MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • ಜೆಮಿನಿ ಗಣೇಶನ್ ಮೋಸ ಮಾಡಿದ್ದಲ್ಲ, ಸಾವಿತ್ರಿ ಮಾಡಿದ್ದೇ ತಪ್ಪು, ಇದೇ ಮಹಾನಟಿಯ ದುರಂತಕ್ಕೆ ಕಾರಣ

ಜೆಮಿನಿ ಗಣೇಶನ್ ಮೋಸ ಮಾಡಿದ್ದಲ್ಲ, ಸಾವಿತ್ರಿ ಮಾಡಿದ್ದೇ ತಪ್ಪು, ಇದೇ ಮಹಾನಟಿಯ ದುರಂತಕ್ಕೆ ಕಾರಣ

ಸಾವಿತ್ರಿ ತಪ್ಪು: ಮಹಾನಟಿ ಸಾವಿತ್ರಿ ಗಂಡನಿಂದ ಮೋಸ ಹೋದ್ರು. ಇದ್ರಿಂದ ಅವ್ರು ಖಿನ್ನತೆಗೆ ಒಳಗಾದ್ರು. ಈ ಸಂದರ್ಭದಲ್ಲಿ ಒಂದು ದೊಡ್ಡ ತಪ್ಪು ನಿರ್ಧಾರ ತಗೊಂಡ್ರು. ಅದೇ ಅವರ ಜೀವನವನ್ನೇ ಹಾಳು ಮಾಡ್ಬಿಡ್ತು. ಅದೇನಂದ್ರೆ?

2 Min read
Gowthami K
Published : Feb 10 2025, 05:46 PM IST| Updated : Feb 11 2025, 09:53 AM IST
Share this Photo Gallery
  • FB
  • TW
  • Linkdin
  • Whatsapp
15

ಮಹಾನಟಿ ಸಾವಿತ್ರಿ ಬಡ ಕುಟುಂಬದಿಂದ ಬಂದು ಸಿನಿಮಾಗೆ ಬಂದು ಬೇಗನೆ ಹೀರೋಯಿನ್ ಆಗಿ, ಸ್ಟಾರ್ ಹೀರೋಯಿನ್ ಆಗಿ ಹೆಸರು ಮಾಡಿದ್ರು. ಎಷ್ಟು ಬೇಗ ಬೆಳೆದ್ರೋ ಅಷ್ಟೇ ಬೇಗ ಬಿದ್ದು ಹೋದ್ರು. ಅವರ ಜೀವನ ದುರಂತ ಅಂತ್ಯ ಕಂಡಿತು. 47 ವಯಸ್ಸಿಗೆ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಕಾಣಿಸಿಕೊಂಡು 19 ತಿಂಗಳ ಕಾಲ ಕೋಮಾದಲ್ಲಿದ್ದು ಮೃತರಾದ್ರು, ಸಾವಿತ್ರಿ ಜೀವನ ಸಿನಿಮಾ ರಂಗದಲ್ಲಿರೋ ಎಷ್ಟೋ ಜನಕ್ಕೆ ಪಾಠ ಅಂತಾರೆ. ಸಾವಿತ್ರಿ ಮಾಡಿದ ತಪ್ಪೇನು?

25

ಸಾವಿತ್ರಿ,  ಜೆಮಿನಿ ಗಣೇಶನ್ ಜೊತೆ ಪ್ರೀತಿ ಮಾಡಿ, ಅವ್ರಿಗೆ ಮದುವೆ ಆಗಿದ್ರೂ, ಕೂಡ ಎರಡನೇ ಹೆಂಡತಿಯಾದ್ರು. ಬಳಿಕ ಗಂಡ  ಮೋಸ ಮಾಡಿದ್ರು ಅಂತ ಖಿನ್ನತೆಗೆ ಒಳಗಾದ್ರು. ಕುಡಿತದ ದಾಸರಾದ್ರು, ಇದಕ್ಕೆ ಇನ್ಕಮ್ ಟ್ಯಾಕ್ಸ್ ರೈಡ್ಸ್ ಇನ್ನೂ ಹೆಚ್ಚು ಚಿಂತೆ ಕಾರಣವಾಯ್ತು. ಸಾವಿತ್ರಿ ಆರ್ಥಿಕವಾಗಿ, ಮಾನಸಿಕವಾಗಿ ಡೌನ್ ಆದ್ರು. ಕುಡಿತಕ್ಕೆ ದಾಸರಾಗಿ ತಮ್ಮ ಜೀವನವನ್ನೇ ಹಾಳು ಮಾಡಿಕೊಂಡ್ರು. ಸೆಟ್‌ ನಲ್ಲಿದ್ದಾಲೇ ಕುಡಿಯುತ್ತಿದ್ದರು.

35

ಆದ್ರೆ ಸಾವಿತ್ರಿ ಕೆರಿಯರ್ ತಪ್ಪು ದಾರಿ ಹಿಡಿಯೋಕೆ ಇದೊಂದೇ  ಕಾರಣ ಅಲ್ಲ, ಅವ್ರು ಡೌನ್ ಆಗೋಕೆ, ಆರ್ಥಿಕವಾಗಿ, ಮಾನಸಿಕವಾಗಿ ಇನ್ನೂ ಕುಗ್ಗಿ ಹೋಗಿರುವುದಕ್ಕೆ ಇನ್ನೊಂದು ಕಾರಣ ಇದೆ. ಅದೇ ನಿರ್ದೇಶಕಿ ಆಗೋದು. ಅವ್ರ ಕೆರಿಯರ್ ಪೀಕ್ ನಲ್ಲಿ ಇದ್ದಾಗಲೇ ನಿರ್ದೇಶಕಿ ಆದ್ರು. ನಿರ್ಮಾಪಕಿ ಆಗಿ ತಿರುಗಿದ್ರು. ಜೆಮಿನಿ ಗಣೇಶನ್ ಗೆ ಗೊತ್ತಿಲ್ಲದೆ ನಿರ್ದೇಶನ ಮಾಡಿದ್ರು, ಸಿನಿಮಾ ನಿರ್ಮಿಸಿದ್ರು. ಅವ್ರು ಹೇಳಿದ್ರೂ ಕೇಳ್ದೆ ಸಿನಿಮಾ ಮಾಡಿ ಮುಗ್ಗರಿಸಿದ್ರು. ಇದ್ರಿಂದ ಇಬ್ಬರ ನಡುವೆ ಜಗಳ ಇನ್ನೂ ಹೆಚ್ಚಿತು.

45

ನಟಿಯಾಗಿ ಸ್ಟಾರ್ ಆಗಿ ಮಿಂಚಿದವರು ನಿರ್ದೇಶಕಿ, ನಿರ್ಮಾಪಕಿಯಾಗಿ ಕಷ್ಟ ಅನುಭವಿಸೋದು ಯಾವ ಕಲಾವಿದರಿಗೂ ಬೇಸರದ ವಿಷಯ. ಇತ್ತೀಚೆಗೆ ನಿರ್ದೇಶಕ, ನಟ ಹರ್ಷವರ್ಧನ್ ಈ ವಿಷಯ ಹೇಳಿದ್ದಾರೆ. ನಟನಾಗಿರೋದು ಸುಖ. ನಿರ್ದೇಶಕರಾಗಿ, ಸಿನಿಮಾ ಆಡದಿದ್ರೆ ಮಾನಸಿಕವಾಗಿ ಡೌನ್ ಆಗ್ತೀವಿ, ನೆಮ್ಮದಿ ಕಳೆದುಕೊಳ್ಳ್ತೀವಿ, ಖಿನ್ನತೆಗೆ ಒಳಗಾಗ್ತೀವಿ. ಸಾವಿತ್ರಿ ವಿಷಯದಲ್ಲೂ ಅದೇ ಆಯ್ತು ಅಂತ ಹೇಳಿದ್ದಾರೆ. ಗಂಡನ ವಿಷಯದಲ್ಲಿ, ಕುಟುಂಬದ ವಿಷಯದಲ್ಲಿ ಸಾವಿತ್ರಿ ಕಷ್ಟದಲ್ಲಿದ್ರು. ಇದಕ್ಕೆ ನಿರ್ದೇಶನ ಮಾಡಿ, ನಿರ್ಮಾಪಕಿಯಾಗಿ ಹಣ ಕಳೆದುಕೊಂಡ್ರು. ನಟಿಯಾಗಿ ಅವಕಾಶ ಕಳೆದುಕೊಂಡ್ರು. ಇದೆಲ್ಲ ಅವ್ರಿಗೆ ದೊಡ್ಡ ಹೊಡೆತ ಅಂತ ಹರ್ಷವರ್ಧನ್ ಹೇಳಿದ್ದಾರೆ. ಹೀಗೆ ಆಗದೆ ಒಳ್ಳೆ ಪಾತ್ರಗಳಿಗೆ ಪ್ರಾಮುಖ್ಯತೆ ಕೊಟ್ಟಿದ್ರೆ, ಅವರ ಕೆರಿಯರ್ ಬೇರೆ ಇರುತ್ತಿತ್ತು, ಇರೋವರೆಗೂ ರಾಣಿಯಂತೆ ಮಿಂಚುತ್ತಿದ್ರು ಅಂತ ನಟ ಹೇಳಿದ್ದಾರೆ. ಈಗ ಅವರ ಮಾತುಗಳು ವೈರಲ್ ಆಗ್ತಿವೆ.

55
ಸಾವಿತ್ರಿ

ಸಾವಿತ್ರಿ

ಸಾವಿತ್ರಿ ಮೂರು ದಶಕಗಳ ಕಾಲ ನಟಿಯಾಗಿದ್ರು. 250 ಕ್ಕೂ ಹೆಚ್ಚು ಸಿನಿಮಾ ಮಾಡಿದ್ರು. ನಿರ್ದೇಶಕಿ, ನಿರ್ಮಾಪಕಿಯಾಗಿ `ಪ್ರಾಪ್ತಂ`, `ಮಾತೃ ದೇವತ`, `ಚಿನ್ನಾರಿ ಪಾಪಲು`, `ಕುಳಂದೈ ಉಲ್ಲಂ`, `ವಿಂತ ಸಂಸಾರಂ` ಚಿತ್ರಗಳನ್ನ ನಿರ್ಮಿಸಿದ್ರು. ಇದರಲ್ಲಿ ಎಲ್ಲಾ ಸಿನಿಮಾಗಳು ಸೋತವು.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved