'ನನ್ನ ಮೇಲಿನ ಚಿತ್ರಹಿಂಸೆಗೆ ಯಾರು ಉತ್ತರ ಕೊಡ್ತಾರೆ' ಜೈ ಹಿಂದ್ ಎಂದ ಕಂಗನಾ!
ಮುಂಬೈ(ಜ. 08) ಮುಂಬೈ ಸರ್ಕಾರವನ್ನೇ ಎದುರು ಹಾಕಿಕೊಂಡಿರುವ ನಟಿ ಕಂಗನಾ ರಣಾವತ್ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ದೇಶದ ಒಳಿತಿನ ಬಗ್ಗೆ ಮಾತನಾಡಿದರೆ ನನ್ನ ಮೇಲೆ ಯಾಕೆ ಇಲ್ಲ ಸಲ್ಲದ ಪ್ರಕರಣ ದಾಖಲು ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.
Why am I being mentally, emotionally and now physically tortured? I need answers from this nation.... I stood for you it’s time you stand for me ...Jai Hind 🙏 pic.twitter.com/qqpojZWfCx
— Kangana Ranaut (@KanganaTeam) January 8, 2021
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಸಂದೇಶದ ಮೂಲಕ ಕಂಗನಾ ಅಭಿಮಾನಿಗಳ ಎದುರು ಬಂದಿದ್ದಾರೆ.
ನನ್ನ ಮೇಲೆ ನನ್ನ ಕುಟುಂಬದ ಮೇಲೆ ನಿರಂತರ ಹಿಂಸೆ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಕೊರೋನಾ ಸಂದರ್ಭ ವೈದ್ಯರ ಪರವಾಗಿ ಮಾತನಾಡಿದರೆ ತಪ್ಪೆ ? ಎಂದು ಕೇಳಿದ್ದಾರೆ.
ಮಾನಸಿಕವಾಗಿ, ಭಾವನಾತ್ಮಕವಾಗಿ ಮತ್ತು ಈಗ ದೈಹಿಕವಾಗಿ ಹಿಂಸೆಗೆ ಒಳಗಾಗುತ್ತಿದ್ದೇನೆ? ನನಗೆ ಈ ರಾಷ್ಟ್ರದಿಂದ ಉತ್ತರಗಳು ಬೇಕು.. ಜೈ ಹಿಂದ್ ಎನ್ನುತ್ತ ಸಂದೇಶ ಕೊನೆ ಮಾಡಿದ್ದಾರೆ.
ಸಹೋದರಿ ರಂಗೋಲಿ ಕರೋನಾ ಆರಂಭದಲ್ಲಿ ಮಾತನಾಡಿದ್ದರು. ಆ ವೇಳೆ ನಾನು ಟ್ವಿಟರ್ ನಲ್ಲಿಯೇ ಇರಲಿಲ್ಲ. ಆದರೂ ನನ್ನ ಹೆಸರನ್ನು ಸೇರಿಸಲಾಯುತು ಎಂದು ಹೇಳಿದ್ದಾರೆ.
ದೇಶದ ಜನರು ತಮ್ಮ ಪರವಾಗಿ, ನ್ಯಾಯದ ಪರವಾಗಿ ದನಿ ಎತ್ತಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.