ಆಲೂಗಡ್ಡೆ ಎಂದು ಟ್ರೋಲ್ ಮಾಡಿದ ನೆಟ್ಟಿಗರು, ರಶ್ಮಿ ಕೊಟ್ಟ ಉತ್ತರವಿದು
- ಮಾಜಿ ಬಿಗ್ಬಾಸ್ ಸ್ಪರ್ಧಿ ಹಿಗ್ಗಾಮುಗ್ಗ ಟ್ರೋಲ್
- ಆಲೂಗಡ್ಡೆ ಎಂದು ಕರೆದವರಿಗೆ ರಶ್ಮಿ ಹೇಳಿದ್ದೇನು ?
ಬಿಗ್ ಬಾಸ್ 13 ರ ನಂತರ ರಶ್ಮಿ ದೇಸಾಯಿ ಅವರು ಚರ್ಚೆಯ ವಿಷಯವಾಗಿದ್ದಾರೆ. ನಟಿ ಪ್ರಸ್ತುತ ನಾಗಿನ್ 4 ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಕಾರ್ಯಕ್ರಮದ ಫಸ್ಟ್ ಲುಕ್ ಅಭಿಮಾನಿಗಳನ್ನು ಸಂಭ್ರಮಿಸುವಂತೆ ಮಾಡಿದೆ.
ಕೌಚ್ ಪೊಟೇಟೋ ಎಂದು ಕರೆದ ಟ್ರೋಲ್ಗೆ ನಟಿಯ ಖಡಕ್ ಉತ್ತರ ಈಗ ವೈರಲ್ ಆಗಿದೆ. ಟ್ರೋಲ್ ಮಾಡಿದವರಿಗೆ ಸೂಪರ್ ಆನ್ಸರ್ ಕೊಟ್ಟ ನಟಿ ಬಗ್ಗೆ ಮೆಚ್ಚುಗೆಯೂ ವ್ಯಕ್ತವಾಗಿದೆ.
ಬಿಗ್ ಬಾಸ್ 13 ರ ಸಹ ಸ್ಪರ್ಧಿಗಳಾದ ಮಹಿರಾ ಶರ್ಮಾ ಮತ್ತು ಶೆಫಾಲಿ ಜರಿವಾಲಾ ಜೊತೆಗೆ ರಶ್ಮಿ ಅವರನ್ನು ಕೂಡಾ ಸೇರಿಸಿಕೊಳ್ಳಲಾಗಿದೆ. ಅವರು ಅತ್ಯುತ್ತಮ ಟ್ವೀಟ್ಗಳಿಗೆ ಪ್ರತಿಕ್ರಿಯಿಸಿದ್ದಾರೆ
ಅವರ ಉತ್ತರದಿಂದಲೇ ಅವರು ಬಾಸ್ ಲೇಡಿ ಎಂದು ಸಾಬೀತಾಗಿದೆ ಎನ್ನುತ್ತಿದ್ದಾರೆ ಅವರ ನೆಚ್ಚಿನ ಫಾಲೋವರ್ಸ್. ದಿಲ್ ಸೆ ದಿಲ್ ತಕ್ ನಟಿ ತನ್ನನ್ನು ಆಲೂಗಡ್ಡೆ ಎಂದು ಉಲ್ಲೇಖಿಸಿದ ಟ್ವೀಟ್ ಅನ್ನು ಓದಿದಾಗ ಅವರು ಅದಕ್ಕೆ ಪ್ರತಿಕ್ರಿಯಿಸಿದ್ದಾರೆ.
ನನ್ನನ್ನು ಆಲೂಗಡ್ಡೆ ಎಂದು ಉಲ್ಲೇಖಿಸಿದ್ದಕ್ಕಾಗಿ ತುಂಬಾ ಧನ್ಯವಾದಗಳು ಎಂದು ನೆಗೆಟಿವ್ ಕಮೆಂಟ್ನ್ನು ಖುಷಿಯಾಗಿ ಸ್ವೀಕರಿಸಿದ್ದಾರೆ ನಟಿ.
ಆಲೂಗಡ್ಡೆ, ಉಪ್ಪು, ಲಾಲ್ ಪೆಪರ್ ಮತ್ತು ಹಲ್ಡಿ, ನನ್ನ ಅಭಿಪ್ರಾಯದಲ್ಲಿ, ಯಾವುದೇ ಸಂಯೋಜನೆಯೊಂದಿಗೆ ಹೋಗುವ ಏಕೈಕ ತರಕಾರಿ. ನೀವು ನನ್ನನ್ನು ಆಲೂಗಡ್ಡೆ (ವ್ಯಂಗ್ಯ) ಎಂದು ಕರೆದರೆ ನನಗಿಷ್ಟವಿಲ್ಲ; ನೀವು ಪಡೆಯಬಹುದಾದ ಅತ್ಯುನ್ನತ ಪ್ರಶಂಸೆ ಇದು ಎಂದು ನಾನು ನಂಬುತ್ತೇನೆ ಎಂದಿದ್ದಾರೆ.
ರಶ್ಮಿ ಇತ್ತೀಚೆಗೆ ಮಹೀರಾ ಶರ್ಮಾ ಅವರ ಡಿಪಿಪಿಐಎಫ್ ಸಮಸ್ಯೆ ಮತ್ತು ಆಕೆಯ ಮಾಜಿ ಗೆಳೆಯ ಅರ್ಹಾನ್ ಖಾನ್ ಜೊತೆಗಿನ ಸಂಬಂಧದ ಸ್ಥಿತಿ ಸೇರಿದಂತೆ ಮಾತನಾಡಿದ್ದಾರೆ.
ಸಂಭಾಷಣೆಯ ಸಮಯದಲ್ಲಿ ಅವರು ಸ್ವತಃ ದಾದಾಸಾಹೇಬ್ ಫಾಲ್ಕೆ ಸಂಘಟಕರಿಂದ ಟ್ರೋಫಿಯನ್ನು ನೀಡಿದ್ದರು. ಅದನ್ನು ನಿರಾಕರಿಸಿದ್ದಾರೆ ಎಂದು ಬಹಿರಂಗಪಡಿಸಿದರು. ನಾಗಿನ್ 4 ಸಂಚಿಕೆಯಲ್ಲಿ ಶಾಲಾಕಾಳಾಗಿ ಕಾಣಿಸಿಕೊಳ್ಳಲ್ಲಿದ್ದಾರೆ. ನಿಯಾ ಶರ್ಮಾ ಮತ್ತು ಅನಿತಾ ಹಾಸನಂದನಿ ಕೂಡ ಏಕ್ತಾ ಕಪೂರ್ ಅವರ ಧಾರವಾಹಿಯಲ್ಲಿ ನಟಿಸಿದ್ದಾರೆ.