MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • ಐಶ್ವರ್ಯ ಜೊತೆ ನಿಜಕ್ಕೂ ನಡೆದಿತ್ತಾ ಜಗಳ? ಬ್ರೇಕ್ಅಪ್ ರೂಮರ್ ಕುರಿತು ಅಭಿಷೇಕ್ ಪ್ರತಿಕ್ರಿಯೆ

ಐಶ್ವರ್ಯ ಜೊತೆ ನಿಜಕ್ಕೂ ನಡೆದಿತ್ತಾ ಜಗಳ? ಬ್ರೇಕ್ಅಪ್ ರೂಮರ್ ಕುರಿತು ಅಭಿಷೇಕ್ ಪ್ರತಿಕ್ರಿಯೆ

ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಬಚ್ಚನ್ ನಡುವೆ ಎಲ್ಲವೂ ಸರಿ ಇಲ್ಲ, ಬ್ರೇಕ್ ಅಪ್ ಅನ್ನೋ ಮಾಹಿತಿಗಳು ಹಲವು ಬಾರಿ ಭಾರಿ ಕೋಲಾಹಲ ಸೃಷ್ಟಿಸಿದೆ. ಇದಕ್ಕೆ ಪೂರಕ ಎಂಬಂತೆ ಹಲವು ಘಟನೆಗಳು ನಡೆದಿತ್ತು. ಇದೇ ಮೊದಲ ಬಾರಿಗೆ ಬ್ರೇಕ್ಅಪ್ ರೂಮರ್ ಕುರಿತು ಅಭಿಷೇಕ್ ಬಚ್ಚನ್ ಪ್ರತಿಕ್ರಿಯಿಸಿದ್ದಾರೆ.

2 Min read
Chethan Kumar
Published : Jun 29 2025, 10:26 PM IST
Share this Photo Gallery
  • FB
  • TW
  • Linkdin
  • Whatsapp
15
Image Credit : Instagram

ಬಾಲಿವುಡ್ ಸೆಲೆಬ್ರೆಟಿ ಜೋಡಿ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಬಚ್ಚನ್ ಇತ್ತೀಚಿನ ದಿನಗಳಲ್ಲಿ ಭಾರಿ ಸಂಕಷ್ಟ ಎದುರಿಸಿದ್ದಾರೆ. ಇವರಿಬ್ಬರ ಸಂಬಂಧ ಹಳಸಿದೆ, ವಿಚ್ಚೇದನ, ಇಬ್ಬರು ಬೇರೆ ಬೇರೆ ನಿವಾಸದಲ್ಲಿದ್ದಾರೆ ಅನ್ನೋ ಹಲವು ಸುದ್ದಿಗಳು ಹರಿದಾಡಿತ್ತು. ಹಲವು ಕಾರ್ಯಕ್ರಮಗಳಲ್ಲಿ ಈ ಜೋಡಿ ಬೇರೆ ಬೇರೆಯಾಗಿ ಕಾಣಿಸಿಕೊಳ್ಳುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಆಹಾರವಾಗಿದ್ದರು. ಆದರೆ ಎಲ್ಲೂ ಕೂಡ ಈ ಜೋಡಿ ಸ್ಪಷ್ಟನೆ ನೀಡುವ ಪ್ರಯತ್ನವಾಗಲಿ, ಟೀಕೆ, ಊಹಾಪೋಗಳನ್ನು ತಳ್ಳಿ ಹಾಕುವ ಪ್ರಯತ್ನವನ್ನೂ ಮಾಡಲಿಲ್ಲ. ಹೀಗಾಗಿ ಅನುಮಾನಗಳು ಹೆಚ್ಚಾಗಿತ್ತು.

25
Image Credit : Social Media

ಇದೇ ಮೊದಲ ಬಾರಿಗೆ ಅಭಿಷೇಕ್ ಬಚ್ಚನ್ ಬ್ರೇಕ್ಅಪ್ ರೂಮರ್ ಕುರಿತು ಮಾತನಾಡಿದ್ದಾರೆ. ಐಶ್ವರ್ಯ ರೈ ಜೊತೆ ಸಂಬಂಧ ಹಳಸಿದೆ ಅನ್ನೋ ಊಹಾಪೋಹಕ್ಕೆ ಅಭಿಷೇಕ್ ಬಚ್ಚನ್ ಉತ್ತರ ನೀಡಿದ್ದಾರೆ. ನಿಜಕ್ಕೂ ಐಶ್ವರ್ಯ ರೈ ಜೊತೆ ಜಗಳ ನಡೆದಿತ್ತಾ? ಇಟಿ ಟೈಮ್ಸ್ ನಡೆಸಿದ ಮಾತುಕತೆಯಲ್ಲಿ ಅಭಿಷೇಕ್ ಬಚ್ಚನ್ ತಮ್ಮ ದಾಂಪತ್ಯ ಜೀವನ ಕುರಿತು ಮಾತನಾಡಿದ್ದಾರೆ.

35
Image Credit : Social Media

ಮೊದಲು ಈ ರೀತಿಯ ಗಾಸಿಪ್, ಟೀಕೆಗಳು ನನಗೆ ಅಷ್ಟಾಗಿ ಪರಿಣಾಮ ಬೀರುತ್ತಿರಲಿಲ್ಲ. ಆದರೆ ಈಗ ಹಾಗಲ್ಲ, ನನಗೆ ಪತ್ನಿ, ಮಗಳಿದ್ದಾಳೆ. ನನಗೂ ಹಾಗೂ ನನ್ನ ಕುಟುಂಬಕ್ಕೂ ಈ ರೀತಿಯ ಸುಳ್ಳು ಸುದ್ದಿಗಳ ಪರಿಣಾಮ ಬೀರುತ್ತದೆ. ಮಾನಸಿಕವಾಗಿ ಹೆಚ್ಚು ಒತ್ತಡ ನೀಡುತ್ತದೆ. ಈ ಕುರಿತು ಸ್ಪಷ್ಟನೆ ನೀಡುವ ಅಗತ್ಯವಿಲ್ಲ ಎಂದು ನನಗನಿಸಿತ್ತು. ಕಾರಣ ನಾನು ಸತ್ಯ ಹೇಳಿದರೂ ನನಗೆ ನೆರವಾಗುವುದಿಲ್ಲ. ಕೆಲವರಿಗೆ ಸುಳ್ಳು ಮಾಹಿತಿಗಳೇ ಬೇಕಿದೆ. ಅದೆ ಹೆಚ್ಚು ಜನರಿಗೆ ತಲುಪುತ್ತದೆ. ಇದರ ನಡುವೆ ನಾನು ಸ್ಪಷ್ಟನೆ ಕೊಟ್ಟರೂ ಪ್ರಯೋಜನವೇನು? ಎಂದು ಅಭಿಷೇಕ್ ಬಚ್ಚನ್ ಪ್ರಶ್ನಿಸಿದ್ದಾರೆ.

45
Image Credit : Instagram

ಈ ರೀತಿ ಸುಳ್ಳು ಸುದ್ದಿ ಹರಡುವವರಿಗೆ ಸತ್ಯ ಬೇಕಿಲ್ಲ. ಅವರ ಮಾಹಿತಿ ಹರಿದಾಡಬೇಕು ಅಷ್ಟೆ. ನೀವು ನಾನಲ್ಲ.ನೀವು ನನ್ನ ಜೀವನ ನಡೆಸುತ್ತಿಲ್ಲ. ನಾನು ಯಾರಿಗೆ ಉತ್ತರ ಕೊಡಬೇಕು, ಅರಿಗೆ ನೀವು ಉತ್ತರ ಕೊಡಬೇಕಿಲ್ಲ. ಇಂತಹ ಸುಳ್ಳು ಮಾಹಿತಿಗಳಿಂದ ಮಕ್ಕಳ ಮೇಲೆ ಆಗುವ ಪರಿಣಾಮವೇನು ಅನ್ನೋದು ಅವರು ಯೋಚಿಸುವುದಿಲ್ಲ ಎಂದು ಬಚ್ಚನ್ ಹೇಳಿದ್ದಾರೆ.

55
Image Credit : Instagram/IMDb

ವಿಚ್ಚೇದನ, ಬ್ರೇಕ್ಅಪ್ ಸೇರಿದಂತೆ ಹರಿದಾಡಿದ ಎಲ್ಲಾ ಮಾಹಿತಿಗಳು ಸುಳ್ಳು ಎಂದು ಅಬಿಷೇಕ್ ಬಚ್ಚನ್ ಹೇಳಿದ್ದಾರೆ. ಎಲ್ಲೂ ಕುಳಿತು ಇಂಟರ್ನೆಟ್‌ನಲ್ಲಿ ಏನೋ ಮಾಹಿತಿ ಹಾಕುವುದು ಸುಲಭ. ಹೀಗೆ ಮಾಡುವವರು ಸತ್ಯ ಬಿಟ್ಟು ಸುಳ್ಳನ್ನೇ ಹಾಕುತ್ತಾರೆ. ಇದೇ ಜನ ನನ್ನ ಮುಂದೆ ನಿಂತು ಮುಖ ನೋಡಿ ಈ ಮಾತು ಹೇಳಲಿ. ಅದು ಅವರಿಗೆ ಸಾಧ್ಯವಿಲ್ಲ. ಅಂತಹ ಧೈರ್ಯ ಅವರಿಗೆ ಇರುವುದಿಲ್ಲ. ಕಾರಣ ಸುಳ್ಳನ್ನು ಹೇಗೆ ಹೇಳುತ್ತಾರೆ ಎಂದು ಅಭಿಷೇಕ್ ಬಚ್ಚನ್ ಹೇಳಿದ್ದಾರೆ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಅಭಿಷೇಕ್ ಬಚ್ಚನ್
ಐಶ್ವರ್ಯಾ ರೈ
ಸಂಬಂಧಗಳು

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved