- Home
- Sports
- Cricket
- ಆರ್ಸಿಬಿಯಲ್ಲಿ ಫಿಲ್ ಸಾಲ್ಟ್ಗೆ ಕೊಹ್ಲಿ ಕೊಟ್ಟಿದ್ರು ಟಿಪ್ಸ್, ಈಗ ಭಾರತ ವಿರುದ್ಧವೇ ಪ್ರಯೋಗಿಸಿ ಗೆದ್ದ ಇಂಗ್ಲೆಂಡ್
ಆರ್ಸಿಬಿಯಲ್ಲಿ ಫಿಲ್ ಸಾಲ್ಟ್ಗೆ ಕೊಹ್ಲಿ ಕೊಟ್ಟಿದ್ರು ಟಿಪ್ಸ್, ಈಗ ಭಾರತ ವಿರುದ್ಧವೇ ಪ್ರಯೋಗಿಸಿ ಗೆದ್ದ ಇಂಗ್ಲೆಂಡ್
ಭಾರತ ವಿರುದ್ದಧ ಟಿ20 ಸರಣಿಯಲ್ಲಿ ಇಂಗ್ಲೆಂಡ್ ಗೆಲುವಿನ ಸಂಭ್ರಮಾಚರಣೆ ನಡೆಸಿದೆ. ಆದರೆ ಇಂಗ್ಲೆಂಡ್ ಗೆಲುವಿನ ಹಿಂದೆ ಫಿಲ್ ಸಾಲ್ಟ್ ಅಸ್ತ್ರ ಪ್ರಯೋಗವಿದೆ. ವಿಶೇಷ ಅಂದರೆ ಆರ್ಸಿಬಿಯಲ್ಲಿ ಕೊಹ್ಲಿ ನೀಡಿದ ಅಸ್ತ್ರವನ್ನೇ ಪ್ರಯೋಗಿಸಿ ಪಂದ್ಯ ಗೆದ್ದಿದ್ದಾರೆ.

ಆರ್ಸಿಬಿಯಲ್ಲಿರುವಾಗ ಕೊಹ್ಲಿ ನೀಡಿದ ಟಿಪ್ಸ್
ಭಾರತ ಹಾಗೂ ಇಂಗ್ಲೆಂಡ್ ಟಿ20 ಸರಣಿಯಲ್ಲಿ ಶ್ರೇಯಸ್ ಅಯ್ಯರ್ ಪಡಗೆ ಹಿನ್ನಡೆಯಾಗಿದೆ. ಇಂಗ್ಲೆಂಡ್ 2ನೇ ಟಿ20 ಪಂದ್ಯ ಗೆದ್ದು ಮುನ್ನಡೆ ಸಾಧಿಸಿದೆ. ಭಾರತದ ವಿರುದ್ಧ ಪಂದ್ಯದಲ್ಲಿ ಫಿಲ್ ಸಾಲ್ಟ್ ಬ್ಯಾಟಿಂಗ್ನಲ್ಲಿ ಅಬ್ಬರಿಸಿಲ್ಲ. ಆದರೆ ಫಿಲ್ ಸಾಲ್ಟ್ ಟಿಪ್ಸ್ ಇಂಗ್ಲೆಂಡ್ ತಂಡಕ್ಕೆ ವರ್ಕೌಟ್ ಆಗಿದೆ. ವಿಶೇಷ ಅಂದರೆ ಆರ್ಸಿಬಿಯಲ್ಲಿ ಫಿಲ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಆರಂಭಿಕರಾಗಿ ಅಬ್ಬರಿಸಿದ್ದರು. ಈ ವೇಳೆ ಕೊಹ್ಲಿ, ಫಿಲ್ ಸಾಲ್ಟ್ಗೆ ನೀಡಿದ ಟಿಪ್ಸ್ ಇದೀಗ ಇಂಗ್ಲೆಂಡ್ ತಂಡಕ್ಕೂ ವರ್ಕೌಟ್ ಆಗಿದೆ.
ಸೂಪರ್ ಓವರ್ ವೇಳೆ ಕೊಹ್ಲಿ ನೀಡಿದ ಟಿಪ್ಸ್
ಆರ್ಸಿಬಿಯಲ್ಲಿ ಫಿಲ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಆರಂಭ ತಂಡಕ್ಕೆ ನೆರವಾಗಿದೆ. ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾದನಲ್ಲಿನ ಪಂದ್ಯದ ವೇಳೆ ವಿರಾಟ್ ಕೊಹ್ಲಿ ನೀಡಿದ ಟಿಪ್ಸ್ ಕುರಿತು ಫಿಲ್ ಸಾಲ್ಟ್ ಹೇಳಿದ್ದಾರೆ. ಸೂಪರ್ ಓವರ್ನಲ್ಲಿ ಆರ್ಸಿಬಿ ರನ್ ಸಿಡಿಸಿರಲಿಲ್ಲ. ಈ ವೇಳೆ ಫಿಲ್ ಸಾಲ್ಟ್ ಬಳಿ ಬಂದ ವಿರಾಟ್ ಕೊಹ್ಲಿ, ಕಿಲ್ ಹಿಮ್ (ಆತನ ಕೊಂದು ಬಿಡು) ಎಂದಿದ್ದರು. ಈ ಕುರಿತು ಫಿಲ್ ಸಾಲ್ಟ್ ಹೇಳಿದ್ದಾರೆ.
ಬೌಲರ್ನ ಮೇಲೆ ಸವಾರಿ ಮಾಡಲು ಸೂಚಿಸಿದ್ದ ಕೊಹ್ಲಿ
ಬೌಲರ್ ಪಂದ್ಯದ ಮೇಲೆ ಹಿಡಿತ ಸಾಧಿಸುತ್ತಿದ್ದಾನೆ ಎಂದರೆ ಆತನ ಮೇಲೆ ಸವಾರಿ ಮಾಡಬೇಕು ಎಂದು ಕೊಹ್ಲಿ ಸೂಚಿಸಿದ್ದರು. ಇದೀಗ ಇದೇ ಟಿಪ್ಸ್ ಇಂಗ್ಲೆಂಡ್ ತಂಡ ಫಾಲೋ ಮಾಡಿದೆ. ಭಾರತ 2ನೇ ಟಿ20 ಪಂದ್ಯದಲ್ಲಿ ಹಿಡಿತ ಸಾಧಿಸಿತ್ತು. ಆದರೆ ಮತ್ತೊಬ್ಬ ಆರ್ಸಿಬಿ ಆಟಗಾರ ಜೇಕಬ್ ಬೆಥಲ್ ಕೊಹ್ಲಿ ಸೂಚಿಸಿದ ಟಿಪ್ಸ್ ರೀತಿ ರವಿ ಬಿಶ್ನೋಯ್ ಮೇಲೆ ಸವಾರಿ ಮಾಡಿದ್ದರು. ಅಷ್ಟರಲ್ಲೇ ಪಂದ್ಯದ ಗತಿ ಬದಲಾಗಿತ್ತು.
ಕೊಹ್ಲಿ ಸಲಹೆ ಕುರಿತು ಫಿಲ್ ಸಾಲ್ಟ್ ಮಾತು
ಪಾಡ್ಕಾಸ್ಟ್ ಒಂದರಲ್ಲಿ ಮಾತನಾಡಿದ ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ ಜೊತೆಗಿನ ಬ್ಯಾಟಿಂಗ್, ಸಲಹೆ ಕುರಿತು ಮಾತನಾಡಿದ್ದಾರೆ. ನಾವು ಒಂದು ಹಂತದಲ್ಲಿ ರನ್ ಕೊರತೆಯಿಂದ ಸಂಕಷ್ಟದಲ್ಲಿದ್ದೆವು. ಕೊಹ್ಲಿ ಸೂಚನೆ ಬಳಿಕ ಬ್ಯಾಟಿಂಗ್ ಮೂಡ್ ಬದಲಾಯಿತು. ನಾವು ರನ್ ಮಾಡಿದೆವು ಎಂದು ಫಿಲ್ ಸಾಲ್ಟ್ ಹೇಳಿದ್ದಾರೆ. ಇದೇ ಅಸ್ತ್ರವನ್ನು ಇಂಗ್ಲೆಂಡ್ ತಂಡ ಭಾರತದ ಮೇಲೆ ಪ್ರಯೋಗಿಸುತ್ತಿದೆ.
ಪಂದ್ಯದ ಗತಿ ಬದಲಿಸಲು ಕೊಹ್ಲಿ ಸೂಚನೆ
ಒಂದು ಓವರ್ನಲ್ಲಿ 20 ರನ್ಗಳಂತೆ ಗಳಿಸಲು ಇದು ಸೂಕ್ತ ಸಮಯವೇ ಎಂದು ಕೊಹ್ಲಿಯನ್ನು ಪ್ರಶ್ನಿಸಿದ್ದೆ. ಆದರೆ ಕೊಹ್ಲಿ ಸೂಚಿಸಿದಂತೆ ನಾನು ಬ್ಯಾಟಿಂಗ್ ಸ್ಟ್ರೈಕ್ ರೇಟ್ ಬದಲಾಯಿಸಿದೆ ಎಂದು ಸಾಲ್ಟ್ ಹೇಳಿದ್ದಾರೆ. ಯಾವುದೇ ಕ್ರೀಡೆಯಲ್ಲಿ ನಮ್ಮ ಜ್ಞಾನ, ಕ್ರೀಡೆಯಲ್ಲಿನ ಅನುಭವ ಮುಖ್ಯವಾಗುತ್ತದೆ. ಸಂದರ್ಭ ನಿಭಾಯಿಸಿ ತಂಡಕ್ಕೆ ಗೆಲುವು ತಂದುಕೊಡುವುದು ಅತೀ ಮುಖ್ಯ ಎಂದು ಸಾಲ್ಟ್ ಹೇಳಿದ್ದಾರೆ.
ಬೌನ್ಸ್ ಬ್ಯಾಕ್ ಮಾಡಲು ಸಜ್ಜಾದ ಭಾರತ
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು. 2ನೇ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವು ಸಾಧಿಸಿದರೆ, ಜುಲೈ 7 ರಂದು ಟ್ರೆಂಟ್ ಬ್ರಿಡ್ಜ್ನಲ್ಲಿ ಮೂರನೇ ಟಿ20 ಪಂದ್ಯ ನಡೆಯಲಿದೆ. ಭಾರತ ಬೌನ್ಸ್ ಬ್ಯಾಕ್ ಮಾಡಲು ತಯಾರಿ ಮಾಡಿಕೊಂಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.

