MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • ನಾಲ್ಕು ತಿಂಗಳ ಮಗಳ ಸಾವಿನ ನಂತರ ನಟ ಶ್ರೀಹರಿ ಮತ್ತು ಪತ್ನಿ ಡಿಸ್ಕೋ ಶಾಂತಿ ಮಾಡಿದ್ದೇನು?

ನಾಲ್ಕು ತಿಂಗಳ ಮಗಳ ಸಾವಿನ ನಂತರ ನಟ ಶ್ರೀಹರಿ ಮತ್ತು ಪತ್ನಿ ಡಿಸ್ಕೋ ಶಾಂತಿ ಮಾಡಿದ್ದೇನು?

ರಿಯಲ್ ಸ್ಟಾರ್ ಶ್ರೀಹರಿ ಜೀವನದಲ್ಲಿ ಒಂದು ದುಃಖದ ಘಟನೆ. ಅವರ ಮಗಳು ಹುಟ್ಟಿ ನಾಲ್ಕು ತಿಂಗಳಿಗೆ ತೀರಿಕೊಂಡಳಂತೆ. ಆದರೆ ಮಗಳು ಯಾವಾಗಲೂ ನಮ್ಮ ಜೊತೆ ಇರಬೇಕೆಂದು ಶ್ರೀಹರಿ ಏನು ಮಾಡಿದ್ರು ಗೊತ್ತಾ?

1 Min read
Gowthami K
Published : Nov 01 2024, 10:36 PM IST
Share this Photo Gallery
  • FB
  • TW
  • Linkdin
  • Whatsapp
16

ಯಾವುದೇ ಬ್ಯಾಕ್‌ಗ್ರೌಂಡ್ ಇಲ್ಲದೆ ಚಿತ್ರರಂಗಕ್ಕೆ ಬಂದ ಶ್ರೀಹರಿ. ಮನೆ ಇಲ್ಲದ ಸ್ಥಿತಿಯಿಂದ ಸ್ಟಾರ್ ಹೀರೋ ಆದ್ರು. ಬಾಡಿ ಬಿಲ್ಡಿಂಗ್, ಬಾಕ್ಸಿಂಗ್, ಜಿಮ್ನಾಸ್ಟಿಕ್ಸ್‌ನಲ್ಲಿ ತರಬೇತಿ ಪಡೆದು ರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದಿದ್ದಾರೆ. ನಂತರ ಸಿನಿಮಾಗಳಲ್ಲಿ ಸಣ್ಣ ಪಾತ್ರಗಳಿಂದ ವಿಲನ್ ಆಗಿ, ನಂತರ ಹೀರೋ ಆಗಿ ಯಶಸ್ಸು ಗಳಿಸಿದರು.

26

`ಭದ್ರಾಚಲಂ`, `ಪೋಲೀಸ್`, `ಸಿಂಹಾಚಲಂ` ಸಿನಿಮಾಗಳ ಮೂಲಕ ಸ್ಟಾರ್ ಹೀರೋ ಆದ ಶ್ರೀಹರಿ, ಹೀರೋ ಆಗಿಯೂ, ಪೋಷಕ ನಟ, ವಿಲನ್ ಆಗಿಯೂ ಮಿಂಚಿದರು. ತೆಲುಗು ಚಿತ್ರರಂಗದಲ್ಲಿ ಅವರ ಸ್ಥಾನ ಯಾರೂ ತುಂಬಲು ಸಾಧ್ಯವಿಲ್ಲ.

