MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Sports
  • Cricket
  • ನಗರದ ಹೃದಯ ಭಾಗದಲ್ಲಿರುವ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಸ್ಥಳಾಂತರ ಅನಿವಾರ್ಯ, ಏಕೆ?

ನಗರದ ಹೃದಯ ಭಾಗದಲ್ಲಿರುವ ಎಂ ಚಿನ್ನಸ್ವಾಮಿ ಕ್ರೀಡಾಂಗಣ ಸ್ಥಳಾಂತರ ಅನಿವಾರ್ಯ, ಏಕೆ?

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ 2024ರಲ್ಲಿ 50 ವರ್ಷ ತುಂಬಿದೆ. ಆರ್‌ಸಿಬಿ ಸಂಭ್ರಮಾಚರಣೆ ಸ್ಟೇಡಿಯಂಗೆ ಕಳಂಕ ತಂದಿದೆ . ಈ ನಡುವೆ ಕ್ರೀಡಾಂಗಣವನ್ನು ಬೇರೆಡೆಗೆ ಸ್ಥಳಾಂತರಗೊಳಿಸುವ ಬಗ್ಗೆ ಹಲವು ವರ್ಷಗಳಿಂದಲೂ ಚರ್ಚೆಯಾಗುತ್ತಿದೆ. ಕ್ರೀಡಾಂಗಣ ಸ್ಥಳಾಂತರ ಏಕೆ ಅನಿವಾರ್ಯ ನೋಡೋಣ ಬನ್ನಿ 

1 Min read
Naveen Kodase
Published : Aug 08 2025, 11:11 AM IST
Share this Photo Gallery
  • FB
  • TW
  • Linkdin
  • Whatsapp
15
1. ಆಸನ ಸಾಮರ್ಥ್ಯ ಕಡಿಮೆ
Image Credit : our own

1. ಆಸನ ಸಾಮರ್ಥ್ಯ ಕಡಿಮೆ

ಚಿನ್ನಸ್ವಾಮಿ ಕ್ರೀಡಾಂಗಣದ ಆಸನ ಸಾಮರ್ಥ್ಯ 32,000. ಮಹಿಳಾ ಟಿ20 ಪಂದ್ಯಗಳಿಗೂ ಕ್ರೀಡಾಂಗಣ ಭರ್ತಿಯಾಗಲಿದೆ. ಆ ಮಟ್ಟದ ಕ್ರಿಕೆಟ್ ಆಸಕ್ತರು, ಟಿಕೆಟ್ ದರ ಎಷ್ಟೇ ದುಬಾರಿಯಾದರೂ ಖರೀದಿಸಿ ಕ್ರೀಡಾಂಗಣಕ್ಕೆ ಬರುವ ಅಭಿಮಾನಿಗಳಿದ್ದಾರೆ. ಟಿಕೆಟ್ ಸಿಗದೆ ಸಾವಿರಾರು ಅಭಿಮಾನಿಗಳು ಪರದಾಡುವುದನ್ನು ಪ್ರತಿ ಬಾರಿ ನೋಡುತ್ತೇವೆ. ಐಪಿಎಲ್, ಡಬ್ಲ್ಯುಪಿಎಲ್, ಭಾರತದ ಯಾವುದೇ ಪಂದ್ಯವಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರುವ ಬೆಂಗಳೂರಿಗೆ ದೊಡ್ಡ ಕ್ರೀಡಾಂಗಣ ಬೇಕಿದೆ.

25
2. ಪಾರ್ಕಿಂಗ್ ವ್ಯವಸ್ಥೆಯೇ ಇಲ್ಲ
Image Credit : social media

2. ಪಾರ್ಕಿಂಗ್ ವ್ಯವಸ್ಥೆಯೇ ಇಲ್ಲ

ಚಿನ್ನಸ್ವಾಮಿ ಕ್ರೀಡಾಂಗಣ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಹೊಂದಿಲ್ಲ. ಆಟಗಾರರ ಬಸ್‌, ಕೆಎಸ್‌ಸಿಎ ಸದಸ್ಯರು, ಸಿಬ್ಬಂದಿಗೆ ಒಂದಷ್ಟು ವಾಹನಗಳನ್ನು ನಿಲ್ಲಿಸಲು ಕ್ರೀಡಾಂಗಣದ ಮುಖ್ಯ ಗೇಟ್ ಒಳಗೆ ಅಲ್ಪ ಜಾಗವಿದೆ. ಅದನ್ನು ಹೊರತುಪಡಿಸಿ ಪ್ರೇಕ್ಷಕರಿಗೆ ಯಾವುದೇ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ದೊಡ್ಡ ಪಂದ್ಯಗಳ ವೇಳೆ ಕಿಲೋ ಮೀಟರ್ ದೂರದಲ್ಲಿ, ಖಾಸಗಿ ಸ್ಥಳಗಳಲ್ಲಿ ವಾಹನ ನಿಲ್ಲಿಸಿ ಮೈದಾನಕ್ಕೆ ಬರಬೇಕಿದೆ.

Related Articles

Related image1
ಚಿನ್ನಸ್ವಾಮಿ ಸ್ಟೇಡಿಯಂ: ಒಂದು ದುರಂತ ಅಧ್ಯಾಯ! ಹಲವು ಟೂರ್ನಿ ಎತ್ತಂಗಡಿ, ಐಪಿಎಲ್‌ ಪಂದ್ಯ ಕೂಡಾ ಅನುಮಾನ
Related image2
ಚಿನ್ನಸ್ವಾಮಿ ಕಾಲ್ತುಳಿತ ವರದಿ ವಿವಾದ, ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲು ಹೈಕೋರ್ಟ್ ಸೂಚನೆ
35
3. ಜನದಟ್ಟಣೆ, ನೂಕುನುಗ್ಗಲು
Image Credit : Screengrab/X

3. ಜನದಟ್ಟಣೆ, ನೂಕುನುಗ್ಗಲು

ಯಾವುದೇ ಪಂದ್ಯವಿದ್ದರೂ ಕ್ರೀಡಾಂಗಣ ಬಳಿ ಜನದಟ್ಟಣೆ ಇರುತ್ತದೆ. ಇದರಿಂದ ನೂಕುನುಗ್ಗಲು ಕೂಡಾ ಉಂಟಾಗುವುದಿದೆ. ಗೇಟ್ ಬಳಿ ಕ್ಯೂ ನಿಲ್ಲಲು ಕೂಡಾ ಮುಖ್ಯ ರಸ್ತೆಯ ಪಾದಾಚಾರಿ ಮಾರ್ಗವನ್ನು ಬಳಸಬೇಕಾಗಿದೆ. ಸಮೀಪದಲ್ಲೇ ವಾಹನಗಳು ಸಂಚರಿಸುವುದರಿಂದ ಗೇಟ್ ಬಳಿ ಜನರ ಜಮಾವಣೆ ಅಪಾಯಕಾರಿ. ಇತ್ತೀಚೆಗೆ ನಡೆದ ಕಾಲ್ತುಳಿತ ಇದಕ್ಕೆ ಸಾಕ್ಷಿ.

45
4. ವಾಹನ ಸಂಚಾರಕ್ಕೆ ಅಡ್ಡಿ
Image Credit : Asianet News

4. ವಾಹನ ಸಂಚಾರಕ್ಕೆ ಅಡ್ಡಿ

ಚಿನ್ನಸ್ವಾಮಿಯಲ್ಲಿ ಪಂದ್ಯವಿದ್ದ ದಿನ ಸಮೀಪದ ರಸ್ತೆಗಳಲ್ಲಿ ವಾಹನಗಳು ಸಂಚರಿಸಬೇಕಿದ್ದರೆ ಹರಸಾಹಸ ಪಡಬೇಕು. ಸುಗಮ ಸಂಚಾರಕ್ಕಾಗಿ ನೂರಾರು ಪೊಲೀಸರನ್ನು ನಿಯೋಜಿಸಿದರೂ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತದೆ. ಅತ್ತಿಂದಿತ್ತ ಓಡಾಡುವ ಅಭಿಮಾನಿಗಳು, ಗೇಟ್ ಬಳಿ ಕ್ಯೂ ನಿಲ್ಲುವ ಪ್ರೇಕ್ಷಕರಿಂದಾಗಿ ರಸ್ತೆಗಳಲ್ಲೂ ಜನದಟ್ಟಣೆ ಉಂಟಾಗುತ್ತದೆ. ನಗರದ ಹೊರವಲಯದಲ್ಲಿ ಕ್ರೀಡಾಂಗಣವಿದ್ದರೆ ಈ ಸಮಸ್ಯೆ ಇರುವುದಿಲ್ಲ.

55
5 ಮೂಲಸೌಕರ್ಯ ಕೊರತೆ
Image Credit : Getty

5 ಮೂಲಸೌಕರ್ಯ ಕೊರತೆ

ಪ್ರೇಕ್ಷಕರ ಅನುಭವ ಹಾಗೂ ಇತ್ತೀಚೆಗೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದ ನ್ಯಾ.ಕುನ್ಹಾ ಆಯೋಗದ ಪ್ರಕಾರ ಕ್ರೀಡಾಂಗಣದಲ್ಲಿ ಮೂಲಸೌಕರ್ಯ ಕೊರತೆಯಿದೆ. ಕ್ರೀಡಾಂಗಣದ ವಿನ್ಯಾಸ, ರಚನೆ ಹೆಚ್ಚಿನ ಜನರು ಸೇರುವ ಪಂದ್ಯಗಳಿಗೆ ಸೂಕ್ತವಲ್ಲ ಮತ್ತು ಅಸುರಕ್ಷಿತ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದ್ದು ಇಲ್ಲಿ ಗಮನಾರ್ಹ. ಭದ್ರತಾ ವ್ಯವಸ್ಥೆ, ಪಾರ್ಕಿಂಗ್, ನೀರು, ಶೌಚಾಲಯ, ಕಟ್ಟಡ ಸ್ಥಿತಿ, ಗೇಟ್‌ಗಳ ರೂಪ ಕೂಡಾ ಕ್ರೀಡಾಂಗಣಕ್ಕೆ ಸೂಕ್ತವಲ್ಲ ಎಂಬ ಆರೋಪಗಳಿವೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಕ್ರಿಕೆಟ್
ಕ್ರಿಕೆಟ್ ಕ್ರೀಡಾಂಗಣ
ಬೆಂಗಳೂರು ಕಾಲ್ತುಳಿತ
ಐಪಿಎಲ್

Latest Videos
Recommended Stories
Recommended image1
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ
Recommended image2
ಕಾಂಗರೂ ನಾಡಲ್ಲಿ ಶತಕದ ಬರ ನೀಗಿಸಿಕೊಂಡ ಜೋ ರೂಟ್! ಕೊನೆಗೂ ತಪ್ಪಿದ ಹೇಡನ್ 'ಬೆತ್ತಲೆ ಸೇವೆ'!
Recommended image3
ಕೆಎಸ್‌ಸಿಎ ಚುನಾವಣಾ ಅಖಾಡಕ್ಕೆ ಮಲೆನಾಡಿನ ಕ್ರಿಕೆಟಿಗ ನಾಗೇಂದ್ರ ಪಂಡಿತ್!
Related Stories
Recommended image1
ಚಿನ್ನಸ್ವಾಮಿ ಸ್ಟೇಡಿಯಂ: ಒಂದು ದುರಂತ ಅಧ್ಯಾಯ! ಹಲವು ಟೂರ್ನಿ ಎತ್ತಂಗಡಿ, ಐಪಿಎಲ್‌ ಪಂದ್ಯ ಕೂಡಾ ಅನುಮಾನ
Recommended image2
ಚಿನ್ನಸ್ವಾಮಿ ಕಾಲ್ತುಳಿತ ವರದಿ ವಿವಾದ, ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲು ಹೈಕೋರ್ಟ್ ಸೂಚನೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved