MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • ಬಡತನಕ್ಕೆ ದೂಡಿದ ಅಪ್ಪನ ಸಾವು, ಹಿಂದೂ ಧರ್ಮ ತೊರೆದು ಮುಸ್ಲಿಂ ಆದ ಸ್ಟಾರ್‌ , ಈಗ 1748 ಕೋಟಿ ರೂ ಆಸ್ತಿ ಒಡೆಯ!

ಬಡತನಕ್ಕೆ ದೂಡಿದ ಅಪ್ಪನ ಸಾವು, ಹಿಂದೂ ಧರ್ಮ ತೊರೆದು ಮುಸ್ಲಿಂ ಆದ ಸ್ಟಾರ್‌ , ಈಗ 1748 ಕೋಟಿ ರೂ ಆಸ್ತಿ ಒಡೆಯ!

ಅನೇಕ ಬಾಲಿವುಡ್ ತಾರೆಯರು ಸಿನಿ ಉದ್ಯಮದಲ್ಲಿ ಅಪಾರ ಯಶಸ್ಸನ್ನು ಕಂಡು ಜಗತ್ತಿನ ಅತ್ಯುತ್ತಮ ಪ್ರತಿಭೆಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ತಮ್ಮ ಬಾಲ್ಯವನ್ನು ಬಡತನ ಮತ್ತು ದುಃಖದಲ್ಲಿ ಕಳೆದ ನಂತರವೂ, ಕೆಲವು ತಾರೆಗಳು ತಮ್ಮ ಕಠಿಣ ಪರಿಶ್ರಮದ ಮೂಲಕ ತಮ್ಮದೇ ಆದ  ಮುದ್ರೆ ಒತ್ತಿ ಯಶಸ್ವಿಯಾದರು. ಅಂತ ಒಬ್ಬ ಇಡೀ ವಿಶ್ವವೇ ಪ್ರೀತಿಸುವ ಪ್ರತಿಭೆಯ ಜೀವನಗಾಥೆ ಇಲ್ಲಿದೆ.

3 Min read
Gowthami K
Published : Jan 06 2024, 05:15 PM IST
Share this Photo Gallery
  • FB
  • TW
  • Linkdin
  • Whatsapp
111

ಆದರೆ ಇದು ಬಾಲ್ಯದಲ್ಲಿ ತಂದೆಯನ್ನು ಕಳೆದುಕೊಂಡ ಪ್ರಸಿದ್ಧ ಬಾಲಿವುಡ್ ಗಾಯಕ ಆದವರ ಕಥೆ. ಚಿಕ್ಕವಯಸ್ಸಿನಲ್ಲಿ ಮನೆಯ ಜವಾಬ್ದಾರಿಯ ಹೊರೆ ಈ ಗಾಯಕನ ಹೆಗಲ ಮೇಲೆ ಬಿದ್ದಾಗ ಓದು ಬಿಟ್ಟು ದುಡಿಯ ತೊಡಗಿದಾತನ ಕಥೆ. ಇಂದು ಬಾಲಿವುಡ್‌ ನ ಅನೇಕ ತಾರೆಯರಿಗಿಂತ ಹೆಚ್ಚು ಆಸ್ತಿ ಹೊಂದಿರುವವರ ಕಥೆ

211

ಇಂದು ಈ ಗಾಯಕ ಮತ್ತು ಸಂಗೀತ ಮಾಂತ್ರಿಕನ ಹಾಡುಗಳನ್ನು ಭಾರತದ ಜನರು ಮಾತ್ರವಲ್ಲದೆ ಇಡೀ ಜಗತ್ತೇ ಹುಚ್ಚರಂತೆ ಆಲಿಸುತ್ತಾರೆ. ಭಾರತೀಯ ಭಾಷೆಗಳಲ್ಲಿ ಬರೆದಿರುವ ಅವರ ಹಾಡುಗಳಿಗೆ ಹೊರ ದೇಶಗಳಲ್ಲಿನ ಪ್ರೇಕ್ಷಕರು ಕೂಡ ನೃತ್ಯ ಮಾಡುತ್ತಾರೆ. ಈ ಹಾಡುಗಳನ್ನು ಅವರಿಗಾಗಿಯೇ ಬರೆಯಲಾಗಿದೆಯಂತೆ. ಈ ಸಂಗೀತ ಸಂಯೋಜಕರ ದೊಡ್ಡ ವಿಶೇಷತೆ ಎಂದರೆ ಅವರು ತಮ್ಮ ಹಾಡುಗಳ ಮೂಲಕ ಯಾರ ಆತ್ಮವನ್ನು ಮುಟ್ಟಬಲ್ಲರು. ಇಂದು ನಾವು ಪ್ರಸಿದ್ಧ ಗಾಯಕ, ಸಂಗೀತ ಸಂಯೋಜಕ, ಗೀತರಚನೆಕಾರ ಮತ್ತು ಸಂಗೀತಗಾರ ಎಆರ್ ರೆಹಮಾನ್ ಬಗ್ಗೆ ಮಾತನಾಡುತ್ತಿದ್ದೇವೆ. 

311

ಅಲ್ಲಾ ರಖ್ಬಾ ರೆಹಮಾನ್ ಅಥವಾ AR ರೆಹಮಾನ್ 1967 ರಲ್ಲಿ ಜನವರಿ 6ರಂದು ತಮಿಳುನಾಡಿನ ಮದ್ರಾಸ್‌ನಲ್ಲಿ AS ದಿಲೀಪ್ ಕುಮಾರ್ ಆಗಿ ಜನಿಸಿದರು. ಅವರ ತಂದೆ RK ಶೇಖರ್ ಕೂಡ ತಮಿಳು ಮತ್ತು ಮಲಯಾಳಂ ಚಲನಚಿತ್ರಗಳಿಗೆ ಚಲನಚಿತ್ರ ಸ್ಕೋರ್ ಸಂಯೋಜಕ ಮತ್ತು ಕಂಡಕ್ಟರ್ ಆಗಿದ್ದರು. ಎಆರ್ ರೆಹಮಾನ್, ತಮ್ಮ ಬಾಲ್ಯದಿಂದಲೂ ಸಂಗೀತದತ್ತ ಆಕರ್ಷಿತರಾಗಿದ್ದರು ಮತ್ತು ಆದ್ದರಿಂದ, ಅವರು ನಾಲ್ಕನೇ ವಯಸ್ಸಿನಲ್ಲಿ ಪಿಯಾನೋವನ್ನು ಅಧ್ಯಯನ ಮಾಡಲು ಪ್ರಾರಂಭಿಸಿದರು ಮತ್ತು ಸ್ಟುಡಿಯೋದಲ್ಲಿ ತಮ್ಮ ತಂದೆಗೆ ಸಹಾಯ ಮಾಡಲು ಪ್ರಾರಂಭಿಸಿದರು. 

411

ಈ ಹಿರಿಯ ಸಂಗೀತ ಸಂಯೋಜಕ ತನ್ನ ತಂದೆಯನ್ನು ಕಳೆದುಕೊಂಡಾಗ ಕೇವಲ 9 ವರ್ಷ ವಯಸ್ಸಿನವನಾಗಿದ್ದರು.  ಅನಾರೋಗ್ಯದಿಂದ ಅವರ ತಂದೆಯ ಅಕಾಲಿಕ ಮರಣವು ಗಾಯಕನನ್ನು ಬಹಳ ದುಃಖಕ್ಕೆ ತಳ್ಳಿತು ಮತ್ತು ಅವರ ಕುಟುಂಬವೂ ಆರ್ಥಿಕ ಮುಗ್ಗಟ್ಟನ್ನು ಎದುರಿಸಬೇಕಾಯಿತು. ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದ ಎಆರ್ ರೆಹಮಾನ್ ತಮ್ಮ ಚಿಕ್ಕ ವಯಸ್ಸಿನಲ್ಲೇ ತಮ್ಮ ವಿದ್ಯಾಭ್ಯಾಸವನ್ನು ತೊರೆದು ಮನೆಯ ಜವಾಬ್ದಾರಿಯನ್ನು ಹೊತ್ತುಕೊಂಡರು.
 

511

ತಂದೆಯ ಸಾವಿನ ಬಳಿಕ ದಿಲೀಪ್‌ ಕುಮಾರ್‌ ಕುಟುಂಬ ಅಕ್ಷರಶಃ ನಲುಗಿ ಹೋಯಿತು.  ತೀರಾ ಚಿಕ್ಕವಯಸ್ಸಿನವರಾದ ದಿಲೀಪ್‌ ಕುಮಾರ್‌ ಅವರಿಗೆ ದೇವರ ಮೇಲೆಯೇ ನಂಬಿಕೆ ಹೊರಟುಹೋಯಿತಂತೆ. ತಮ್ಮ ತಂದೆಯ ಸಾವಿಗೆ ದೇವರೇ ಹೊಣೆ ಎಂದು ಅಂದುಕೊಂಡರು.  ಬಹಳ ಕಷ್ಟದ ದಿನಗಳನ್ನು ಕಳೆದರು.

611

ಮದ್ರಾಸ್‌ನಲ್ಲಿ ಓದುತ್ತಿರುವಾಗ, ಎಆರ್ ರೆಹಮಾನ್ ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದಲ್ಲಿ ಡಿಪ್ಲೊಮಾ ಪದವಿ ಪಡೆದರು ಮತ್ತು 1984 ರಲ್ಲಿ 23 ನೇ ವಯಸ್ಸಿನಲ್ಲಿ ಅವರ ತಂಗಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾಗ  ತಂಗಿಯನ್ನು ಬದುಕಿಸುವ ಪ್ರಯತ್ನದಲ್ಲಿ ಇರುವಾಗಲೇ ಅವರಿಗೆ ಸಿಕ್ಕಿದ್ದು ಓರ್ವ ಸೂಫಿ. ತಂಗಿ ಜೀವವನ್ನು ತಾವು ಉಳಿಸುವುದಾಗಿ ಸೂಫಿ ಪುಟ್ಟ ಬಾಲಕ ದಿಲೀಪ್‌ ಕುಮಾರನಿಗೆ  ಮಾತು  ಕೊಟ್ಟರು. ಅವರ ಬಗ್ಗೆ  ಪ್ರಭಾವಿತರಾದರು.
 

711

ಹೀಗಾಗಿ ಎಆರ್ ರೆಹಮಾನ್ 1989 ರಲ್ಲಿ ಅವರ ಕುಟುಂಬದ ಇತರ ಸದಸ್ಯರೊಂದಿಗೆ ಇಸ್ಲಾಂಗೆ ಮತಾಂತರಗೊಂಡರು. ತನ್ನ ಹೆಸರನ್ನು ಅಲ್ಲಾ ರಖ್ಬಾ ರೆಹಮಾನ್ ಎಂದು ಬದಲಾಯಿಸಿಕೊಂಡರು. ತಾಯಿ ಹೆಸರನ್ನು ಕಸ್ತೂರಿಯಿಂದ ಕರೀಂ ಬೇಗಂ ಎಂದು ಬದಲಾಯಿಸಿಕೊಂಡರು. ತಮ್ಮ ಸಹೋದರಿಯರಿಗೆ ಕೂಡ ಮುಸ್ಲಿಂ ಹೆಸರು ಆಧರಿಸಿ ಹೊಸ ನಾಮಕರಣ ಮಾಡಿದರು.  ಮುಂದೆ 1995ರಲ್ಲಿ ಮುಸ್ಲಿಂ ಯುವತಿ ಸಾಯಿರಾ ಭಾನು ಎಂಬಾಕೆಯನ್ನು ಮದುವೆಯಾಗಿ ಮೂವರು ಮಕ್ಕಳನ್ನು ಹೊಂದಿದ್ದಾರೆ. ಅವರಿಗೆ ಖತೀಜಾ, ರಹೀಮಾ ಮತ್ತು ಅಮೀನ್ ಎಂಬ ಹೆಸರಿಟ್ಟಿದ್ದು, ಸಂಗೀತದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 

811

 ಎಆರ್ ರೆಹಮಾನ್ ವೃತ್ತಿಪರವಾಗಿ ಪಿಯಾನೋ ನುಡಿಸುವ ಮೂಲಕ ಮನೆಯ ಖರ್ಚನ್ನು ನಿಭಾಯಿಸುತ್ತಿದ್ದರು. ಶಾಲೆಯನ್ನು ತೊರೆದ ಕೆಲವು ವರ್ಷಗಳ ನಂತರ, ಅವರು ಕಾಲೇಜಿನಲ್ಲಿ ಪ್ರವೇಶ ಪಡೆದರು, ಆದರೆ ನಂತರ ಅವರು ಸಂಗೀತ ವೃತ್ತಿಜೀವನವನ್ನು ಮುಂದುವರಿಸಲು ಕಾಲೇಜಿನಿಂದ ಹೊರಗುಳಿದರು. ಕಾಲೇಜಿನಿಂದ ಹೊರಗುಳಿದ ನಂತರ, ಅವರು ತಮ್ಮದೇ ಆದ ಬ್ಯಾಂಡ್ ಅನ್ನು ಹುಟ್ಟು ಹಾಕಿ  ತಂಡ ಕಟ್ಟಿದರು ಮತ್ತು ನಂತರ ಅನೇಕ ಜಾಹೀರಾತುಗಳಿಗೆ ಜಿಂಗಲ್ಸ್ ಬರೆದರು. ಮಾಧ್ಯಮ ವರದಿಗಳ ಪ್ರಕಾರ, ಎಆರ್ ರೆಹಮಾನ್ ಸುಮಾರು 300 ಜಾಹೀರಾತುಗಳಿಗೆ ಜಿಂಗಲ್ಸ್ ಬರೆದಿದ್ದಾರೆ. 

911

ಕ್ರಮೇಣ ಅವರ ಕೆಲಸವು ಮನ್ನಣೆ ಪಡೆಯಲಾರಂಭಿಸಿತು ಮತ್ತು ಅವರು ತಮಿಳು ಚಿತ್ರ 'ರೋಜಾ' ದಿಂದ ಚಲನಚಿತ್ರದಲ್ಲಿ ಹಿಟ್‌ ಆದರು. ಈ ಚಿತ್ರದಲ್ಲಿನ ಅವರ ಹಾಡುಗಳು ಪ್ರೇಕ್ಷಕರಿಗೆ ತುಂಬಾ ಇಷ್ಟವಾಯಿತು. ಒಮ್ಮೆ ಅವರು ಚಲನಚಿತ್ರಗಳಿಗೆ ಹಾಡುಗಳನ್ನು ಸಂಯೋಜಿಸಲು ಪ್ರಾರಂಭಿಸಿದಾಗ, ಎಆರ್ ರೆಹಮಾನ್ ಅವರ ವೃತ್ತಿಜೀವನವು ವೇಗವನ್ನು ಪಡೆಯಲಾರಂಭಿಸಿತು. 

1011

ಎಆರ್ ರೆಹಮಾನ್ ತಮ್ಮ ಅದ್ಭುತ ಸಂಗೀತಕ್ಕಾಗಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 2008ರಲ್ಲಿ ತೆರೆಕಂಡ 'ಸ್ಲಮ್‌ಡಾಗ್ ಮಿಲಿಯನೇರ್' ಚಿತ್ರದ ಹಾಡುಗಳಿಗಾಗಿ ಅವರು ಆಸ್ಕರ್ ಪ್ರಶಸ್ತಿ ಪಡೆದರು.  ಇಂದು ಎಆರ್ ರೆಹಮಾನ್ ಅವರ ನಿವ್ವಳ ಮೌಲ್ಯ 1748 ಕೋಟಿ ರೂ.  ಎರಡೆರಡು ಆಸ್ಕರ್ ಪ್ರಶಸ್ತಿ ಗೆದ್ದ ಖ್ಯಾತಿ ಇವರದ್ದು. 

1111

ಏಷ್ಯಾದಲ್ಲೇ ಆಸ್ಕರ್ ಗೆದ್ದ ಮೊದಲಿಗೆ ಎನ್ನುವ ಖ್ಯಾತಿ ಅವರಿಗೆ ಇದೆ. ಆರು ರಾಷ್ಟ್ರ ಪ್ರಶಸ್ತಿ, ಎರಡು ಅಕಾಡೆಮಿ ಮತ್ತು ಎರಡು ಗ್ರ್ಯಾಮಿ ಪ್ರಶಸ್ತಿ, 15 ಫಿಲ್ಮಪೇರ್ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಭಾರತ ಸರ್ಕಾರದಿಂದ ಪದ್ಮಭೂಷಣ ಪ್ರಶಸ್ತಿ ಪಡೆದಿರುವ ರೆಹಮಾನ್ ಭಾರತೀಯ ಚಿತ್ರರಂಗದ ಹಾಡುಗಳಿಗೆ ಅಂತರಾಷ್ಟ್ರೀಯ ಮನ್ನಣೆ ತಂದು ಕೊಟ್ಟ ಸಂಗೀತ ನಿರ್ದೇಶಕ 

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಸಂಗೀತ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved