11 ವರ್ಷ ಹಿರಿಯ ನಟಿ ರೇಖಾಳನ್ನು ಮದುವೆಯಾಗಲು ಬಯಸಿದ್ದರಂತೆ ಸಲ್ಲು
ಬಾಲಿವುಡ್ನ ಸೂಪರ್ಸ್ಟಾರ್ ಸಲ್ಮಾನ್ ಖಾನ್ ವರ್ಷ 50 ದಾಟಿದರೂ ಇನ್ನೂ ಬ್ರಹ್ಮಚಾರಿಯಾಗೇ ಉಳಿದ್ದಾರೆ. ಹಾಗಂತ ಅವರ ಆಪೇರ್ಗಳಿಗೇನು ಕಡಿಮೆ ಇಲ್ಲ. ಅವರ ಮದುವೆಯ ಸುದ್ದಿ ಕೇಳಲು ಫ್ಯಾನ್ಸ್ ಇನ್ನೂ ಕಾಯುತ್ತಿದ್ದಾರೆ. ಅವರ ಹಳೆಯ ಸಂದರ್ಶನವೊಂದು ವೈರಲ್ ಆಗುತ್ತಿದೆ, ಇದರಲ್ಲಿ ಅವರು ತಮ್ಮ ವಿವಾಹದ ಬಗ್ಗೆ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಸಲ್ಮಾನ್ ಖಾನ್ರ ರಿಲೆಷನ್ಶಿಪ್ಗಳ ಬಗ್ಗೆ ಸಾಕಷ್ಷು ಕೇಳಿದ್ದೇವೆ. ಆದರೆ ನಟ ಇಂಧುವರೆಗೂ ಬ್ಯಾಚುಲರ್ನಿಂದ ಮ್ಯಾರೀಡ್ ಆಗಿ ಬದಲಾಗಲು ಮನಸ್ಸೇ ಮಾಡಿಲ್ಲ.
ಸಲ್ಮಾನ್ ಹೆಸರು ಸಂಗೀತ ಬಿಜ್ಲಾನಿ, ಸೋಮಿ ಅಲಿ, ಐಶ್ವರ್ಯಾ ರೈ, ಕತ್ರಿನಾ ಕೈಫ್ ಮುಂತಾದ ನಟಿಯರ ಜೊತೆ ಕೇಳಿಬಂದಿದೆ.
ಯಾವಾಗಲೂ ಸಿನಿಮಾ ಮತ್ತು ಶೋಗಳನ್ನು ಮಾಡುವಲ್ಲಿ ಬ್ಯುಸಿಯಾಗಿರುವ ಸಲ್ಲು ಮದುವೆಯ ಬಗ್ಗೆ ಮಾತ್ರ ಇದುವರೆಗೂ ಯೋಚಿಸಲಿಲ್ಲ.
ನಿಮಗೆ ಗೊತ್ತಾ 11 ವರ್ಷ ಹಿರಿಯ ನಟಿ ರೇಖಾಳನ್ನು ಮದುವೆಯಾಗಲು ಬಯಸಿದ್ದರಂತೆ ಸಲ್ಲು?
ಇದನ್ನು ಸ್ವತಹ ಸಲ್ಮಾನ್ ಇಂಟರ್ವ್ಯೂವ್ವೊಂದರಲ್ಲಿ ಹೇಳಿಕೊಂಡಿದ್ದರು.
'ಸಲ್ಮಾನ್ ನನ್ನನ್ನು ಯಾವಾಗಲೂ ಹಿಂಬಾಲಿಸುತ್ತಿದ್ದ, ನಾನು ಹೋದಲ್ಲೆಲ್ಲಾ ನನ್ನನ್ನು ಫಾಲೋ ಮಾಡುತ್ತಿದ್ದ. ಇದು ಇಬ್ಬರೂ ನೆರೆಹೊರೆಯವರಾಗಿದ್ದ ಸಮಯದಲ್ಲಿ. ಮತ್ತು ಸಲ್ಮಾನ್ ನನ್ನ ನೋಡುವ ಸಲುವಾಗಿ ನನ್ನ ಯೋಗ ಕ್ಲಾಸ್ಗೂ ಸೇರಿದ್ದ ಎಂದು ಬಾಲಿವುಡ್ ನಟಿ ರೇಖಾ ಸಲ್ಮಾನ್ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿದ್ದರು.
'ರೇಖಾ ಬಗ್ಗೆ ತುಂಬಾ ಕ್ರೇಜ್ ಹೊಂದಿದೆ ಮತ್ತು ಅವರ ಜೊತೆ ಮದುವೆಯಾಗಲು ಬಯಸಿದ್ದೆ. ರೇಖಾಳ ಕಾರಣದಿಂದಲೇ ಬೇರೆ ಯಾರನ್ನೂ ಮದುವೆಯಾಗಲಿಲ್ಲ. ಅದಕ್ಕಾಗಿಯೇ ಇಂದಿಗೂ ಒಬ್ಬಂಟಿಯಾಗಿದ್ದೇನೆ' ಎಂದು ಸಂದರ್ಶನದಲ್ಲಿ ಹೇಳಿದ್ದ ದಂಬಾಗ್ ನಟ.
ಸಲ್ಮಾನ್ರ ಈ ಮಾತಿನ ಬಗ್ಗೆ ತಿಳಿದಾಗ 'ಬಹುಶಃ ಅದಕ್ಕಾಗಿ ನನಗೂ ಇನ್ನೂ ಮದುವೆಯಾಗುತ್ತಿಲ್ಲ' ಎಂದು ರೇಖಾ ಜೋಕ್ ಮಾಡಿದ್ದರು.
ಮತ್ತೊಂದು ಸಂದರ್ಶನದಲ್ಲಿ, ಸಂಗೀತ ಬಿಜ್ಲಾನಿಯನ್ನು ಮದುವೆಯಾಗಲು ಬಯಸಿದ್ದೆ ಎಂದು ಸಲ್ಮಾನ್ ಹೇಳಿದ್ದಾರೆ. ಇಬ್ಬರ ಮದುವೆಯ ದಿನಾಂಕ ಸಹ ಕನ್ಫರ್ಮ್ ಆಗಿತ್ತು ಸಲ್ಮಾನ್-ಸಂಗೀತ ಮೇ 27,1994 ರಂದು ಮದುವೆಯಾಗಬೇಕಿತ್ತು. ಆದರೆ ಇದ್ದಕ್ಕಿದ್ದಂತೆ ಎಲ್ಲವೂ ಬದಲಾಯಿತು ಮತ್ತು ಮದುವೆ ನಡೆಯಲು ಸಾಧ್ಯವಾಗಲಿಲ್ಲ ಎಂದು ಜಾಸಿಮ್ ಖಾನ್ ಸಲ್ಮಾನ್ ಅವರ ಜೀವನ ಚರಿತ್ರೆ 'ಬೀಯಿಂಗ್ ಸಲ್ಮಾನ್' ಬರೆದಿದ್ದಾರೆ.
'ವೆಡ್ಡಿಂಗ್ ಕಾರ್ಡ್ಗಳನ್ನು ಸಹ ಮುದ್ರಿಸಲಾಗಿತ್ತು, ಆದರೆ ಸಂಗೀತ ಮದುವೆಯನ್ನು ಮುರಿದ್ದರು ಏಕೆಂದರೆ ಅವಳು ನನ್ನನ್ನು ಬೇರೆ ಹುಡುಗಿಯ ಜೊತೆ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಳು' ಎಂದು ಸಲ್ಮಾನ್ ಕೂಡ ಇದನ್ನು ಒಪ್ಪಿಕೊಂಡಿದ್ದರು.
ಸಲ್ಮಾನ್ ಶೀಘ್ರದಲ್ಲೇ ತಮ್ಮ ಮುಂಬರುವ ಚಿತ್ರ ರಾಧೆ ಚಿತ್ರದ ಉಳಿದ ಭಾಗದ ಶೂಟಿಂಗ್ ಪ್ರಾರಂಭಿಸುತ್ತಾರೆ. ಚಿತ್ರೀಕರಣ ಮುಂಬೈನ ಸ್ಟುಡಿಯೋದಲ್ಲಿ ನಡೆಯಲಿದೆ. ಈ ಚಿತ್ರದಲ್ಲಿ ಸಲ್ಮಾನ್ ಜೊತೆ ದಿಶಾ ಪಟಾನಿ, ಜಾಕಿ ಶ್ರಾಫ್, ರಂದೀಪ್ ಹೂಡಾ ಮುಖ್ಯ ಪಾತ್ರದಲ್ಲಿದ್ದಾರೆ. ಚಿತ್ರದ ನಿರ್ದೇಶಕರು ಪ್ರಭುದೇವ.