ಸಚಿನ್ ತೆಂಡುಲ್ಕರ್ ಔಟ್ ಮಾಡಿದ್ದಕ್ಕೆ ಇಂಗ್ಲೆಂಡ್ ವೇಗಿಗೆ ಬಂದಿತ್ತಂತೆ ಜೀವ ಬೆದರಿಕೆ!
ಭಾರತದಲ್ಲಿ ಕ್ರಿಕೆಟ್ ಒಂದು ಧರ್ಮ ಅನ್ನುವುದಾದರೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಅದಕ್ಕೆ ದೇವರು ಅನ್ನುವ ಮಾತೊಂದಿದೆ. ಅಷ್ಟರ ಮಟ್ಟಿಗೆ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಹೃದಯದಲ್ಲಿ ಬೇರೂರಿದ್ದಾರೆ. 24 ವರ್ಷಗಳ ಸುದೀರ್ಘ ಕ್ರಿಕೆಟ್ ಜೀವನದಲ್ಲಿ ಭಾರತ ಮಾತ್ರವಲ್ಲ ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳ ಪಾಲಿಗೆ ಸಚಿನ್ ಆರಾಧ್ಯ ದೈವವಾಗಿದ್ದರು.90ರ ದಶಕದಲ್ಲಿ ಸಚಿನ್ ಔಟಾದರೆ ಮುಗಿಯಿತು ಟೀಂ ಇಂಡಿಯಾ ಸೋಲು ಕಟ್ಟಿಟ್ಟ ಬುತ್ತಿ ಎಂದೇ ಭಾವಿಸಲಾಗುತ್ತಿತ್ತು. ಕೆಲವರಂತು ಸಚಿನ್ ಔಟಾಗುತ್ತಿದ್ದಂತೆ ಟಿವಿಯನ್ನು ಆಫ್ ಮಾಡಿ ಬಿಡುತ್ತಿದ್ದರು. ಶತಕಗಳ ಶತಕದ ಸರದಾರ 90 ರನ್ ಗಳಿಸುತ್ತಿದ್ದಂತೆ ನರ್ವಸ್ ಆಗಿ ವಿಕೆಟ್ ಒಪ್ಪಿಸುತ್ತಿದ್ದರು. ಹೀಗೆ 99 ಶತಕ ಬಾರಿಸಿದ್ದ ತೆಂಡುಲ್ಕರ್ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯದಲ್ಲಿ 90 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದರು. ಈ ವೇಳೆ ವಿಕೆಟ್ ಪಡೆದ ಬೌಲರ್ ಹಾಗೂ ವಿವಾದಾತ್ಮಕ ಔಟ್ ನೀಡಿದ ಅಂಪೈರ್ ಜೀವ ಬೆದರಿಕೆ ಎದುರಿಸಿದ್ದರಂತೆ..!

<p>100ನೇ ಅಂತಾರಾಷ್ಟ್ರೀಯ ಶತಕದ ಹೊಸ್ತಿಲಲ್ಲಿದ್ದ ಸಚಿನ್ ತೆಂಡುಲ್ಕರ್ ವಿಕೆಟ್ ಕಬಳಿಸಿದ್ದಕ್ಕೆ ಹಲವು ವರ್ಷಗಳ ಕಾಲ ಜೀವ ಬೆದರಿಕೆ ಎದುರಿಸಿದ್ದೆ ಎಂದು ಇಂಗ್ಲೆಂಡ್ನ ಮಾಜಿ ವೇಗಿ ಟಿಮ್ ಬ್ರೆಸ್ನನ್ ಹೇಳಿದ್ದಾರೆ. </p>
100ನೇ ಅಂತಾರಾಷ್ಟ್ರೀಯ ಶತಕದ ಹೊಸ್ತಿಲಲ್ಲಿದ್ದ ಸಚಿನ್ ತೆಂಡುಲ್ಕರ್ ವಿಕೆಟ್ ಕಬಳಿಸಿದ್ದಕ್ಕೆ ಹಲವು ವರ್ಷಗಳ ಕಾಲ ಜೀವ ಬೆದರಿಕೆ ಎದುರಿಸಿದ್ದೆ ಎಂದು ಇಂಗ್ಲೆಂಡ್ನ ಮಾಜಿ ವೇಗಿ ಟಿಮ್ ಬ್ರೆಸ್ನನ್ ಹೇಳಿದ್ದಾರೆ.
<p>2011ರ ದಿ ಓವಲ್ ಟೆಸ್ಟ್ನಲ್ಲಿ ತೆಂಡುಲ್ಕರ್ 91 ರನ್ ಗಳಿಸಿದ್ದಾಗ ಬ್ರೆಸ್ನನ್ ಎಸೆತದಲ್ಲಿ ಎಲ್ಬಿ ಬಲೆಗೆ ಬಿದ್ದಿದ್ದರು. ಅಂಪೈರ್ ರಾಡ್ ಟಕರ್ ನೀಡಿದ ತೀರ್ಪು ವಿವಾದಕ್ಕೆ ಕಾರಣವಾಗಿತ್ತು. </p>
2011ರ ದಿ ಓವಲ್ ಟೆಸ್ಟ್ನಲ್ಲಿ ತೆಂಡುಲ್ಕರ್ 91 ರನ್ ಗಳಿಸಿದ್ದಾಗ ಬ್ರೆಸ್ನನ್ ಎಸೆತದಲ್ಲಿ ಎಲ್ಬಿ ಬಲೆಗೆ ಬಿದ್ದಿದ್ದರು. ಅಂಪೈರ್ ರಾಡ್ ಟಕರ್ ನೀಡಿದ ತೀರ್ಪು ವಿವಾದಕ್ಕೆ ಕಾರಣವಾಗಿತ್ತು.
<p>‘ನನಗೂ ಹಾಗೂ ಅಂಪೈರ್ ಟಕರ್ಗೆ ಹಲವು ವರ್ಷಗಳ ಕಾಲ ಟ್ವೀಟರ್ನಲ್ಲಿ ನೂರಾರು ಅಭಿಮಾನಿಗಳು ಜೀವ ಬೆದರಿಕೆ ಹಾಕಿದರು. ಅನೇಕರು ನನ್ನ ಮನೆಗೆ ಪತ್ರಗಳನ್ನು ಸಹ ಕಳುಹಿಸಿದ್ದರು. </p>
‘ನನಗೂ ಹಾಗೂ ಅಂಪೈರ್ ಟಕರ್ಗೆ ಹಲವು ವರ್ಷಗಳ ಕಾಲ ಟ್ವೀಟರ್ನಲ್ಲಿ ನೂರಾರು ಅಭಿಮಾನಿಗಳು ಜೀವ ಬೆದರಿಕೆ ಹಾಕಿದರು. ಅನೇಕರು ನನ್ನ ಮನೆಗೆ ಪತ್ರಗಳನ್ನು ಸಹ ಕಳುಹಿಸಿದ್ದರು.
<p>ಇಂಗ್ಲೆಂಡ್ ವೇಗಿಗೆ ಸಾಮಾಜಿಕ ಜಾಲತಾಣದಲ್ಲಿ, ಸಚಿನ್ ಔಟ್ ಮಾಡಲು ನಿನಗೆಷ್ಟು ಧೈರ್ಯ, ಆ ಚೆಂಡು ಲೆಗ್ಸ್ಟಂಪ್ ಆಚೆ ಹೋಗುತ್ತಿತ್ತು ಎಂದೆಲ್ಲಾ ಬೆದರಿಸಿದ್ದರಂತೆ.</p>
ಇಂಗ್ಲೆಂಡ್ ವೇಗಿಗೆ ಸಾಮಾಜಿಕ ಜಾಲತಾಣದಲ್ಲಿ, ಸಚಿನ್ ಔಟ್ ಮಾಡಲು ನಿನಗೆಷ್ಟು ಧೈರ್ಯ, ಆ ಚೆಂಡು ಲೆಗ್ಸ್ಟಂಪ್ ಆಚೆ ಹೋಗುತ್ತಿತ್ತು ಎಂದೆಲ್ಲಾ ಬೆದರಿಸಿದ್ದರಂತೆ.
<p>ಅಂಪೈರ್ ರಾಡ್ ಟಕರ್, ಆಸ್ಪ್ರೇಲಿಯಾದಲ್ಲಿ ತಮ್ಮ ಮನೆಗೆ ಪೊಲೀಸ್ ಭದ್ರತೆ ಸಹ ಪಡೆದುಕೊಂಡಿದ್ದರು’ ಎಂದು ಬ್ರೆಸ್ನನ್ ಸ್ಥಳೀಯ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.</p>
ಅಂಪೈರ್ ರಾಡ್ ಟಕರ್, ಆಸ್ಪ್ರೇಲಿಯಾದಲ್ಲಿ ತಮ್ಮ ಮನೆಗೆ ಪೊಲೀಸ್ ಭದ್ರತೆ ಸಹ ಪಡೆದುಕೊಂಡಿದ್ದರು’ ಎಂದು ಬ್ರೆಸ್ನನ್ ಸ್ಥಳೀಯ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
<p>2011ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬಿಸಿಸಿಐ ಡಿಆರ್ಎಸ್ ಬಳಸಲು ಒಪ್ಪಿರಲಿಲ್ಲ. ಹೀಗಾಗಿ ಅಂಪೈರ್ ನಿರ್ಧಾರ ಪ್ರಶ್ನಿಸಲು ಸಚಿನ್ಗೆ ಸಾಧ್ಯವಾಗಲಿಲ್ಲ, ಅನಿವಾರ್ಯವಾಗಿ ತೆಂಡುಲ್ಕರ್ ಪೆವಿಲಿಯನ್ ಸೇರಬೇಕಾಯಿತು.</p>
2011ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬಿಸಿಸಿಐ ಡಿಆರ್ಎಸ್ ಬಳಸಲು ಒಪ್ಪಿರಲಿಲ್ಲ. ಹೀಗಾಗಿ ಅಂಪೈರ್ ನಿರ್ಧಾರ ಪ್ರಶ್ನಿಸಲು ಸಚಿನ್ಗೆ ಸಾಧ್ಯವಾಗಲಿಲ್ಲ, ಅನಿವಾರ್ಯವಾಗಿ ತೆಂಡುಲ್ಕರ್ ಪೆವಿಲಿಯನ್ ಸೇರಬೇಕಾಯಿತು.
<p>সলমনের কথায় -না, কেউ পারবে না। তবে একজনই পারত, তিনি হলেন সলমন খান, কিন্তু তিনি সিনেমার জগতে চলে গিয়েছেন, যার ফলে এটা আর হল না।</p>
সলমনের কথায় -না, কেউ পারবে না। তবে একজনই পারত, তিনি হলেন সলমন খান, কিন্তু তিনি সিনেমার জগতে চলে গিয়েছেন, যার ফলে এটা আর হল না।
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.