MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಈ ಸಿನಿಮಾ ನೋಡಿ 38 ವಿಚ್ಚೇದನ ಪ್ರಕರಣ ಕ್ಯಾನ್ಸಲ್… ಅಂತದ್ದೇನಿದೆ ಈ ಚಿತ್ರದಲ್ಲಿ?

ಈ ಸಿನಿಮಾ ನೋಡಿ 38 ವಿಚ್ಚೇದನ ಪ್ರಕರಣ ಕ್ಯಾನ್ಸಲ್… ಅಂತದ್ದೇನಿದೆ ಈ ಚಿತ್ರದಲ್ಲಿ?

Must Watch Film: ಸಿನಿಮಾ ನೋಡಿ ಕೆಟ್ಟೋಗ್ತಾರೆ ಅಂತ ಹೇಳಿರೋದನ್ನ ಕೇಳಿದ್ದೀರಿ. ಆದರೆ ಈ ಒಂದು ತಮಿಳು ಸಿನಿಮಾದಿಂದ 38 ವಿಚ್ಚೇದನ ಪ್ರಕರಣಗಳು ಕ್ಯಾನ್ಸಲ್ ಆಗಿವೆ ಅಂದ್ರೆ ನಂಬ್ತೀರಾ? ನಂಬಲೇಬೇಕು. ಯಾಕಂದ್ರೆ ಇದು ನಿಜ. ಅಷ್ಟಕ್ಕೂ ಈ ಚಿತ್ರ ಯಾವುದು? ಆ ಚಿತ್ರದ ಕಥೆಯಲ್ಲಿ ಏನಿದೆ ನೋಡೋಣ. 

2 Min read
Author : Pavna Das
Published : Jan 29 2026, 05:05 PM IST
Share this Photo Gallery
  • FB
  • TW
  • Linkdin
  • Whatsapp
17
ಸಿನಿಮಾ ನೋಡಿ ಹಾಳಾಗ್ತಾರ?
Image Credit : Isntagram

ಸಿನಿಮಾ ನೋಡಿ ಹಾಳಾಗ್ತಾರ?

ಹೆಚ್ಚಾಗಿ ನಾವು ಸಿನಿಮಾ ನೋಡಿ ಹಾಳಾದ್ರು ಅನ್ನೋದನ್ನು ಕೇಳಿದ್ದೇವೆ. ಆದರೆ ಈ ಸಿನಿಮಾ ನೋಡಿದ ಮೇಲೆ ಆಗಿದ್ದು ಮಾತ್ರ ಬೇರೆ. ಈ ಚಿತ್ರ ರಿಲೀಸ್ ಆಗಿ ಎರಡೇ ವಾರಕ್ಕೆ ತ್ರಿಚಿಯಲ್ಲಿ 38 ವಿಚ್ಚೇದನ ಪ್ರಕರಣಗಳು ಕ್ಯಾನ್ಸಲ್ ಆಗಿದ್ದವಂತೆ. ಅಂದ್ರೆ ಒಂದು ಸಿನಿಮಾಗೆ ಸಂಬಂಧವನ್ನು ಉಳಿಸುವ ತಾಕತ್ತು ಕೂಡ ಇದೆ ಅನ್ನೋದು ಗೊತ್ತಾಗುತ್ತೆ ಅಲ್ವಾ? ಹಾಗಿದ್ರೆ ಆ ಸಿನಿಮಾ ಯಾವುದು? ಅದರ ಕತೆ ಏನು ನೋಡೋಣ.

27
ಇರಗಪಟ್ರು ಸಿನಿಮಾ
Image Credit : Isntagram

ಇರಗಪಟ್ರು ಸಿನಿಮಾ

‘ಇರಗಪಟ್ರು’ ತಮಿಳು ಭಾಷೆಯಲ್ಲಿ ಬಿಡುಗಡೆಯಾದ ಸಿನಿಮಾ, ಚಿತ್ರವನ್ನು ಯುವರಾಜ ದಯಾಲನ್ ನಿರ್ದೇಶನ ಮಾಡಿದ್ದಾರೆ. 2023ರಲ್ಲಿ ಬಿಡುಗಡೆಯಾದ ಈ ಸಿನಿಮಾದಲ್ಲಿ ಶ್ರದ್ಧಾ ಶ್ರೀನಾಥ್ ಮತ್ತು ವಿಕ್ರಮ್ ಪ್ರಭು ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇರಗಪಟ್ರು ಅಂದರೆ ಗಟ್ಟಿಯಾಗಿ ಹಿಡಿದಿಟ್ಟುಕೋ ಎಂದು ಅರ್ಥ. ಇದು ಪ್ರೀತಿಯ ಕಥೆಯನ್ನು ಹೇಳುವ ಕಥೆಯಾಗಿದ್ದು, ದಾಂಪತ್ಯ ಜೀವನದ ಕುರಿತಾಗಿ ನಿರ್ದೇಶಕರು ಅದ್ಭುತವಾಗಿ ಸೂಕ್ಷ್ಮವಾಗಿ ಕಥೆಯನ್ನು ನೆಯ್ದಿದ್ದಾರೆ.

Related Articles

Related image1
ಗುರುತೇ ಸಿಗದಷ್ಟು ಬದಲಾದ Tamil Actor Ajith!‌ ಈ ಗುಂಡು ತಲೆ ಯಾಕಾಯ್ತು?
Related image2
ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದ Kantara chapter 1 Movie ಟಿವಿಯಲ್ಲಿ ಪ್ರಸಾರ, ಯಾವಾಗ?
37
ಜೀವನಕ್ಕೆ ತುಂಬಾ ಹತ್ತಿರವಾದ ಸಿನಿಮಾ
Image Credit : Isntagram

ಜೀವನಕ್ಕೆ ತುಂಬಾ ಹತ್ತಿರವಾದ ಸಿನಿಮಾ

ಈ ಚಿತ್ರದಲ್ಲಿ ನಿರ್ದೇಶಕ ಯುವರಾಜ ದಯಾಲನ್ ದಾಂಪತ್ಯ ಜೀವನದಲ್ಲಿನ ಪ್ರತಿಯೊಂದು ಸಂಬಂಧ, ಸನ್ನಿವೇಶವನ್ನು ನಮ್ಮ- ನಿಮ್ಮ ಜೀವನದ ಕಥೆ ಎನ್ನುವಂತೆ ತೋರಿಸಿದ್ದಾರೆ. ರೌಡಿಸಂ, ರೊಮ್ಯಾನ್ಸ್ ಎಲ್ಲಾ ಅಬ್ಬರಗಳ ಮಧ್ಯೆ ಈ ತಮಿಳು ಸಿನಿಮಾ ವಿಭಿನ್ನವಾಗಿ ಆದರೆ ನಿಜಜೀವನಕ್ಕೆ ತುಂಬಾ ಹತ್ತಿರವಾಗಿ ನಿಲ್ಲುತ್ತೆ. ಯಾಕಂದ್ರೆ ಇದು ನಮ್ಮ ನಿಮ್ಮ ಸಂಸಾರದಲ್ಲಿ ನಡೆಯುವ ಘಟನೆಯೇ… ಹಾಗಾಗಿ ನಿಮ್ಮ ಸಂಗಾತಿ ಜೊತೆ ಕುಳಿತು ನೋಡಲೇಬೇಕಾದ ಸಿನಿಮಾ.

47
ಕಥೆಯಲ್ಲಿ ಏನಿದೆ?
Image Credit : Isntagram

ಕಥೆಯಲ್ಲಿ ಏನಿದೆ?

ದಾಂಪತ್ಯದ ವಿವಿಧ ಹಂತದಲ್ಲಿರುವ ಮೂರು ಜೋಡಿಗಳ ಈ ಕಥೆ ಸಾಗುತ್ತಾ ಹೋದಂತೆ, ನಮಗೂ ನಮ್ಮ ಜೀವನದಲ್ಲಿ ನಡೆದ ಘಟನೆಗಳಿಗೆ ರಿಲೇಟ್ ಆಗುತ್ತಾ ಹೋಗುತ್ತೆ. ಜಗಳಮಾಡದೇ, ಕೋಪ ಮಾಡದೇ ಯಾವಾಗಲೂ ಖುಷಿಯಾಗಿರೋ ಕಪಲ್ಸ್, ಪ್ರೀತಿ ಮಾಡಿ ಮದುವೆಯಾಗಿ ನಂತರ ನಿರ್ಲಕ್ಷಕ್ಕೆ ಒಳಗಾಗೋ ಜೋಡಿಗಳು, ಮದುವೆಯಾಗಿ ಮಗು ಆದ ಮೇಲೆ ಹೆಂಡತಿ ದಪ್ಪ ಇದ್ದಾಳೆ ಎಂದು ಹೆಂಡತಿಯನ್ನು ಧೂಷಿಸುವ ಜೋಡ. ಹೀಗೆ ನಮ್ಮ ನಿಮ್ಮಲ್ಲಿ, ಅಥವಾ ನಮ್ಮ ನಡುವೆ ಇರುವ ಮೂರು ರೀತಿಯ ಸಂಬಂಧಗಳಲ್ಲಿ ಸಿಕ್ಕು ನಿಜವಾದ ಪ್ರೀತಿ ಅಂದರೆ ಏನು ? ದಾಂಪತ್ಯ ಜೀವನ ಅಂದ್ರೇನು ಅಂತಾನೆ ಮರಿತಿರೋ ಜೋಡಿಗಳ ಕಥೆ ಜೊತೆ ಭಾವನಾತ್ಮಕವಾಗಿ ಕನೆಕ್ಟ್ ಆಗುತ್ತಲೇ ಹೋಗುತ್ತೇವೆ.

57
ಪರ್ಫೆಕ್ಟ್ ಜೋಡಿಗಳು
Image Credit : Isntagram

ಪರ್ಫೆಕ್ಟ್ ಜೋಡಿಗಳು

ಮ್ಯಾರೇಜ್ ಕೌನ್ಸಿಲರ್ ಮತ್ತು ಸೈಕಲಾಜಿಸ್ಟ್ ಆಗಿ ಮಿತ್ರ ಮನೋಹರ್, ಇತರ ಜೋಡಿಗಳಿಗೆ ದಾಂಪತ್ಯ ಜೀವನದ ಸಲಹೆ ನೀಡುತ್ತಾ, ಅವರ ಸಮಸ್ಯೆಗಳನ್ನು ಕೇಳುತ್ತಾ,, ತನ್ನ ಜೀವನದಲ್ಲಿ ಈ ರೀತಿ ಆಗಲೇಬಾರದು ಎನ್ನುವ ಸೈಕಲಾಜಿಯನ್ನು ಗಂಡನಿಗೆ ವಿವರಿಸುತ್ತಾ, ಅದೇ ಸ್ಟ್ರಾಟರ್ಜಿಯಲ್ಲಿ ಕೋಪ ಮಾಡದೇ ಪರ್ಫೆಕ್ಟ್ ಕಪಲ್ಸ್ ಆಗಲು ಬಯಸಿ, ಸಂಸಾರದ ಸ್ವಾಧವನ್ನೇ ಕಳೆದುಕೊಳ್ಳುಬಿಡುತ್ತಾಳೆ. ಮತ್ತೊಂದೆಡೆ ರಂಗೇಶ್ ಮತ್ತು ಪವಿತ್ರ ಜೋಡಿ. ಐಟಿಯಲ್ಲಿ ಕೆಲಸ ಮಾಡುವ ರಂಗೇಶ್, ತನ್ನ ಹೆಂಡತಿ, ತಿನ್ನುತ್ತಾ, ಮಗುವಾದ ಬಳಿಕ ತೂಕ ಹೆಚ್ಚಿಸಿಕೊಂಡಿದ್ದಾಳೆ ಎಂದು ಅವಳ ಮೇಲೆ ಹರಿಹಾಯ್ದುಕೊಂಡಿರ್ತಾನೆ. ಕೊನೆಗೆ ಡಿವೋರ್ಸ್ ಕೊಡಲು ನಿರ್ಧರಿಸುತ್ತಾನೆ. ಆದರೆ ನಿಜವಾಗಿಯೂ ಸಮಸ್ಯೆ ಇರೋದು ಹೆಂಡತಿಯಲ್ಲಿ ಅಲ್ಲ, ತನ್ನ ಬಾಲ್ಯದ ಟ್ರೌಮಾದಲ್ಲಿ ಅನ್ನೋದನ್ನು ತಿಳಿಯುತ್ತಾನೆ.

67
ಪ್ರೀತಿ ಮಾಡಿ ಡಿವೋರ್ಸ್ ಕೊಡೋದು ಯಾಕೆ?
Image Credit : Isntagram

ಪ್ರೀತಿ ಮಾಡಿ ಡಿವೋರ್ಸ್ ಕೊಡೋದು ಯಾಕೆ?

ಇನ್ನೊಂದು ಜೋಡಿ ದಿವ್ಯ ಮತ್ತು ಅರ್ಜುನ್. ಪ್ರೀತಿಸಿ ಮದುವೆಯಾದ 20ರ ಹರೆಯದಲ್ಲಿರುವ ಜೋಡಿ, ನಂತರ ಹೇಗೆ ಬದಲಾಗುತ್ತಾರೆ. ಕೊನೆಗೆ ದಿವ್ಯನಿಗೆ ಗಂಡನ ಜೊತೆ ಮಾತನಾಡಲು ಬೇಸರವಾಗುವಂತಹ ಖಿನ್ನತೆ ಕಾಡುತ್ತದೆ. ಮತ್ತೆ ಸಂಸಾರ ಸರಿಪಡಿಸಲು ಮ್ಯಾರೇಜ್ ಕೌನ್ಸಿಲರ್ ಮೊರೆ ಹೋಗುವ ಅರ್ಜುನ್ ಗೆ ತನ್ನ ತಪ್ಪು ಏನು ಅನ್ನೋದು ತಿಳಿಯುತ್ತೆ….

77
ಪ್ರತಿಯೊಬ್ಬರು ನೋಡಲೇಬೇಕಾದ ಸಿನಿಮಾ
Image Credit : Isntagram

ಪ್ರತಿಯೊಬ್ಬರು ನೋಡಲೇಬೇಕಾದ ಸಿನಿಮಾ

ಇಂದಿನ ಸಮಯದಲ್ಲಿ ಎಲ್ಲಾದಕ್ಕೂ ಡಿವೋರ್ಸ್ ಒಂದೇ ಉತ್ತರ ಅಂತ ಯೋಚನೆ ಮಾಡುತ್ತಿರುವ ಜೋಡಿಗಳು, ತಾವು ಪರ್ಫೆಕ್ಟ್ ಕಪಲ್ ಆಗಿರಬೇಕೆಂದು, ಇಷ್ಟ ಇಲ್ಲದೇ ಇದ್ರೂ ಎಲ್ಲವನ್ನೂ ಮಾಡುವ ಜೋಡಿಗಳು, ಜೀವನದಲ್ಲಿ ಅಂದುಕೊಂಡದ್ದನ್ನು ಸಾಧಿಸಲು ಸಾಧ್ಯವಾಗದೇ ಅದರ ಒತ್ತಡವನ್ನು ಸಂಸಾರದ ಮೇಲೆ ತೋರಿಸುವ ಪ್ರತಿಯೊಬ್ಬರೂ ನೋಡಲೇಬೇಕಾದ ಚಿತ್ರ ಇದು. ದಾಂಪತ್ಯ ಜೀವನದಲ್ಲಿ ಪ್ರೀತಿ ಅನ್ನೋದು ಎಷ್ಟು ಮುಖ್ಯ , ಎಲ್ಲಾದಕ್ಕೂ ಡಿವೋರ್ಸ್ ಉತ್ತರ ಅಲ್ಲ, ಇಬ್ಬರು ಕುಳಿತು ಮನಸು ಬಿಚ್ಚಿ ಮಾತನಾಡಿದರೆ, ಬಗೆಹರೆಯದ ಸಮಸ್ಯೆಗಳೇ ಇಲ್ಲ ಅನ್ನೋದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಸಮಸ್ಯೆ ಬಂದರೆ ಸಂಬಂಧವನ್ನು ಬಿಟ್ಟುಕೊಡಬೇಡಿ. ಗಟ್ಟಿಯಾಗಿ ಹಿಡಿಯಿರಿ ಎಂದು ನಿರ್ದೇಶಕರು ಹೇಳಿದ್ದಾರೆ. ಅಂದಹಾಗೇ Netflix ನಲ್ಲಿ ಸಿನಿಮಾ ಇದೆ. ಫ್ರೀ ಇದ್ರೆ ನೋಡಬಹುದು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಸಿನಿಮಾ
ಮನರಂಜನಾ ಸುದ್ದಿ
ತಮಿಳು

Latest Videos
Recommended Stories
Recommended image1
ಎನ್‌ಟಿಆರ್‌ಗೆ ಚಳ್ಳೆಹಣ್ಣು ತಿನ್ನಿಸಿದ ಕಥೆ: ಚಿರಂಜೀವಿ ಬ್ಲಾಕ್‌ಬಸ್ಟರ್ ಹಿಟ್ ಸಿನಿಮಾ ಯಾವುದು ಗೊತ್ತಾ?
Recommended image2
ಜನನಾಯಗನ್ ​​ಗೆ ಸದ್ಯಕ್ಕಿಲ್ಲ ಬಿಡುಗಡೆ ಭಾಗ್ಯ! ದಳಪತಿ ವಿಜಯ್ ನಂಬಿ 400 ಕೋಟಿ ಕಳೆದುಕೊಂಡ KVN ಪ್ರೊಡಕ್ಷನ್?
Recommended image3
'ಮಾಡಿದ್ದುಣ್ಣೋ ಮಾರಾಯಾ..' ಕನ್ನಡತಿ ದೀಪಿಕಾ ಪತಿಗೆ ಬೇಕಿತ್ತಾ ಇದೆಲ್ಲಾ? 'ಧುರಂಧರ್' ನಟನಿಗೆ ಕರ್ಮ ರಿಟರ್ನ್ಸ್!
Related Stories
Recommended image1
ಗುರುತೇ ಸಿಗದಷ್ಟು ಬದಲಾದ Tamil Actor Ajith!‌ ಈ ಗುಂಡು ತಲೆ ಯಾಕಾಯ್ತು?
Recommended image2
ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದ Kantara chapter 1 Movie ಟಿವಿಯಲ್ಲಿ ಪ್ರಸಾರ, ಯಾವಾಗ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved