ಕೊರೋನಾ ವಿರುದ್ಧದ ಹೋರಾಟಕ್ಕೆ ಸಂಕಲ್ಪ; ಭಾರತದೆಲ್ಲೆಡೆ ಬೆಳಗಿತು ಏಕತಾ ದೀಪ !
ಕೊರೋನಾ ಮಹಾಮಾರಿ ತೊಲಗಿಸಲು ಭಾರತವನ್ನೇ ಲಾಕ್ಡೌನ್ ಮಾಡಲಾಗಿದೆ. ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಎಲ್ಲರೂ ಒಗ್ಗಟ್ಟಾಗಿ ಹೋರಾಡುವ ನಿಟ್ಟಿನಲ್ಲಿ ಸಾಂಕೇತಿಕವಾಗಿ ದೀಪ ಹಚ್ಚಲು ಪ್ರಧಾನಿ ಮೋದಿ ಕರೆ ನೀಡಿದ್ದರು. ಮೋದಿ ಕರೆಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ. ದೇಶದ 9 ಗಂಟೆಗೆ ಭಾರತದ ಎಲ್ಲರ ಮನೆ-ಮನಗಳಲ್ಲಿ ದೀಪ ಬೆಳಗಿತು. ಈ ಮೂಲಕ ಕೊರೋನಾ ಹೋರಾಟದಲ್ಲಿ ಭಾರತದ 130 ಕೋಟಿ ಜನ ಒಗ್ಗಾಟ್ಟಾಗಿದ್ದೇವೆ ಎಂಬ ಸಂದೇಶವನ್ನು ವಿಶ್ವಕ್ಕೆ ಸಾರಿತು. ಸ್ವತಃ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ನಾಯಕರ ಏಕತಾ ದೀಪದ ಬೆಳಕು ಇಲ್ಲಿದೆ.
ಕೊರೋನಾ ವಿರುದ್ಧದ ಹೋರಾಟಕ್ಕೆ ಏಕತಾ ದೀಪ ಹಚ್ಚಲು ಕರೆ ನೀಡಿದ ಮೋದಿ ದೀಪ ಬೆಳಗಿ ಒಗ್ಗಟ್ಟಿನ ಸಂದೇಶ ಸಾರಿದರು
ಮೋದಿ ಮನೆಯಲ್ಲಿ ದೀಪ ಹಚ್ಚಿ ಭಾರತೀಯರಲ್ಲಿ ಆತ್ಮಸ್ಥೈರ್ಯ ತುಂಬಿದರು
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕುಟಂಬದ ಜೊತೆಯಲ್ಲಿ ದೀಪ ಬೆಳಗಿದರು
ಗೃಹ ಸಚಿವ ಅಮಿತ್ ಶಾ ದೀಪ ಬೆಳಗುವ ಫೋಟವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಂ ಕುಟುಂಬಸ್ಥರ ಜೊತೆ ದೀಪ ಹಚ್ಚಿದರು
ಮನೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ದೀಪ ಬೆಳಗಿ ಒಗ್ಗಟ್ಟಿನ ಮಂತ್ರ ಸಾರಿದರು
ಮಾಹಿತಿ ಮತ್ರು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ , ಪ್ರಧಾನಿ ಕರೆಗೆ ದೀಪ ಬೆಳಗಿ ಬೆಂಬಲ ಸೂಚಿಸದರು
ಪರಿಸರ ಸಚಿವ ಪ್ರಕಾಶ್ ಜಾವೇಡೇಕರ್ ಮನೆಯಲ್ಲಿ ತಮ್ಮ ಕುಟುಂಬದ ಜೊತೆ ದೀಪ ಬೆಳಗಿದರು
ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ತಮ್ಮ ಮನೆಯಲ್ಲಿ ಕುಟುಂಬದ ಜೊತೆ ದೀಪ ಬೆಳಗಿದರು
ಕೊರೋನಾ ವಿರುದ್ಧದ ಹೋರಾಟದಲ್ಲಿ ಸಚಿವ ಸರೇಶ್ ಪ್ರಭು ಹಾಗೂ ಕುಟುಂಬ
ಪ್ರಧಾನಿ ಮೋದಿ ತಾಯಿ ಹೀರಾಬೆನ್ ಮೋದಿ ಕೂಡ ದೀಪ ಬೆಳಗಿ ಕೊರೋನಾ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿದರು