- Home
- Entertainment
- Cine World
- ಆಕ್ಷನ್ ಸಿನಿಮಾ ಬಿಟ್ಟು ರೋಮ್ಯಾಂಟಿಕ್ ಚಿತ್ರಕ್ಕೆ ಕೈ ಹಾಕಿದ ನಿರ್ದೇಶಕ ಲೋಕೇಶ್ ಕನಗರಾಜ್: ಹೀರೋ ಮಾತ್ರ ಇವರೇ?
ಆಕ್ಷನ್ ಸಿನಿಮಾ ಬಿಟ್ಟು ರೋಮ್ಯಾಂಟಿಕ್ ಚಿತ್ರಕ್ಕೆ ಕೈ ಹಾಕಿದ ನಿರ್ದೇಶಕ ಲೋಕೇಶ್ ಕನಗರಾಜ್: ಹೀರೋ ಮಾತ್ರ ಇವರೇ?
ಕೂಲಿ ಸಿನಿಮಾ ನಿರ್ದೇಶಕ ಲೋಕೇಶ್ ಕನಗರಾಜ್, ತಮ್ಮ ಖೈದಿ 2 ಸಿನಿಮಾ ನಂತರ, ಒಂದು ರೋಮ್ಯಾಂಟಿಕ್ ಕಥಾಹಂದರದ ಸಿನಿಮಾವನ್ನು ನಿರ್ದೇಶಿಸಲಿದ್ದಾರಂತೆ.

ಕಾಲಿವುಡ್ನಲ್ಲಿ ನಂಬರ್ 1 ನಿರ್ದೇಶಕರೆಂದೇ ಖ್ಯಾತರಾಗಿರುವ ಲೋಕೇಶ್ ಕನಗರಾಜ್, `ಮಾನಗರಂ`, `ಮಾಸ್ಟರ್`, `ಖೈದಿ`, `ವಿಕ್ರಮ್`, `ಲಿಯೋ` ಹೀಗೆ ಐದು ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಈಗ ಸೂಪರ್ಸ್ಟಾರ್ ರಜನಿಕಾಂತ್ ಜೊತೆ `ಕೂಲಿ` ಸಿನಿಮಾ ಮಾಡ್ತಿದ್ದಾರೆ. ಸನ್ ಪಿಕ್ಚರ್ಸ್ ನಿರ್ಮಾಣದಲ್ಲಿ, ಅನಿರುದ್ ಸಂಗೀತ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರ ಈ ವರ್ಷ ದೀಪಾವಳಿಗೆ ಬಿಡುಗಡೆಯಾಗಲಿದೆ.
`ಕೂಲಿ` ನಂತರ, ಕಾರ್ತಿ ನಟಿಸಲಿರುವ `ಖೈದಿ 2` ಚಿತ್ರಕ್ಕೆ ಲೋಕೇಶ್ ನಿರ್ದೇಶನ ಮಾಡಲಿದ್ದಾರೆ. ಡ್ರೀಮ್ ವಾರಿಯರ್ ಪಿಕ್ಚರ್ಸ್ ನಿರ್ಮಾಣದಲ್ಲಿ, ಮಲಯಾಳಂ ನಟಿ ರಜಿಷಾ ವಿಜಯನ್ ನಾಯಕಿಯಾಗಿ ನಟಿಸಲಿರುವ ಈ ಚಿತ್ರದ ಚಿತ್ರೀಕರಣ ಈ ವರ್ಷಾಂತ್ಯದಲ್ಲಿ ಆರಂಭವಾಗಲಿದೆ.
`ಖೈದಿ 2` ನಂತರ ಲೋಕೇಶ್ ಯಾವ ಸಿನಿಮಾ ಮಾಡ್ತಾರೆ ಅನ್ನೋದು ಸಸ್ಪೆನ್ಸ್ ಆಗಿದೆ. `ವಿಕ್ರಮ್ 2`, `ರೋಲೆಕ್ಸ್`,` ಇರುಂಬುಕೈ ಮಯಾವಿ` ಚಿತ್ರಗಳಿದ್ದರೂ, ಅವನ್ನೆಲ್ಲ ಬದಿಗಿಟ್ಟು ಬಾಲಿವುಡ್ನಲ್ಲಿ ಆಮೀರ್ ಖಾನ್ ಜೊತೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಆದರೆ, `ಖೈದಿ 2` ನಂತರ ಧನುಷ್ ಜೊತೆ ಒಂದು ರೋಮ್ಯಾಂಟಿಕ್ ಸಿನಿಮಾ ಮಾಡಲಿದ್ದಾರಂತೆ. ಆಕ್ಷನ್ ಸಿನಿಮಾ ನಿರ್ದೇಶಕರೆಂದೇ ಖ್ಯಾತರಾಗಿರುವ ಲೋಕೇಶ್, ಧನುಷ್ಗೆ ಒಂದು ಪ್ರೇಮಕಥೆ ಹೇಳಿ ಓಕೆ ಪಡೆದಿದ್ದಾರಂತೆ. ಇಬ್ಬರೂ ಬ್ಯುಸಿ ಇರುವುದರಿಂದ, ತಮ್ಮ ಕೆಲಸಗಳು ಮುಗಿದ ನಂತರ ಈ ಸಿನಿಮಾ ಶುರುಮಾಡಲಿದ್ದಾರೆ. ಇದರಲ್ಲಿ ಎಷ್ಟು ನಿಜ ಅನ್ನೋದು ತಿಳಿಯಬೇಕಿದೆ. ಆಕ್ಷನ್ ಸಿನಿಮಾಗಳಿಂದ ಧೂಳೆಬ್ಬಿಸುತ್ತಿರುವ ಲೋಕೇಶ್ರಿಂದ ರೋಮ್ಯಾಂಟಿಕ್ ಲವ್ ಸ್ಟೋರಿ ಅಂದ್ರೆ ಹೊಸತನವಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.