36

ಶ್ರೀಹರಿ, ಡಿಸ್ಕೋ ಶಾಂತಿ ಜೊತೆ ಮದುವೆಯಾದರು. ಅವರಿಗೆ ಇಬ್ಬರು ಗಂಡು ಮಕ್ಕಳು, ಒಬ್ಬಳು ಹೆಣ್ಣು ಮಗು. ಹೆಣ್ಣು ಮಗುವಿನ ಆಸೆ ಹೊತ್ತಿದ್ದ ಶ್ರೀಹರಿಗೆ ಇಬ್ಬರು ಗಂಡು ಮಕ್ಕಳ ನಂತರ ಹೆಣ್ಣು ಮಗು ಜನಿಸಿತು. ಆದರೆ ಆ ಮಗು ನಾಲ್ಕು ತಿಂಗಳಿಗೆ ತೀರಿಕೊಂಡಿತು.

ಮಗಳು ಯಾವಾಗಲೂ ನಮ್ಮ ಜೊತೆ ಇರಬೇಕೆಂದು ಅರ್ಧ ಎಕರೆ ಜಮೀನಿನಲ್ಲಿ ಮಗಳ ಸ್ಮಾರಕ ನಿರ್ಮಿಸಿದರು.

46

ಮಗಳ ಹೆಸರು ಅಕ್ಷರ. ಮಗಳ ಹೆಸರು ಜನರಲ್ಲಿ ಚಿರಸ್ಥಾಯಿಯಾಗಿರಬೇಕೆಂದು 'ಅಕ್ಷರ ಫೌಂಡೇಶನ್' ಸ್ಥಾಪಿಸಿದರು. ಮೇಡ್ಚಲ್ ಮಂಡಲದ ಮೂರು ಗ್ರಾಮಗಳನ್ನು ದತ್ತು ಪಡೆದು ಅಲ್ಲಿನ ಜನರಿಗೆ ಅಗತ್ಯ ಸಹಾಯ ಮಾಡಿದರು.

56

ಫ್ಲೋರಿನ್ ಸಮಸ್ಯೆಗೆ ಪರಿಹಾರವಾಗಿ 45-50 ಲಕ್ಷ ವೆಚ್ಚದಲ್ಲಿ ಮೂರು ಗ್ರಾಮಗಳಿಗೆ ವಾಟರ್ ಫ್ಲಾಂಟ್ ನಿರ್ಮಿಸಿದರು. ಆರು ತಿಂಗಳ ನಂತರ ಗ್ರಾಮಕ್ಕೆ ಭೇಟಿ ನೀಡಿದಾಗ ಜನರ ಪ್ರೀತಿ, ಆದರಕ್ಕೆ ಭಾವುಕರಾದ ಶ್ರೀಹರಿ, 'ನಮ್ಮ ಪಾಲಿಗೆ ನೀವು ದೇವರು' ಎಂದು ಜನರು ಹೇಳಿದಾಗ ಕಣ್ಣೀರು ತಡೆಯಲಾಗಲಿಲ್ಲ ಎಂದು 'ಓಪನ್ ಹಾರ್ಟ್ ವಿತ್ ಆರ್.ಕೆ.' ಕಾರ್ಯಕ್ರಮದಲ್ಲಿ ತಿಳಿಸಿದರು.

66

ಜಿಮ್ನಾಸ್ಟಿಕ್ಸ್, ಬಾಡಿ ಬಿಲ್ಡಿಂಗ್ ಪ್ರತಿಭೆಯಿಂದ, ರಿಯಲ್ ಸ್ಟಂಟ್‌ಗಳಿಂದ ರಿಯಲ್ ಸ್ಟಾರ್ ಆಗಿ ಹೆಸರು ಗಳಿಸಿದ ಶ್ರೀಹರಿ 2013ರಲ್ಲಿ ಅನಾರೋಗ್ಯದಿಂದ ನಿಧನರಾದರು. `ಆರ್ ರಾಜ್ ಕುಮಾರ್` ಚಿತ್ರೀಕರಣದ ವೇಳೆ ಅಸ್ವಸ್ಥರಾದ ಅವರು, ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಅಕ್ಟೋಬರ್ 9 ರಂದು ನಿಧನರಾದರು. ಮಗಳ ಪಕ್ಕದಲ್ಲೇ ಅವರ ಸಮಾಧಿ ಇದೆ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved