MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Sports
  • Cricket
  • ಬಿದ್ದರೂ ಮೀಸೆ ಮಣ್ಣಾಗಿಲ್ಲ ಎನ್ನುವಂತೆ; ತವರಿನಲ್ಲಿ ವೈಟ್‌ವಾಷ್ ಅನುಭವಿಸಿದ್ರೂ ಗೌತಮ್ ಗಂಭೀರ್ ಹಿಂಗಾ ಹೇಳೋದು?

ಬಿದ್ದರೂ ಮೀಸೆ ಮಣ್ಣಾಗಿಲ್ಲ ಎನ್ನುವಂತೆ; ತವರಿನಲ್ಲಿ ವೈಟ್‌ವಾಷ್ ಅನುಭವಿಸಿದ್ರೂ ಗೌತಮ್ ಗಂಭೀರ್ ಹಿಂಗಾ ಹೇಳೋದು?

ಗುವಾಹಟಿ: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟೆಸ್ಟ್‌ನಲ್ಲೂ ಟೀಂ ಇಂಡಿಯಾ ಸೋಲು ಅನುಭವಿಸಿದೆ. ಈ ಮೂಲಕ ಎರಡನೇ ಬಾರಿಗೆ ಭಾರತ ತವರಿನಲ್ಲಿ ವೈಟ್‌ವಾಷ್ ಮುಖಭಂಗ ಅನುಭವಿಸಿದೆ. ಈ ಸೋಲಿನ ಹೊರತಾಗಿಯೂ ಗೌತಮ್ ಗಂಭೀರ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. 

1 Min read
Naveen Kodase
Published : Nov 26 2025, 06:34 PM IST
Share this Photo Gallery
  • FB
  • TW
  • Linkdin
  • Whatsapp
18
ಭಾರತಕ್ಕೆ ಮತ್ತೊಂದು ಹೀನಾಯ ಸೋಲು
Image Credit : Getty

ಭಾರತಕ್ಕೆ ಮತ್ತೊಂದು ಹೀನಾಯ ಸೋಲು

ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಭಾರತ ಟೆಸ್ಟ್ ತಂಡಕ್ಕೆ ಮತ್ತೊಂದು ಅವಮಾನಕಾರಿ ಸೋಲು ಎದುರಾಗಿದೆ. ಗಂಭೀರ್ ಮಾರ್ಗದರ್ಶನದಲ್ಲಿ ಭಾರತ ಎರಡನೇ ಬಾರಿಗೆ ತವರಿನಲ್ಲೇ ವೈಟ್‌ವಾಷ್ ಮುಖಭಂಗ ಅನುಭವಿಸಿದೆ.

28
ಎರಡು ಬಾರಿ ಭಾರತಕ್ಕೆ ತವರಿನಲ್ಲಿ ವೈಟ್‌ವಾಷ್ ಮುಖಭಂಗ
Image Credit : BCCI

ಎರಡು ಬಾರಿ ಭಾರತಕ್ಕೆ ತವರಿನಲ್ಲಿ ವೈಟ್‌ವಾಷ್ ಮುಖಭಂಗ

ಮೊದಲು ನ್ಯೂಜಿಲೆಂಡ್ ಎದುರು ತವರಿನಲ್ಲಿ ನಡೆದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 3-0 ಅಂತರದಲ್ಲಿ ವೈಟ್‌ವಾಷ್ ಅನುಭವಿಸಿದ್ದ ಭಾರತ, ಇದೀಗ ಹರಿಣಗಳ ಎದುರು ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಸೋತು ಮುಖಭಂಗಕ್ಕೀಡಾಗಿದೆ.

Related Articles

Related image1
ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಕಂಡೂ ಕೇಳರಿಯದ ಪಾತಾಳಕ್ಕೆ ಕುಸಿದ ಟೀಂ ಇಂಡಿಯಾ! ಗೌತಿ ತಲೆದಂಡಕ್ಕೆ ಹೆಚ್ಚಿದ ಒತ್ತಡ
Related image2
ಅವನ್ನೊಬ್ಬ ಆಲ್ರೌಂಡರ್ರಾ? ಅವನ್ಯಾಕೆ ಆಯ್ಕೆ ಮಾಡಿದ್ರಿ?: ಹೆಡ್‌ಕೋಚ್ ಗಂಭೀರ್ ಮೇಲೆ ತಿರುಗಿಬಿದ್ದ ವಿಶ್ವಕಪ್ ಹೀರೋ!
38
ಗಂಭೀರ್ ಮಾರ್ಗದರ್ಶನದಲ್ಲಿ ಗೆದ್ದಿದ್ದಕ್ಕಿಂತ ಸೋತಿದ್ದೇ ಹೆಚ್ಚು
Image Credit : Getty

ಗಂಭೀರ್ ಮಾರ್ಗದರ್ಶನದಲ್ಲಿ ಗೆದ್ದಿದ್ದಕ್ಕಿಂತ ಸೋತಿದ್ದೇ ಹೆಚ್ಚು

ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ ಇದುವರೆಗೂ ಒಟ್ಟು 18 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಈ ಪೈಕಿ 10 ಪಂದ್ಯಗಳಲ್ಲಿ ಸೋತಿದೆ. ಇನ್ನು ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ರವಿಚಂದ್ರನ್ ಅಶ್ವಿನ್‌ ಟೆಸ್ಟ್‌ನಿಂದ ಸೈಡ್‌ಲೈನ್ ಆಗಲು ಗಂಭೀರ್ ಕಾರಣ ಎನ್ನುವ ಮಾತೂ ಇದೆ.

48
ಗಂಭೀರ್‌ಗೆ ಅಗರ್ಕರ್ ಸಾಥ್
Image Credit : Twitter

ಗಂಭೀರ್‌ಗೆ ಅಗರ್ಕರ್ ಸಾಥ್

ಹಿರಿಯ ಆಟಗಾರರನ್ನು ಕಡೆಗಣಿಸಿ, ಯುವ ಆಟಗಾರರಿಗೆ ಮಣೆಹಾಕಲು ಮುಂದಾಗಿದ್ದು ಗಂಭೀರ್ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇದರ ಜತೆಗೆ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಸಾಥ್ ಕೊಡುತ್ತಿರುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ

58
ತನ್ನ ಕೆಲಸ ಸಮರ್ಥಿಸಿಕೊಂಡ ಗಂಭೀರ್
Image Credit : Getty

ತನ್ನ ಕೆಲಸ ಸಮರ್ಥಿಸಿಕೊಂಡ ಗಂಭೀರ್

ಇನ್ನು ದಕ್ಷಿಣ ಆಫ್ರಿಕಾ ಎದುರು ಬರೋಬ್ಬರಿ 408 ರನ್ ಅಂತರದ ಸೋಲಿನ ಹೊರತಾಗಿಯೂ ಗೌತಮ್ ಗಂಭೀರ್ ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದಾರೆ. ನನ್ನ ನಾಯಕತ್ವದಲ್ಲೇ ಭಾರತ ಐಸಿಸಿ ಚಾಂಪಿಯನ್ಸ್ ಟ್ರೋಫಿ, ಏಷ್ಯಾಕಪ್ ಜಯಿಸಿದೆ ಎಂದು ಹೇಳಿದ್ದಾರೆ.

68
ಗೌತಮ್ ಗಂಭೀರ್‌ಗೆ ಮಾಧ್ಯಮದವರ ಖಡಕ್ ಪ್ರಶ್ನೆ
Image Credit : ANI

ಗೌತಮ್ ಗಂಭೀರ್‌ಗೆ ಮಾಧ್ಯಮದವರ ಖಡಕ್ ಪ್ರಶ್ನೆ

ಸೋಲಿನ ಬಳಿಕ ಮಾಧ್ಯಮದವರು, ನೀವು ಇನ್ನೂ ಟೆಸ್ಟ್ ಕ್ರಿಕೆಟ್‌ನಲ್ಲಿ ಈ ಹುದ್ದೆಯಲ್ಲಿ ಮುಂದುವರೆಯಲು ಯೋಗ್ಯವಾದ ವ್ಯಕ್ತಿ ಎನಿಸುತ್ತದೆಯೇ ಎಂದು ಗಂಭೀರ್ ಅವರನ್ನು ಪ್ರಶ್ನಿಸಲಾಯಿತು. ಆಗ ಗೌತಿ, ಅದು ಬಿಸಿಸಿಐ ತೀರ್ಮಾನಿಸಲಿದೆ. ನಾನು ನಿರ್ದಿಷ್ಟವಾದ ಗುರಿ ಸಾಧಿಸಲು ಪ್ರಯತ್ನ ಪಡುತ್ತಿದ್ದೇನೆ ಎಂದು ಹೇಳಿದ್ದಾರೆ.

78
ನನ್ನ ಮಾರ್ಗದರ್ಶನದಲ್ಲಿ ಭಾರತ ಚೆನ್ನಾಗಿ ಆಡಿದೆ ಎಂದ ಗೌತಿ
Image Credit : Getty

ನನ್ನ ಮಾರ್ಗದರ್ಶನದಲ್ಲಿ ಭಾರತ ಚೆನ್ನಾಗಿ ಆಡಿದೆ ಎಂದ ಗೌತಿ

ಅಂದಹಾಗೆ ನಿಮಗೆ ನೆನಪಿರಲಿ ನನ್ನ ಮಾರ್ಗದರ್ಶನದಲ್ಲಿಯೇ ಭಾರತ ಇಂಗ್ಲೆಂಡ್‌ನಲ್ಲಿ ಉತ್ತಮ ಪ್ರದರ್ಶನ ತೋರಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಹಾಗೂ ಏಷ್ಯಾಕಪ್ ಗೆದ್ದಿದೆ ಎಂದು ಗಂಭೀರ್ ಹೇಳಿದ್ದಾರೆ

88
ಗಂಭೀರ್ ತಲೆದಂಡವಾಗುತ್ತಾ?
Image Credit : Getty

ಗಂಭೀರ್ ತಲೆದಂಡವಾಗುತ್ತಾ?

ಭಾರತದ ಈ ದಯನೀಯ ಸೋಲಿನ ಬೆನ್ನಲ್ಲೇ ಗೌತಮ್ ಗಂಭೀರ್ ಅವರ ಟೆಸ್ಟ್ ಹೆಡ್‌ಕೋಚ್‌ ಹುದ್ದೆಯ ತಲೆದಂಡಕ್ಕೆ ಆಗ್ರಹ ಜೋರಾಗಿದೆ. ಮುಂದೇನು ಬೆಳವಣಿಗೆಯಾಗಲಿವೆ ಎನ್ನುವುದನ್ನು ಕಾದು ನೋಡಬೇಕಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಗೌತಮ್ ಗಂಭೀರ್
ಕ್ರಿಕೆಟ್
ಟೀಮ್ ಇಂಡಿಯಾ
ಟೆಸ್ಟ್ ಕ್ರಿಕೆಟ್
Latest Videos
Recommended Stories
Recommended image1
ಮದುವೆ ಮುಂದೂಡಿಕೆ ಬೆನ್ನಲ್ಲೇ ಪಲಾಶ್ ಅನ್‌ಫಾಲೋ ಮಾಡಿದ ಸ್ಮೃತಿ ಫ್ರೆಂಡ್ಸ್, ಬೇರೆ ಏನೋ ಕಾರಣವಿದೆಯೆಂದ ನೆಟ್ಟಿಗರು
Recommended image2
ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಕಂಡೂ ಕೇಳರಿಯದ ಪಾತಾಳಕ್ಕೆ ಕುಸಿದ ಟೀಂ ಇಂಡಿಯಾ! ಗೌತಿ ತಲೆದಂಡಕ್ಕೆ ಹೆಚ್ಚಿದ ಒತ್ತಡ
Recommended image3
ಎರಡನೇ ಪಂದ್ಯದಲ್ಲೂ ಮುಗ್ಗರಿಸಿದ ಟೀಂ ಇಂಡಿಯಾ; 25 ವರ್ಷಗಳ ನಂತ್ರ ದಕ್ಷಿಣ ಆಫ್ರಿಕಾ ಸಾಧನೆ
Related Stories
Recommended image1
ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಕಂಡೂ ಕೇಳರಿಯದ ಪಾತಾಳಕ್ಕೆ ಕುಸಿದ ಟೀಂ ಇಂಡಿಯಾ! ಗೌತಿ ತಲೆದಂಡಕ್ಕೆ ಹೆಚ್ಚಿದ ಒತ್ತಡ
Recommended image2
ಅವನ್ನೊಬ್ಬ ಆಲ್ರೌಂಡರ್ರಾ? ಅವನ್ಯಾಕೆ ಆಯ್ಕೆ ಮಾಡಿದ್ರಿ?: ಹೆಡ್‌ಕೋಚ್ ಗಂಭೀರ್ ಮೇಲೆ ತಿರುಗಿಬಿದ್ದ ವಿಶ್ವಕಪ್ ಹೀರೋ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved