- Home
- Entertainment
- Cine World
- ಸುಶಾಂತ್ ವಿರುದ್ಧ #MeToo ಆರೋಪಿಸಿಲ್ಲ, ವಿಚಾರಣೆ ನಂತರ ಮುಂಬೈಗೆ ಗುಡ್ ಬೈ ಹೇಳಿದ ನಟಿ ಸಂಜನಾ!
ಸುಶಾಂತ್ ವಿರುದ್ಧ #MeToo ಆರೋಪಿಸಿಲ್ಲ, ವಿಚಾರಣೆ ನಂತರ ಮುಂಬೈಗೆ ಗುಡ್ ಬೈ ಹೇಳಿದ ನಟಿ ಸಂಜನಾ!
ತ್ತೀಚೆಗೆ ಆತ್ಮಹತ್ಯೆಗೆ ಶರಣಾದ ಬಾಲಿವುಡ್ ಪ್ರತಿಭಾನ್ವಿತ ನಟ ಸುಶಾಂತ್ ಸಿಂಗ್ ರಜಪೂತ್ ಅಭಿನಯದ Dil Bechara ಚಿತ್ರವಿನ್ನೂ ತೆರೆ ಕಂಡಿಲ್ಲ. ಈ ಚಿತ್ರದಲ್ಲಿ ಸುಶಾಂತ್ ಜೊತೆ ತೆರೆ ಹಂಚಿಕೊಂಡ ನಟಿ ಸಂಜನಾ ಈ ಹಿಂದೆ ಸುಶಾಂತ್ ವಿರುದ್ಧವೇ #MeToo ಆರೋಪ ಮಾಡಿದ್ದರು, ಎನ್ನಲಾಗಿದೆ. ಹಲವು ಕೋನಗಳಲ್ಲಿ ಸುಶಾಂತ್ ಸಾವಿನ ತನಿಖೆ ನಡೆಯುತ್ತಿದ್ದು, ಸಂಜನಾ ಅವರನ್ನೂ ಮುಂಬೈ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಬೆನ್ನಲ್ಲೇ ಈ ನಟಿ ಮುಂಬೈಗೆ ಗುಡ್ ಬೈ ಹೇಳಿದ್ದು ಮಾತ್ರವಲ್ಲದೇ, ಇನ್ನು ಮತ್ತೆ ಮುಂಬೈಗೆ ಬರುತ್ತೀನೋ ಇಲ್ಲವೋ ಎಂದು ಟ್ವೀಟ್ ಮಾಡಿರುವ ಇನ್ಸ್ಟಾಗ್ರಾಮ್ ಪೋಸ್ಟ್ ಇದೀಗ ಸದ್ದು ಮಾಡುತ್ತಿದೆ.

<p>ಸುಶಾಂತ್ ಜೊತೆ ನಟಿಸಿರುವ ದಿಲ್ ಬೇಚಾರ ಸಿನಿಮಾ ಇನ್ನೂ ತೆರೆ ಕಾಣುವ ಮುನ್ನವೇ ಮುಂಬೈಗೆ ಗುಡ್ ಬೈ ಹೇಳಿದ್ದಾರೆ ನಟಿ ಸಂಜನಾ ಸಂಘಿ.</p>
ಸುಶಾಂತ್ ಜೊತೆ ನಟಿಸಿರುವ ದಿಲ್ ಬೇಚಾರ ಸಿನಿಮಾ ಇನ್ನೂ ತೆರೆ ಕಾಣುವ ಮುನ್ನವೇ ಮುಂಬೈಗೆ ಗುಡ್ ಬೈ ಹೇಳಿದ್ದಾರೆ ನಟಿ ಸಂಜನಾ ಸಂಘಿ.
<p>ಈ ನಟಿಯ ನಡೆ ಅಚ್ಚರಿ ಮೂಡಿಸಿದ್ದು, ಪೊಲೀಸ್ ವಿಚಾರಣೆಯಲ್ಲಿ ಏನಾಯ್ತು? ದಿಢೀರ್ ಹುಟ್ಟೂರಿಗೆ ಹೊರಡುವ ನಿರ್ಧಾರ ತೆಗೆದುಕೊಂಡಿರುವುದೇಕೆ ಎಂಬ ಬಗ್ಗೆ ಹಲವು ಪ್ರಶ್ನೆಗಳನ್ನು ಮೂಡಿಸಿದೆ.</p>
ಈ ನಟಿಯ ನಡೆ ಅಚ್ಚರಿ ಮೂಡಿಸಿದ್ದು, ಪೊಲೀಸ್ ವಿಚಾರಣೆಯಲ್ಲಿ ಏನಾಯ್ತು? ದಿಢೀರ್ ಹುಟ್ಟೂರಿಗೆ ಹೊರಡುವ ನಿರ್ಧಾರ ತೆಗೆದುಕೊಂಡಿರುವುದೇಕೆ ಎಂಬ ಬಗ್ಗೆ ಹಲವು ಪ್ರಶ್ನೆಗಳನ್ನು ಮೂಡಿಸಿದೆ.
<p>2011ರಲ್ಲಿ 'ರಾಕ್ಸ್ಟಾರ್' ಚಿತ್ರದ ಮೂಲಕ ಬಿ-ಟೌನ್ಗೆ ಎಂಟ್ರಿ ಕೊಟ್ಟ ನಟಿ ಸಂಜನಾ ಸಂಘಿ.</p>
2011ರಲ್ಲಿ 'ರಾಕ್ಸ್ಟಾರ್' ಚಿತ್ರದ ಮೂಲಕ ಬಿ-ಟೌನ್ಗೆ ಎಂಟ್ರಿ ಕೊಟ್ಟ ನಟಿ ಸಂಜನಾ ಸಂಘಿ.
<p>ಬಾಲಿವುಡ್ ಬಹುನಿರೀಕ್ಷಿತ ಸಿನಿಮಾ 'ದಿಲ್ ಬೇಚಾರ' ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ.</p>
ಬಾಲಿವುಡ್ ಬಹುನಿರೀಕ್ಷಿತ ಸಿನಿಮಾ 'ದಿಲ್ ಬೇಚಾರ' ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ.
<p>ಮೀಟೂ ಆರೋಪ ಮಾಡಿದ್ದರು ಎನ್ನುವ ಕಾರಣಕ್ಕೆ ಪೊಲೀಸರು ಈ ನಟಿಯನ್ನು ಸುಶಾಂತ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ವಿಚಾರಣೆಗೊಳಪಡಿಸಿದ್ದಾರೆ. </p>
ಮೀಟೂ ಆರೋಪ ಮಾಡಿದ್ದರು ಎನ್ನುವ ಕಾರಣಕ್ಕೆ ಪೊಲೀಸರು ಈ ನಟಿಯನ್ನು ಸುಶಾಂತ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ವಿಚಾರಣೆಗೊಳಪಡಿಸಿದ್ದಾರೆ.
<p>2017ರಲ್ಲಿ 'ದಿಲ್ ಬೇಚಾರ' ಚಿತ್ರೀಕರಣ ಆರಂಭವಾಗಿದ್ದು, 2018ರಲ್ಲಿ ಚಿತ್ರತಂಡ ವಿದೇಶಕ್ಕೆ ಹಾರಿತ್ತು.</p>
2017ರಲ್ಲಿ 'ದಿಲ್ ಬೇಚಾರ' ಚಿತ್ರೀಕರಣ ಆರಂಭವಾಗಿದ್ದು, 2018ರಲ್ಲಿ ಚಿತ್ರತಂಡ ವಿದೇಶಕ್ಕೆ ಹಾರಿತ್ತು.
<p>ಈ ಸಮಯದಲ್ಲಿ ಸಂಜನಾ ಸಂಘಿ, ಸುಶಾಂತ್ ಬಗ್ಗೆ ಮೀಟೂ ಆರೋಪ ಮಾಡಿದ್ದರು ಎನ್ನಲಾಗಿದ್ದು, ಈ ಬಗ್ಗೆ ಪೊಲೀಸರು ವಿಚಾರಣೆ ಮಾಡಿದ್ದಾರೆ.</p>
ಈ ಸಮಯದಲ್ಲಿ ಸಂಜನಾ ಸಂಘಿ, ಸುಶಾಂತ್ ಬಗ್ಗೆ ಮೀಟೂ ಆರೋಪ ಮಾಡಿದ್ದರು ಎನ್ನಲಾಗಿದ್ದು, ಈ ಬಗ್ಗೆ ಪೊಲೀಸರು ವಿಚಾರಣೆ ಮಾಡಿದ್ದಾರೆ.
<p> 'ಮೀಟೂ ಆರೋಪ ನಾನು ಮಾಡಿಲ್ಲ, ಸುಶಾಂತ್ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸಲು ಯಾರೋ ಈ ರೀತಿ ಮಾಡಿದ್ದಾರೆಂದು ಸಂಜನಾ ಹೇಳಿದ್ದಾರೆ. </p>
'ಮೀಟೂ ಆರೋಪ ನಾನು ಮಾಡಿಲ್ಲ, ಸುಶಾಂತ್ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸಲು ಯಾರೋ ಈ ರೀತಿ ಮಾಡಿದ್ದಾರೆಂದು ಸಂಜನಾ ಹೇಳಿದ್ದಾರೆ.
<p>9 ಗಂಟೆಗಳ ಕಾಲ ವಿಚಾರಣೆ ನಡೆದ ಮೇಲೆ ಸಂಜನಾ ಸಂಘಿ ಮುಂಬೈಗೆ ಗುಡ್ ಬೈ ಹೇಳಿ, ತಮ್ಮ ಹುಟ್ಟೂರು ದಿಲ್ಲಿಗೆ ತೆರಳಿದ್ದಾರೆ. </p>
9 ಗಂಟೆಗಳ ಕಾಲ ವಿಚಾರಣೆ ನಡೆದ ಮೇಲೆ ಸಂಜನಾ ಸಂಘಿ ಮುಂಬೈಗೆ ಗುಡ್ ಬೈ ಹೇಳಿ, ತಮ್ಮ ಹುಟ್ಟೂರು ದಿಲ್ಲಿಗೆ ತೆರಳಿದ್ದಾರೆ.
<p> 'ಗುಡ್ ಬೈ ಮುಂಬೈ. ನಿನ್ನನ್ನು ನೋಡಲು ನಾಲ್ಕು ತಿಂಗಳುಗಳು ಬೇಕಾಗಿತ್ತು. ದಿಲ್ಲಿಗೆ ವಾಪಸ್ ಹೋಗುತ್ತಿದ್ದೇನೆ. ಮೊದಲ ಬಾರಿ ಮುಂಬೈ ಬೀದಿಗಳು ವಿಚಿತ್ರವಾಗಿ ಕಾಣಿಸಿದ್ದವು. ನನ್ನಲ್ಲಿರುವ ನೋವಿನಿಂದ ಹಾಗೆ ಕಂಡಿರಬಹುದು. ಮತ್ತೆ ಸಿಗುತ್ತೇವೋ ಅಥವಾ...ಇಲ್ಲವೇ?' ಎಂದು ಬರೆದುಕೊಂಡಿದ್ದಾರೆ.</p>
'ಗುಡ್ ಬೈ ಮುಂಬೈ. ನಿನ್ನನ್ನು ನೋಡಲು ನಾಲ್ಕು ತಿಂಗಳುಗಳು ಬೇಕಾಗಿತ್ತು. ದಿಲ್ಲಿಗೆ ವಾಪಸ್ ಹೋಗುತ್ತಿದ್ದೇನೆ. ಮೊದಲ ಬಾರಿ ಮುಂಬೈ ಬೀದಿಗಳು ವಿಚಿತ್ರವಾಗಿ ಕಾಣಿಸಿದ್ದವು. ನನ್ನಲ್ಲಿರುವ ನೋವಿನಿಂದ ಹಾಗೆ ಕಂಡಿರಬಹುದು. ಮತ್ತೆ ಸಿಗುತ್ತೇವೋ ಅಥವಾ...ಇಲ್ಲವೇ?' ಎಂದು ಬರೆದುಕೊಂಡಿದ್ದಾರೆ.
<p>ಸುಶಾಂತ್ ನೆನಪಿನಲ್ಲಿ ಸಂಜನಾ ಸಂಘಿ ಬರೆದ ಸಾಲುಗಳು ಎಂಥವರಲ್ಲೂ ಕಣ್ಣೀರು ತರಿಸುತ್ತದೆ. ಮತ್ತೆ ನೋಡೋತ್ತೇನೋ, ಇಲ್ಲವೋ ಎಂದು ಬರೆದುಕೊಂಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಂತಾಗಿದೆ.</p>
ಸುಶಾಂತ್ ನೆನಪಿನಲ್ಲಿ ಸಂಜನಾ ಸಂಘಿ ಬರೆದ ಸಾಲುಗಳು ಎಂಥವರಲ್ಲೂ ಕಣ್ಣೀರು ತರಿಸುತ್ತದೆ. ಮತ್ತೆ ನೋಡೋತ್ತೇನೋ, ಇಲ್ಲವೋ ಎಂದು ಬರೆದುಕೊಂಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಂತಾಗಿದೆ.
<p>'ಯಾರು ಹೇಳಿದ್ದು ಸಮಯ ಎಲ್ಲವನ್ನೂ ಸರಿ ಮಾಡುತ್ತದೆ ಎಂದು? ನೀವು ಬಿಟ್ಟು ಹೋದ ನೆನಪಿನಲ್ಲಿ ಇರುವೆ. ವೈಯಕ್ತಿಕವಾಗಿ ಇದರಿಂದ ಹೊರ ಬರಲು ನನಗೆ ಸಾಧ್ಯವಿಲ್ಲ' ಎಂದೂ ಸಂಜನಾ ಬರೆದುಕೊಂಡಿದ್ದರು.</p>
'ಯಾರು ಹೇಳಿದ್ದು ಸಮಯ ಎಲ್ಲವನ್ನೂ ಸರಿ ಮಾಡುತ್ತದೆ ಎಂದು? ನೀವು ಬಿಟ್ಟು ಹೋದ ನೆನಪಿನಲ್ಲಿ ಇರುವೆ. ವೈಯಕ್ತಿಕವಾಗಿ ಇದರಿಂದ ಹೊರ ಬರಲು ನನಗೆ ಸಾಧ್ಯವಿಲ್ಲ' ಎಂದೂ ಸಂಜನಾ ಬರೆದುಕೊಂಡಿದ್ದರು.