MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಮೋದಿ ಟೀಕಿಸೋ ಕಿಶೋರ್ ಸೇರಿ ಈ ನಟರು ಕೃಷಿಯಲ್ಲೂ ಎತ್ತಿದ ಕೈ, ಉಳುವಾ ನಟರ ನೋಡಿಲ್ಲಿ!

ಮೋದಿ ಟೀಕಿಸೋ ಕಿಶೋರ್ ಸೇರಿ ಈ ನಟರು ಕೃಷಿಯಲ್ಲೂ ಎತ್ತಿದ ಕೈ, ಉಳುವಾ ನಟರ ನೋಡಿಲ್ಲಿ!

ಜನಪ್ರಿಯ ಸೆಲೆಬ್ರಿಟಿಗಳು ಕೇವಲ ನಟನೆಯನ್ನೆ ತಮ್ಮ ಉದ್ಯೋಗ ಮಾಡಿಕೊಂಡಿದ್ದಾರೆ, ಅವರಿಗೆ ಅದು ಬಿಟ್ಟು ಬೇರೇನೂ ಗೊತ್ತಿಲ್ಲ ಎಂದು ನೀವು ಅಂದ್ಕೊಂಡ್ರೆ ಅದು ಸುಳ್ಳು. ಯಾಕಂದ್ರೆ ಭಾರತದ ಕೆಲವು ಜನಪ್ರಿಯ ನಟರು ರೈತರು ಕೂಡ ಹೌದು.  

2 Min read
Author : Pavna Das
Published : May 09 2024, 07:19 PM IST
Share this Photo Gallery
  • FB
  • TW
  • Linkdin
  • Whatsapp
18

ಭಾರತದ ಬೆನ್ನೆಲುಬು ಅಂದ್ರೆ ರೈತರು (farmers). ಅವರನ್ನು ನಮ್ಮ ಹೀರೋಗಳು ಅಂತಾನೆ ಹೇಳಬಹುದು. ಯಾಕಂದ್ರೆ ಅವರು ಬೆಳೆಯದೇ ಇದ್ರೆ ನಾವು ಹೊಟ್ಟೆ ತುಂಬ ತಿನ್ನೋದಕ್ಕೆ ಸಾಧ್ಯವೇ ಇಲ್ಲ.  ಆದರೆ ನಾವು ಹೀರೋ ಅಂದುಕೊಂಡಿರೋದು ಸಿನಿಮಾ ತಾರೆಯರನ್ನು. ಆದರೆ ನಿಮಗೊಂದು ವಿಷ್ಯ ಗೊತ್ತಾ? ಭಾರತದ ಕೆಲವು ಜನಪ್ರಿಯ ಸಿನಿಮಾ ತಾರೆಯರು ರೈತ ಕುಟುಂಬದಿಂದ ಬಂದವರೂ ಇದ್ದಾರೆ, ಇನ್ನೂ ಕೆಲವರು ತಮ್ಮ ಬಿಡುವಿನ ಸಮಯದಲ್ಲಿ ಹೊಲ ಗದ್ದೆ, ತೋಟಗಳಲ್ಲಿ ದುಡಿಯುವ ಮೂಲಕ ಕಳೆದು ಹೋಗುತ್ತಾರೆ. ಅಂತಹ ನಟರು ಯಾರ್ಯಾರಿದ್ದಾರೆ ನೋಡೋಣ. 
 

28

ಕಿಶೋರ್  (Kishore)
ಕನ್ನಡ, ತಮಿಳು ಸಿನಿಮಾಗಳಲ್ಲಿ ಮಿಂಚುತ್ತಿರುವ ಕಿಶೋರ್ ಸಹ ಬೆಂಗಳೂರಿನ ಹೊರವಲಯದಲ್ಲಿ 12 ಎಕರೆ ಜಮೀನು ಖರೀದಿಸಿ, ಅಲ್ಲಿ ಆರ್ಗಾನಿಕ್ ಫಾರ್ಮಿಂಗ್ ಮಾಡುತ್ತಿದ್ದಾರೆ. ಅಲ್ಲಿಯೇ ಒಂದು ಪುಟ್ಟ ಮನೆಯನ್ನು ಮಾಡಿದ್ದು, ತಮ್ಮ ಪತ್ನಿ ಮತ್ತು ಮಕ್ಕಳ ಜೊತೆ ನಟ ಹೆಚ್ಚಾಗಿ ಇಲ್ಲಿ ಕೆಲಸ ಮಾಡುತ್ತಿರುತ್ತಾರೆ. 

38

ಆರ್. ಮಾಧವನ್ (R Madhavan)
ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ನಟ ಆರ್ ಮಾಧವನ್ ತಮಿಳುನಾಡಿನಲ್ಲಿನ ಒಂದು ಬಂಜರು ಭೂಮಿಯಲ್ಲಿ ತೆಂಗಿನ ಮರಗಳನ್ನು ಬೆಳೆದರು. ಅಷ್ಟೇ ಅಲ್ಲ, ತಮ್ಮ ಸಹೋದರನ ಜೊತೆ ಸೇರಿ ಹಸಿರು ಸಿರಿ, ಮತ್ತು ಪಕ್ಷಿ ಸ್ನೇಹಿ ಪರಿಸರವನ್ನು ನಿರ್ಮಿಸಿದ್ದರು. 

48

ಪಂಕಜ್ ತ್ರಿಪಾಟಿ (Pankaj Tripathi)
ಸಿನಿಮಾಕ್ಕೆ ಬರೋದಕ್ಕೂ ಮುನ್ನ ನಟ ಪಂಕಜ್ ತ್ರಿಪಾಟಿ ರೈತನಾಗಿ ಕೆಲಸ ಮಾಡುತ್ತಿದ್ದರು. ಬಿಹಾರದಲ್ಲಿ ತ್ರಿಪಾಟಿ ಹೊಲ ಗದ್ದೆ ಹೊಂದಿದ್ದಾರೆ, ಅಲ್ಲದೇ ಇದೀಗ ಮುಂಬೈನಲ್ಲೂ ಜಾಗ ತೆಗೆದುಕೊಂಡಿದ್ದು, ಅಲ್ಲಿ ಅವರು ಮಾವಿನಹಣ್ಣು,  ಹಲಸಿನಹಣ್ಣು, ಸಪೋಟ, ಪಪ್ಪಾಯಿ, ಅರಶಿನ, ಲಿಂಬೆಹಣ್ಣು, ಕರಿಮೆಣಸುಗಳನ್ನು ಬೆಳೆಯುತ್ತಾರೆ. 
 

58

ನವಾಜುದ್ದೀನ್ ಸಿದ್ಧೀಕ್ (Nawazuddin Siddiqui )
ಪ್ರತಿಭಾನ್ವಿತ ನಟ ನವಾಜುದ್ದೀನ್ ಸಿದ್ದೀಕ್ ರೈತರ ಕುಟುಂಬದಿಂದ ಬಂದವರು. ಇವರ ಅಜ್ಜನ ಕಾಲದಿಂದಲೂ ಹೊಲದಲ್ಲಿಯೇ ದುಡಿದಿದ್ದರು. ಯಾವಾಗೆಲ್ಲಾ ನವಾಜುದ್ದೀನ್ ತಮ್ಮ ಗ್ರಾಮವಾದ ಉತ್ತರಪ್ರದೇಶದ ಬುಧಾನಕ್ಕೆ ಭೇಟಿ ಕೋಡ್ತಾರೋ, ಅವಾಗ ಮಿಸ್ ಮಾಡದೇ ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಾರೆ. 

68

ಸಲ್ಮಾನ್ ಖಾನ್ (Salman Khan)
ಬಾಲಿವುಡ್ ನ ಜನಪ್ರಿಯ ನಟ ಸಲ್ಮಾನ್ ಖಾನ್ ಪನ್ವೇಲ್ ನಲ್ಲಿ ದೊಡ್ಡದಾದ ಫಾರ್ಮ್ ಹೌಸ್ ಹೊಂದಿದ್ದಾರೆ. ಅಲ್ಲಿ ಅವರು ಹೆಚ್ಚಾಗಿ ಹೊಲ ಗದ್ದೆಗಳಲ್ಲಿ ಕೆಲಸ ಮಾಡುವ ಮೂಲಕ ಪ್ರಕೃತಿಯ ಜೊತೆ ಕಳೆದು ಹೋಗುತ್ತಾರೆ ಅಥವಾ ಅಲ್ಲಿ ಕುದುರೆಗಳೊಂದಿಗೆ ಸಮಯ ಕಳೆಯುತ್ತಾರೆ. 

78

ಧರ್ಮೇಂದ್ರ (Dharmendra)
ಬಾಲಿವುಡ್ ನ ಹಿರಿಯ ನಟ ಧರ್ಮೇಂದ್ರ ರೈತನ ಮಗ. ಅದೆಷ್ಟೇ ದೊಡ್ಡ ನಟನಾದರೂ ಇಂದಿಗೂ ಅವರು ಅದನ್ನ ಮರೆತಿಲ್ಲ. ಹಾಗಾಗಿಯೇ ಧರ್ಮೇಂದ್ರ ಹೆಚ್ಚಿನ ಸಮಯವನ್ನು ತಮ್ಮ ಫಾರ್ಮ್ ಹೌಸ್ ನಲ್ಲಿಯೇ ಕಳೆಯುತ್ತಾರೆ. ಅದರಲ್ಲೂ ಆರ್ಗಾನಿಕ್ ಫಾರ್ಮಿಂಗ್ ಕಡೆಗೆ ಹೆಚ್ಚು ಮಹತ್ವ ನೀಡುತ್ತಾರೆ. 

88

ಪ್ರಕಾಶ್ ರೈ (Prakash Rai)
ಲೈಫ್ ಆಫ್ ಪ್ರಕಾಶಂ ಎನ್ನುವ ಸಾವಯವ ಕೃಷಿ ಮಾಡುವ ಜಾಗವನ್ನು ಪ್ರಕಾಶ್ ರೈ ನಡೆಸುತ್ತಿದ್ದಾರೆ. ಇದು ಹೈದರಾಬಾದ್ ನ ಸಂಶದಾಬಾದ್ ನಲ್ಲಿದೆ. ಇಲ್ಲಿ ಬೆಳೆಯುವ ಪ್ರತಿಯೊಂದು ಬೆಳೆಯು ಕೆಮಿಕಲ್ ಫ್ರೀ ಆಗಿದೆ. ಪ್ರಕೃತಿ ಜೊತೆ ಬೆರೆಯಲು ಇಷ್ಟಪಡುವವರು ಇಲ್ಲಿ ಬರಬಹುದು. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಸೆಲೆಬ್ರಿಟಿಗಳು
ರೈತರು

Latest Videos
Recommended Stories
Recommended image1
ದಳಪತಿ ವಿಜಯ್ ದಾಂಪತ್ಯ ಅಂತ್ಯಕ್ಕೆ ತ್ರಿಷಾ ಕಾರಣನಾ? ಹೊಸ ಜಯಲಲಿತಾ ಆಗ್ತಾರಾ ನಟಿ ತ್ರಿಷಾ? ನಿಗೂಢ ಪೋಸ್ಟ್​ ಬಗ್ಗೆ ಬಿಸಿ ಬಿಸಿ ಚರ್ಚೆ!
Recommended image2
ಕೋರ್ಟ್ ಸಮಯ ಹಾಳು ಮಾಡುತ್ತಿರೋ ಡಿ ಗ್ಯಾಂಗ್; ದಾಸನ ಬೇಡಿಕೆಗೆ SPP ಗುನ್ನ, ಮುಗಿಯಲ್ಲ ಗ್ರಹಣ..!
Recommended image3
ಪತಿ ರಾಹುಲ್ ಜೊತೆ ಕುಕ್ಕೆ ದೇವಸ್ಥಾನಕ್ಕೆ ಬಂದು, ಊಟ ಮಾಡಿ ಮಣ್ಣಿನ ನಂಟಿದೆ ಎಂದ ಆತಿಯಾ ಶೆಟ್ಟಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved