MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • Crime
  • Bengaluru ಒಂದೇ ಕುಟುಂಬದ ನಾಲ್ವರು ಆತ್ಮ*ಹತ್ಯೆಗೆ ಯತ್ನ; ಇಬ್ಬರು ಸಾವು, ಮತ್ತಿಬ್ಬರು ಗಂಭೀರ

Bengaluru ಒಂದೇ ಕುಟುಂಬದ ನಾಲ್ವರು ಆತ್ಮ*ಹತ್ಯೆಗೆ ಯತ್ನ; ಇಬ್ಬರು ಸಾವು, ಮತ್ತಿಬ್ಬರು ಗಂಭೀರ

ಬೆಂಗಳೂರಿನ ಆನೇಕಲ್ ಬಳಿ ಸಾಲದ ಬಾಧೆ ತಾಳಲಾರದೆ ಒಂದೇ ಕುಟುಂಬದ ನಾಲ್ವರು ಆತ್ಮ*ಹತ್ಯೆಗೆ ಯತ್ನಿಸಿದ್ದಾರೆ. ಈ ಘಟನೆಯಲ್ಲಿ ತಾಯಿ ಮತ್ತು ಮಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

1 Min read
Author : Mahmad Rafik
Published : Mar 29 2026, 07:27 AM IST
Share this Photo Gallery
  • FB
  • TW
  • Linkdin
  • Whatsapp
15
ಒಂದೇ ಕುಟುಂಬದ ನಾಲ್ವರು
Image Credit : Asianet News

ಒಂದೇ ಕುಟುಂಬದ ನಾಲ್ವರು

ಒಂದೇ ಕುಟುಂಬದ ನಾಲ್ವರು ಆತ್ಮ*ಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಅತ್ತಿಬೆಲೆ ಸಮೀಪದ ಮಲ್ಲೇನಹಳ್ಳಿಯಲ್ಲಿ ನಡೆದಿದೆ. ಸಾಲಗಾರರ ಕಾಟ ತಾಳಲಾರದೇ ಆತ್ಮ *ಹತ್ಯೆಗೆ ಯತ್ನಿಸಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ನಾಲ್ವರಲ್ಲಿ ಇಬ್ಬರು ಮನೆಯಲ್ಲಿ ಮೃತರಾಗಿದ್ದು, ಇಬ್ಬರಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

25
ಇಬ್ಬರ ಸಾವು
Image Credit : Asianet News

ಇಬ್ಬರ ಸಾವು

ಆಶಾ (55), ವರ್ಷಿತಾ (34) ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಮೋಹನ್ ಗೌಡ (32) ಮತ್ತು ಮಯಾಂಕ್ (11) ಗಂಭೀರವಾಗಿ ಗಾಯಗೊಂಡಿದ್ದು, ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ಸಾಲಗಾರರ ಕಾಟ ತಾಳಲಾರದೆ ಆತ್ಮ*ಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಮೃತರು ವಿಡಿಯೋ ಮಾಡಿ ಕೆಲವರೊಂದಿಗೆ ಶೇರ್ ಮಾಡಿಕೊಂಡಿದ್ದರು.

Related Articles

Related image1
Now Playing
ಡಾ. ಸಂಪದ ಆತ್ಮಹತ್ಯೆ: ಇನ್ಸ್ಪೆಕ್ಟರ್ ಲೈಂಗಿಕ ಕಿರುಕುಳ ಆರೋಪದಿಂದ ರಾಜಕೀಯ ಕೆಸರೆರಚಾಟದವರೆಗೂ – ಎಲ್ಲಿದೆ ನ್ಯಾಯ?
Related image2
ಕೊಲೆಯತ್ನ ಕೇಸ್‌ನಲ್ಲಿ ಗಂಡ ದೋಷಿ, ಒಂದೂವರೆ ವರ್ಷದ ಮಗಳೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಪತ್ನಿ!
35
ಗಾಯಾಳುಗಳಿಗೆ ಚಿಕಿತ್ಸೆ
Image Credit : Asianet News

ಗಾಯಾಳುಗಳಿಗೆ ಚಿಕಿತ್ಸೆ

ಈ ವಿಡಿಯೋ ನೋಡಿದ ಸಂಬಂಧಿಕರು ಮನೆ ಬಳಿ ಆಗಮಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ಮೋಹನ್ ಗೌಡ ಮತ್ತು ಮಯಾಂಕ್‌ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

45
ಚಾಕುವಿನಿಂದ ಕತ್ತು ಕೊಯ್ದ
Image Credit : Asianet News

ಚಾಕುವಿನಿಂದ ಕತ್ತು ಕೊಯ್ದ

ಮೋಹನ್ ಎಂ ಆರ್ ಬಾಗಿಲನ್ನು ಹಾಕಿಕೊಂಡು ತನ್ನ ತಾಯಿಯಾದ ಶ್ರೀಮತಿ ಆಶಾ, ಅಕ್ಕ. ವರ್ಷಿತ, ಅಕ್ಕನ ಮಗ ಮಯಾಂಕ್ 11 ವರ್ಷ ರವರನ್ನು ಚಾಕುವಿನಿಂದ ಕತ್ತು ಕೊಯ್ದು ತಾನು ಕತ್ತು ಕುಯ್ದುಕೊಂಡಿರುತ್ತಾನೆ. ಸ್ಥಳದಲ್ಲಿ ತಾಯಿ ಆಶಾ ಮತ್ತು ಅಕ್ಕ ವರ್ಷಿತ ಮೃತಪಟ್ಟಿದ್ದು ಮೋಹನ್ ಮತ್ತು ಮಯಾಂಕ್ ತೀವ್ರ ಸ್ವರೂಪದ ರಕ್ತ ಗಾಯಗಳಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

55
ಸಾಲ
Image Credit : Asianet News

ಸಾಲ

ಅಕ್ಕ ಪಕ್ಕದ ಮನೆಯವರು ಕಿರುಚಾಡುವ ಶಬ್ದ ಕೇಳಿ ಬಂದು ಬಾಗಿಲು ಹೊಡೆದು ನೋಡಲಾಗಿ ತಾಯಿ ಮತ್ತು ಮಗಳು ಮೃತಪಟ್ಟಿದ್ದು ಗಾಯಾಳುಗಳಾದ ಮೋಹನ್ ಮತ್ತು ಮಯಂಕ್ ರವರನ್ನು ಅತ್ತಿಬೆಲೆಯ ಎಲೈಟ್ ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆ. ಮೋಹನ್ ರವರ ಅಕ್ಕ ವರ್ಷಿತ ಈಗ್ಗೆ ಸುಮಾರು ಒಂದುವರೆ ವರ್ಷಗಳಿಂದ ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದು ಕೋಮ ಹಂತದಲ್ಲಿರುತ್ತಾರೆ. ಇವರ ಚಿಕಿತ್ಸೆಗಾಗಿ ಸಾಕಷ್ಟು ಹಣ ಸಾಲ ಮಾಡಿಕೊಂಡಿದ್ದು ಸಾಲದ ಹೊರೆ ತಡೆಯಲಾರದೆ ಈ ರೀತಿ ಮೋಹನ್ ಚಾಕುವಿನಿಂದ ತಾಯಿ, ಅಕ್ಕ ಮತ್ತು ಅಕ್ಕನ ಮಗನ ಕತ್ತು ಕೊಯ್ದು ತಾನು ಕತ್ತು ಕುಯ್ದುಕೊಂಡು ಆತ್ಮ*ಹತ್ಯೆಗೆ ಪ್ರಯತ್ನ ಪಟ್ಟಿರುತ್ತಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಬೆಂಗಳೂರು ಗ್ರಾಮಾಂತರ
ಆತ್ಮಹತ್ಯೆ

Latest Videos
Recommended Stories
Recommended image1
ಸೇತುವೆಯಡಿ ಪತ್ತೆಯಾಯ್ತು ಸುಟ್ಟ ಶವ: ಗದಗದಲ್ಲಿ ಯುವಕನ ನಿಗೂಢ ಸಾವು, ಹಂತಕರ ಪತ್ತೆಗೆ ಪೊಲೀಸರ ಬಲೆ
Recommended image2
ತಾನು ಶಿವನ ಅವತಾರ ಎಂದು ನಂಬಿಸಿ 35ರ ಹರೆಯದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ: ಮತ್ತೊಬ್ಬ ಜ್ಯೋತಿಷಿ ಅರೆಸ್ಟ್!
Recommended image3
ಮಾಂಗಲ್ಯದ ಜೊತೆ ಪ್ರಾಣವೂ ಹೋದೀತು ಎಚ್ಚರ: ಬೆಂಗಳೂರಿನ ಭಯಾನಕ ಘಟನೆ ವಿಡಿಯೋ ವೈರಲ್​
Related Stories
Recommended image1
Now Playing
ಡಾ. ಸಂಪದ ಆತ್ಮಹತ್ಯೆ: ಇನ್ಸ್ಪೆಕ್ಟರ್ ಲೈಂಗಿಕ ಕಿರುಕುಳ ಆರೋಪದಿಂದ ರಾಜಕೀಯ ಕೆಸರೆರಚಾಟದವರೆಗೂ – ಎಲ್ಲಿದೆ ನ್ಯಾಯ?
Recommended image2
ಕೊಲೆಯತ್ನ ಕೇಸ್‌ನಲ್ಲಿ ಗಂಡ ದೋಷಿ, ಒಂದೂವರೆ ವರ್ಷದ ಮಗಳೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಪತ್ನಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved