ಅಕಾಲಿಕ ಮರಣಕ್ಕೆ ತುತ್ತಾದ ಬಾಲಿವುಡ್ ನಟಿಯರಿವರು..!
ಒಬ್ಬರ ಹಿಂದೆ ಒಬ್ಬರಂತೆ ಇಬ್ಬರು ನಟರನ್ನು ಬಾಲಿವುಡ್ ಎರಡು ದಿನದಲ್ಲಿ ಕಳೆದುಕೊಂಡಿದೆ. ಏಪ್ರಿಲ್ 29ರಂದು ಪ್ರತಿಭಾನ್ವಿತ ನಟ ಬದುಕು ಮುಗಿಸಿದರೆ, ಮರುದಿನವೇ ಬಾಲಿವುಡ್ನ ಫೇಮಸ್ ನಟ ರಿಷಿ ಕಪೂರ್ ಗುಡ್ಬೈ ಹೇಳಿದರು.ಇವರಿಬ್ಬರ ಅಗಲುವಿಕೆ ಸಿನಿಮಾರಂಗಕ್ಕೆ ಬಾರಿ ದೊಡ್ದ ಆಘಾತವೇ ಸರಿ. ಬಾಲಿವುಡ್ನಲ್ಲಿ ಹಲವು ನಟನಟಿಯರು ಅಕಾಲಿಕ ಮರಣಕ್ಕೆ ತುತ್ತಾಗಿದ್ದಾರೆ. ಅಚಾನಕ್ ಆಗಿ ಬದುಕು ಮುಗಿಸಿಕಣ್ಮರೆಯಾಗಿದ್ದಾರೆ. ಸ್ಟಾರ್ ನಟಿ ಶ್ರೀದೇವಿಯಿಂದ ಹಿಡಿದು ರಿಷಿ ಕಪೂರ್ವರೆಗೆ ಹಲವು ಕಲಾವಿದರು ಇಂದು ನಮ್ಮ ಜೊತೆ ಇಲ್ಲ ಎಂಬುದು ನಂಬಲು ಕಷ್ಟಕರ. ಆದರೆ, ಅವರ ಕಲೆ ಮೂಲಕ ಸದಾ ಮನಸ್ಸಿನಲ್ಲಿಯೇ ಉಳಿಯುವ ಕಲಾವಿದರು ಇವರು.
ಶ್ರೀದೇವಿ - 24 ಫೆಬ್ರವರಿ 2018ರಂದು ದುಬೈ ಹೋಟೆಲ್ ಒಂದರ ಬಾತ್ ಟಬ್ನಲ್ಲಿ ಹೆಣವಾಗಿ ಬಿದ್ದಿದ್ದ ಬಾಲಿವುಡ್ನ ದಿವಾ ಶ್ರೀದೇವಿಯ ಆಚಾನಕ್ ಸಾವಿಗೆ ಕಾರಣ ಇನ್ನೂ ರಹಸ್ಯವಾಗೇ ಉಳಿದಿದೆ.
ನಫೀಸಾ ಜೋಸೆಫ್ - 26 ವರ್ಷದ ನಟಿ ಹಾಗೂ ಮಾಡೆಲ್ ನಫೀಸಾ ಜೋಸೆಫ್ 2004ರಲ್ಲಿ ನೇಣಿಗೆ ಶರಣಾಗಿದ್ದರು.
ಶಿವಲೇಖ್ ಸಿಂಹ - ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಟಿವಿಯ ಬಾಲ ನಟ ಶಿವಲೇಖ್ ಸಿಂಹ ಉರ್ಫ್ ಅನು ಸಿಂಹ.
ಮಹೇಶ್ ಆನಂದ್ - ವಿಲನ್ ರೋಲ್ಗಳನ್ನು ಮಾಡುತ್ತಿದ್ದ ಮಹೇಶ್ ಆನಂದ್ ಸಾವಿಗೆ ಒಂಟಿತನ ಕಾರಣ ಎಂದು ಹೇಳಲಾಗುತ್ತದೆ. ಆದರೆ ಅವರ ಅಂತ್ಯ ರಹಸ್ಯವಾಗಿಯೇ ಉಳಿಯಿತು. ಡೆಡ್ ಬಾಡಿ ಪಕ್ಕ ಮದ್ಯದ ಬಾಟ್ಲಿ ಹಾಗೂ ಮನೆಯ ಹೊರಗೆ ಊಟದ ಡಬ್ಬಿಗಳು ದೊರೆತ್ತಿದ್ದವು. ಮಗ ಇದ್ದರೂ ಅವರ ದೇಹವನ್ನು ಪಡೆಯಲು ಯಾರು ಬಂದಿರಲಿಲ್ಲ.
ಕವಿ ಕುಮಾರ್ ಆಜಾದ್ - ತರಾಕ್ ಮೆಹ್ತಾ ಕಾ ಉಲ್ಟಾ ಚಸ್ಮಾ ಫೇಮ್ನ ಈ ನಟ ಹಾರ್ಟ್ ಆಟ್ಯಾಕ್ನಿಂದ ಕೊನೆ ಉಸಿರೆಳೆದಿದ್ದು.
ಓಂ ಪುರಿ - 100ಕ್ಕಿಂತ ಹೆಚ್ಚು ಹಿಂದಿ ಹಾಗೂ 20 ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿದ ನಟ ಓಂ ಪುರಿಯ ಸಾವು ಕೂಡ ಶಾಕಿಂಗ್. ತಲೆಯಲ್ಲಿ ಗಾಯದ ಜೊತೆ ಮೂಳೆಯಲ್ಲಿ ಫ್ಯಾಕ್ಚರ್ ಆಗಿದ್ದ ಮೃತ ದೇಹ ಅವರ ಮನೆಯಲ್ಲಿ ದೊರೆತ್ತಿತ್ತು.
ಪರ್ವೀನ್ ಬಾಬಿ - ಬಾಲಿವುಡ್ನ ಸುಂದರಿ ಪರ್ವೀನ್ ಬಾಬಿಯ ಸಾವು ಇಂದಿಗೂ ನಿಗೂಢವಾಗಿಯೇ ಉಳಿದಿದೆ. 2005ರಲ್ಲಿ ತಮ್ಮ ಫ್ಲ್ಯಾಟ್ನಲ್ಲಿ ಅನುಮಾನಸ್ಪದವಾಗಿ ಸಿಕ್ಕಿತ್ತು ಪರ್ವೀನ್ರ ಮೃತ ದೇಹ. ಅವರು ಧೀರ್ಘಕಾಲದಿಂದ ಡ್ರಗ್ಸ್ ಆಡಿಕ್ಟ್ ಆಗಿದ್ದರು ನಟಿ. 3 ದಿನಗಳ ಕಾಲ ಮನೆ ಮುಂದೆ ಅನಾಥವಾಗಿದ್ದ ಹಾಲಿನ ಪ್ಯಾಕೆಟ್ ಹಾಗೂ ಪೇಪರ್ಗಳು ಮತ್ತು ರೂಮಿನಿಂದ ಬರುತ್ತಿದ್ದ ದುರ್ವಾಸನೆಯನ್ನು ಗಮನಿಸಿ ಅಕ್ಕಪಕ್ದದವರು ಪೋಲಿಸ್ರಿಗೆ ತಿಳಿಸಿದರು.
ಇಂದರ್ ಕುಮಾರ್ - ಮಾಸೂಮ್ ಸಿನಿಮಾದ ಮೂಲಕ ಪಾದರ್ಪಣೆ ಮಾಡಿದ ಈ ನಟ 2017ರಲ್ಲಿ ಮನೆಯಲ್ಲಿ ರಾತ್ತಿ ಮಲಗಿದಾಗ ನಿದ್ರೆಯಲ್ಲೇ ಸಾವಿನಪ್ಪಿದಾಗ ಇವರಿಗೆ 44 ವರ್ಷ.
ಗೀತಾ ಬಾಲಿ - ಸಿಡುಬಿನ ಕಾರಣದಿಂದ 1965ರಲ್ಲಿ ಬಾಲಿವುಡ್ ನಟ ಶಮ್ಮಿಕಪೂರ್ರ ಮೊದಲ ಪತ್ನಿ ನಟಿ ಗೀತಾ ಬಾಲಿ ಬದುಕಿಗೆ ವಿದಾಯ ಹೇಳಿದರು.
ತರುಣಿ - ಬಾಲ ನಟಿ ತರುಣಿ 2012ರಲ್ಲಿ ನೇಪಾಳದಲ್ಲಿ ಸಂಭವಿಸಿದ ಪ್ಲೈನ್ ಕ್ರಾಶ್ನಲ್ಲಿ ಮೃತರಾದರು.
ಗುರುದತ್ತ್ - 50 ಮತ್ತು 60ರ ದಶಕದ ಫೇಮಸ್ ನಟ ಗುರುದತ್ತ್ ತಮ್ಮ 39ನೇ ವಯಸ್ಸಿನಲ್ಲಿ ಆತ್ಮಹತ್ಯೆಗೆ ಮೊರೆಹೋದರು.
ಮಧುಬಾಲ - ನಾಯಕಿ ಮಧುಬಾಲರ ಸಾವು 1969ರಲ್ಲಿ ಕ್ಯಾನರ್ನಿಂದ ಆಗಿದ್ದು ಆಗ ಆಕೆ ಕೇವಲ 36 ವರ್ಷಗಳು.
ಕೃಪಾಲ್ - 'Kadhalar Dhinam' ಮೂಲಕ ಸಿನಿಮಾಕ್ಕೆ ಎಂಟ್ರಿ ಕೊಟ್ಟಿದ್ದ ನಟ ಕೃಪಾಲ್ ಸಿನಿಮಾಗಳ ನಿರಂತರ ಸೋಲಿನ ಕಾರಣದಿಂದ 2008ರಲ್ಲಿ ನೇಣಿಗೆ ಶರಣಾದರು.
ಸಂದೀಪ್ ಆಚಾರ್ಯ್ - ಇಂಡಿಯನ್ ಐಡಿಯಲ್ - 2 ವಿಜೇತ ಗಾಯಕ ಸಂದೀಪ್ ಆಚಾರ್ಯ ಜಾಂಡಿಸ್ನಿಂದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ದಿವ್ಯಾ ಭಾರತಿ - 1993 ರಲ್ಲಿ ಅಪಾರ್ಟ್ಮೆಂಟ್ನ 5ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ 19 ವರ್ಷದ ನಟಿ ದಿವ್ಯಾ ಭಾರತಿಯ ಅಂತ್ಯಕ್ಕೆ ಕಾರಣ ಇವತ್ತಿನವರೆಗೂ ನಿಗೂಢ.
ಸೌಂದರ್ಯ - ಸೂರ್ಯವಂಶಿ ಸಿನಿಮಾದಲ್ಲಿ ಅಮಿತಾಬ್ ಜೊತೆ ಲೀಡ್ ರೋಲ್ನಲ್ಲಿ ನಟಿಸಿದ ಕನ್ನಡದ ಸೌಂದರ್ಯ 2004ರಲ್ಲಿ ಹೆಲಿಕಾಪ್ಟರ್ ಕ್ರಾಶ್ನಲ್ಲಿ ಅಕಾಲಿಕ ಮರಣ ಹೊಂದಿದ್ದರು.
ಸಿಲ್ಕ್ ಸ್ಮಿತಾ - ಸೌತ್ನ ಫೇಮಸ್ ಸಿಲ್ಕ್ ಸ್ಮಿತಾ ಫಿಲ್ಮಂ ನಿರ್ಮಾಣದಲ್ಲಿ ಕೈ ಸುಟ್ಟು ಕೊಂಡು 1996ರಲ್ಲಿ ಸಾವಿಗೆ ಶರಣಾದ ನಟಿ. 35 ವರ್ಷದ ಸಿಲ್ಕ್ ಫ್ಯಾನ್ಗೆ ನೇಣು ಹಾಕಿಕೊಂಡಿದ್ದರು
ಜಿಯಾ ಖಾನ್ - ಗಜನಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ನಟಿ 25 ವರ್ಷದ ಜಿಯಾ ಖಾನ್ 2013ರಲ್ಲಿ ಜೂಹುವಿನ ಅಪಾರ್ಟ್ಮೆಂಟ್ನಲ್ಲಿ ಹೆಣವಾಗಿ ಸಿಕ್ಕಿದ್ದರು. ಮೇಲ್ನೊಟಕ್ಕೆ ಆತ್ಮಹತ್ಯೆಯಂತೆ ಕಂಡ ಈ ಸಾವು ಕೊನೆಗೆ ಬಾಯ್ಫ್ರೆಂಡ್ ಮಾಡಿದ ಕೊಲೆ ಎಂದು ತಿಳಿದುಬಂತು.
ಪ್ರತ್ಯುಷಾ ಬ್ಯಾನರ್ಜಿ- 2016ರಲ್ಲಿ ಮುಂಬೈಯ ತಮ್ಮ ಫ್ಲ್ಯಾಟ್ನಲ್ಲಿ ಫ್ಯಾನ್ಗೆ ನೇಣು ಹಾಕಿಕೊಂಡ ಬಾಲಿಕಾ ವಧು ಖ್ಯಾತಿಯ 25 ವರ್ಷದ ಪ್ರತ್ಯುಷಾ ಬ್ಯಾನರ್ಜಿ.