MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • 2024ರಿಂದ ಸೂರ್ಯಕುಮಾರ್ ಹಾರ್ದಿಕ್ ನಡುವೆ ಕಿತ್ತಾಟ, ಟಿ20 ಟೀಂ ಬದಲಾವಣೆ ಹಿಂದಿನ ಕಾರಣ ಬಯಲು

2024ರಿಂದ ಸೂರ್ಯಕುಮಾರ್ ಹಾರ್ದಿಕ್ ನಡುವೆ ಕಿತ್ತಾಟ, ಟಿ20 ಟೀಂ ಬದಲಾವಣೆ ಹಿಂದಿನ ಕಾರಣ ಬಯಲು

ರೋಹಿತ್ ಶರ್ಮಾ ನಿರ್ಗಮನದ ಬಳಿಕ ಟೀಂ ಇಂಡಿಯಾ ಟಿ20 ತಂಡದಲ್ಲಿನ ಕಿತ್ತಾಟವೇ ಇದೀಗ ನಾಯಕತ್ವ ಬದಲಾವಣೆ, ತಂಡದಲ್ಲಿನ ಭಾರಿ ಬದಲಾವಣೆಗೆ ಕಾರಣವಾಗಿದೆ. ಸೂರ್ಯಕುಮಾರ್ ಯಾದವ್ ಹಾಗೂ ಹಾರ್ದಿಕ್ ನಡುವಿನ ಕಿತ್ತಾಟಕ್ಕೂ ಇದೆ ಕಾರಣ.

2 Min read
Author : Chethan Kumar
Published : Jun 06 2026, 06:54 PM IST
Share this Photo Gallery
  • FB
  • TW
  • Linkdin
  • Whatsapp
16
ಇಬ್ಬರ ಜಗಳದಿಂದ ತಂಡದಲ್ಲಿ ಭಾರಿ ಬದಲಾವಣೆ
Image Credit : stockPhoto

ಇಬ್ಬರ ಜಗಳದಿಂದ ತಂಡದಲ್ಲಿ ಭಾರಿ ಬದಲಾವಣೆ

ಟೀಂ ಇಂಡಿಯಾ ಟಿ20 ತಂಡದ ಆಯ್ಕೆ ಬೆನ್ನಲ್ಲೇ ಟೀಂ ಇಂಡಿಯಾದ ಕಿತ್ತಾಟವೂ ಬಯಲಾಗಿದೆ. ಇದೇ ಕಿತ್ತಾಟದಿಂದ ಇಬ್ಬರೂ ತಂಡದಿಂದ ಹೊರಬಿದ್ದಿದ್ದಾರೆ. ಸೂರ್ಯಕುಮಾರ್ ಯಾದವ್ ಟಿ20 ತಂಡದ ನಾಯಕತ್ವ ಹಾಗೂ ತಂಡದಿಂದ ಕೊಕ್ ನೀಡಲಾಗಿದೆ. ಯಾದವ್ ಸ್ಥಾನಕ್ಕೆ ಶ್ರೇಯಸ್ ಅಯ್ಯರ್ ನಾಯಕನಾಗಿ ಆಯ್ಕೆಯಾಗಿದ್ದಾರೆ. ಇತ್ತ ಹಾರ್ದಿಕ್ ಪಾಂಡ್ಯ ತಂಡದಲ್ಲಿ ಇಲ್ಲ. ಇವರಿಬ್ಬರ ನಡುವಿನ ಜಗಳವೇ ಭಾರತ ಟಿ20 ತಂಡದ ಭಾರಿ ಬದಲಾವಣೆಗೆ ಕಾರಣ ಅನ್ನೋ ಸ್ಫೋಟಕ ಮಾಹಿತಿ ಬಯಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
2024ರಿಂದ ಸೂರ್ಯಕುಮಾರ್ ಹಾರ್ದಿಕ್ ನಡುವೆ ಕಿತ್ತಾಟ
Image Credit : X- Suryakumar Yadav and Hardik Pandya

2024ರಿಂದ ಸೂರ್ಯಕುಮಾರ್ ಹಾರ್ದಿಕ್ ನಡುವೆ ಕಿತ್ತಾಟ

2024ರ ಟಿ20 ವಿಶ್ವಕಪ್ ಗೆಲುವಿನ ಬಳಿಕ ರೋಹಿತ್ ಶರ್ಮಾ ನಿವೃತ್ತಿ ಘೋಷಿಸಿದ್ದರು. ಈ ವೇಳೆ ಸ್ಟಾಂಡ್ ಬೈ ನಾಯಕನಾಗಿದ್ದ ಹಾರ್ದಿಕ್ ಪಾಂಡ್ಯ ನಾಯಕತ್ವ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದರು. ಆದರೆ ಆಯ್ಕೆ ಸಮಿತಿ ನೇರವಾಗಿ ಸೂರ್ಯಕುಮಾರ್ ಯಾದವ್‌ಗೆ ನಾಯಕತ್ವ ನೀಡಿತು. ಇಲ್ಲಿಂದಲೇ ಹಾರ್ದಿಕ್ ಅಸಮಾಧಾನ ಶುರುವಾಗಿತ್ತು ಎಂದು ವರದಿಗಳು ಪ್ರಕಟಗೊಂಡಿದೆ.

Related Articles

Related image1
ನಾಯಕತ್ವ, ತಂಡದಿಂದ ಗೇಟ್ ಪಾಸ್ ಬಳಿಕ ಸೂರ್ಯಕುಮಾರ್ ಮನದಾಳದ ಮೊದಲ ಪೋಸ್ಟ್
Related image2
ಭಾರತ ಟಿ20 ತಂಡಕ್ಕೆ ಹೊಸ ನಾಯಕನ ಘೋಷಣೆ..! ಐರ್ಲೆಂಡ್, ಇಂಗ್ಲೆಂಡ್ ಎದುರಿನ ಸರಣಿಗೆ ಬಲಿಷ್ಠ ಟೀಂ ಇಂಡಿಯಾ ಪ್ರಕಟ
36
ಟೀಂ ಇಂಡಿಯಾದಲ್ಲಿ ಕಿತ್ತಾಟ, ಮುಂಬೈ ತಂಡದಲ್ಲೂ ಕಿತ್ತಾಟ
Image Credit : Getty

ಟೀಂ ಇಂಡಿಯಾದಲ್ಲಿ ಕಿತ್ತಾಟ, ಮುಂಬೈ ತಂಡದಲ್ಲೂ ಕಿತ್ತಾಟ

ನಾಯಕತ್ವ ಆಯ್ಕೆ ವೇಳೆ ಕೆಲ ಹಿರಿಯ ಕ್ರಿಕೆಟಿಗರು ಹಾರ್ದಿಕ್ ಪಾಂಡ್ಯ ಬದಲು ಸೂರ್ಯಕುಮಾರ್ ಯಾದವ್‌ಗೆ ಮತ ಹಾಕಿದ್ದರು. ಹೀಗೆ ಮತ ಹಾಕಿದವರ ಬೈಕಿ ಒಬ್ಬರು ರೋಹಿತ್ ಶರ್ಮಾ. ಇತ್ತ ಟೀಂ ಇಂಡಿಯಾಗದಲ್ಲಿ ಸೂರ್ಯಕುಮಾರ್ ವಿರುದ್ದ ದ್ವೇಷಗೊಂಡ ಹಾರ್ದಿಕ್ ಪಾಂಡ್ಯ ಕಿಡಿಕಾರುತ್ತಲೇ ಇದ್ದರು ಎಂದು ಹೇಳಲಾಗುತ್ತಿದೆ. ಇದು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಸ್ಫೋಟಗೊಂಡಿರುವುದು ಅಭಿಮಾನಿಗಳು ಗಮನಿಸಿದ್ದಾರೆ.

46
ಕಿತ್ತಾಟದಿಂದ ಕಳಪೆ ಪ್ರದರ್ಶನ ನೀಡಿದ ಮುಂಬೈ ಇಂಡಿಯನ್ಸ್
Image Credit : X

ಕಿತ್ತಾಟದಿಂದ ಕಳಪೆ ಪ್ರದರ್ಶನ ನೀಡಿದ ಮುಂಬೈ ಇಂಡಿಯನ್ಸ್

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ಮಾಜಿ ನಾಯಕ ರೋಹಿತ್ ಶರ್ಮಾ ವಿರುದ್ಧ, ಸೂರ್ಯಕುಮಾರ್ ವಿರುದ್ಧ ರೇಗಾಡಿದ್ದರು. ಇದರಿಂದ ಇಡೀ ತಂಡದ ವಾತಾವರಣವೇ ಹಾಳಾಗಿತ್ತು. ಮುಂಬೈ ಇಂಡಿಯನ್ಸ್ ಲೀಗ್ ಹಂತದಿಂದಲೇ ಹೊರಬಿದ್ದಿತ್ತು.

56
ಟೀಂ ಇಂಡಿಯಾದಲ್ಲಿ ಇದೇ ಕಿತ್ತಾಟ
Image Credit : BCCI\Twitter

ಟೀಂ ಇಂಡಿಯಾದಲ್ಲಿ ಇದೇ ಕಿತ್ತಾಟ

ಟೀಂ ಇಂಡಿಯಾದಲ್ಲೂ ಇದೇ ಕಿತ್ತಾಟಗಳು ನಡೆದಿತ್ತು ಅನ್ನೋದು ರಹಸ್ಯವಾಗಿತ್ತು. ಆದರೆ ಟಿ20 ತಂಡದಲ್ಲಿ ಇದೀಗ ಮಾಡಿದ ಭಾರಿ ಬದಲಾವಣೆಯೊಂದಿಗೆ ಒಂದೊಂದೆ ಕಹಾನಿಗಳು ಹೊರಬರುತ್ತಿದೆ. ಇದೀಗ ಮುನಿಸಿಕೊಂಡ ಇಬ್ಬರು ತಂಡದಿಂದ ಹೊರಬಿದ್ದಿದ್ದಾರೆ.

66
ಪ್ಲಾನ್ ಬಿ ರೂಪಿಸಿದ ಬಿಸಿಸಿಐ
Image Credit : X

ಪ್ಲಾನ್ ಬಿ ರೂಪಿಸಿದ ಬಿಸಿಸಿಐ

ಬಿಸಿಸಿಐ ಹಲವು ಪ್ರಯೋಗ ಮಾಡುತ್ತಿದೆ. ಈ ಪೈಕಿ ಮೂರು ತಂಡಕ್ಕೆ ಮೂರು ನಾಯಕ, ಮೂರು ಬೇರೆ ಬೇರೆ ತಂಡಗಳನ್ನು ಆಯ್ಕೆ ಮಾಡಲು ಬಿಸಿಸಿಐ ಮುಂದಾಗಿದೆ. ಇದನ್ನೇ ಮಾದರಿ ಮಾಡಲು ಮುಂದಾಗಿದೆ. ಈ ಮೂಲಕ ಎಲ್ಲಾ ಕಿತ್ತಾಟಕ್ಕೆ ಅಂತ್ಯ ಹಾಡಿ ಎಲ್ಲಾ ಮಾದರಿಯಲ್ಲಿ ನಂಬರ್ 1 ತಂಡ ಮಾಡುವ ಗುರಿ ಇಟ್ಟುಕೊಂಡಿದೆ. ಆದರೆ ಈ ಹೊಸ ಪ್ರಯೋಗ ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ, ಜಾರಿಯಾಗಲಿದೆ ಅನ್ನೋದು ಮುಂಬರುವ ದಿನಗಳಲ್ಲಿ ತಿಳಿಯಲಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಬಿಸಿಸಿಐ
ಟೀಮ್ ಇಂಡಿಯಾ
ಸೂರ್ಯಕುಮಾರ್ ಯಾದವ್
ಹಾರ್ದಿಕ್ ಪಾಂಡ್ಯ
Latest Videos
Recommended Stories
Recommended image1
ಟಿ20 ಸರಣಿಗೆ ಭಾರತ ತಂಡ ಆಯ್ಕೆ; ಮುಗಿಯಿತಾ ಈ ಮೂವರ ಕ್ರಿಕೆಟ್ ಬದುಕು? 6 ಸ್ಪಷ್ಟ ಸಂದೇಶ ಕೊಟ್ಟ ಆಯ್ಕೆ ಸಮಿತಿ
Recommended image2
ನಾಯಕತ್ವ, ತಂಡದಿಂದ ಗೇಟ್ ಪಾಸ್ ಬಳಿಕ ಸೂರ್ಯಕುಮಾರ್ ಮನದಾಳದ ಮೊದಲ ಪೋಸ್ಟ್
Recommended image3
IPL 2026 ಫೈನಲ್ ಸೋಲಿನ ಬೆನ್ನಲ್ಲೇ ಈ ಮೂವರಿಗೆ ಗುಜರಾತ್ ಟೈಟಾನ್ಸ್ ಗೇಟ್‌ಪಾಸ್? ಈ ಲಿಸ್ಟ್‌ನಲ್ಲಿದೆ ಅಚ್ಚರಿ ಹೆಸರು
Related Stories
Recommended image1
ನಾಯಕತ್ವ, ತಂಡದಿಂದ ಗೇಟ್ ಪಾಸ್ ಬಳಿಕ ಸೂರ್ಯಕುಮಾರ್ ಮನದಾಳದ ಮೊದಲ ಪೋಸ್ಟ್
Recommended image2
ಭಾರತ ಟಿ20 ತಂಡಕ್ಕೆ ಹೊಸ ನಾಯಕನ ಘೋಷಣೆ..! ಐರ್ಲೆಂಡ್, ಇಂಗ್ಲೆಂಡ್ ಎದುರಿನ ಸರಣಿಗೆ ಬಲಿಷ್ಠ ಟೀಂ ಇಂಡಿಯಾ ಪ್ರಕಟ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved