ಸಾಮಾನ್ಯರಂತೆ ಆಶ್ರಮದಲ್ಲಿದ್ದಾರೆ ಪವರ್ ಸ್ಟಾರ್; ಸಾಕ್ಷಿಗೆ ಸಿಕ್ತು ಈ ಫೋಟೋಗಳು!
ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಹೃಷಿಕೇಶದಲ್ಲಿರುವ ಗಂಗಾ ನದಿ ತಟದಲ್ಲಿರುವ ಹರಿದ್ವಾರ ಆಶ್ರಮದಲ್ಲಿ ತಂಗಿದ್ದಾರೆ. ಗಂಗಾ ನದಿ ತಟದಲ್ಲಿ ಓಡಾಡುತ್ತಾ ಪ್ರಕೃತಿಯನ್ನು ಆಸ್ವಾದಿಸುತ್ತಿದ್ದಾರೆ. ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಅಲ್ಲಿನ ಕೆಲವು ಫೋಟೋಗಳು ಇಲ್ಲಿವೆ ನೋಡಿ.
ಗಂಗಾ ನದಿ ತಟದಲ್ಲಿ ರಿಲ್ಯಾಕ್ಸ್ ಆಗಿ ಕುಳಿತಿರುವ ಪವನ್ ಕಲ್ಯಾಣ್
ತೆಲುಗು ಸೂಪರ್ ಸ್ಟಾರ್ ಪವನ್ ಕಲ್ಯಾಣ್ ನಿರ್ಮಾಪಕ, ನಿರ್ದೇಶಕ, ರಾಜಕಾರಣಿ.
1996 ರಲ್ಲಿ ‘ಅಕ್ಕಡ ಅಮ್ಮಯಿ ಇಕ್ಕಡ ಅಬ್ಬಾಯಿ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು.
ಗೋಕಲಂಲೋ ಸೀತಾ, ಸುಸ್ವಾಗತಂ, ಥೋಲಿ ಪ್ರೇಮ, ತಮ್ಮುಡು ಭದ್ರಿ, ಖುಷಿ, ಜಲ್ಸಾ ಇವರ ಸೂಪರ್ ಹಿಟ್ ಸಿನಿಮಾಗಳು.
‘ಗಬ್ಬರ್ ಸಿಂಗ್’ ಸಿನಿಮಾಗೆ ಬೆಸ್ಟ್ ಆ್ಯಕ್ಟರ್ ಫಿಲ್ಮ್ ಫೇರ್ ಆವಾರ್ಡ್ ಪಡೆದಿದ್ದಾರೆ.
‘ಅತ್ತರಿಂಟಿಕಿ ದರೇದಿ’ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಚಿತ್ರ.
ಸಿಎಂಪಿಎಫ್ ಎನ್ನುವ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿದ್ದಾರೆ.
ಮೆಗಾಸ್ಟಾರ್ ಚಿರಂಜೀವಿ ಇವರ ಸಹೋದರ.
ಮೊಬೈಲ್ ಹಿಡಿದುಕೊಂಡು ರಿಲ್ಯಾಕ್ಸ್ ಮೋಡ್ ನಲ್ಲಿ ಪವನ್ ಕಲ್ಯಾಣ್.