MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Festivals
  • ಪರೀಕ್ಷೆಯಲ್ಲಿ ಉತ್ತಮ ಮಾರ್ಕ್ಸ್ ಬೇಕೆನ್ನೋರು ಬಸಂತ ಪಂಚಮಿ ದಿನ ಈ ಕೆಲ್ಸ ತಪ್ಪದೆ ಮಾಡಿ

ಪರೀಕ್ಷೆಯಲ್ಲಿ ಉತ್ತಮ ಮಾರ್ಕ್ಸ್ ಬೇಕೆನ್ನೋರು ಬಸಂತ ಪಂಚಮಿ ದಿನ ಈ ಕೆಲ್ಸ ತಪ್ಪದೆ ಮಾಡಿ

Basant Panchami 2026 : ಈ ವರ್ಷ ಜನವರಿ 23 ರಂದು ಬಸಂತ ಪಂಚಮಿ ಆಚರಣೆ ಮಾಡಲಾಗ್ತಿದೆ. ಬಸಂತ ಪಂಚಮಿ ಮಕ್ಕಳಿಗೆ ಸಾಕಷ್ಟು ವಿಶೇಷವಾಗಿದೆ. ಆ ದಿನ ಮಕ್ಕಳು ಮಾಡುವ ಕೆಲ್ಸ, ಅವರು ವಿದ್ಯೆಯಲ್ಲಿ ಏಳ್ಗೆ ಕಾಣಲು ದಾರಿಯಾಗುತ್ತದೆ.

2 Min read
Author : Roopa Hegde
Published : Jan 12 2026, 02:59 PM IST
Share this Photo Gallery
  • FB
  • TW
  • Linkdin
  • Whatsapp
16
ಬಸಂತ ಪಂಚಮಿ
Image Credit : Asianet News

ಬಸಂತ ಪಂಚಮಿ

ಮಾಘ ಮಾಸದ ಐದನೇ ಪಂಚಮಿ ದಿನದಂದು ಬಸಂತ ಪಂಚಮಿಯನ್ನು ಆಚರಿಸಲಾಗುತ್ತದೆ. ಈ ಬಾರಿ ಜನವರಿ 23 ರಂದು ಬಸಂತ ಪಂಚಮಿ ಆಚರಿಸಲಾಗ್ತಿದೆ. ಕಲಿಕೆ, ಜ್ಞಾನ, ಕಲೆ ಮತ್ತು ಸಂಗೀತದ ದೇವತೆ ಸರಸ್ವತಿಯನ್ನು ಈ ದಿನ ಪೂಜಿಸಲಾಗುತ್ತದೆ. ಈ ದಿನ ವಿದ್ಯಾರ್ಥಿಗಳಿಗೆ ಬಹಳ ವಿಶೇಷವಾದ ದಿನ. ಬಸಂತ್ ಪಂಚಮಿಯಂದು ಮಕ್ಕಳಿಗಾಗಿ ವಿದ್ಯಾರಂಭ ಸಂಸ್ಕಾರ ಮಾಡುವುದು ಬಹಳ ಶುಭವೆಂದು ಪರಿಗಣಿಸಲಾಗಿದೆ. ಹಾಗೆ ಮಾಡುವುದರಿಂದ ಜೀವನದಲ್ಲಿ ಪ್ರಗತಿ ಉಂಟಾಗುತ್ತದೆ ಎಂದು ನಂಬಲಾಗಿದೆ.

26
ಸರಸ್ವತಿ ಮಂತ್ರ
Image Credit : Asianet News

ಸರಸ್ವತಿ ಮಂತ್ರ

ಫೆಬ್ರವರಿ ಅಂದ್ರೆ ಅದು ಪರೀಕ್ಷಾ ತಿಂಗಳು. ಫೆಬ್ರವರಿ ಹಾಗೂ ಮಾರ್ಚ್ ನಲ್ಲಿ ಎಲ್ಲ ಮಕ್ಕಳು ಪರೀಕ್ಷೆ ತರಾತುರಿಯಲ್ಲಿರುತ್ತಾರೆ. ಪರೀಕ್ಷೆಯಲ್ಲಿ ಉತ್ತಮ ಅಂಕ ಬರಬೇಕು ಎನ್ನುವವರು ಬಸಂತ ಪಂಚಮಿಯಂದು ಬಹು ಮುಖ್ಯ ಕೆಲ್ಸವನ್ನು ಮಾಡಬೇಕು. ವಿದ್ಯಾರ್ಥಿಗಳು ಬೆಳಿಗ್ಗೆ ಸ್ನಾನ ಮಾಡಿ ಸರಸ್ವತಿ ದೇವಿಯನ್ನು ಪೂಜಿಸಬೇಕು. ಓಂ ಐಂ ಸರಸ್ವತ್ಯೈ ನಮಃ ಎಂಬ ಮಂತ್ರವನ್ನು 108 ಬಾರಿ ಜಪಿಸಬೇಕು. ಹಾಗೆ ಮಾಡುವುದರಿಂದ ವಿದ್ಯಾರ್ಥಿಗಳು ಬುದ್ಧಿವಂತಿಕೆ ಮತ್ತು ಏಕಾಗ್ರತೆಯನ್ನು ಪಡೆಯುತ್ತಾರೆ. ಗಮನವನ್ನು ಒಂದೇ ಕಡೆ ಕೇಂದ್ರೀಕರಿಸಲು ಸಾಧ್ಯವಾಗುತ್ತದೆ.

Related Articles

Related image1
ಕುಂಭ ರಾಶಿಯಲ್ಲಿ ರಾಹು, ಮಂಗಳ ರುದ್ರತಾಂಡವ, 5 ರಾಶಿ ಜನರಿಗೆ ಆರ್ಥಿಕ ನಷ್ಟ, ಹಣ ಖಾಲಿ ಖಾಲಿ
Related image2
ಈ 3 ರಾಶಿಗೆ ಶನಿಯ ವಿಶೇಷ ಅನುಗ್ರಹ, ಹೋರಾಟದ ನಂತರ ದೊಡ್ಡ ಯಶಸ್ಸು ಪಕ್ಕಾ
36
ಬಸಂತ ಪಂಚಮಿ ದಾನ
Image Credit : Asianet News

ಬಸಂತ ಪಂಚಮಿ ದಾನ

ಬಸಂತ ಪಂಚಮಿಯಂದು ಬರೀ ಸರಸ್ವತಿ ಪೂಜೆ ಮಾತ್ರ ಶ್ರೇಷ್ಠವಲ್ಲ. ದಾನ ಕೂಡ ಶ್ರೇಷ್ಠತೆ ಪಡೆದಿದೆ. ಬಸಂತ ಪಂಚಮಿಯಂದು ವಿದ್ಯಾರ್ಥಿಗಳು ಸರಸ್ವತಿಗೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡಬೇಕು. ನೋಟ್ಬುಕ್ಗಳು, ಪುಸ್ತಕಗಳು, ಪೆನ್ಸಿಲ್ಗಳು, ಪೆನ್ನುಗಳು ಇತ್ಯಾದಿಗಳನ್ನು ಇತರರಿಗೆ ದಾನ ಮಾಡಿದರೆ, ಸರಸ್ವತಿ ತೃಪ್ತಳಾಗ್ತಾಳೆ. ವಿದ್ಯಾಭ್ಯಾಸದಲ್ಲಿ ಯಶಸ್ಸು ಸುಲಭವಾಗಿ ಸಾಧ್ಯವಾಗುತ್ತದೆ.

46
ಇದೇ ಅಂತಿಮ ಅಲ್ಲ
Image Credit : Asianet News

ಇದೇ ಅಂತಿಮ ಅಲ್ಲ

ಸರಸ್ವತಿ ದೇವಿಯ ಪೂಜೆ ಹಾಗೂ ದಾನ ಅಂತಿಮವಲ್ಲ. ಬಸಂತ ಪಂಚಮಿ ದಿನ ಸರಸ್ವತಿ ದೇವಿಯ ಪೂಜೆ ಮಾಡಿದ್ರೆ ಪರೀಕ್ಷೆಯಲ್ಲಿ ಯಶಸ್ಸು ಸಿಗುತ್ತದೆ ನಿಜ. ಆದ್ರೆ ವಿದ್ಯಾರ್ಥಿಗಳ ಶ್ರಮ ಇಲ್ಲಿ ಅತ್ಯಗತ್ಯ. ದೇವಿ ನಿಮಗೆ ಆಶೀರ್ವಾದ ಹಾಗೂ ಜ್ಞಾನ ನೀಡುತ್ತಾಳೆ. ನೀವು ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು. ಓದಿ ಪರೀಕ್ಷೆಗೆ ಸಿದ್ಧರಾಗಬೇಕು. ಜೊತೆಗೆ ಪ್ರಾಮಾಣಿಕತೆಯಿಂದ ಪರೀಕ್ಷೆ ಬರೆಯಬೇಕು. ಆಗ ಮಾತ್ರ ಸರಸ್ವತಿ ಆಶೀರ್ವಾದ ನಿಮಗೆ ಸಂಪೂರ್ಣವಾಗಿ ಸಿಗಲು ಸಾಧ್ಯ.

56
ಸರಸ್ವತಿ ಫೋಟೋ
Image Credit : Asianet News

ಸರಸ್ವತಿ ಫೋಟೋ

ಬಸಂತ ಪಂಚಮಿ ದಿನ ನೀವು ನಿಮ್ಮ ಸ್ಟಡಿ ರೂಮಿನಲ್ಲಿ ಸರಸ್ವತಿ ದೇವಿಯ ಫೋಟೋ ಅಥವಾ ಮೂರ್ತಿಯನ್ನು ಇಡಿ. ದೇವಿ ಫೋಟೋ, ಮಕ್ಕಳಿಗೆ ಅಧ್ಯಯನ ಮಾಡುವ ಬುದ್ಧಿಯನ್ನು ನೀಡುತ್ತದೆ. ಪ್ರತಿದಿನ ಮಕ್ಕಳ ಕಣ್ಣಿಗೆ ಈ ಸರಸ್ವತಿ ದೇವಿ ಫೋಟೋ ಕಾಣಿಸೋದ್ರಿಂದ ಸರಸ್ವತಿ ದೇವಿಯ ಆಶೀರ್ವಾದ ಮಕ್ಕಳಿಗೆ ದೊರೆಯುತ್ತದೆ. ಓದಿನಲ್ಲಿಏಕಾಗ್ರತೆ ಹೆಚ್ಚಾಗುತ್ತದೆ.

66
ಸರಸ್ವತಿಯ ನೆಚ್ಚಿನ ನೈವೇದ್ಯ
Image Credit : Asianet News

ಸರಸ್ವತಿಯ ನೆಚ್ಚಿನ ನೈವೇದ್ಯ

ಬಸಂತ ಪಂಚಮಿ ದಿನ ಸರಸ್ವತಿಗೆ ಪೂಜೆ ಮಾಡುವ ಜೊತೆಗೆ ಆಕೆಯ ನೆಚ್ಚಿನ ಆಹಾರವನ್ನು ನೀವು ನೈವೇದ್ಯವಾಗಿ ನೀಡಬೇಕು. ಸರಸ್ವತಿ ದೇವಿಗೆ ಹಳದಿ ಬಣ್ಣ ತುಂಬಾ ಇಷ್ಟ. ಹಳದಿ ಶುದ್ಧತೆ, ಹೊಸ ಶಕ್ತಿ ಮತ್ತು ಜ್ಞಾನವನ್ನು ಸಂಕೇತಿಸುತ್ತದೆ. ಹಾಗಾಗಿ ನೀವು ಕೇಸರಿ ಸಿಹಿ ಅನ್ನವನ್ನು ಸರಸ್ವತಿಗೆ ಅರ್ಪಿಸಿ. ಬೇಸನ್ ಲಡ್ಡು, ಮಾಲ್ಪುವಾ, ಪ್ಲಮ್, ಹಳದಿ ಹಣ್ಣು ಅಥವಾ ಸಿಹಿ, ಜೇನುತುಪ್ಪ , ಸಕ್ಕರೆ ಮಿಠಾಯಿಯನ್ನು ನೀವು ದೇವಿಗೆ ನೈವೇದ್ಯದ ರೂಪದಲ್ಲಿ ಅರ್ಪಿಸಬಹುದು.

About the Author

RH
Roopa Hegde
Roopa Hegdeಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ಹಬ್ಬ
ಜ್ಯೋತಿಷ್ಯ
ಮಕ್ಕಳು

Latest Videos
Recommended Stories
Recommended image1
ಕುಂಭ ರಾಶಿಯಲ್ಲಿ ರಾಹು, ಮಂಗಳ ರುದ್ರತಾಂಡವ, 5 ರಾಶಿ ಜನರಿಗೆ ಆರ್ಥಿಕ ನಷ್ಟ, ಹಣ ಖಾಲಿ ಖಾಲಿ
Recommended image2
ಈ 3 ರಾಶಿಗೆ ಶನಿಯ ವಿಶೇಷ ಅನುಗ್ರಹ, ಹೋರಾಟದ ನಂತರ ದೊಡ್ಡ ಯಶಸ್ಸು ಪಕ್ಕಾ
Recommended image3
ಮಕರ ಸಂಕ್ರಾಂತಿ ಮೂರು ದಿನ ಮೊದಲು ಚಂದ್ರ ಶುಕ್ರನ ಮನೆಯಲ್ಲಿ, ಈ 3 ರಾಶಿಗೆ ಅದೃಷ್ಟ, ಸಂಪತ್ತು
Related Stories
Recommended image1
ಕುಂಭ ರಾಶಿಯಲ್ಲಿ ರಾಹು, ಮಂಗಳ ರುದ್ರತಾಂಡವ, 5 ರಾಶಿ ಜನರಿಗೆ ಆರ್ಥಿಕ ನಷ್ಟ, ಹಣ ಖಾಲಿ ಖಾಲಿ
Recommended image2
ಈ 3 ರಾಶಿಗೆ ಶನಿಯ ವಿಶೇಷ ಅನುಗ್ರಹ, ಹೋರಾಟದ ನಂತರ ದೊಡ್ಡ ಯಶಸ್ಸು ಪಕ್ಕಾ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved