MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • ರಾಮನ ಪಾತ್ರಕ್ಕಾಗಿ ಮದ್ಯ ಬಿಟ್ಟೆ ಎಂದಿದ್ದು ಬಿಟ್ಟಿ ಪಬ್ಲಿಸಿಟಿಗಾ? ರಣಬೀರ್ ಕೈಲಿ ಡ್ರಿಂಕ್ಸ್ ನೋಡಿ ಫ್ಯಾನ್ಸ್ ಗರಂ

ರಾಮನ ಪಾತ್ರಕ್ಕಾಗಿ ಮದ್ಯ ಬಿಟ್ಟೆ ಎಂದಿದ್ದು ಬಿಟ್ಟಿ ಪಬ್ಲಿಸಿಟಿಗಾ? ರಣಬೀರ್ ಕೈಲಿ ಡ್ರಿಂಕ್ಸ್ ನೋಡಿ ಫ್ಯಾನ್ಸ್ ಗರಂ

ರಾಮಾಯಣ ಚಿತ್ರದಲ್ಲಿ ತಾನು ನಿರ್ವಹಿಸುತ್ತಿರೋ ರಾಮನ ಪಾತ್ರಕ್ಕೆ ನ್ಯಾಯ ಸಲ್ಲಿಸಲು ರಣಬೀರ್ ಕಪೂರ್ ಮದ್ಯಪಾನ ತೊರೆದಿದ್ದಾರೆ ಎಂದು ಅವರ ಪಿಆರ್ ಟೀಂ ಹೇಳಿತ್ತು. ಈಗ ನೋಡಿದರೆ, ರಣಬೀರ್ ಕೈಲಿ ಡ್ರಿಂಕ್ಸ್ ಹಿಡಿದು ಫ್ಯಾನ್ಸ್ ಕೈಲಿ ಸಿಕ್ಕಿಬಿದ್ದಿದ್ದಾರೆ!

2 Min read
Reshma Rao
Published : Jun 10 2024, 02:38 PM IST
Share this Photo Gallery
  • FB
  • TW
  • Linkdin
  • Whatsapp
110

ರಣಬೀರ್ ಕಪೂರ್ ಅವರು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಸಮಾರಂಭದಲ್ಲಿ 'ಪಾನೀಯ' ಹಿಡಿದಿರುವುದು ಕಂಡುಬಂದಿದೆ, ಅವರು PR ಪ್ರಕಟಿಸಿದ ಮದ್ಯಪಾನವನ್ನು ತ್ಯಜಿಸಿದ್ದಾರೆ ಎಂಬ ಹೇಳಿಕೆಗಳ ನಡುವೆ.

210

ರಣಬೀರ್ ಕಪೂರ್ ತೆರೆಯ ಪಾತ್ರಕ್ಕೆ ಜೀವ ತುಂಬಲು ಶ್ರಮಿಸುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಅವರು ತಮ್ಮ ಮುಂಬರುವ ಚಿತ್ರ ರಾಮಾಯಣದಲ್ಲಿ ರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

310

ಈ ಚಿತ್ರದಲ್ಲಿ ರಾಮನಿಗೆ ಗೌರವಾರ್ಥವಾಗಿ, ಪಾತ್ರಕ್ಕೆ ನ್ಯಾಯ ಸಲ್ಲಿಸಲು ನಟನು  ಮದ್ಯಪಾನ ಮತ್ತು ಅವರ ಎಲ್ಲಾ ಕೆಟ್ಟ ಅಭ್ಯಾಸಗಳನ್ನು ತೊರೆದಿದ್ದಾರೆ ಎಂದು ಅವರ ಪಿಆರ್ ಟೀಂ ಹೇಳಿತ್ತು.

410

ಈ ಹೇಳಿಕೆ ಜನರಲ್ಲಿ ರಣಬೀರ್ ಕಪೂರ್ ಬಗ್ಗೆ ಗೌರವ ಹೆಚ್ಚಿಸಿತ್ತು. ಆದರೆ, ಈ ಮಾತೆಲ್ಲ ಕೇವಲ ಬಿಟ್ಟಿ ಪ್ರಚಾರಕ್ಕೆ ಹೇಳಿದ್ದು ಎಂಬ ಅನುಮಾನ ಈಗ ಸೃಷ್ಟಿಯಾಗಿದೆ.

