ಜಾತಕದಲ್ಲಿ ಸಮಸ್ಯೆ - ಆಲಿಯಾ ರಣಬೀರ್ ಮದುವೆಗೆ ಮತ್ತೊಂದು ಕಂಟಕ!
ಬಾಲಿವುಡ್ನ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಬಹಳ ಸಮಯದಿಂದ ರಿಲೇಷನ್ಶಿಪ್ನಲ್ಲಿದ್ದಾರೆ. ಇಬ್ಬರ ಮದುವೆ ಬಗ್ಗೆ ಆಗಾಗ್ಗೆ ವರದಿಗಳು ಬರುತ್ತವೆ. ಕೆಲವು ದಿನಗಳ ಹಿಂದೆ ಆಲಿಯಾ ಮತ್ತು ರಣಬೀರ್ ಈ ವರ್ಷದ ಕೊನೆಯ ವೇಳೆಗೆ ವಿವಾಹವಾಗಲಿದ್ದಾರೆ ಎಂದು ರೂಮರ್ ಇತ್ತು. ಆದರೆ ಈ ಮದುವೆ ಯಾವಾಗ ನಡೆಯುತ್ತದೆ ಎಂದು ಸಮಯವೇ ಹೇಳಬೇಕು. ಏಕೆಂದರೆ ಕೆಲವು ತಿಂಗಳ ಹಿಂದೆ ಜ್ಯೋತಿಷಿಯೊಬ್ಬರು ಅಲಿಯಾ ಜಾತಕವನ್ನು ನೋಡಿ ಈ ಮದುವೆಗೆ ಆಗುವ ಅಡೆತಡೆಗಳ ಬಗ್ಗೆ ಹೇಳಿದ್ದರಂತೆ. ಅದಕ್ಕೆ ಸರಿಯಾಗಿ ರಣಬೀರ್ ತಂದೆ ರಿಷಿ ಕಪೂರ್ ಅಸುನೀಗಿದ್ದೂ ಜ್ಯೋತಿಷಿ ಸಲಹೆಗೆ ಇಂಬು ಕೊಟ್ಟಂತೆ ಆಗಿದೆ.

<p>ಅಲಿಯಾ ಮತ್ತು ರಣಬೀರ್ರ ಜಾತಕದ ಪ್ರಕಾರ ಈ ಜೋಡಿ 2019ರ ಅಕ್ಟೋಬರ್ ನಿಂದ 2020ರ ಅಂತ್ಯದೊಳಗೆ ಹಸೆಮಣೆ ಏರುತ್ತಾರೆ ಎಂದು ಎಂದು ಜ್ಯೋತಿಷಿ ಆಚಾರ್ಯ ವಿನೋದ್ ಕುಮಾರ್ ಹೇಳುತ್ತಾರೆ. </p>
ಅಲಿಯಾ ಮತ್ತು ರಣಬೀರ್ರ ಜಾತಕದ ಪ್ರಕಾರ ಈ ಜೋಡಿ 2019ರ ಅಕ್ಟೋಬರ್ ನಿಂದ 2020ರ ಅಂತ್ಯದೊಳಗೆ ಹಸೆಮಣೆ ಏರುತ್ತಾರೆ ಎಂದು ಎಂದು ಜ್ಯೋತಿಷಿ ಆಚಾರ್ಯ ವಿನೋದ್ ಕುಮಾರ್ ಹೇಳುತ್ತಾರೆ.
<p>ಶುಕ್ರ ಗ್ರಹ ಪ್ರೀತಿ ಮತ್ತು ಪ್ರಣಯದಡೆಗೆ ತೋರಿಸುತ್ತಿದೆ ಹಾಗೂ ಎರಡೂ ಜಾತಕಗಳಲ್ಲಿನ ನಕ್ಷತ್ರಗಳು ಅತ್ಯಂತ ಸಕಾರಾತ್ಮಕವಾಗಿವೆ. ಆದಾಗ್ಯೂ, ಆಲಿಯಾ ಭಟ್ ಅವರ ಜಾತಕವು ಸಮಸ್ಯೆಯನ್ನು ಸೂಚಿಸುತ್ತದೆ, ಇದು ಕೆಲವು ಗೊಂದಲ ಅಥವಾ ತಪ್ಪು ತಿಳುವಳಿಕೆಗೆ ಕಾರಣವಾಗಬಹುದು. ಈ ಕಾರಣದಿಂದಾಗಿ, ಮದುವೆ ವಿಳಂಬವಾಗಬಹುದು. </p>
ಶುಕ್ರ ಗ್ರಹ ಪ್ರೀತಿ ಮತ್ತು ಪ್ರಣಯದಡೆಗೆ ತೋರಿಸುತ್ತಿದೆ ಹಾಗೂ ಎರಡೂ ಜಾತಕಗಳಲ್ಲಿನ ನಕ್ಷತ್ರಗಳು ಅತ್ಯಂತ ಸಕಾರಾತ್ಮಕವಾಗಿವೆ. ಆದಾಗ್ಯೂ, ಆಲಿಯಾ ಭಟ್ ಅವರ ಜಾತಕವು ಸಮಸ್ಯೆಯನ್ನು ಸೂಚಿಸುತ್ತದೆ, ಇದು ಕೆಲವು ಗೊಂದಲ ಅಥವಾ ತಪ್ಪು ತಿಳುವಳಿಕೆಗೆ ಕಾರಣವಾಗಬಹುದು. ಈ ಕಾರಣದಿಂದಾಗಿ, ಮದುವೆ ವಿಳಂಬವಾಗಬಹುದು.
<p>ಎರಡೂ ಕುಟುಂಬಗಳು ಅವರ ಜ್ಯೋತಿಷಿಗಳ ಜೊತೆ ಮಾತಾಡಿ ಈ ಸಮಸ್ಯೆಗೆ ಪರಿಹಾರ ಹುಡುಕುವ ಕೆಲಸ ಮಾಡುತ್ತವೆ ಎಂದು ನನಗೆ ಖಾತ್ರಿಯಿದೆ. ಈ ಜೋಡಿಗಳು ಈ ಸಮಸ್ಯೆಯನ್ನು ಪರಿಹರಿಸಿದರೆ ಅದು ಅವರ ವೃತ್ತಿಜೀವನದ ಬೆಳವಣಿಗೆಯಲ್ಲಿ ಬಹಳ ಸಕಾರಾತ್ಮಕ ಸಂಗತಿ ಎಂದು ಸಾಬೀತುಪಡಿಸುತ್ತದೆ. ಅಲ್ಲದೆ, ಮುಂದಿನ ವರ್ಷಗಳಲ್ಲಿ ಪ್ರಗತಿಯನ್ನು ಸಾಗಿಸಿ ಮುಂದುವರಿಯುತ್ತಾರೆ - ಆಚಾರ್ಯ ವಿನೋದ್ ಕುಮಾರ್. </p>
ಎರಡೂ ಕುಟುಂಬಗಳು ಅವರ ಜ್ಯೋತಿಷಿಗಳ ಜೊತೆ ಮಾತಾಡಿ ಈ ಸಮಸ್ಯೆಗೆ ಪರಿಹಾರ ಹುಡುಕುವ ಕೆಲಸ ಮಾಡುತ್ತವೆ ಎಂದು ನನಗೆ ಖಾತ್ರಿಯಿದೆ. ಈ ಜೋಡಿಗಳು ಈ ಸಮಸ್ಯೆಯನ್ನು ಪರಿಹರಿಸಿದರೆ ಅದು ಅವರ ವೃತ್ತಿಜೀವನದ ಬೆಳವಣಿಗೆಯಲ್ಲಿ ಬಹಳ ಸಕಾರಾತ್ಮಕ ಸಂಗತಿ ಎಂದು ಸಾಬೀತುಪಡಿಸುತ್ತದೆ. ಅಲ್ಲದೆ, ಮುಂದಿನ ವರ್ಷಗಳಲ್ಲಿ ಪ್ರಗತಿಯನ್ನು ಸಾಗಿಸಿ ಮುಂದುವರಿಯುತ್ತಾರೆ - ಆಚಾರ್ಯ ವಿನೋದ್ ಕುಮಾರ್.
<p>ಈ ಮೊದಲು ರಣಬೀರ್ ಮತ್ತು ಆಲಿಯಾ ಇಬ್ಬರೂ ಅನೇಕ ಬ್ರೇಕ್ಅಪ್ಗಳನ್ನು ಹೊಂದಿದ್ದಾರೆಂದು ತಿಳಿದೇ ಇದೆ. ಇಬ್ಬರೂ ಪರಸ್ಪರ ಅರ್ಥಮಾಡಿಕೊಳ್ಳಲು ಸಾಕಷ್ಟು ಸಮಯವನ್ನು ನೀಡುತ್ತಿದ್ದು, ಮದುವೆ ವಿಳಂಬಕ್ಕೆ ಒಂದು ಕಾರಣವೂ ಆಗಿರಬಹುದು.</p>
ಈ ಮೊದಲು ರಣಬೀರ್ ಮತ್ತು ಆಲಿಯಾ ಇಬ್ಬರೂ ಅನೇಕ ಬ್ರೇಕ್ಅಪ್ಗಳನ್ನು ಹೊಂದಿದ್ದಾರೆಂದು ತಿಳಿದೇ ಇದೆ. ಇಬ್ಬರೂ ಪರಸ್ಪರ ಅರ್ಥಮಾಡಿಕೊಳ್ಳಲು ಸಾಕಷ್ಟು ಸಮಯವನ್ನು ನೀಡುತ್ತಿದ್ದು, ಮದುವೆ ವಿಳಂಬಕ್ಕೆ ಒಂದು ಕಾರಣವೂ ಆಗಿರಬಹುದು.
<p>ಕೆಲವು ದಿನಗಳ ಹಿಂದೆ ಈ ಜೋಡಿ ಡಿಸೆಂಬರ್ನಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್ ಮಾಡಿಕೊಳ್ಳಲಿದೆ ಎಂಬ ಸುದ್ದಿ ಹರಿದಾಡಿತ್ತು.</p>
ಕೆಲವು ದಿನಗಳ ಹಿಂದೆ ಈ ಜೋಡಿ ಡಿಸೆಂಬರ್ನಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್ ಮಾಡಿಕೊಳ್ಳಲಿದೆ ಎಂಬ ಸುದ್ದಿ ಹರಿದಾಡಿತ್ತು.
<p>ಅವರು ಡಿಸೆಂಬರ್ನಲ್ಲೇ ವಿವಾಹವಾಗಲಿದ್ದಾರೆ, ಆದರೆ ಮುಂಬೈನಲ್ಲಿಯೇ ಎಂದು ಈಗ ಇತ್ತೀಚಿನ ವರದಿಗಳು ಹೇಳುತ್ತೀವೆ.</p>
ಅವರು ಡಿಸೆಂಬರ್ನಲ್ಲೇ ವಿವಾಹವಾಗಲಿದ್ದಾರೆ, ಆದರೆ ಮುಂಬೈನಲ್ಲಿಯೇ ಎಂದು ಈಗ ಇತ್ತೀಚಿನ ವರದಿಗಳು ಹೇಳುತ್ತೀವೆ.
<p>ವರದಿಗಳ ಪ್ರಕಾರ, ವಿವಾಹದ ಕಾರ್ಯಗಳು ಡಿಸೆಂಬರ್ 21ರಿಂದ ಪ್ರಾರಂಭವಾಗಲಿದ್ದು, ಮುಂದಿನ 4 ದಿನಗಳವರೆಗೆ ನೆಡೆಯುತ್ತದೆ. ಈ ವರ್ಷದ ಕೊನೆಯಲ್ಲಿ 'ಬ್ರಹ್ಮಾಸ್ತ್ರ' ಸಿನಿಮಾ ಬಿಡುಗಡೆಯಾದ ನಂತರ ಇಬ್ಬರೂ ಮದುವೆಯಾಗಲಿದ್ದಾರಂತೆ .</p>
ವರದಿಗಳ ಪ್ರಕಾರ, ವಿವಾಹದ ಕಾರ್ಯಗಳು ಡಿಸೆಂಬರ್ 21ರಿಂದ ಪ್ರಾರಂಭವಾಗಲಿದ್ದು, ಮುಂದಿನ 4 ದಿನಗಳವರೆಗೆ ನೆಡೆಯುತ್ತದೆ. ಈ ವರ್ಷದ ಕೊನೆಯಲ್ಲಿ 'ಬ್ರಹ್ಮಾಸ್ತ್ರ' ಸಿನಿಮಾ ಬಿಡುಗಡೆಯಾದ ನಂತರ ಇಬ್ಬರೂ ಮದುವೆಯಾಗಲಿದ್ದಾರಂತೆ .
<p>ಮೇ 2018ರಲ್ಲಿ ಸೋನಮ್ ಕಪೂರ್ ಅವರ ಮದುವೆಗೆ ಒಟ್ಟಿಗೆ ತಲುಪಿದ ನಂತರದಿಂದ ಆಲಿಯಾ-ರಣಬೀರ್ ಅಫೇರ್ ಸುದ್ದಿ ಅಫಿಶಿಯಲ್ ಆಗಿ ಬೆಳಕಿಗೆ ಬಂತು.</p>
ಮೇ 2018ರಲ್ಲಿ ಸೋನಮ್ ಕಪೂರ್ ಅವರ ಮದುವೆಗೆ ಒಟ್ಟಿಗೆ ತಲುಪಿದ ನಂತರದಿಂದ ಆಲಿಯಾ-ರಣಬೀರ್ ಅಫೇರ್ ಸುದ್ದಿ ಅಫಿಶಿಯಲ್ ಆಗಿ ಬೆಳಕಿಗೆ ಬಂತು.
<p>ರಣಬೀರ್ ಮತ್ತು ಆಲಿಯಾ ಮೊದಲ ಬಾರಿಗೆ 'ಬ್ರಹ್ಮಾಸ್ತ್ರ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ಅಯಾನ್ ಮುಖರ್ಜಿ ಅವರ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ನಾಗಾರ್ಜುನ, ಮೌನಿ ರಾಯ್ ಮತ್ತು ಡಿಂಪಲ್ ಕಪಾಡಿಯಾ ನಟಿಸಿದ್ದಾರೆ.</p>
ರಣಬೀರ್ ಮತ್ತು ಆಲಿಯಾ ಮೊದಲ ಬಾರಿಗೆ 'ಬ್ರಹ್ಮಾಸ್ತ್ರ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ಅಯಾನ್ ಮುಖರ್ಜಿ ಅವರ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ನಾಗಾರ್ಜುನ, ಮೌನಿ ರಾಯ್ ಮತ್ತು ಡಿಂಪಲ್ ಕಪಾಡಿಯಾ ನಟಿಸಿದ್ದಾರೆ.