, ರಾಜಕೀಯ ಸುದ್ದಿಗಳ ಬಗ್ಗೆ ಅತೀವ ಆಸಕ್ತಿ ಇದೆ. ಸಂಗೀತ ಕೇಳುವುದು, ಕ್ರಿಕೆಟ್‌ ಆಡುವುದು ನೆಚ್ಚಿನ ಹವ್ಯಾಸಗಳಾಗಿವೆ.
ಉತ್ತರ ಕನ್ನಡ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved