ಅಕ್ಷಯ್ 25 ಕೋಟಿ ದೇಣಿಗೆ: ಕಾಲೆಳೆದ ಶತ್ರುಘ್ನಾ ಸಿನ್ಙಾ ಸಮರ್ಥನೆ ಇದು...
ಕೊರೋನಾ ವೈರಸ್ನಿಂದಾಗಿ ವಿಶ್ವಾದ್ಯಂತ ಭೀತಿ ಹರಡಿದೆ. ಪ್ರತಿದಿನ ಸಾವಿರಾರು ಜನರು ಸಾಯುತ್ತಿದ್ದಾರೆ. ಭಾರತದಲ್ಲೂ ಇದರ ತೀವ್ರತೆ ಹೆಚ್ಚಿರುವುದು ತಿಳಿದ ವಿಷಯ. ದೇಶದಲ್ಲಿ ಕೊರೋನಾ ಸೋಂಕಿಗೆ ಒಳಗಾದವರಿಗೆ ಸಹಾಯ ಮಾಡಲು ಅನೇಕ ಸೆಲೆಬ್ರೆಟಿಗಳು ದಾನ ಮಾಡಿದ್ದಾರೆ ಮತ್ತು ಮಾಡುತ್ತಿದ್ದಾರೆ. ಅಕ್ಷಯ್ ಕುಮಾರ್ ಅವರು ಪಿಎಂ ಕೇರ್ ಫಂಡ್ಗೆ 25 ಕೋಟಿ ದೇಣಿಗೆ ನೀಡಿದ್ದು ಸುದ್ದಿಯಾಗಿತ್ತು. ನಟ ಶತ್ರುಘ್ನಾ ಸಿನ್ಹಾ ಅಕ್ಷಯ್ ಕುಮಾರ್ ಅವರನ್ನು ಈ ವಿಷಯವಾಗಿ ಟೀಕಿಸಿದ್ದರು. ಶತ್ರುಘ್ನಾ ಸಿನ್ಹಾ ಮಾತನ್ನು ಜನರು ಇಷ್ಟಪಡಲಿಲ್ಲ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಟೀಕೆಗಳು ಎದುರಾದ ಬೆನ್ನಲ್ಲೇ ಈ ಸಮರ್ಥನೆ ನೀಡಿದ್ದಾರೆ.
ದಾನ ಮಡುವುದು ಇನ್ನೊಬ್ಬರಿಗೆ ಗೊತ್ತಾಗಬಾರದು. ಆದರೀಗ ಶೋ ಆಫ್ ಆಗಿದೆ ಎಂದ ಬಾಲಿವುಡ್ ನಟ ಶತ್ರುಘ್ನಾ ಸಿನ್ಹಾ ಹೇಳಿಕೆಗೆ ಸಿಕ್ಕಾಪಟ್ಟೆ ವಿರೋಧ ವ್ಯಕ್ತವಾಗಿತ್ತು. ಆದರೆ, ಇದೀಗ ತಮ್ಮ ಹೇಳಿಕೆಯನ್ನು ಅವರು ಸಮರ್ಥಿಸಿಕೊಂಡಿದ್ದು ಹೀಗೆ.
ಶತ್ರುಘ್ನಾ ಸಿನ್ಹಾ ಹೇಳಿಕೆ ನೀಡುವಾಗ ,ಅಕ್ಷಯ್ ಕುಮಾರ್ ಅವರ ಹೆಸರು ಮನಸ್ಸಿನಲ್ಲಿ ಇರಲಿಲ್ಲ .ಅಕ್ಷಯ್ 25 ಕೋಟಿ ನೀಡಿದ್ದರಿಂದ ಆ ಮಾತು ಅಕ್ಷಯ್ ಕುರಿತು ಎಂದು ಜನರೇ ಎಲ್ಲಾ ನಿರ್ಧರಿಸಿದ್ದಾರೆ ಎಂದು ಸಿನ್ಹಾ ಹೇಳಿದ್ದಾರೆ.
