India Lockdown ಬಡ ವಲಸಿಗನ ಹೃದಯ ಗೆದ್ದ ವೇಗಿ ಮೊಹಮ್ಮದ್ ಶಮಿ
ಕೊರೋನಾ ವೈರಸ್ ಬಡಜನರ ಮೇಲೆ ಬಲವಾದ ಹೊಡೆತ ನೀಡಿದೆ. ಕೋವಿಡ್ 19 ಎನ್ನುವ ಮಾರಣಾಂತಿಕ ಸೋಂಕಿಗೆ ಜಗತ್ತಿನಾದ್ಯಂತ ಲಕ್ಷಾಂತರ ಮಂದಿ ಕೊನೆಯುಸಿರೆಳೆದಿದ್ದಾರೆ. ಇನ್ನು ಭಾರತದಲ್ಲೂ ಕೊರೋನಾ ಸೋಂಕಿತರ ಸಂಖ್ಯೆ 11 ಸಾವಿರದ ಗಡಿ ದಾಟಿದ್ದು 300ಕ್ಕೂ ಅಧಿಕ ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಭಾರತ ಇದೀಗ ಎರಡನೇ ಹಂತದಲ್ಲಿ ಮೇ 03ರವರೆಗೆ ಲಾಕ್ಡೌನ್ ಘೋಷಿಸಿದೆ. ಭಾರತದಲ್ಲೂ ಕೂಲಿ ಕಾರ್ಮಿಕರ ಬದುಕು ದುಸ್ತರವೆನಿಸಿದೆ. ಮಾರ್ಚ್ 25ರಂದು ಮೊದಲ ಹಂತದಲ್ಲಿ ಏಕಾಏಕಿ ಲಾಕ್ಡೌನ್ ಘೋಷಿಸಿದ್ದರಿಂದ ಹಲವು ಮಂದಿ ಖಾಸಗಿ ವಾಹನಗಳಿಗೆ ದುಪ್ಪಟ್ಟು ಹಣ ನೀಡಿ ತವರಿಗೆ ಸೇರಿಕೊಂಡರು. ಆದರೆ ಹೆಚ್ಚು ಹಣಕೊಡಲು ಸಾಧ್ಯವಾಗದ ಬಡಬಗ್ಗರು, ಕೂಲಿ ಕಾರ್ಮಿಕರು ನಡೆದುಕೊಂಡೇ ಊರು ಸೇರುವ ಪ್ರಯತ್ನ ಮಾಡುತ್ತಿದ್ದಾರೆ. ಇದೀಗ ಟೀಂ ಇಂಡಿಯಾ ವೇಗಿ ತಾನು ಕಣ್ಣಾರೆ ಕಂಡ ಘಟನೆಯನ್ನು ಸ್ಪಿನ್ನರ್ ಯುಜುವೇಂದ್ರ ಚಹಲ್ ಅವರೊಂದಿಗೆ ಹಂಚಿಕೊಂಡಿದ್ದಾರೆ.
110

ತವರಿಗೆ ಹೊರಟಿದ್ದ ಕೂಲಿ ಕಾರ್ಮಿಕನಿಗೆ ನೆರವಾದ ಕ್ಷಣವನ್ನು ಹಂಚಿಕೊಂಡ ಮೊಹಮ್ಮದ್ ಶಮಿ
ತವರಿಗೆ ಹೊರಟಿದ್ದ ಕೂಲಿ ಕಾರ್ಮಿಕನಿಗೆ ನೆರವಾದ ಕ್ಷಣವನ್ನು ಹಂಚಿಕೊಂಡ ಮೊಹಮ್ಮದ್ ಶಮಿ
210
ಮನೆ ಮುಂದೆಯೇ ಹಸಿವಿನಿಂದ ಮೂರ್ಚೆ ಬಿದ್ದ ಬಿಹಾರದ ವ್ಯಕ್ತಿಗೆ ಊಟ ನೀಡಿ ಕಾಪಾಡಿದ ಟೀಂ ಇಂಡಿಯಾ ವೇಗಿ
ಮನೆ ಮುಂದೆಯೇ ಹಸಿವಿನಿಂದ ಮೂರ್ಚೆ ಬಿದ್ದ ಬಿಹಾರದ ವ್ಯಕ್ತಿಗೆ ಊಟ ನೀಡಿ ಕಾಪಾಡಿದ ಟೀಂ ಇಂಡಿಯಾ ವೇಗಿ
310
ಇನ್ಸ್ಟಾಗ್ರಾಂ ಲೈವ್ನಲ್ಲಿ ಆ ಹೃದಯಸ್ಪರ್ಶಿ ಘಟನೆಯನ್ನು ಚಹಲ್ ಜೊತೆ ಹಂಚಿಕೊಂಡ ಶಮಿ
ಇನ್ಸ್ಟಾಗ್ರಾಂ ಲೈವ್ನಲ್ಲಿ ಆ ಹೃದಯಸ್ಪರ್ಶಿ ಘಟನೆಯನ್ನು ಚಹಲ್ ಜೊತೆ ಹಂಚಿಕೊಂಡ ಶಮಿ
410
ಲಾಕ್ಡೌನ್ ಬೆನ್ನಲ್ಲೇ ರಾಜಸ್ಥಾನದಿಂದ ಬಿಹಾರಕ್ಕೆ ಹೊರಟಿದ್ದನಂತೆ ಕೂಲಿ ಕಾರ್ಮಿಕ
ಲಾಕ್ಡೌನ್ ಬೆನ್ನಲ್ಲೇ ರಾಜಸ್ಥಾನದಿಂದ ಬಿಹಾರಕ್ಕೆ ಹೊರಟಿದ್ದನಂತೆ ಕೂಲಿ ಕಾರ್ಮಿಕ
510
ಸಾರಿಗೆ ವ್ಯವಸ್ಥೆ ಇಲ್ಲದಿದ್ದರಿಂದ ತವರಿಗೆ ನಡೆದೇ ಹೊರಟಿದ್ದನಂತೆ ಆ ಬಡ ಕಾರ್ಮಿಕ
ಸಾರಿಗೆ ವ್ಯವಸ್ಥೆ ಇಲ್ಲದಿದ್ದರಿಂದ ತವರಿಗೆ ನಡೆದೇ ಹೊರಟಿದ್ದನಂತೆ ಆ ಬಡ ಕಾರ್ಮಿಕ
610
<br />ಆ ಕಾರ್ಮಿಕ ಮನೆ ಮುಂದೆ ಪ್ರಜ್ಞೆತಪ್ಪಿ ಬಿದ್ದಿದ್ದನ್ನು ಸಿಸಿಟಿವಿಯಲ್ಲಿ ಗಮನಿಸಿ ತಕ್ಷಣ ಬಳಿ ಹೋಗಿ ಊಟ ನೀಡಿ ಆತನಿಗೆ ನೆರವಾದ ಶಮಿ
ಆ ಕಾರ್ಮಿಕ ಮನೆ ಮುಂದೆ ಪ್ರಜ್ಞೆತಪ್ಪಿ ಬಿದ್ದಿದ್ದನ್ನು ಸಿಸಿಟಿವಿಯಲ್ಲಿ ಗಮನಿಸಿ ತಕ್ಷಣ ಬಳಿ ಹೋಗಿ ಊಟ ನೀಡಿ ಆತನಿಗೆ ನೆರವಾದ ಶಮಿ
710
ಆದಷ್ಟು ಜನರಿಗೆ ನನ್ನ ಕೈಲಾದ ಸಹಾಯ ಮಾಡುತ್ತೇನೆಂದ ಬಂಗಾಳ ವೇಗಿ
ಆದಷ್ಟು ಜನರಿಗೆ ನನ್ನ ಕೈಲಾದ ಸಹಾಯ ಮಾಡುತ್ತೇನೆಂದ ಬಂಗಾಳ ವೇಗಿ
810
ನನ್ನ ಮನೆ ಹೈವೇ ಪಕ್ಕದಲ್ಲೇ ಇದೆ, ಹಾಗಾಗಿ ಈ ವಲಸಿಗರ ಕಷ್ಟವನ್ನು ಹತ್ತಿರದಿಂದ ನೋಡುತ್ತಿದ್ಧೇನೆ ಎಂದ ವಿಶ್ವಕಪ್ ಹ್ಯಾಟ್ರಿಕ್ ವೀರ
ನನ್ನ ಮನೆ ಹೈವೇ ಪಕ್ಕದಲ್ಲೇ ಇದೆ, ಹಾಗಾಗಿ ಈ ವಲಸಿಗರ ಕಷ್ಟವನ್ನು ಹತ್ತಿರದಿಂದ ನೋಡುತ್ತಿದ್ಧೇನೆ ಎಂದ ವಿಶ್ವಕಪ್ ಹ್ಯಾಟ್ರಿಕ್ ವೀರ
910
ಈ ಹಿಂದೆ ಭಾರತದ ಫುಟ್ಬಾಲ್ ಲೆಜೆಂಡ್ ಬೈಚುಂಗು ಭುಟಿಯಾ ವಲಸಿಗರಿಗೆ ತಮ್ಮ ನಿರ್ಮಾಣ ಹಂತದಲ್ಲಿರುವ ಮನೆಯಲ್ಲೇ ಉಳಿದುಕೊಳ್ಳಲು ಮುಕ್ತ ಆಹ್ವಾನ ನೀಡಿದ್ದರು.
ಈ ಹಿಂದೆ ಭಾರತದ ಫುಟ್ಬಾಲ್ ಲೆಜೆಂಡ್ ಬೈಚುಂಗು ಭುಟಿಯಾ ವಲಸಿಗರಿಗೆ ತಮ್ಮ ನಿರ್ಮಾಣ ಹಂತದಲ್ಲಿರುವ ಮನೆಯಲ್ಲೇ ಉಳಿದುಕೊಳ್ಳಲು ಮುಕ್ತ ಆಹ್ವಾನ ನೀಡಿದ್ದರು.
1010
ಕೊರೋನಾ ಸಂಕಷ್ಟಕ್ಕೆ ಬಿಸಿಸಿಐ, ಹಾಕಿ ಇಂಡಿಯಾ. ಕ್ರೀಡಾ ತಾರೆಯರು ಸಾಕಷ್ಟು ಹಣವನ್ನು PM CARES ನಿಧಿಗೆ ಅರ್ಪಿಸಿದ್ದಾರೆ.
ಕೊರೋನಾ ಸಂಕಷ್ಟಕ್ಕೆ ಬಿಸಿಸಿಐ, ಹಾಕಿ ಇಂಡಿಯಾ. ಕ್ರೀಡಾ ತಾರೆಯರು ಸಾಕಷ್ಟು ಹಣವನ್ನು PM CARES ನಿಧಿಗೆ ಅರ್ಪಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.
Latest Videos