2 ಕೀಮೋಥೆರಪಿ ನಂತರದ ಸಂಜಯ್ದತ್ ಫೋಟೋ ನೋಡಿ ಫ್ಯಾನ್ಸ್ ಶಾಕ್!
ಶ್ವಾಸಕೋಶ ಕ್ಯಾನ್ಸರ್ನಿಂದ ಬಳಲುತ್ತಿರುವ ಬಾಲಿವುಡ್ ನಟ ಸಂಜಯ್ ದತ್ ದುಬೈನಿಂದ ಮುಂಬೈಗೆ ಮರಳಿದ್ದಾರೆ. 4ನೇ ಸ್ಟೇಜ್ನಲ್ಲಿರುವ ಲಂಗ್ ಕ್ಯಾನ್ಸರ್ಗೆ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ನಟ. ಮೂರನೇ ಕೀಮೋಥೆರಪಿ ಸೆಶನ್ ಪ್ರಾರಂಭವಾಗಿದೆ. ಇತ್ತೀಚೆಗೆ, ಅವರ ಮತ್ತೊಂದು ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ., ಇದರಲ್ಲಿ ಅವರು ತುಂಬಾ ವೀಕ್ ಆಗಿದ್ದು, ಸಂಜಯ್ ಮುಖ ಕಳೆಗುಂದಿದೆ. ಆತಂಕ ಹಾಗೂ ಉದ್ದೇಗ ಎದ್ದು ಕಾಣುತ್ತದೆ. ಸಂಜಯ್ರನ್ನು ಈ ಸ್ಥಿತಿಯಲ್ಲಿ ನೋಡಿ ಫ್ಯಾನ್ಸ್ ಶಾಕ್ ಆಗಿದ್ದಾರೆ.
ದುಬೈನಲ್ಲಿ ಮಕ್ಕಳೊಂದಿಗೆ ವಿಹಾರಕ್ಕೆ ಹೋಗುವಾಗ ತೆಗೆದ ಫೋಟೋವನ್ನು ಮಾನ್ಯತಾ ತನ್ನ ಇನ್ಸ್ಟಾಗ್ರಾಮ್ನಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಸಂಜಯ್ ಮುಖದ ಬಣ್ಣ ಬದಲಾಗಿದ್ದು ತುಂಬಾ ದುರ್ಬಲವಾದಂತೆ ಕಾಣಿಸುತ್ತಿದ್ದಾರೆ.
ಆಗಸ್ಟ್ 11 ರಂದು ಅವರು ಆರೋಗ್ಯ ಸಮಸ್ಯೆಯಿಂದಾಗಿ ಸ್ವಲ್ಪ ಸಮಯದವರೆಗೆ ಕೆಲಸದಿಂದ ವಿರಾಮ ತೆಗೆದು ಕೊಳ್ಳುವುದಾಗಿ ಘೋಷಿಸಿದ್ದರು. ಆಗಸ್ಟ್ 18 ರಂದು ಸಂಜಯ್ ದತ್ ಪಾಪರಾಜಿಗಳ ಮುಂದೆ ತಮಗಾಗಿ ಪ್ರಾರ್ಥನೆ ಮಾಡಬೇಕೆಂದು ಹೇಳಿದ್ದರು.
ಕೀಮೋಥೆರಪಿ ನಂತರದ ಸಂಜಯ್ದತ್ರ ಪೋಟೋ ವೈರಲ್ ಆಗಿದೆ.ಫ್ಯಾನ್ ಒಬ್ಬ ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಈ ಫೋಟೋ ಶೇರ್ ಮಾಡಿ ಕೊಂಡಿದ್ದ.
ಫೋಟೋದಲ್ಲಿ, ಗ್ರೇ ಟೀ ಶರ್ಟ್ ಜೀನ್ಸ್ ಹಾಗೂ ಕೂಲಿಂಗ್ ಗ್ಲಾಸ್ ಧರಿಸಿದ್ದು ಫೋನ್ ಯೂಸ್ ಮಾಡುತ್ತಿದ್ದಾರೆ ಸಂಜಯ್ದತ್. ಗಡ್ಡವನ್ನು ತೆಗೆದಿರುವ ಕಾರಣದಿಂದ ನಟನ ಮುಖ ಇನ್ನೂ ಸಣ್ಣದಾಗಿ ಕಾಣುತ್ತಿದೆ.
ಸಂಜೂ ಬಾಬಾನ ಮುಖದಲ್ಲಿ ವೀಕ್ನೆಸ್, ಆತಂಕ ಹಾಗೂ ಉದ್ವೇಗ ಎದ್ದು ಕಾಣುತ್ತದೆ.
ಈ ಫೋಟೋ ನೋಡಿ ಅಭಿಮಾನಿಗಳು ತುಂಬಾ ಶಾಕ್ ಆಗಿದ್ದಾರೆ. ಸಾಕಷ್ಟು ಜನ ಕಾಮೆಂಟ್ ಮಾಡಿ ಸಂಜಯ್ದತ್ಗೆ ಹಾರೈಸಿದ್ದಾರೆ.
ಬಾಬಾ ತುಂಬಾ ದುರ್ಬಲವಾಗಿ ಕಾಣುತ್ತಿದ್ದಾರೆಂದೂ, ಅವರು ಶೀಘ್ರದಲ್ಲೇ ಗುಣಮುಖರಾಗಲೆಂದು ಅಭಿಮಾನಿಗಳು ಪ್ರಾರ್ಥಿಸಿದ್ದಾರೆ. ಸಂಜಯ್ ದತ್ ತುಂಬಾ ಅನಾರೋಗ್ಯದಿಂದ ಬಳಲುತ್ತಿದ್ದಾರೆ, ಅವರ ತೂಕವೂ ಕಡಿಮೆಯಾಗಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನೀವು ಹೋರಾಟಗಾರ, ನೀವು ಬೇಗನೆ ಗುಣಮುಖರಾಗುತ್ತೀರಿ ಎಂದು ಇನ್ನೊಬ್ಬರು ವಿಶ್ ಮಾಡಿದ್ದಾರೆ.
ಕೀಮೋಥೆರಪಿಯ ಮೊದಲ ಹಂತದ ನಂತರ, ಕೀಮೋಥೆರಪಿ ಸುಲಭವಲ್ಲ ಮತ್ತು ಶ್ವಾಸಕೋಶದ ಕ್ಯಾನ್ಸರ್ನೊಂದಿಗೆ ಸಂಜಯ್ ಯುದ್ಧ ತುಂಬಾ ಕಷ್ಟವಾಗಿರುತ್ತದೆ. ಇದು ಅನೇಕ ಅಡ್ಡಪರಿಣಾಮಗಳನ್ನೂ ಹೊಂದಿದೆ ಎಂದು ಸಂಜಯ್ಗೆ ಚಿಕಿತ್ಸೆ ನೀಡುತ್ತಿರುವ ಡಾ.ಜಲೀಲ್ ಪಾರ್ಕರ್ ತಿಳಿಸಿದ್ದಾರೆ
ಚಿಕಿತ್ಸೆಯ ಸಮಯದಲ್ಲಿ, ಲೀಲಾವತಿ ಆಸ್ಪತ್ರೆಯ ವೈದ್ಯರು ತಮ್ಮ ಶ್ವಾಸಕೋಶದಿಂದ ಸುಮಾರು 1.5 ಲೀಟರ್ ದ್ರವವನ್ನು ಹೊರತೆಗೆದಿದ್ದಾರೆ. ಸುದ್ದಿಯ ಪ್ರಕಾರ, ದ್ರವವು ಅವರ ಶ್ವಾಸಕೋಶದಲ್ಲಿ ನಿರಂತರವಾಗಿ ಸಂಗ್ರಹವಾಗುತ್ತಿದೆ, ಇದರಿಂದಾಗಿ ನಟ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.
ಕ್ಯಾನ್ಸರ್ ಜೊತೆ ಹೋರಾಡುತ್ತಿರಬಹುದು ಸಂಜಯ್. ಆದರೆ ತನ್ನ ಕೆಲಸ ಮಾಡುವುದನ್ನು ಬಿಡಲಿಲ್ಲ. ಅವರು ತಮ್ಮ ಚಿತ್ರಗಳ ಶೂಟಿಂಗ್ ಜೊತೆಗೆ ಚಿಕಿತ್ಸೆಯತ್ತ ಗಮನ ಹರಿಸಿದ್ದಾರೆ.
ಸಂಜಯ್ ಅವರ ಮುಂಬರುವ ಚಿತ್ರಗಳಲ್ಲಿ ಶಂಶೇರಾ, ಕೆಜಿಎಫ್ -2, ಪೃಥ್ವಿರಾಜ್, ಭುಜ್: ದಿ ಪ್ರೈಡ್ ಆಫ್ ಇಂಡಿಯಾ ಮತ್ತು ಟೊರ್ಬಾಜ್ ಸೇರಿವೆ. ಈ ಚಿತ್ರಗಳಲ್ಲಿ ಕೆಲವು ಪೂರ್ಣಗೊಂಡಿದ್ದರೆ, ಕೆಲವು ಸಿನಿಮಾಗಳು ಸ್ಪಲ್ಪ ಕೆಲಸ ಬಾಕಿ ಇದೆ.