MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Festivals
  • ಒಳ್ಳೆ ಗಂಡನನ್ನ ಪಡೆಯಲು ಶಕ್ತಿಶಾಲಿ ಮಂತ್ರ ಪಠಿಸಿ: ಕಂಕಣ ಭಾಗ್ಯಕ್ಕೆ ಪರಿಣಾಮಕಾರಿ ಮಂತ್ರ

ಒಳ್ಳೆ ಗಂಡನನ್ನ ಪಡೆಯಲು ಶಕ್ತಿಶಾಲಿ ಮಂತ್ರ ಪಠಿಸಿ: ಕಂಕಣ ಭಾಗ್ಯಕ್ಕೆ ಪರಿಣಾಮಕಾರಿ ಮಂತ್ರ

Desired Husband And Quick Marriage Mantra: ಕೈಲಾಸನಂದ ಗಿರಿ ಸ್ವಾಮೀಜಿಯವರು ಯುವತಿಯರಿಗೆ ಕಂಕಣ ಭಾಗ್ಯ ಕೂಡಿ ಬರಲು ಶಕ್ತಿಶಾಲಿ ಮಂತ್ರವನ್ನು ಸೂಚಿಸಿದ್ದಾರೆ. ಈ ಮಂತ್ರವನ್ನು ಪಠಿಸಿದರೆ ಸೂಕ್ತ ವರ ಹಾಗೂ ಅಡೆತಡೆಗಳಿಲ್ಲದ ಮದುವೆ ನಡೆಯುತ್ತದೆ ಎಂದು ಹೇಳಿದ್ದಾರೆ.

2 Min read
Author : Mahmad Rafik
Published : Jul 26 2025, 05:38 PM IST
Share this Photo Gallery
  • FB
  • TW
  • Linkdin
  • Whatsapp
18
 ಮಕ್ಕಳ ಮದುವೆ ವಿಳಂಬ
Image Credit : AI Meta

ಮಕ್ಕಳ ಮದುವೆ ವಿಳಂಬ

ಪೋಷಕರು ತಮ್ಮ ಮಗಳಿಗೆ ಒಳ್ಳೆಯ ಗಂಡ ಸಿಗಬೇಕೆಂದು ಹಲವು ಪೂಜೆಗಳನ್ನು ಮಾಡಿಸುತ್ತಾರೆ. ಇಂದಿನ ಯುವತಿಯರು ಸಹ ತಮ್ಮ ಸಂಗಾತಿ ಹೇಗಿರಬೇಕೆಂದು ತಮ್ಮದೇ ಅದ ಕಲ್ಪನಾ ಗೋಪುರವನ್ನು ಕಟ್ಟಿಕೊಂಡಿರುತ್ತಾರೆ. ಕೆಲವೊಮ್ಮೆ ಗ್ರಹಗಳು ಮತ್ತು ನಕ್ಷತ್ರಗಳು ಅಥವಾ ಕೆಲವು ದೋಷಗಳಿಂದಾಗಿ ಮಕ್ಕಳ ಮದುವೆ ವಿಳಂಬ ಆಗುತ್ತಿರುತ್ತದೆ.

28
ಅಡೆತಡೆಗಳಿಲ್ಲದೇ ಮದುವೆ
Image Credit : AI Meta

ಅಡೆತಡೆಗಳಿಲ್ಲದೇ ಮದುವೆ

ಕೈಲಾಸನಂದ ಗಿರಿ ಸ್ವಾಮೀಜಿಯವರು ಯುವತಿಯರಿಗೆ ಕಂಕಣ ಭಾಗ್ಯ ಕೂಡಿ ಬರಲು ಶಕ್ತಿಶಾಲಿ ಮಂತ್ರವೊಂದು ಜಪಿಸಬೇಕು ಎಂದು ಸಲಹೆ ನೀಡಿದ್ದಾರೆ. ಈ ಮಂತ್ರವನ್ನು ಸರಿಯಾಗಿ ಪಠಿಸಿದ್ರೆ ಹುಡುಗಿಯರು ಸೂಕ್ತ ವರನನ್ನು ಪಡೆಯುತ್ತಾರೆ. ಯಾವುದೇ ಅಡೆತಡೆಗಳಿಲ್ಲದೇ ಮದುವೆ ನಡೆಯುತ್ತದೆ ಎಂದು ಕೈಲಾಸನಂದ ಗಿರಿ ಸ್ವಾಮೀಜಿ ಹೇಳುತ್ತಾರೆ. ಹಾಗಾದ್ರೆ ಕೈಲಾಸನಂದ ಗಿರಿ ಸ್ವಾಮೀಜಿ ಹೇಳಿದ ಶಕ್ತಿಶಾಲಿ ಮಂತ್ರ ಯಾವುದು ಎಂದು ನೋಡೋಣ ಬನ್ನಿ.

Related Articles

Related image1
ಈ 4 ರಾಶಿಯವರ ಮದುವೆ ಆಗೋದು ಲೇಟ್; ಪದೇ ಪದೇ ಕೇಳಿ ನೋವುಂಟು ಮಾಡಬೇಡಿ!
Related image2
ಈ ವಿಚಿತ್ರ ಹಳ್ಳಿಯಲ್ಲಿ ಗಂಡಸರು ಎರಡು ಮದುವೆ ಆಗಲೇಬೇಕು!
38
ಕ್ರಮಬದ್ಧವಾಗಿ ಮಂತ್ರ ಪಠಿಸಿ
Image Credit : AI Meta

ಕ್ರಮಬದ್ಧವಾಗಿ ಮಂತ್ರ ಪಠಿಸಿ

ಒಳ್ಳೆ ವರನನ್ನು ಹುಡುಕುತ್ತಿರುವ ಹುಡುಗಿಯರು ಪ್ರತಿನಿತ್ಯ ಕಾತ್ಯಾಯನಿ ಮಹಾಮಾಯೆ, ಮಹಾಯೋಗಿನ್ಯಾಧೀಶ್ವರಿ ಪಠಿಸಬೇಕು. "ನಂದಗೋಪಸುತನ್ ದೇವಿ, ಪತಿ ಮೇ ಕುರೂ ತೇ ನಮಃ" ಎಂಬ ಮಂತ್ರವನ್ನು ಕ್ರಮಬದ್ಧವಾಗಿ ಪಠಿಸಬೇಕು.

48
ಮಾ ಕಾತ್ಯಾಯನಿ ಮಂತ್ರದ ಹಿನ್ನೆಲೆ
Image Credit : AI Meta

ಮಾ ಕಾತ್ಯಾಯನಿ ಮಂತ್ರದ ಹಿನ್ನೆಲೆ

ಭಾಗವತ ಪುರಾಣದಲ್ಲಿ ಮಾತಾ ಕಾತ್ಯಾಯನಿಯನ್ನು ಪೂಜೆ ಮಾಡುವ ಅವಿವಾಹಿತ ಕನ್ಯೆಯರು ಒಳ್ಳೆಯ ಗಂಡನನ್ನು ಪಡೆಯುತ್ತಾರೆ ಎಂದು ಬರೆಯಲಾಗಿದೆ. ಬಯಸಿದ ವರನಿಗಾಗಿ ಯುವತಿಯರು ಮಾತಾ ಕಾತ್ಯಾಯನಿಯನ್ನು ಪೂಜಿಸುತ್ತಾರೆ. ಕಾತ್ಯಾಯನಿ ದೇವಿಯನ್ನು ದುರ್ಗೆಯ ಆರನೇ ರೂಪ ಎಂದು ಹೇಳಲಾಗುತ್ತದೆ. ಕೃಷ್ಣನನ್ನು ತಮ್ಮ ಪತಿಯನ್ನಾಗಿ ಪಡೆಯಲು ಗೋಪಿಕೆಯರು ಈ ಮಂತ್ರವನ್ನು ಪಠಿಸುತ್ತಿದ್ದರು ಎಂದು ಹೇಳಲಾಗುತ್ತದೆ.

58
ಈ ಮಂತ್ರ ಯಾರು ಜಪಿಸಬಹುದು?
Image Credit : AI Meta

ಈ ಮಂತ್ರ ಯಾರು ಜಪಿಸಬಹುದು?

ಕಾತ್ಯಾಯನಿ ಮಂತ್ರಗಳನ್ನು ಮಾಂಗಲ್ಯ ದೋಷಗಳಿಂದ ಬಳಲುತ್ತಿರುವವರು ಪಠಿಸಬಹುದು. ದಾಂಪತ್ಯದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುವವರು ಸಹ ಈ ಮಂತ್ರಗಳನ್ನು ಪಠಿಸಬೇಕು. ಪತಿಯ ದೀರ್ಘಾಯುಷ್ಯಕ್ಕಾಗಿಯೂ ಮಹಿಳೆಯರು ಕಾತ್ಯಾಯನಿ ಮಂತ್ರ ಪಠಿಸಬಹುದು ಜ್ಯೋತಿಷ್ಯ ಶಾಸ್ತ್ರಜ್ಞರು ಸಲಹೆ ನೀಡತ್ತಾರೆ.

68
FAQs: ತ್ವರಿತ ವಿವಾಹಕ್ಕಾಗಿ ಕಾತ್ಯಾಯನಿ ಮಂತ್ರ!
Image Credit : AI Meta

FAQs: ತ್ವರಿತ ವಿವಾಹಕ್ಕಾಗಿ ಕಾತ್ಯಾಯನಿ ಮಂತ್ರ!

ಪ್ರಶ್ನೆ: ಮಾ ಕಾತ್ಯಾಯನಿ ಪೂಜೆಯ ಪ್ರಯೋಜನ ಏನು?

ಕಾತ್ಯಾಯಣಿ ಮಾತೆಯನ್ನು ಪೂಜಿಸುವುದರಿಂದ ಪ್ರೇಮ ಜೀವನ ಸುಧಾರಿಸುತ್ತದೆ ಮತ್ತು ಸ್ತ್ರೀತ್ವವೂ ಹೆಚ್ಚಾಗುತ್ತದೆ. ಇದು ದಾಂಪತ್ಯ ಜೀವನದಲ್ಲಿ ಸಂತೋಷವನ್ನು ತರುತ್ತದೆ.

78
FAQs: ತ್ವರಿತ ವಿವಾಹಕ್ಕಾಗಿ ಕಾತ್ಯಾಯನಿ ಮಂತ್ರ!
Image Credit : AI Meta

FAQs: ತ್ವರಿತ ವಿವಾಹಕ್ಕಾಗಿ ಕಾತ್ಯಾಯನಿ ಮಂತ್ರ!

ಪ್ರಶ್ನೆ: ಈ ಮಂತ್ರವನ್ನು ಒಬ್ಬರು ಎಷ್ಟು ಬಾರಿ ಜಪಿಸಬೇಕು?

ವಿಶೇಷ ಬಯಕೆ ಈಡೇರಲು, ಈ ಮಂತ್ರವನ್ನು ದಿನಕ್ಕೆ 108 ಬಾರಿ ಜಪಿಸಬೇಕು. ಶಾಸ್ತ್ರಗಳಲ್ಲಿ, ಇದನ್ನು 1,25,000 ಬಾರಿ ಜಪಿಸಲು ಸೂಚಿಸಲಾಗಿದೆ.

88
FAQs: ತ್ವರಿತ ವಿವಾಹಕ್ಕಾಗಿ ಕಾತ್ಯಾಯನಿ ಮಂತ್ರ!
Image Credit : AI Meta

FAQs: ತ್ವರಿತ ವಿವಾಹಕ್ಕಾಗಿ ಕಾತ್ಯಾಯನಿ ಮಂತ್ರ!

ಪ್ರಶ್ನೆ: ಮಂತ್ರಗಳನ್ನು ಪಠಿಸುವ ವಿಧಾನ?

ಈ ಮಂತ್ರವನ್ನು ಪಠಿಸುವವರು ಸ್ನಾನ ಮಾಡಿದ ನಂತರ ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸಬೇಕು. ಮಾ ಕಾತ್ಯಾಯನಿಯನ್ನು ಸ್ಮರಿಸುವ ಮೂಲಕ ಜಪಿಸಲು ಪ್ರಾರಂಭಿಸಿ. ಮಂತ್ರ ಪಠಣೆ ಸಂದರ್ಭದಲ್ಲಿ ಶುದ್ಧತೆಯನ್ನು ಕಾಪಾಡಿಕೊಳ್ಳಬೇಕು.

Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಮದುವೆ
ಜ್ಯೋತಿಷ್ಯ
ರಿಲಯನ್ಸ್ ಇಂಡಸ್ಟ್ರೀಸ್

Latest Videos
Recommended Stories
Recommended image1
ನಿಮ್ಮ ಆತ್ಮಕ್ಕೆ ಹಿಂದೊಂದು ಜನ್ಮ ಇತ್ತಾ? ತಿಳಿಯೋದು ಹೇಗೆ?
Recommended image2
ನಿಷೇಧದ ನಡುವೆಯೂ ದುಗ್ಗಮ್ಮನ ಜಾತ್ರೆಲಿ ಕೋಣ ಬಲಿ! ದೌಡಾಯಿಸಿ ಬಂದ ಪೊಲೀಸರಿಗೆ ಸಿಕ್ಕಿದ್ದು ಕೇವಲ ರಕ್ತದ ಕಲೆ ಅಷ್ಟೇ
Recommended image3
ಬಾಲದಲ್ಲಿ ನವಿಲು ಗರಿ: ಶ್ರೀಕೃಷ್ಣನ ನಗರಿ ದ್ವಾರಕೆಯ ಗೋಮತಿ ನದಿಯಲ್ಲಿ ಕಾಣಿಸಿಕೊಂಡ ವಿಶೇಷ ಮೀನು
Related Stories
Recommended image1
ಈ 4 ರಾಶಿಯವರ ಮದುವೆ ಆಗೋದು ಲೇಟ್; ಪದೇ ಪದೇ ಕೇಳಿ ನೋವುಂಟು ಮಾಡಬೇಡಿ!
Recommended image2
ಈ ವಿಚಿತ್ರ ಹಳ್ಳಿಯಲ್ಲಿ ಗಂಡಸರು ಎರಡು ಮದುವೆ ಆಗಲೇಬೇಕು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved