MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಆದಿ ಕೈಲಾಸ ದರ್ಶನದ ಫೋಟೋ ಹಂಚಿಕೊಂಡ ರಿಷಬ್ ಪಂತ್, ಎಲ್ಲವೂ ಶಿವನ ಕೃಪೆ ಎಂದ ಕ್ರಿಕೆಟಿಗ

ಆದಿ ಕೈಲಾಸ ದರ್ಶನದ ಫೋಟೋ ಹಂಚಿಕೊಂಡ ರಿಷಬ್ ಪಂತ್, ಎಲ್ಲವೂ ಶಿವನ ಕೃಪೆ ಎಂದ ಕ್ರಿಕೆಟಿಗ

ಐಪಿಎಲ್ ಟೂರ್ನಿ ಬಳಿಕ ವಿಶ್ರಾಂತಿಯಲ್ಲಿದ್ದ ರಿಷಬ್ ಪಂತ್, ಸದ್ದಿಲ್ಲದೆ ಆದಿ ಕೈಲಾಸ ಹಾಗೂ ಓಂ ಪರ್ವತ ದರ್ಶನ ಪಡೆದಿದ್ದಾರೆ. ಓಂ ನಮಃ ಶಿವಾಯ ಎಂದು ಪ್ರಯಾಣದ ಕೆಲ ಫೋಟೋ ಹಾಗೂ ವಿಡಿಯೋ ಹಂಚಿಕೊಂಡಿದ್ದಾರೆ.

1 Min read
Author : Chethan Kumar
Published : Jun 15 2026, 10:44 PM IST
Share this Photo Gallery
  • FB
  • TW
  • Linkdin
  • Whatsapp
16
ರಹಸ್ಯವಾಗಿ ತೆರಳಿ ದರ್ಶನ ಪಡೆದಿದ್ದ ರಿಷಬ್ ಪಂತ್
Image Credit : rishabh pant insta

ರಹಸ್ಯವಾಗಿ ತೆರಳಿ ದರ್ಶನ ಪಡೆದಿದ್ದ ರಿಷಬ್ ಪಂತ್

ಐಪಿಎಲ್ ಟೂರ್ನಿಯಲ್ಲಿ ತೀವ್ರ ಹಿನ್ನಡೆ, ನಾಯಕತ್ವದಿಂದ ಹಿಂದೆ ಸರಿದ ಬಳಿಕ ರಿಷಬ್ ಪಂತ್ ಬ್ರೇಕ್ ಪಡೆದುಕೊಂಡಿದ್ದಾರೆ. ಈ ವಿಶ್ರಾಂತಿಯಲ್ಲಿ ರಿಷಬ್ ಪಂತ್ ಉತ್ತರಖಂಡ ಪ್ರವಾಸ ಮಾಡಿದ್ದಾರೆ. ವಿಶೇಷ ಅಂದರೆ ಆದಿ ಕೈಲಾಸ, ಓಂ ಪರ್ವತ ದರ್ಶನ ಮಾಡಿದ್ದಾರೆ. ಇತ್ತೀಚೆಗೆ ರಹಸ್ಯವಾಗಿ ತೆರಳಿ ಶಿವನ ದರ್ಶನ ಪಡೆದಿದ್ದ ರಿಷಬ್ ಪಂತ್ ಇದೀಗ ಫೋಟೋ ಹಾಗೂ ವಿಡಿಯೋ ಹಂಚಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಆದಿ ಕೈಲಾಸ, ಓಂ ಪರ್ವತ ದರ್ಶನ
Image Credit : rishabh pant

ಆದಿ ಕೈಲಾಸ, ಓಂ ಪರ್ವತ ದರ್ಶನ

ಶಿವ ಮಾನಸಸರೋವರದ ಕೈಲಾಸ ಪರ್ವತದಲ್ಲಿ ತಪಸ್ಸು ಮಾಡುವ ಮೊದಲು ಉತ್ತರಖಂಡದ ಪಿತೋರಘಡ ಜಿಲ್ಲೆಯಲ್ಲಿರುವ ಆದಿ ಕೈಲಾಸದಲ್ಲಿ ತಪಸ್ಸು ಮಾಡಿದ್ದರು ಎಂಬುದು ಪುರಾಣಗಳಲ್ಲಿ ಉಲ್ಲೇಖವಿದೆ. ಇದರ ಪಕ್ಕದಲ್ಲೇ ಇರುವ ಕುಟಿ ಅನ್ನೋ ಗ್ರಾಮಕ್ಕೆ ಪಾಂಡವರ ಕುಂತಿಯಿಂದ ಈ ಹೆಸರು ಬಂದಿದೆ ಅನ್ನೋ ನಂಬಿಕೆ ಇದೆ.

Related Articles

Related image1
ಆದಿ ಕೈಲಾಸ, ಓಂ ಪರ್ವತ ಕ್ಷೇತಕ್ಕೆ ರಿಷಬ್ ಪಂತ್ ಭೇಟಿ, ಈ ಪವಿತ್ರ ಸ್ಥಳದ ಶಕ್ತಿ ಎಂತಾದ್ದು ಗೊತ್ತಾ?
Related image2
ಲಖನೌ ಸೂಪರ್ ಜೈಂಟ್ಸ್ ನಾಯಕತ್ವಕ್ಕೆ ರಾಜೀನಾಮೆ ನೀಡಿದ ರಿಷಬ್ ಪಂತ್, ತಂಡದಿಂದ ಘೋಷಣೆ
36
ಓಂ ಪರ್ವತ ದರ್ಶನ ಪಡೆದ ರಿಷಬ್ ಪಂತ್
Image Credit : rishabh pant

ಓಂ ಪರ್ವತ ದರ್ಶನ ಪಡೆದ ರಿಷಬ್ ಪಂತ್

ಶಿವ ಪಾರ್ವತಿಯ ಮದುವೆ ಮೆರವಣಿಗೆ ತಂಗಿದ್ದು ಇದೇ ಸ್ಥಳದಲ್ಲಿ. ಹೀಗಾಗಿ ಇದು ಅತ್ಯಂತ ಪವಿತ್ರ ಕ್ಷೇತ್ರವಾಗಿದೆ. ಈ ಪವಿತ್ರ ಕ್ಷೇತ್ರಕ್ಕೆ ರಿಷಬ್ ಫಂತ್ ಭೇಟಿ ನೀಡಿದ್ದಾರೆ. ಇದೇ ವೇಳೆ ಓಂ ಪರ್ವತ ದರ್ಶನ ಪಡೆದಿದ್ದಾರೆ. ಹಿಮಗಳಿಂದ ಆವೃತ್ತವಾಗಿರುವ ಈ ಪರ್ವತಗಳಲ್ಲಿ ಓಂ ಅಕ್ಷರ ಕಾಣುತ್ತದೆ. ಹೀಗಾಗಿ ಈ ಸ್ಥಳ ಅತ್ಯಂತ ಪವಿತ್ರವಾಗಿದೆ.

46
ದೇವ ಭೂಮಿ ಅತ್ಯಂತ ವಿಶೇಷ
Image Credit : rishabh pant

ದೇವ ಭೂಮಿ ಅತ್ಯಂತ ವಿಶೇಷ

ಪ್ರವಾಸದ ಅದ್ಭುತ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ದೇವರ ದರ್ಶನ, ಪ್ರಕೃತಿಯ ಸುಂದರ ತಾಣ, ಕಾರು ಪ್ರಯಾಣದ ಹಲವು ಅದ್ಭುತ ಚಿತ್ರಗಳು ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಇದೇ ವೇಳೆ ನಮ್ಮ ಉತ್ತರಖಂಡ ಅತ್ಯಂತ ವಿಶೇಷ ಎಂದು ಬಣ್ಣಿಸಿದ್ದಾರೆ.

56
ರಹಸ್ಯವಾಗಿ ತೆರಳಿದ್ದ ರಿಷಬ್ ಪಂತ್
Image Credit : rishabh pant

ರಹಸ್ಯವಾಗಿ ತೆರಳಿದ್ದ ರಿಷಬ್ ಪಂತ್

ರಿಷಬ್ ಪಂತ್ ಯಾರಿಗೂ ಮಾಹಿತಿ ನೀಡದೆ ಗೌಪ್ಯವಾಗಿ ಆದಿ ಕೈಲಾಸಕ್ಕೆ ಭೇಟಿ ನೀಡಿದ್ದಾರೆ. ಸ್ಥಳೀಯ ಅಧಿಕಾರಿಗಳು, ಪೋಲೀಸರಿಗೂ ಯಾವುದೇ ಮಾಹಿತಿ ಇರಲಿಲ್ಲ. ಇನ್ನು ಸ್ಥಳೀಯ ಹೋಮ್ ಸ್ಟೇಯಲ್ಲಿ ರಿಷಬ್ ಪಂತ್ ತಂಗಿದ್ದರು. ಈ ವೇಳೆ ಅಲ್ಲಿನ ಸ್ಥಳೀಯರ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ.

66
ಪಂತ್ ಅಬ್ಬರಿಸುವ ನಿರೀಕ್ಷೆಯಲ್ಲಿ ಫ್ಯಾನ್ಸ್
Image Credit : rishabh pant

ಪಂತ್ ಅಬ್ಬರಿಸುವ ನಿರೀಕ್ಷೆಯಲ್ಲಿ ಫ್ಯಾನ್ಸ್

ಇತ್ತ ಅಭಿಮಾನಿಗಳು ರಿಷಬ್ ಪಂತ್ ಟೀಂ ಇಂಡಿಯಾದಲ್ಲಿ ಅಬ್ಬರಿಸುವುದನ್ನು ನೋಡಲು ಎದುರು ನೋಡುತ್ತಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಪಂತ್ ನಾಯಕತ್ವ ಲಖನೌ ಕಳಪೆ ಪ್ರದರ್ಶನ ನೀಡಿತ್ತು. ಇದರ ಬೆನ್ನಲ್ಲೇ ಪಂತ್ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ರಿಷಭ್ ಪಂತ್
ಉತ್ತರಾಖಂಡ
ದೇವಸ್ಥಾನ
ಕ್ರಿಕೆಟ್

Latest Videos
Recommended Stories
Recommended image1
74 ಪಂದ್ಯದ ಐಪಿಎಲ್‌ನಲ್ಲಿ ಭಾರಿ ಬದಲಾವಣೆ, ಮಾರ್ಚ್‌ನಿಂದ ಟೂರ್ನಿ ಆರಂಭಕ್ಕೆ ಬಿಸಿಸಿಐ ತಯಾರಿ
Recommended image2
Viral Video: ಮೈದಾನದಲ್ಲೇ ಕೈ ಮಿಲಾಯಿಸುವ ಹಂತಕ್ಕೆ ಹೋದ ಪ್ಲೇಯರ್ಸ್‌: ಲಂಕಾ ಕ್ರಿಕೆಟಿಗನ ಎದೆಗೆ ಕೈಯಿಟ್ಟು ತಳ್ಳಿದ Vaibhav Sooryavanshi
Recommended image3
ಫೇಲ್ ಆದ್ರೂ ವಿಶ್ವದಾಖಲೆ ಬರೆದ ಶಫಾಲಿ ವರ್ಮಾ! ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಕ್ರಿಕೆಟರ್
Related Stories
Recommended image1
ಆದಿ ಕೈಲಾಸ, ಓಂ ಪರ್ವತ ಕ್ಷೇತಕ್ಕೆ ರಿಷಬ್ ಪಂತ್ ಭೇಟಿ, ಈ ಪವಿತ್ರ ಸ್ಥಳದ ಶಕ್ತಿ ಎಂತಾದ್ದು ಗೊತ್ತಾ?
Recommended image2
ಲಖನೌ ಸೂಪರ್ ಜೈಂಟ್ಸ್ ನಾಯಕತ್ವಕ್ಕೆ ರಾಜೀನಾಮೆ ನೀಡಿದ ರಿಷಬ್ ಪಂತ್, ತಂಡದಿಂದ ಘೋಷಣೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved