MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • ಶಕೀಲಾರನ್ನು ಪ್ರಶಸ್ತಿ ಸಮಾರಂಭಗಳಿಂದ ದೂರವಿಟ್ಟಿದ್ದೇಕೆ ಚಿತ್ರರಂಗ? ಯಾರೂ ಮಾತನ್ನಾಡುತ್ತಿರಲಿಲ್ಲ ಯಾಕೆ?

ಶಕೀಲಾರನ್ನು ಪ್ರಶಸ್ತಿ ಸಮಾರಂಭಗಳಿಂದ ದೂರವಿಟ್ಟಿದ್ದೇಕೆ ಚಿತ್ರರಂಗ? ಯಾರೂ ಮಾತನ್ನಾಡುತ್ತಿರಲಿಲ್ಲ ಯಾಕೆ?

ಮಲಯಾಳಂ ಚಿತ್ರರಂಗದಲ್ಲಿ ಶಕೀಲಾ ಯಶಸ್ಸಿನ ನಡುವೆ ಅವರು ಅನುಭವಿಸಿದ್ದು ಮಾತ್ರ ಒಂಟಿತನ. ‘ನಾನು ಉತ್ತುಂಗದಲ್ಲಿದ್ದಾಗ ಸಹನಟರು ನನ್ನ ಬಗ್ಗೆ ಅಸೂಯೆ ಪಡುತ್ತಿದ್ದರು. ಶೂಟಿಂಗ್ ಸೆಟ್‌ಗಳಲ್ಲಿ ನನ್ನನ್ನು ಎಲ್ಲರಿಂದ ದೂರ ಇಡಲಾಗುತ್ತಿತ್ತು. ಯಾರು ಕೂಡ ನನ್ನ ಜೊತೆ ಮಾತನಾಡುತ್ತಿರಲಿಲ್ಲ’ ಎಂದಿದ್ದಾರೆ ಶಕೀಲಾ.

2 Min read
Shriram Bhat
Published : Dec 28 2025, 06:18 PM IST
Share this Photo Gallery
  • FB
  • TW
  • Linkdin
  • Whatsapp
110
Image Credit : Instagram

ಶಕೀಲಾ ಬದುಕಿನ ಕರಾಳ ಮುಖ ಅನಾವರಣ: ಸ್ಟಾರ್‌ಡಮ್ ನಡುವೆಯೂ ಕಾಡಿದ ಒಂಟಿತನ!

ಒಂದು ಕಾಲದಲ್ಲಿ ದಕ್ಷಿಣ ಭಾರತದ ಚಿತ್ರರಂಗವನ್ನು ತನ್ನ ಮಾದಕ ನೋಟದಿಂದಲೇ ನಡುಗಿಸಿದ್ದ ನಟಿ ಶಕೀಲಾ (Shakeela). ಮಲಯಾಳಂ ಚಿತ್ರರಂಗದ ದೊಡ್ಡ ದೊಡ್ಡ ಸ್ಟಾರ್ ಹೀರೋಗಳಿಗೂ ಬಾಕ್ಸ್ ಆಫೀಸ್‌ನಲ್ಲಿ ಬೆವರಿಸುವಂತೆ ಮಾಡಿದ್ದ ಈಕೆ, ತೆರೆಯ ಮೇಲೆ ಅತ್ಯಂತ ಗ್ಲಾಮರಸ್ ಆಗಿ ಕಂಡರೂ ತೆರೆಯ ಹಿಂದೆ ಅನುಭವಿಸಿದ ನೋವು ಮತ್ತು ಅವಮಾನ ಅಷ್ಟಿಷ್ಟಲ್ಲ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಶಕೀಲಾ ಅವರು ತಮ್ಮ ವೃತ್ತಿಜೀವನದ ಕರಾಳ ದಿನಗಳನ್ನು ಮತ್ತು ಚಿತ್ರರಂಗದ ತಾರತಮ್ಯದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

210
Image Credit : Instagram

ಮಲಯಾಳಂ ಚಿತ್ರರಂಗದಲ್ಲಿ ಸೃಷ್ಟಿಸಿದ್ದ ಸುನಾಮಿ:

ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ಮಲಯಾಳಂ ಚಿತ್ರರಂಗದಲ್ಲಿ ಶಕೀಲಾ ಅವರದ್ದೇ ಹವಾ ಇತ್ತು. ಆದರೆ, ಈ ಯಶಸ್ಸಿನ ನಡುವೆ ಅವರು ಅನುಭವಿಸಿದ್ದು ಮಾತ್ರ ಒಂಟಿತನ.

Related Articles

Related image1
Now Playing
ಸನ್ನಿಗಿಂತ ನಾನೇನ್ ಕಮ್ಮಿ? ಸನ್ನಿಗೆ ಸಿಕ್ಕ ಗೌರವ ತನಗ್ಯಾಕಿಲ್ಲ? ಬೇಸರ ಹೊರಹಾಕಿದ ಶಕೀಲಾ!
Related image2
'ದೃಶ್ಯಂ 3' ಚಿತ್ರದಿಂದ ಹೊರಹೋದ 'ಧುರಂದರ್' ನಟ ಅಕ್ಷಯ್ ಖನ್ನಾಗೆ ಲೀಗಲ್ ನೋಟಿಸ್!
310
Image Credit : Instagram

"ನಾನು ಉತ್ತುಂಗದಲ್ಲಿದ್ದಾಗ ಸಹನಟರು ನನ್ನ ಬಗ್ಗೆ ಅಸೂಯೆ ಪಡುತ್ತಿದ್ದರು. ಶೂಟಿಂಗ್ ಸೆಟ್‌ಗಳಲ್ಲಿ ನನ್ನನ್ನು ಎಲ್ಲರಿಂದ ದೂರ ಇಡಲಾಗುತ್ತಿತ್ತು. ಯಾರು ಕೂಡ ನನ್ನ ಜೊತೆ ಮಾತನಾಡಲು ಮುಂದಾಗುತ್ತಿರಲಿಲ್ಲ" ಎಂದು ಅವರು ನೋವಿನಿಂದ ನೆನಪಿಸಿಕೊಂಡಿದ್ದಾರೆ. ಒಬ್ಬ ಕಲಾವಿದೆಯಾಗಿ ಅವರಿಗೆ ಸಿಗಬೇಕಾದ ಗೌರವ ಅಂದು ಸಿಕ್ಕಿರಲಿಲ್ಲ ಎಂಬುದು ಅವರ ಮಾತುಗಳಲ್ಲಿ ಎದ್ದು ಕಾಣುತ್ತಿತ್ತು.

410
Image Credit : Instagram

ತಾರತಮ್ಯಕ್ಕೆ ಸೆಡ್ಡು ಹೊಡೆದು 20 ಕ್ಯಾರವಾನ್ ಖರೀದಿಸಿದ್ದರು!

ಶೂಟಿಂಗ್ ಸೆಟ್‌ಗಳಲ್ಲಿ ತಮಗೆ ಸರಿಯಾದ ಸೌಲಭ್ಯ ನೀಡದೆ, ಇತರರಿಂದ ದೂರ ಇಡುತ್ತಿದ್ದ ತಾರತಮ್ಯದ ಬಗ್ಗೆ ಮಾತನಾಡಿದ ಅವರು, ಒಂದು ರೋಚಕ ವಿಷಯವನ್ನು ಹಂಚಿಕೊಂಡಿದ್ದಾರೆ. "ನನಗೆ ಇತರರ ಹಂಗು ಬೇಡವಾಗಿತ್ತು. ಸೆಟ್‌ಗಳಲ್ಲಿ ಅನುಭವಿಸುತ್ತಿದ್ದ ಅವಮಾನದಿಂದ ಬೇಸತ್ತು, ನಾನು ನನ್ನ ಸ್ವಂತ ಹಣದಿಂದ ಸುಮಾರು 20 ಕ್ಯಾರವಾನ್‌ಗಳನ್ನು ಖರೀದಿಸಿದ್ದೆ.

510
Image Credit : Instagram

ನನಗೆ ಯಾರೂ ಕನಿಷ್ಠ ಸೌಲಭ್ಯ ನೀಡದಿದ್ದಾಗ, ನನ್ನ ಸ್ವಂತ ವಾಹನವೇ ನನಗೆ ಆಸರೆಯಾಯಿತು" ಎಂದಿದ್ದಾರೆ. ಚಿತ್ರರಂಗದ ಇತಿಹಾಸದಲ್ಲೇ ಒಬ್ಬ ನಟಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಕ್ಯಾರವಾನ್‌ಗಳನ್ನು ಹೊಂದಿದ್ದು ಒಂದು ಅಚ್ಚರಿಯ ವಿಷಯವೇ ಸರಿ.

610
Image Credit : Instagram

25 ವರ್ಷದ ವೃತ್ತಿಜೀವನ, ಆದರೂ ಒಂದೇ ಒಂದು ಪ್ರಶಸ್ತಿಗೆ ಆಹ್ವಾನವಿಲ್ಲ!

ಶಕೀಲಾ ಅವರು ಸುಮಾರು 25 ವರ್ಷಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ಅತೀ ದೊಡ್ಡ ಕಹಿ ಸತ್ಯವೆಂದರೆ, ಇಂದಿನವರೆಗೆ ಯಾವುದೇ ಒಂದು ಪ್ರಶಸ್ತಿ ಸಮಾರಂಭಕ್ಕೂ ತಮಗೆ ಆಹ್ವಾನ ಬಂದಿಲ್ಲ ಎಂಬುದು. "ಚಿತ್ರರಂಗದಲ್ಲಿ ಸ್ವಜನಪಕ್ಷಪಾತ (Nepotism) ಮತ್ತು ಭ್ರಷ್ಟಾಚಾರ ತಾಂಡವವಾಡುತ್ತಿದೆ. ಕೇವಲ ಒಂದು ವರ್ಗದ ಜನರಿಗೆ ಮಾತ್ರ ಮಣೆ ಹಾಕಲಾಗುತ್ತದೆ. ನನ್ನಂತಹ ಕಲಾವಿದರನ್ನು ಕಡೆಗಣಿಸಲಾಗುತ್ತದೆ" ಎಂದು ಅವರು ನೇರವಾಗಿ ಕಿಡಿಕಾರಿದ್ದಾರೆ. ಪ್ರತಿಭೆಗಿಂತ ಹೆಚ್ಚಾಗಿ ಅಲ್ಲಿ ಪ್ರಭಾವಕ್ಕೆ ಬೆಲೆ ಹೆಚ್ಚು ಎಂಬ ಅಸಮಾಧಾನ ಅವರ ಮಾತುಗಳಲ್ಲಿತ್ತು.

710
Image Credit : Instagram

ಸ್ಥಳೀಯ ಪ್ರತಿಭೆಗಳಿಗೆ ಸಿಗಲಿ ಅವಕಾಶ:

ಕೇವಲ ತನ್ನ ಬಗ್ಗೆ ಮಾತ್ರವಲ್ಲದೆ, ಹೊರಗಿನಿಂದ ಬರುವ ಪ್ರತಿಭಾವಂತ ಹೆಣ್ಣುಮಕ್ಕಳ ಬಗ್ಗೆಯೂ ಶಕೀಲಾ ಕಾಳಜಿ ವ್ಯಕ್ತಪಡಿಸಿದ್ದಾರೆ. ನೆಲ್ಲೂರು ಮತ್ತು ವಿಜಯವಾಡದಂತಹ ಸ್ಥಳಗಳಿಂದ ಬರುವ ತೆಲುಗು ಹುಡುಗಿಯರಿಗೆ ಚಿತ್ರರಂಗದಲ್ಲಿ ಹೆಚ್ಚಿನ ಅವಕಾಶ ಸಿಗಬೇಕು ಎಂದು ಅವರು ಆಗ್ರಹಿಸಿದ್ದಾರೆ. "ನಾನು ಕಷ್ಟಪಟ್ಟು ದುಡಿದಿದ್ದು ನನ್ನ ಕುಟುಂಬದ ಭವಿಷ್ಯಕ್ಕಾಗಿ. ನನ್ನ ಕುಟುಂಬವೇ ನನಗೆ ಮೊದಲ ಆದ್ಯತೆ" ಎಂದು ಅವರು ಭಾವನಾತ್ಮಕವಾಗಿ ನುಡಿದಿದ್ದಾರೆ.

810
Image Credit : Instagram

ಕಾಸ್ಟಿಂಗ್ ಕೌಚ್ ಬಗ್ಗೆ ಶಕೀಲಾ ಖಡಕ್ ಮಾತು:

ಇತ್ತೀಚಿನ ದಿನಗಳಲ್ಲಿ ಚಿತ್ರರಂಗವನ್ನು ಕಾಡುತ್ತಿರುವ 'ಕಾಸ್ಟಿಂಗ್ ಕೌಚ್' ಬಗ್ಗೆ ಮಾತನಾಡಿದ ಅವರು, ತಮಗೆ ಅಂತಹ ಯಾವುದೇ ಅನುಭವವಾಗಿಲ್ಲ ಎಂದಿದ್ದಾರೆ. 

910
Image Credit : Instagram

"ನನಗೆ ಯಾರೂ ಇಂತಹ ಕೆಟ್ಟ ಬೇಡಿಕೆ ಇಟ್ಟಿಲ್ಲ. ಒಂದು ವೇಳೆ ಯಾರಾದರೂ ನನ್ನ ಬಳಿ ಬಂದು ಆ ರೀತಿ ಕೇಳಿದ್ದರೆ, ನಾನು ಖಂಡಿತವಾಗಿಯೂ ಅವರಿಗೆ ಹೊಡೆಯುತ್ತಿದ್ದೆ ಅಥವಾ ಅದನ್ನು ಹಾಸ್ಯವಾಗಿ ಪರಿಗಣಿಸುತ್ತಿದ್ದೆ" ಎಂದು ನಗುತ್ತಲೇ ಖಡಕ್ ಆಗಿ ಉತ್ತರಿಸಿದ್ದಾರೆ. ಇದೇ ವೇಳೆ ಕಾಸ್ಟಿಂಗ್ ಕೌಚ್‌ಗೆ ಬಲಿಯಾದ ಸಂತ್ರಸ್ತೆಯರ ಪರವಾಗಿ ತಮ್ಮ ಬೆಂಬಲ ಸದಾ ಇರುತ್ತದೆ ಎಂದು ಅವರು ಭರವಸೆ ನೀಡಿದ್ದಾರೆ.

1010
Image Credit : Asianet News

ಬಣ್ಣದ ಲೋಕದ ಮಿನುಗಿನ ಹಿಂದೆ ಅದೆಷ್ಟು ಕಣ್ಣೀರು ಮತ್ತು ಕಡೆಗಣನೆ ಇರುತ್ತದೆ ಎಂಬುದಕ್ಕೆ ಶಕೀಲಾ ಅವರ ಈ ಮಾತುಗಳೇ ಸಾಕ್ಷಿ. ಇಂದು ಅವರು ಚಿತ್ರರಂಗದ ಮುಖ್ಯವಾಹಿನಿಯಿಂದ ದೂರವಿದ್ದರೂ, ಅವರ ಹೋರಾಟದ ಹಾದಿ ಮಾತ್ರ ಅನೇಕರಿಗೆ ಸ್ಫೂರ್ತಿದಾಯಕವಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SB
Shriram Bhat
ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ, ಮಾನವೀಯತೆಗೆ ಮೊದಲ ಪ್ರಾಶಸ್ತ್ಯ.
ಮಲಯಾಳಂ ಸಿನಿಮಾ
ಮನರಂಜನಾ ಸುದ್ದಿ
ಮಹಿಳೆಯರು
ಜೀವನಶೈಲಿ

Latest Videos
Recommended Stories
Recommended image1
'ದೃಶ್ಯಂ 3' ಚಿತ್ರದಿಂದ ಹೊರಹೋದ 'ಧುರಂದರ್' ನಟ ಅಕ್ಷಯ್ ಖನ್ನಾಗೆ ಲೀಗಲ್ ನೋಟಿಸ್!
Recommended image2
ರಾಜಮೌಳಿ-ಕಮಲ್ ಹಾಸನ್ ಕಾಂಬಿನೇಷನ್‌ನಲ್ಲಿ ಸಿನಿಮಾ ಮಿಸ್ ಆಗಿದ್ದು ಹೇಗೆ? 20 ವರ್ಷಗಳ ಹಿಂದೆ ಆಗಿದ್ದೇನು?
Recommended image3
ಯಶ್ 'ಟಾಕ್ಸಿಕ್' ಸಿನಿಮಾದ ಈ ನಟಿ ಈ ಇಬ್ಬರಲ್ಲಿ ಯಾರ ಲವ್‌ನಲ್ಲಿ ಬಿದ್ದಿದ್ದಾರೆ? ಯಾರಿಗೆ ಮೋಸ ಮಾಡ್ತಿದ್ದಾರೆ?
Related Stories
Recommended image1
Now Playing
ಸನ್ನಿಗಿಂತ ನಾನೇನ್ ಕಮ್ಮಿ? ಸನ್ನಿಗೆ ಸಿಕ್ಕ ಗೌರವ ತನಗ್ಯಾಕಿಲ್ಲ? ಬೇಸರ ಹೊರಹಾಕಿದ ಶಕೀಲಾ!
Recommended image2
'ದೃಶ್ಯಂ 3' ಚಿತ್ರದಿಂದ ಹೊರಹೋದ 'ಧುರಂದರ್' ನಟ ಅಕ್ಷಯ್ ಖನ್ನಾಗೆ ಲೀಗಲ್ ನೋಟಿಸ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved