ಐಶ್ವರ್ಯಾ ರೈ, ಉದ್ಯಮಿ ಅನಿಲ್ ಅಂಬಾನಿ ಬಗ್ಗೆ ಬಾಲಿವುಡ್ನಲ್ಲಿದೆ ಗಾಸಿಪ್..
ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈಯ ಚೆಂದಕ್ಕೆ ಮನ ಸೋಲದವರು ಯಾರು? ತನ್ನ ಚೆಲುವಿನಿಂದಲೇ ಇಡೀ ಜಗತ್ತನ್ನು ತನ್ನೆಡೆಗೆ ಸೆಳೆದು ಕೊಂಡಿರುವ ಸುಂದರಿ ಈಕೆ. ಬಾಲಿವುಡ್ನಲ್ಲೂ ಸಖತ್ ಫೇಮಸ್ ಸ್ಟಾರ್. ಹಲವು ಹಿಟ್ ಸಿನಿಮಾಗಳನ್ನು ನೀಡಿರುವ ಈಕೆ ಇನ್ನೂ ಬೇಡಿಕೆಯಲ್ಲಿರುವ ನಟಿ. ಇವರ ಪರ್ಸನಲ್ ಲೈಫ್ ಸಹ ಸಾಕಷ್ಟು ಸುದ್ದಿ ಮಾಡಿತ್ತು. ಹಲವು ನಾಯಕ ನಟರ ಜೊತೆಗೆ ಇವರ ಹೆಸರು ಆಗಾಗ ಕೇಳಿಬರುತ್ತಿತ್ತು ಕೂಡ. 2004ರಲ್ಲಿ, ಐಶ್ವರ್ಯಾ, ಉದ್ಯಮಿ ಅನಿಲ್ ಅಂಬಾನಿ ಅವರೊಂದಿಗಿನ ಲಿಂಕ್ನ ವದಂತಿಗಳು ಹರಿದಾಡುತ್ತಿದ್ದು ಒಂದು ಪ್ರಮುಖ ಥ್ರೋಬ್ಯಾಕ್.
ಐಶ್ವರ್ಯಾ ರೈಗೂ, ಗಾಸಿಪ್ಗೂ ವಿಶೇಷ ನಂಟು. ಒಂದು ಕಾಲದಲ್ಲಿ ಸಲ್ಮಾನ್ ಖಾನ್ ಪಟ್ಟದರಿಸಿ ಎಂದೇ ಬಿಂಬಿತರಾಗಿದ್ದ ಐಶ್ವರ್ಯಾ ಹೆಸರು ಆಮೇಲೆ ಕೇಳಿ ಬಂದಿದ್ದು ವಿವೇಕ್ ಓಬೇರಾಯ್ ಜೊತೆ. ಮದ್ಯದಲ್ಲಿ ಅಂಬಾನಿ ಕಿರಿ ಪುತ್ರ ಅನಿಲ್ ಜೊತೆಯೂ ಈಕೆ ಹೆಸರು ಥಳಕು ಹಾಕಿಕೊಂಡಿತ್ತು ಗೊತ್ತಾ?
ಸಲ್ಮಾನ್ ಖಾನ್ ಅವರೊಂದಿಗೆ ಸಪ್ತಪದಿ ತುಳೀತಾರೆ ಐಶ್ವರ್ಯಾ ಎಂಬ ಸುದ್ದಿ ಕೇಳಿ ಬಂದ ಕೂಡಲು, ಶಿವಸೇನೆಯೂ ವಿರೋಧವೂ ವ್ಯಕ್ತವಾಗಲು ಆರಂಭವಾಗಿತ್ತು.
ಆಮೇಲೆ ನಿಧಾನಕ್ಕೆ ವಿವೇಕ್ ಒಬೇರಾಯ್ ಜೊತೆ ಐಶ್ವರ್ಯಾ ಹೆಸರು ಥಳಕು ಹಾಕಿಕೊಂಡಿತು.
ಇದ್ದಕ್ಕಿದ್ದಂತೆ ಇದೇ ಟೈಮಲ್ಲಿ ವಿವಾಹಿತ ಉದ್ಯಮಿ ಅನಿಲ್ ಅಂಬಾನಿ ಜೊತೆ ಹೆಸರು ಕೇಳಿ ಬರುವುದಾ?
ರೂಮರ್ಗಳು ಐಶ್ವರ್ಯಾಗೆ ತೊಂದರೆ ಕೊಡಲು ಪ್ರಾರಂಭಿಸಿದವು, ಅವರು ಅದರ ಬಗ್ಗೆ ಮಾಧ್ಯಮದ ಮುಂದೆ ಅಳಲು ತೋಡಿಕೊಳ್ಳಲು ಮುಂದಾದರು.
ಆದ್ಯಾಕೋ ನನ್ನೊಂದಿಗೆ ಹಲವರ ಹೆಸರು ಹೆಣೆದುಕೊಳ್ಳುತ್ತದೋ ಗೊತ್ತಿಲ್ಲ. ಇಂಥ ಗಾಸಿಪ್ಗಳು ನಮ್ಮನ್ನು ಗಾಸಿಗೊಳಿಸುವುದು ಸುಳ್ಳಲ್ಲ. ನಾನು ಅನಿಲ್ ಅಂಬಾನಿ ಅವರನ್ನು ಕಡೆಯದಾಗಿ ಭೇಟಿಯಾಗಿದ್ದು ಭಾರತ್ ಷಾ ಅವರ ಬರ್ಥ್ಡೇ ಬಾಷ್ನಲ್ಲಿ, ನಾವು ಟೀನಾ ಮತ್ತು ಇತರರೊಂದಿಗೆ ಒಂದು ಟೇಬಲ್ನಲ್ಲಿ ಕುಳಿತಿದ್ದೆವು, ಎಂದು ಹೇಳಿದ್ದರು.
ಅನಿಲ್ ಅವರೊಟ್ಟಿಗೆ ನಾನು ಕೋಟ್ಯಾಂತರ ರುಪಾಯಿ ವ್ಯವಹಾರ ಹೊಂದಿದ್ದೇನೆಂದು ಕೇಳಿ ಶಾಕ್ ಆಗಿದೆ. ಇದೆಂಥಾ ಸುದ್ದಿ? ಎಂದು ಮೀಡಿಯಾಗೇ ಹೇಳಿದ್ದರು ಮಾಜಿ ವಿಶ್ವ ಸುಂದರಿ.
ನನ್ನ ಕರೀರ್, ಜಾಹೀರಾತುಗಳು...ಪ್ರವಾಸಿ ಹೀಗೆ ಹತ್ತು ಹಲವು ಕಾರ್ಯಗಳಲ್ಲಿ ನನ್ನನ್ನು ನಾನು ತೊಡಗಿಸಿಕೊಂಡಿದ್ದೇನೆ, ಎಂದು ಹೇಳಿದ ಬಾಲಿವುಡ್ ಬ್ಯೂಟಿ ವಿವೇಕ್ ಓಬೇರಾಯ್ ಅವರೊಂದಿಗಿನ ಬ್ರೇಕ್ ಅಪ್ ಬಗ್ಗೆ ಮಾತನಾಡಲು ನಿರಾಕರಿಸಿದ್ದರು.
ನನ್ನ ವೈಯಕ್ತಿಕ ಬದುಕು ನನಗೆ. ನನ್ನ ಬಗ್ಗೆ ಹರಿದಾಡುತ್ತಿರುವ ಎಲ್ಲಾ ಗಾಸಿಪ್ಗಳಿಗೆ ನಾನು ಹೊಣೆಯಲ್ಲ. ಇದರೆ ಬಗ್ಗೆ ಜನರು ನನ್ನಿಂದಾನೇ ಉತ್ತರ ಬಯಸೋದು ತಪ್ಪಿ ಎಂದಿದ್ದರು ಕುಡ್ಲದ ಕುವರಿ ಐಶ್.
ನಾನು ಈ ಕ್ಷಣದಲ್ಲಿ ಜೀವಿಸುತ್ತಿದ್ದೇನೆ. ಮದುವೆ ಬಗ್ಗೆ ಇನ್ನೂ ಯೋಚಿಸಬೇಕಾಗಿದೆ. ಎಂದು ಹೇಳುವ ಮೂಲಕ ಗಾಸಿಪ್ಗಳಿಗೆ ಬ್ರೇಕ್ ಹಾಕಲು ಯತ್ನಿಸಿದ್ದರು.
ಆಗಿನ ಗಾಸಿಪ್ಗಳು ಇನ್ನೂ ಹರಿದಾಡುತ್ತಲೇ ಇವೆ.
ಫೆಬ್ರವರಿ 2006 ರಲ್ಲಿ, ಅಮಿತಾಬ್ ಅವರ ಸಹೋದರ ಅಜಿತಾಬ್ ಬಚ್ಚನ್ ಬೆಂಗಳೂರು ಮೂಲದ ಜ್ಯೋತಿಷಿ ಚಂದ್ರಶೇಖರ್ ಸ್ವಾಮಿಯನ್ನು ಐಶ್ವರ್ಯಾ ಮತ್ತು ಅಭಿಷೇಕ್ ಅವರ ಜಾತಕಗಳೊಂದಿಗೆ ಭೇಟಿಯಾದ ನಂತರ, ಏಪ್ರಿಲ್ 20, 2007 ರಂದು ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.