510

ಇದಕ್ಕೆ ಕಾರಣ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಸಮಾರಂಭದಲ್ಲಿ ರಣಬೀರ್ ಕಪೂರ್ 'ಡ್ರಿಂಕ್' ಗ್ಲಾಸ್‌ನೊಂದಿಗೆ ಕಾಣಿಸಿಕೊಂಡಿದ್ದು.

610

ಹೌದು, ಇಟಲಿಯಲ್ಲಿ ನಡೆದ ಕ್ರೂಸ್ ಪಾರ್ಟಿಯಲ್ಲಿ ಭಾಗವಹಿಸಿದ್ದ ನಟನ ಫೋಟೋವೊಂದು ಹೊರ ಬಿದ್ದಿದೆ. ಇದರಲ್ಲಿ ಅವರು ಯಾರೊಂದಿಗೋ ಮಾತಾಡುತ್ತಿದ್ದಾರೆ, ಪಕ್ಕದಲ್ಲಿ ಶನಾಯಾ ಕಪೂರ್ ಇದ್ದಾರೆ. 

710

ಆದರೆ, ಜನರ ಗಮನ ಸೆಳೆಯುತ್ತಿರುವುದು ಮಾತ್ರ ರಣಬೀರ್ ಕೈಯಲ್ಲಿರುವ ಡ್ರಿಂಕ್ಸ್. ಇದು ನೆಟ್ಟಿಗರಿಗೆ ಆಘಾತಕಾರಿಯಾಗಿದೆ. ಏಕೆಂದರೆ, ಕೆಲವು ದಿನಗಳ ಹಿಂದೆ, ನಟ ತನ್ನ ಮುಂಬರುವ ಚಿತ್ರ ರಾಮಾಯಣದಲ್ಲಿ ನಟಿಸಲು ಮದ್ಯಪಾನ ಮತ್ತು ಧೂಮಪಾನವನ್ನು ತ್ಯಜಿಸಿದ್ದಾರೆ ಎಂದು ಹೇಳಲಾಗಿತ್ತು.

810

ಈ ವಿಷಯಕ್ಕೆ ಸಾಕಷ್ಟು ಶ್ಲಾಘನೆ ಪಡೆದಿದ್ದರು. ಆದರೆ, ಈ ಫೋಟೋ ನೋಡಿದ ಫ್ಯಾನ್ಸ್ ನಟನನ್ನು ಹಿಪೋಕ್ರೈಟ್ ಎನ್ನುತ್ತಿದ್ದಾರೆ. 

910

ರಾಮಾಯಣದ ಬಜೆಟ್ ಮತ್ತು ತಾರಾ ಬಳಗದ ಶುಲ್ಕ
ಅಂತರ್ಜಾಲದಲ್ಲಿನ ವರದಿಗಳು ನಿತೇಶ್ ತಿವಾರಿಯವರ ರಾಮಾಯಣದ ಬೃಹತ್ ಪ್ರಮಾಣವನ್ನು ಅನಾವರಣಗೊಳಿಸುತ್ತವೆ, ಒಂದನೇ ಭಾಗವೇ 835 ಕೋಟಿ ರೂ. ಬಜೆಟ್ನಲ್ಲಿ ನಿರ್ಮಾಣವಾಗುತ್ತದೆ ಎನ್ನಲಾಗುತ್ತಿದೆ. 

1010

ಮೂರು ಭಾಗಗಳಿರುವ ರಾಮಾಯಣದಲ್ಲಿ ಪ್ರತಿ ಭಾಗಕ್ಕೆ ರಣಬೀರ್ ಪಡೆಯುತ್ತಿರುವ ಶುಲ್ಕ 75 ಕೋಟಿ ರೂ. ಅಂದರೆ ಒಟ್ಟು 225 ಕೋಟಿ. ಸಾಯಿ ಪಲ್ಲವಿ ಈ ಚಿತ್ರಕ್ಕೆ  18-20 ಕೋಟಿ ಸಂಭಾವನೆ ಪಡೆಯುತ್ತಿದ್ದರೆ, ಯಶ್ ಒಟ್ಟಾರೆ 150 ಕೋಟಿ ಪಡೆಯಲಿದ್ದಾರೆ. 

About the Author

RR
Reshma Rao
ರಣಬೀರ್ ಕಪೂರ್
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved