- Home
- Entertainment
- Cine World
- ಸೌಂದರ್ಯ ಸಿನಿಮಾ ನೋಡಿ ಕೈ ಸುಟ್ಟುಕೊಂಡ ಚಿರಂಜೀವಿ, ತಲೆಕೆಡಿಸಿಕೊಂಡ ಆ ನಿರ್ದೇಶಕ: ಆಗಿದ್ದೇನು?
ಸೌಂದರ್ಯ ಸಿನಿಮಾ ನೋಡಿ ಕೈ ಸುಟ್ಟುಕೊಂಡ ಚಿರಂಜೀವಿ, ತಲೆಕೆಡಿಸಿಕೊಂಡ ಆ ನಿರ್ದೇಶಕ: ಆಗಿದ್ದೇನು?
ಸೌಂದರ್ಯ ಅವರ ಒಂದು ಸಿನಿಮಾದಿಂದಾಗಿ ಚಿರಂಜೀವಿ ತಮ್ಮ ವೃತ್ತಿಜೀವನದಲ್ಲಿ ದೊಡ್ಡ ಫ್ಲಾಪ್ ಎದುರಿಸಬೇಕಾಯ್ತು. ಆ ಸಿನಿಮಾ ಬೇಡ ಅಂತ ನಿರ್ದೇಶಕರು ಎಷ್ಟು ಹೇಳಿದ್ರೂ ಚಿರಂಜೀವಿ ಕೇಳಲಿಲ್ಲವಂತೆ. ಅಷ್ಟಕ್ಕೂ ಆ ಸಿನಿಮಾ ಯಾವುದು ಅಂತ ಈ ಸ್ಟೋರಿ ಓದಿ.

ಹೊಸ ಸ್ಟ್ಯಾಂಡರ್ಡ್ ಸೆಟ್
ತೆಲುಗು ಚಿತ್ರರಂಗದಲ್ಲಿ ನಿರ್ದೇಶಕ ಕೋಡಿ ರಾಮಕೃಷ್ಣ ಅವರದ್ದು ವಿಭಿನ್ನ ಶೈಲಿ. ಫ್ಯಾಮಿಲಿ ಅಥವಾ ಕಮರ್ಷಿಯಲ್ ಚಿತ್ರಗಳಲ್ಲಿ ಹೊಸತನ ತರುತ್ತಿದ್ದರು. ವೃತ್ತಿಜೀವನದ 2ನೇ ಹಂತದಲ್ಲಿ ಗ್ರಾಫಿಕ್ಸ್ ಮ್ಯಾಜಿಕ್ ಮಾಡಿ, ಹೊಸ ಸ್ಟ್ಯಾಂಡರ್ಡ್ ಸೆಟ್ ಮಾಡಿದ್ರು.
ಪ್ಲಾನಿಂಗ್ ಫೇಲ್
ಅಮ್ಮೋರು, ಅಂಜಿ, ದೇವಿ, ಅರುಂಧತಿ ಥರದ ಅದ್ಭುತ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಈ ಚಿತ್ರಗಳ ಗ್ರಾಫಿಕ್ಸ್ ಇಂದಿಗೂ ಪ್ರೇಕ್ಷಕರನ್ನು ಬೆರಗುಗೊಳಿಸುತ್ತೆ. ಆದರೆ ಚಿರಂಜೀವಿ ಜೊತೆಗಿನ 'ಅಂಜಿ' ನಿರಾಸೆ ಮೂಡಿಸಿತು. ಕಥೆ, ಮೇಕಿಂಗ್ ಚೆನ್ನಾಗಿತ್ತು. ಆದರೆ ಪ್ಲಾನಿಂಗ್ ಫೇಲ್ ಆಯ್ತು.
ಚಿರಂಜೀವಿಗೆ ತುಂಬಾ ಇಷ್ಟ
ಈ ಬಗ್ಗೆ ನಿರ್ದೇಶಕ ಕೋಡಿ ರಾಮಕೃಷ್ಣ ಸಂದರ್ಶನವೊಂದರಲ್ಲಿ ಹೇಳಿದ್ದರು. ಸೌಂದರ್ಯ ನಟನೆಯ 'ಅಮ್ಮೋರು' ರಿಲೀಸ್ ಆದ್ಮೇಲೆ ಚಿರು ಜೊತೆ ಸಿನಿಮಾ ಮಾತುಕತೆ ಶುರುವಾಯ್ತು. ಗ್ರಾಫಿಕ್ಸ್ ಆಧಾರಿತ 'ಅಮ್ಮೋರು' ಸಿನಿಮಾ ಚಿರಂಜೀವಿಗೆ ತುಂಬಾ ಇಷ್ಟವಾಗಿತ್ತು.
ತಲೆನೋವು ಶುರುವಾಯ್ತು
ನಿರ್ಮಾಪಕ ಶ್ಯಾಮ್ ಪ್ರಸಾದ್ ರೆಡ್ಡಿ, ಚಿರು ಬಳಿ ಡೇಟ್ಸ್ ಕೇಳಿದ್ರು. ಕೋಡಿ ರಾಮಕೃಷ್ಣ ಜೊತೆ ಗ್ರಾಫಿಕ್ಸ್ ಸಿನಿಮಾ ಮಾಡೋಣ ಅಂದ್ರು. ಚಿರು ಒಪ್ಪಿದ್ರು. ಈ ವಿಷಯ ಕೇಳಿ ನನಗೆ ತಲೆನೋವು ಶುರುವಾಯ್ತು. ಚಿರು ಜೊತೆ ಕಮರ್ಷಿಯಲ್ ಸಿನಿಮಾ ಮಾಡಬೇಕಿತ್ತು.
'ಅಮ್ಮೋರು' ಪ್ರಭಾವ
ಚಿರುಗೆ ಡ್ಯುಯಲ್ ರೋಲ್ ಕಥೆ ರೆಡಿ ಮಾಡಿದ್ದೆ. ಆದ್ರೆ ನಿರ್ಮಾಪಕರು ಗ್ರಾಫಿಕ್ಸ್ ಸಿನಿಮಾಗೆ ಪಟ್ಟು ಹಿಡಿದ್ರು. ನಾನು ಚಿರುಗೆ ಗ್ರಾಫಿಕ್ಸ್ ಕಷ್ಟದ ಬಗ್ಗೆ ಹೇಳಿದ್ರೂ, 'ಅಮ್ಮೋರು' ಪ್ರಭಾವದಿಂದ ಅವರು ಹೊಸಬನಂತೆ ಕೆಲಸ ಮಾಡ್ತೀನಿ ಅಂದ್ರು.
ಅಂಜಿ ಅದ್ಭುತ ಸಿನಿಮಾ
'ಅಂಜಿ' ಚಿತ್ರದ ಗ್ರಾಫಿಕ್ಸ್ ಕೆಲಸ ಸಿಂಗಾಪುರ, ಮಲೇಷ್ಯಾ, ಅಮೆರಿಕಾದಲ್ಲಿ ನಡೀತು. ಸಿನಿಮಾ ಮೇಲಿದ್ದ ನಿರೀಕ್ಷೆಗಳನ್ನು ತಲುಪಲು ವಿಫಲವಾಯ್ತು. ಆದರೆ ವರ್ಷಗಳು ಕಳೆದಂತೆ 'ಅಂಜಿ' ಒಂದು ಅದ್ಭುತ ಸಿನಿಮಾ ಎಂದು ಎಲ್ಲರೂ ಹೊಗಳಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

