ನಿನ್ನಂತ ಹೆಂಡ್ತಿ ದೇವರು ಯಾರಿಗೂ ಕೊಡದಿರಲಿ ಅಂತ ನೆಟ್ಟಿಗರು ಸಿಟ್ಟಾಗಿದ್ದೇಕೆ ?
- ನಿನ್ನಂತ ಹೆಂಡ್ತಿ ಬೇರೆ ಯಾರಿಗೂ ಕೊಡದಿರಲಿ ಎಂದ ನೆಟ್ಟಿಗರು
- ಪ್ರಿಯಾಮಣಿ ಬಗ್ಗೆ ಫ್ಯಾನ್ಸ್ ಹೀಗಂದಿದ್ದೇಕೆ ?
ಫ್ಯಾಮಿಲಿ ಮ್ಯಾನ್ 2 ನಟಿ ಪ್ರಿಯಾಮಣಿ ವೆಬ್ ಸರಣಿಯಲ್ಲಿನ ಸುಚಿ ಪಾತ್ರಕ್ಕಾಗಿ ಪ್ರೇಕ್ಷಕರಿಂದ ಸಿಗುತ್ತಿರುವ ಟೀಕೆ ಬಗ್ಗೆ ಮಾತನಾಡಿದ್ದಾರೆ.
ಜನರು ರೀಲ್ ಮತ್ತು ನಿಜ ಜೀವನದ ನಡುವಿನ ವ್ಯತ್ಯಾಸವನ್ನು ಮರೆತುಬಿಡುತ್ತಾರೆ. ನಾನು ನನ್ನ ಕೆಲಸವನ್ನು ಮಾತ್ರ ಮಾಡುತ್ತಿದ್ದೇನೆ ಎಂದಿದ್ದಾರೆ ನಟಿ.
ದಿ ಫ್ಯಾಮಿಲಿ ಮ್ಯಾನ್ 2 ರಲ್ಲಿ, ಪ್ರಿಯಮಣಿ ತನ್ನ ಕುಟುಂಬದ ಏಕೈಕ ಉಸ್ತುವಾರಿ ಎಂದು ಬೇಸತ್ತ ಹೆಂಡತಿಯಾಗಿ ಸಂದಿಗ್ಧತೆಯನ್ನು ಎದುರಿಸುತ್ತಿರುವ ಸುಚಿತ್ರಾ ಅಯ್ಯರ್ ಯಾ ಸುಚಿ ಪಾತ್ರವನ್ನು ಮಾಡಿದ್ದಾರೆ.
ಈ ಸರಣಿಯಲ್ಲಿ ಪ್ರಿಯಾಮಣಿ ಮನೋಜ್ ಬಾಜಪೇಯಿ ಅವರ ಪತ್ನಿ ಅಂದರೆ ಶ್ರೀಕಾಂತ್ ತಿವಾರಿ ಅವರ ಪತ್ನಿ ಸುಚಿ ಪಾತ್ರ ಮಾಡಿದ್ದಾರೆ. ಸುಚಿಯ ಆಪ್ತ ಮತ್ತು ಸಹೋದ್ಯೋಗಿ ಅರವಿಂದ್ ಪಾತ್ರದಲ್ಲಿ ಶರದ್ ಕೇಲ್ಕರ್ ನಟಿಸಿದ್ದಾರೆ.
ನಾನು ಸರಿಯಾಗಿ ಮಾಡಿದ್ದೇನೆ ಎಂದು ನಾನು ನಂಬುತ್ತೇನೆ. ನಿಮಗೆ ಬೇಕಾದುದನ್ನು ನೀವು ಮಾತಾಡಬಹುದು, ನೀವು ನನ್ನನ್ನು ದ್ವೇಷಿಸಬಹುದು ಎಂದಿದ್ದಾರೆ.
ಆದರೆ ನನ್ನ ಪಾತ್ರ ಉತ್ತಮವಾಗಿದೆ ಎಂದು ನನಗೆ ತಿಳಿದಾಗ ಖುಷಿಯಾಗುತ್ತದೆ. ಈಗಲೂ ನನಗೆ ಮಸೇಜ್ ಬಂದಿದೆ. ನೀವು ಶ್ರೀಕಾಂತ್ಗೆ ಹೀಗೆ ಮಾಡಬಾರದಿತ್ತು ಅರವಿಂದನಿಗಾಗಿ ನೀವು ಇದನ್ನು ಮಾಡಿದ್ದೀರಿ, ಅಥವಾ ನೀವು ಶ್ರೀಕಾಂತ್ಗೆ ಯಾಕೆ ಮೋಸ ಮಾಡಿದ್ದೀರಿ ಎಂದು ಜನ ಪ್ರಶ್ನಿಸುತ್ತಾರೆ ಎಂದಿದ್ದಾರೆ ನಟಿ.
ನಾನು ಅದಕ್ಕೆಲ್ಲ ಪ್ರತಿಕ್ರಿಯಿಸುವ ಅಭ್ಯಾಸ ಹೊಂದಿಲ್ಲ. ನಾನು ಅದನ್ನು ನೋಡಿ ನಗುತ್ತೇನೆ. ಬಹಳಷ್ಟು ಜನರು ದೇವರು ನನಗೆ ಒಂದು ತುಂಡು ಆಹಾರ ಕಡಿಮೆ ನೀಡಲಿ ಆದರೆ ನಿಮ್ಮಂತಹ ಹೆಂಡತಿಯಲ್ಲ ಎಂದೂ ಹೇಳುತ್ತಾರೆ ಎಂದಿದ್ದಾರೆ ಪ್ರಿಯಾಮಣಿ
ಗುರು ಇದು ರೀಲ್. ನಾನು ನಟಿ. ನಾನು ಮಾಡುತ್ತಿರುವುದು ಇದು ನನ್ನ ಕೆಲಸ. ನಿಜ ಜೀವನದಲ್ಲಿ ನಾನು ಇದಲ್ಲ ಎಂದು ನಾನು ಕುಳಿತು ಎಲ್ಲರಿಗೂ ವಿವರಿಸಲು ಸಾಧ್ಯವಿಲ್ಲ ಎಂದಿದ್ದಾರೆ ನಟಿ.
ಜನರು ನಿಜವಾಗಿಯೂ ‘ನಿಮ್ಮ ಜೀವನದಲ್ಲಿ ನೀವು ಎಂದಿಗೂ ಸಂತೋಷವಾಗಿರುವುದಿಲ್ಲ’ ಎಂಬಂತಹ ವಿಷಯಗಳನ್ನು ಹೇಳುವ ಮಟ್ಟಿಗೆ ಹೋಗುತ್ತಿದ್ದಾರೆ. ಏಕೆ ಅಷ್ಟು ಮಟ್ಟಿಗೆ ಹೋಗಬೇಕು ಎಂದು ನಾನು ಆಶ್ಚರ್ಯ ಪಡುತ್ತೇನೆ. ನೀವು ಪಾತ್ರವನ್ನು ಇಷ್ಟಪಡುವುದಿಲ್ಲ ಎಂದಾರೆ ಅದು ನಿಮ್ಮ ಅಭಿಪ್ರಾಯ. ಆದರೆ ಪಾತ್ರವನ್ನು ನಿರ್ವಹಿಸುವ ನಟಿಗೆ ಇದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬೇಕಾಗಿಲ್ಲ ಎಂದಿದ್ದಾರೆ.
ದಿ ಫ್ಯಾಮಿಲಿ ಮ್ಯಾನ್ನಲ್ಲಿ, ಪ್ರಿಯಮಣಿ ಮತ್ತು ಶರದ್ ಕೇಲ್ಕರ್ ಪಾತ್ರಗಳು ಸುಚಿ ಮತ್ತು ಅರವಿಂದ್ ಅವರು ಬ್ಯುಸಿನೆಸ್ ಟೂರ್ನಲ್ಲಿ ಲೋನಾವಾಲಾಕ್ಕೆ ಪ್ರಯಾಣಿಸುತ್ತಾರೆ.
ಆದರೆ ಲೋನವಲಾದಲ್ಲಿ ಏನಾಯ್ತೆಂಬುದು ಯಾರಿಗೂ ತಿಳಿಯದ ವಿಚಾರ, ಸೀಸನ್ 2 ರ ಬರಹಗಾರರು ಮತ್ತು ನಿರ್ದೇಶಕರಲ್ಲಿ ಒಬ್ಬರಾದ ಸುಪರ್ನ್ ವರ್ಮಾ, ಲೋನವಾಲಾ ರಹಸ್ಯವು ಪ್ರದರ್ಶನ ನಡೆಯುವವರೆಗೂ ಬಗೆಹರಿಯದೆ ಇರಬೇಕೆಂದು ಹೇಳಿದ್ದರು.