ಅಕ್ಷಯ್ ಬಗ್ಗೆ ನಾನು ಎಂದಿಗೂ ಅಂತಹ ಮಾತನ್ನು ಹೇಳಲು ಸಾಧ್ಯವಿಲ್ಲ ಅಥವಾ ಅವಹೇಳನ ಮಾಡಲಾರೆ. ಅಕ್ಷಯ್ ಕುಮಾರ್ ನನ್ನ ಮಗಳು ಸೋನಾಕ್ಷಿಯ ಪ್ರಮುಖ ನಟ ಮಾತ್ರವಲ್ಲ, ಅವರು ಕುಟುಂಬ ಸ್ನೇಹಿತರೂ ಹೌದು, ತಮ್ಮ ಮಾತಿಗೆ ಬಣ್ಣ ಹಚ್ಚಿದ ಸಿನ್ಹಾ.
ಅಗತ್ಯವಿರುವವರಿಗೆ ಮತ್ತು ಬಡವರಿಗೆ ನಿರಂತರವಾಗಿ ಕೊಡುಗೆ ನೀಡುವ, ಅಗತ್ಯವಿದ್ದಾಗಲೆಲ್ಲಾ ಸದಾ ಸಹಾಯಕ್ಕಾಗಿ ನಿಲ್ಲುವ ಅಕ್ಷಯ್ ಅವರ ದೊಡ್ಡ ಅಭಿಮಾನಿಯಾಗಿದ್ದಾರೆ ಈ ಹಿರಿಯ ನಟ.
ಅಕ್ಷಯ್ ಕುಮಾರ್ ಅವರು ಪಿಎಂ ಕೇರ್ ಫಂಡ್ಗೆ 25 ಕೋಟಿ ರೂ. ದೇಣಿಗೆ ನೀಡಿದಾಗ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಪ್ರಶಂಸಿಸಲಾಯಿತು.
ಅಕ್ಷಯ್ ಮತ್ತು ಅಂತಹ ಕೆಲವು ಸೆಲಬ್ರೆಟಿಗಳು ಒಂದು ಕಡೆ ಹೆಚ್ಚು ಮೆಚ್ಚುಗೆ ಪಡೆದರೆ, ಮತ್ತೊಂದೆಡೆ ಕೆಲವರು ಅವರನ್ನು ಟೀಕಿಸಲು ಪ್ರಾರಂಭಿಸಿದರು. ಟೀಕೆ ಮಾಡಿದವರಲ್ಲಿ ಶತ್ರುಘ್ನಾ ಸಿನ್ಹಾ ಮುಂಚೂಣಿಯಲ್ಲಿದ್ದರು.
ದೇಣಿಗೆ ಘೋಷಿಸುವುದು ಅಶ್ಲೀಲ, ಯಾರಾದರೂ 25 ಕೋಟಿ ದೇಣಿಗೆ ನೀಡಿದ್ದಾರೆ ಎಂದು ಕೇಳಲು ತುಂಬಾ ಕೆಟ್ಟದಾಗಿ ಮತ್ತು ಚೀಪ್ ಅನಿಸುತ್ತದೆ ಎಂದು ಸಿನ್ಹಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿದ್ದರು.
ಜನರು ದಾನ ಮಾಡಿದ ಮೊತ್ತಕ್ಕೆ ಅನುಗುಣವಾಗಿ ಯಾರನ್ನೂ ಜಡ್ಜ್ ಮಾಡಲು ಪ್ರಾರಂಭಿಸುತ್ತಾರೆ. ವಿಶ್ವದಲ್ಲಿ ಎಲ್ಲಿಯೂ ದಾನವನ್ನು ಹೇಳಿ ಕೊಡುವುದ್ದಿಲ್ಲ. ದಾನ ಮತ್ತು ಸಂಕಲ್ಪವು ವೈಯಕ್ತಿಕ ವಿಷಯ. ಶೋ-ಬಿಸಿನೆಸ್ ಈಗ ಶೋ-ಆಫ್ ವ್ಯವಹಾರವಾಗಿ ಮಾರ್ಪಟ್ಟಿದೆ ಎಂದಿದ್ದರು ಬಾಲಿವುಡ್ ಸಿನ್ಹಾ.
ಸಿನ್ಹಾ ಮಾತಿಗೆ ಸಾಮಾಜಿಕ ಮಾಧ್ಯಮದಲ್ಲಿ ತೀವ್ರವಾದ ಮಾತುಗಳು ಕೇಳಿ ಬಂದಿತ್ತು. ಈಗ ಸಮರ್ಥನೆ ನೀಡಿದ್ದಾರೆ ಹಿರಿಯ ನಟ .