MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಮಕ್ಕಳಿಗಾಗಿ ಎನ್‌.ಟಿ.ಆರ್‌ ಸ್ಟೆರಾಯ್ಡ್ಸ್‌ ತಗೊಂಡ್ರಾ? ಅದೇ ಸಾವಿಗೆ ಕಾರಣವಾಯ್ತಾ?

ಮಕ್ಕಳಿಗಾಗಿ ಎನ್‌.ಟಿ.ಆರ್‌ ಸ್ಟೆರಾಯ್ಡ್ಸ್‌ ತಗೊಂಡ್ರಾ? ಅದೇ ಸಾವಿಗೆ ಕಾರಣವಾಯ್ತಾ?

ಎನ್‌.ಟಿ.ಆರ್‌ 72 ವರ್ಷದಲ್ಲಿ ಮಕ್ಕಳನ್ನು ಪಡೆಯಲು ಬಯಸಿದ್ದರೇ? ಆ ವಯಸ್ಸಿನಲ್ಲಿ ಸ್ಟೆರಾಯ್ಡ್ಸ್‌ ತೆಗೆದುಕೊಂಡಿದ್ದರೇ? ಸಂಚಲನ ಮೂಡಿಸುತ್ತಿರುವ ಹರಿಕೃಷ್ಣ ಅವರ ಹೇಳಿಕೆಗಳು. ಅವರು ಏನು ಹೇಳಿದ್ದಾರೆ? 

2 Min read
Author : Gowthami K
Published : Jan 18 2025, 09:32 PM IST
Share this Photo Gallery
  • FB
  • TW
  • Linkdin
  • Whatsapp
15

ಎನ್‌.ಟಿ. ರಾಮರಾವ್‌ ಒಬ್ಬ ಯುಗ ಪುರುಷ. ತೆಲುಗು ಸಿನಿಮಾ ಮತ್ತು ತೆಲುಗು ಜನರಿಗೆ ಕೀರ್ತಿ ತಂದವರು. ನಟರಾಗಿ, ಸಿಎಂ ಆಗಿ ಅವರು ವಿಶೇಷ ಸೇವೆ ಸಲ್ಲಿಸಿದ್ದಾರೆ. ಎಷ್ಟೇ ನಟರು, ಸಿಎಂಗಳು ಬಂದರೂ ಎನ್‌.ಟಿ.ಆರ್‌ ನಂತರವೇ ಎಂದು ಹೇಳುವುದರಲ್ಲಿ ಉತ್ಪ್ರೇಕ್ಷೆ ಇಲ್ಲ. ಇಂದು (ಜನವರಿ 18) ಅವರ 29ನೇ ವರ್ಷದ ಪುಣ್ಯತಿಥಿ. ಈ ಸಂದರ್ಭದಲ್ಲಿ ಅವರಿಗೆ ಸಂಬಂಧಿಸಿದ ಆಸಕ್ತಿದಾಯಕ, ಆಘಾತಕಾರಿ ವಿಷಯವೊಂದು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಯಲ್ಲಿದೆ.
 

25

ಎನ್‌.ಟಿ.ಆರ್‌ಗೆ ಬಸವತಾರಕಮ್ಮ ಜೊತೆ 1943ರಲ್ಲಿ ಮದುವೆ ಆಯಿತು. ಅವರಿಗೆ 12 ಮಕ್ಕಳು. ಅದರಲ್ಲಿ ಎಂಟು ಜನ ಗಂಡು ಮಕ್ಕಳು, ನಾಲ್ಕು ಜನ ಹೆಣ್ಣು ಮಕ್ಕಳು. ಬಾಲಕೃಷ್ಣ, ಹರಿಕೃಷ್ಣ, ಪುರಂದೇಶ್ವರಿ, ಭುವನೇಶ್ವರಿ (ಚಂದ್ರಬಾಬು ನಾಯ್ಡು ಪತ್ನಿ) ಪ್ರಸಿದ್ಧರಾದರು.

ಉಳಿದವರೆಲ್ಲ ತೆರೆಮರೆಯಲ್ಲೇ ಇದ್ದರು. 1985ರಲ್ಲಿ ಬಸವತಾರಕಮ್ಮ ಕ್ಯಾನ್ಸರ್‌ನಿಂದ ನಿಧನರಾದರು. ಅವರ ನೆನಪಿಗಾಗಿ, ಕ್ಯಾನ್ಸರ್‌ನಿಂದ ಯಾರೂ ಸಾಯಬಾರದೆಂದು ಬಸವತಾರಕಂ ಇಂಡೋ ಅಮೇರಿಕನ್‌ ಕ್ಯಾನ್ಸರ್‌ ಆಸ್ಪತ್ರೆಯನ್ನು ಎನ್‌.ಟಿ.ಆರ್‌ ಸ್ಥಾಪಿಸಿದರು. 

35

ಬಸವತಾರಕಂ ತೀರಿಕೊಂಡ ಕೆಲವು ಕಾಲದ ನಂತರ ಲಕ್ಷ್ಮಿ ಪಾರ್ವತಿ ಹತ್ತಿರವಾದರು. ಅವರು ಬರಹಗಾರ್ತಿ, ಪ್ರಾಧ್ಯಾಪಕಿ. ಅವರ ಭಾವನೆಗಳು, ಬೆಂಬಲ ಎನ್‌.ಟಿ.ಆರ್‌ಗೆ ಇಷ್ಟವಾಯಿತು. ಇಬ್ಬರೂ ಮದುವೆಯಾದರು. ಇದು ಎನ್‌.ಟಿ.ಆರ್‌ ಕುಟುಂಬಕ್ಕೆ ಇಷ್ಟವಿರಲಿಲ್ಲ ಎಂಬ ಪ್ರಚಾರವಿದೆ.

ಚಂದ್ರಬಾಬು ನಾಯ್ಡು ಕೂಡ ವಿರೋಧಿಸಿದ್ದರು ಎನ್ನುತ್ತಾರೆ. ಲಕ್ಷ್ಮಿ ಪಾರ್ವತಿ ರಾಜಕೀಯದಲ್ಲಿ ತೊಡಗಿಕೊಂಡಿದ್ದು ಎನ್‌.ಟಿ.ಆರ್‌ ಕುಟುಂಬಕ್ಕೆ ಸರಿಬರಲಿಲ್ಲ, ಇತರ ನಾಯಕರಿಗೂ ಅಸಮಾಧಾನವಿತ್ತು, ಎನ್‌.ಟಿ.ಆರ್‌ರನ್ನು ಸಿಎಂ ಸ್ಥಾನದಿಂದ ಇಳಿಸಲು ಇದೇ ಕಾರಣ ಎನ್ನುತ್ತಾರೆ. ನಿಜ ಏನೆಂಬುದು ಇಂದಿಗೂ ನಿಗೂಢ. 
 

45

ಎನ್‌.ಟಿ. ರಾಮರಾವ್‌ ಸಾವಿಗೆ ಲಕ್ಷ್ಮಿ ಪಾರ್ವತಿ ಕಾರಣ ಎಂದು ಹರಿಕೃಷ್ಣ ಹೇಳಿರುವುದು ಆಘಾತಕಾರಿ. ಅವರು ನೇರವಾಗಿ ಹೇಳಲಿಲ್ಲ, ಆದರೆ ಆ ರೀತಿಯ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಆ ವಯಸ್ಸಿನಲ್ಲೂ ಎನ್‌.ಟಿ.ಆರ್‌ ಸ್ಟೆರಾಯ್ಡ್ಸ್‌ ತೆಗೆದುಕೊಂಡಿದ್ದರು ಎಂದು ಹರಿಕೃಷ್ಣ ಹೇಳಿದ್ದಾರೆ.

`ಅವರಿಗೆ 72 ವರ್ಷ, ಒಮ್ಮೆ ಹೃದಯಾಘಾತವಾಗಿತ್ತು. ಆ ಸ್ಥಿತಿಯಲ್ಲಿ ಸ್ಟೆರಾಯ್ಡ್ಸ್‌ ತೆಗೆದುಕೊಳ್ಳುವುದು ಪ್ರಾಣಕ್ಕೆ ಅಪಾಯಕಾರಿ ಎಂದು ವೈದ್ಯರು ಹೇಳಿದ್ದರು. ಆದರೂ ಎನ್‌.ಟಿ.ಆರ್‌ ಸ್ಟೆರಾಯ್ಡ್ಸ್‌ ತೆಗೆದುಕೊಂಡಿದ್ದರು ಎಂದು ಹರಿಕೃಷ್ಣ ಮಾಧ್ಯಮಗಳಿಗೆ ತಿಳಿಸಿದ್ದಾರೆ. 
 

55

ಲಕ್ಷ್ಮಿ ಪಾರ್ವತಿ ಬಗ್ಗೆ ಆಘಾತಕಾರಿ ವಿಷಯ ಬಹಿರಂಗಪಡಿಸಿದ್ದಾರೆ. ಆ ವಯಸ್ಸಿನಲ್ಲಿ ಅವರು ಮರು-ಕ್ಯಾನಲೈಸೇಶನ್‌ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರಂತೆ. ಮಕ್ಕಳಾಗಲು ಮಹಿಳೆಯರು ಮಾಡಿಸಿಕೊಳ್ಳುವ ಶಸ್ತ್ರಚಿಕಿತ್ಸೆ ಇದು. ಆ ವಯಸ್ಸಿನಲ್ಲಿ ಅವರು ಈ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದು, ಎನ್‌.ಟಿ.ಆರ್‌ ಸ್ಟೆರಾಯ್ಡ್ಸ್‌ ತೆಗೆದುಕೊಳ್ಳುವುದು ಮಕ್ಕಳನ್ನು ಪಡೆಯಲೇ ಎಂದು ತಿಳಿದುಬರುತ್ತದೆ. ಹರಿಕೃಷ್ಣ ಕೂಡ ಅದನ್ನೇ ಪರೋಕ್ಷವಾಗಿ ಹೇಳಿದ್ದಾರೆ. ಆ ಸ್ಟೆರಾಯ್ಡ್ಸ್‌ನಿಂದಲೇ ಎನ್‌.ಟಿ.ಆರ್‌ ಸಾವನ್ನಪ್ಪಿದರು, ಇಲ್ಲದಿದ್ದರೆ ನೂರು ವರ್ಷ ಬದುಕುತ್ತಿದ್ದರು ಎಂದು ಹರಿಕೃಷ್ಣ ಹೇಳಿದ್ದಾರೆ.

ಹಲವು ವರ್ಷಗಳ ಹಿಂದೆ ಹರಿಕೃಷ್ಣ ಮಾಧ್ಯಮಗಳಿಗೆ ಹೇಳಿದ್ದ ವಿಷಯಗಳಿವು. ಈ ಹಳೆಯ ವಿಡಿಯೋ ಕ್ಲಿಪ್‌ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಉದ್ದೇಶಪೂರ್ವಕವಾಗಿ ಬಿಡುಗಡೆ ಮಾಡಿದ್ದಾರಾ ಎಂಬ ಅನುಮಾನಗಳಿವೆ. ಎನ್‌.ಟಿ.ಆರ್‌ ಸಾವಿಗೆ ಹಲವು ಕಾರಣಗಳು ವೈರಲ್‌ ಆಗುತ್ತಿವೆ. ಈ ಕ್ಲಿಪ್‌ ಈಗ ಸಂಚಲನ ಮೂಡಿಸಿದೆ.
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.

Latest Videos
Recommended Stories
Recommended image1
ರಶ್ಮಿಕಾ-ರಕ್ಷಿತ್ ಶೆಟ್ಟಿ ಬ್ರೇಕಪ್ ಆಗಿದ್ಯಾಕೆ? ಆಮೇಲೆ ಆಗಿದ್ದೇನು? ಘಟನೆಯ ಅಸಲಿ ಸತ್ಯ ತೆರೆದಿಟ್ಟ ಪ್ರಮೋದ್​ ಶೆಟ್ಟಿ
Recommended image2
ಗೋವಾದಲ್ಲಿ ಹೊಸ ವರ್ಷ: ಆ 6 ನಿಮಿಷಕ್ಕೆ 6 ಕೋಟಿ ಪಡೆದ KGF ಮಿಲ್ಕಿ ಬ್ಯೂಟಿ Tamannaah Bhatia!
Recommended image3
'ಜಮೀನ್ದಾರು' ಸಿನಿಮಾ ನಟಿ ಬಗ್ಗೆ ಮತ್ತೋರ್ವ ನಟಿಯೇ ಹೀಗೆ ಹೇಳಬಹುದಾ?; ವಿವಾದ ಹುಟ್ಟಿಸಿದ ರಾಶಿಫಲ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved