₹50 ಕೋಟಿ ಬಜೆಟ್ ಸಿನಿಮಾ ಮಾಡಿ, ₹60 ಕೋಟಿ ಕಳೆದುಕೊಂಡ ನಂದಮೂರಿ ಬಾಲಕೃಷ್ಣ!
ನಂದಮೂರಿ ಬಾಲಕೃಷ್ಣ ಅವರ ಸಿನಿಮಾ ಕೆರಿಯರ್ನಲ್ಲಿ ಹಲವು ಫ್ಲಾಪ್ ಚಿತ್ರಗಳಿವೆ. ಆದರೆ ಒಂದು ಸಿನಿಮಾ ಮಾತ್ರ ಅವರಿಗೆ ದೊಡ್ಡ ಹೊಡೆತ ನೀಡಿತು. ಅವರ ತಂದೆಗಾಗಿ ರಿಸ್ಕ್ ತೆಗೆದುಕೊಂಡು ಮಾಡಿದ ಸಿನಿಮಾ ದೊಡ್ಡ ನಷ್ಟ ತಂದಿತು.
- FB
- TW
- Linkdin
Follow Us
)
ಇದೀಗ ತೆಲುಗು ಚಿತ್ರರಂಗದಲ್ಲಿ ನಟ ನಂದಮೂರಿ ಬಾಲಕೃಷ್ಣ ಈಗ ಸತತ ಗೆಲುವಿನಲ್ಲಿದ್ದಾರೆ. ನಿರಂತರವಾಗಿ 4 ಹಿಟ್ಗಳನ್ನು ನೀಡಿದ ನಾಯಕ ಎಂಬ ಹೆಗ್ಗಳಿಕೆ ಅವರದ್ದಾಗಿದೆ. ಒಂದು ಸಿನಿಮಾ ಗೆದ್ದರೆ ಮೂರು ಸಿನಿಮಾಗಳು ಫ್ಲಾಪ್ ಆಗುವ ಈ ಸಮಯದಲ್ಲಿ ನಿರಂತರವಾಗಿ 4 ಚಿತ್ರಗಳು ಗೆಲ್ಲುವುದು ಬಾಲಯ್ಯನಿಂದ ಮಾತ್ರ ಸಾಧ್ಯ. ಅಷ್ಟೇ ಅಲ್ಲ, ನಾಲ್ಕೂ ಸಿನಿಮಾಗಳು ಕೂಡ 100 ಕೋಟಿ ಚಿತ್ರಗಳು ಎಂಬುದು ವಿಶೇಷ.
ಈಗ ಅವರು 'ಅಖಂಡ 2' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬೋಯಪಾಟಿ ಶ್ರೀನು ನಿರ್ದೇಶನದಲ್ಲಿ ಭಾರಿ ಬಜೆಟ್ನೊಂದಿಗೆ ಈ ಚಿತ್ರವನ್ನು ನಿರ್ಮಿಸಲಾಗುತ್ತಿದೆ. ಶಿವತತ್ವವನ್ನು ಪ್ರಧಾನವಾಗಿಟ್ಟುಕೊಂಡು ಚಿತ್ರ ಸಾಗುತ್ತಿರುವುದರಿಂದ ಭಾರತದಾದ್ಯಂತ ಎಲ್ಲಾ ಭಾಷೆಗಳ ಜನರಿಗೂ ತಲುಪುವಂತೆ ಈ ಚಿತ್ರವನ್ನು ನಿರ್ಮಿಸಲಾಗುತ್ತಿದೆ.
₹50 ಕೋಟಿ ಬಜೆಟ್, ₹60 ಕೋಟಿ ನಷ್ಟ! ಬಾಲಯ್ಯ ಸಿನಿಮಾ
ಬಾಲಕೃಷ್ಣ ಇತ್ತೀಚೆಗೆ ಸೋಲುಗಳಿಲ್ಲದೆ ಮುನ್ನಡೆಯುತ್ತಿದ್ದಾರೆ. ಆದರೆ ಹಿಂದೆ ಬಾಲಯ್ಯ ನಟಿಸಿದ ಹಲವು ಸಿನಿಮಾಗಳು ಮಕಾಡೆ ಮಲಗಿವೆ. ಒಂದು ಸಿನಿಮಾದಲ್ಲಿ ನಂದಮೂರಿ ನಟಸಿಂಹ ಬಹಳ ನಷ್ಟ ಅನುಭವಿಸಿದರು. 50 ಕೋಟಿಯಲ್ಲಿ ಸಿನಿಮಾ ಮಾಡಿ 60 ಕೋಟಿ ನಷ್ಟ ಅನುಭವಿಸಿದ್ದು ಗಮನಾರ್ಹ. ಆದರೆ ಈ ಚಿತ್ರವನ್ನು ಬಾಲಯ್ಯ ತುಂಬಾ ಪ್ರತಿಷ್ಠೆಯಿಂದ ತೆಗೆದುಕೊಂಡಿದ್ದರು. ಈ ಸಿನಿಮಾ ತಂದೆ ಎನ್ಟಿಆರ್ಗಾಗಿ ತೆಗೆದಿದ್ದು, ಇದರಲ್ಲಿ ಮುಗ್ಗರಿಸಿದರು.
ತಂದೆ ಎನ್ಟಿಆರ್ ಜೀವನ ಚರಿತ್ರೆ
ಆ ಸಿನಿಮಾ 'ಎನ್ಟಿಆರ್' ಜೀವನಚರಿತ್ರೆ ಆಗಿದೆ. ನಂದಮೂರಿ ತಾರಕ ರಾಮರಾವ್ ಅವರ ಜೀವನವನ್ನು ಆಧರಿಸಿ ಈ ಜೀವನಚರಿತ್ರೆಯನ್ನು ನಿರ್ದೇಶಕ ಕೃಷ್ ನಿರ್ಮಿಸಿದ್ದಾರೆ. ಎನ್ಟಿಆರ್ ಅವರ ಸಿನಿಮಾ ಜೀವನ, ರಾಜಕೀಯ ಜೀವನವನ್ನು ಇಲ್ಲಿ ತೋರಿಸಲಾಗಿದೆ. ಸಿನಿಮಾ ವೃತ್ತಿಜೀವನವನ್ನು 'ಎನ್ಟಿಆರ್: ಕಥಾನಾಯಕ'ದಲ್ಲಿ ತೋರಿಸಿದರೆ, ರಾಜಕೀಯ ಜೀವನವನ್ನು 'ಎನ್ಟಿಆರ್: ಮಹಾನಾಯಕ'ದಲ್ಲಿ ತೋರಿಸಲಾಗಿದೆ. ಆದರೆ ಈ ಚಿತ್ರಗಳು ಪ್ರೇಕ್ಷಕರನ್ನು ಆಕರ್ಷಿಸಲು ಸಾಧ್ಯವಾಗಲಿಲ್ಲ. ಎಲ್ಲರನ್ನೂ ತೀವ್ರವಾಗಿ ನಿರಾಶೆಗೊಳಿಸಿದವು.
50 ಕೋಟಿ ವೆಚ್ಚದಲ್ಲಿ 'ಎನ್ಟಿಆರ್' ಜೀವನಚರಿತ್ರೆ
'ಎನ್ಟಿಆರ್' ಜೀವನಚರಿತ್ರೆಯನ್ನು ಸುಮಾರು ₹50 ಕೋಟಿ ಬಜೆಟ್ನಲ್ಲಿ ನಿರ್ಮಿಸಲಾಗಿದೆ. ಈ ಚಿತ್ರಕ್ಕೆ ಬಾಲಕೃಷ್ಣ ನಿರ್ಮಾಪಕರು. ತಂದೆಗಾಗಿ ಅವರು ಸ್ವಂತವಾಗಿ ಎನ್ಬಿಕೆ ಫಿಲ್ಮ್ಸ್ ಬ್ಯಾನರ್ ಸ್ಥಾಪಿಸಿ ಈ ಚಿತ್ರವನ್ನು ನಿರ್ಮಿಸಿದರು.
ವಾರಾಹಿ ಚಲನಚಿತ್ರ, ವಿಬ್ರಿ ಮೀಡಿಯಾ ಮುಂತಾದ ನಿರ್ಮಾಣ ಸಂಸ್ಥೆಗಳು ಕೂಡ ಇದರಲ್ಲಿ ಭಾಗಿಯಾಗಿವೆ. 2009ರ ಜನವರಿಯಲ್ಲಿ ಸಂಕ್ರಾಂತಿಗೆ ಮೊದಲ ಭಾಗ 'ಎನ್ಟಿಆರ್: ಕಥಾನಾಯಕ'ವನ್ನು ಬಿಡುಗಡೆ ಮಾಡಲಾಯಿತು. ಈ ಚಿತ್ರ ಮೊದಲ ದಿನದಿಂದಲೇ ನಕಾರಾತ್ಮಕ ಪ್ರತಿಕ್ರಿಯೆ ಪಡೆಯಿತು. ದೊಡ್ಡ ಪ್ಲಾಫ್ ಸಿನಿಮಾ ಆಗಿಬಿಟ್ಟಿತು.
₹24 ಕೋಟಿ ಗಳಿಸಿದೆ 'ಎನ್ಟಿಆರ್: ಕಥಾನಾಯಕ'
ಸುಮಾರು ₹70-80 ಕೋಟಿ ಪ್ರೀ ರಿಲೀಸ್ ವ್ಯವಹಾರ ನಡೆದಿದ್ದು, ಈ ಚಿತ್ರಕ್ಕೆ ಥಿಯೇಟ್ರಿಕಲ್ ಆಗಿ ಸುಮಾರು 14 ಕೋಟಿ ಷೇರು ಬಂದಿದೆ. ಅಂದರೆ ₹60 ಕೋಟಿಗೂ ಹೆಚ್ಚು ನಷ್ಟ ತಂದಿದೆ. ನಂತರ ಒಂದು ತಿಂಗಳ ನಂತರ 'ಎನ್ಟಿಆರ್: ಮಹಾನಾಯಕ' ಚಿತ್ರವನ್ನು ಬಿಡುಗಡೆ ಮಾಡಲಾಯಿತು.
ಮೊದಲ ಭಾಗ ಆಕರ್ಷಿಸಲು ಸಾಧ್ಯವಾಗದ ಕಾರಣ ಎರಡನೇ ಭಾಗದ ಬಗ್ಗೆಯೂ ಜನರು ಆಸಕ್ತಿ ತೋರಿಸಲಿಲ್ಲ. ಇದರಿಂದ ಮೊದಲ ಪ್ರದರ್ಶನದಿಂದಲೇ ಈ ಚಿತ್ರ ಕೂಡ ಪ್ಲಾಫ್ ಎಂಬ ಮಾತುಗಳು ಕೇಳಿಬಂದವು. ಟಿಡಿಪಿ ಕಾರ್ಯಕರ್ತರು ಸಹ ಈ ಚಿತ್ರವನ್ನು ನೋಡದಿರುವುದು ಗಮನಾರ್ಹ. ಎರಡನೇ ಭಾಗ 2 ಕೋಟಿ ಕೂಡ ಗಳಿಸಲು ಸಾಧ್ಯವಾಗಲಿಲ್ಲ. ಹೀಗೆ ಒಟ್ಟಾರೆಯಾಗಿ 'ಎನ್ಟಿಆರ್' ಜೀವನಚರಿತ್ರೆ ಸಿನಿಮಾಗಳು ವಿತರಕರಿಗೆ ₹60 ಕೋಟಿಗೂ ಹೆಚ್ಚು ಹಣವನ್ನು ನಷ್ಟ ಮಾಡಿದೆ.
'ಎನ್ಟಿಆರ್' ಜೀವನಚರಿತ್ರೆ ಪ್ಲಾಫ್ ಆಗಲು ಕಾರಣ:
ಬಾಲಕೃಷ್ಣ ತನ್ನ ತಂದೆಯ ಬಗ್ಗೆ ಜನರಿಗೆ ತಿಳಿಸಬೇಕು, ಅವರ ಶ್ರೇಷ್ಠತೆಯನ್ನು ಸಾರಿ ಹೇಳಬೇಕು ಎಂದು ಮಾಡಿದ ಪ್ರಯತ್ನ ವಿಫಲವಾಯಿತು. ಈ ಸಿನಿಮಾ ಟಿಡಿಪಿ ಪ್ರಚಾರದ ಚಿತ್ರದಂತಿದೆ ಎಂಬ ಮಾತು ಕೇಳಿಬಂತು. ಎಲ್ಲರಿಗೂ ತಿಳಿದಿರುವ ವಿಷಯಗಳನ್ನೇ ತೋರಿಸಿದ್ದಾರೆ, ಎಲ್ಲವನ್ನೂ ಸಕಾರಾತ್ಮಕವಾಗಿಯೇ ತೋರಿಸಿದ್ದಾರೆ. ಜನರಿಗೆ ತಿಳಿದಿಲ್ಲದ ವಿಷಯಗಳು, ಹೊಸ ವಿಷಯಗಳೇನೂ ಇರಲಿಲ್. ಎನ್ಟಿಆರ್ಗೆ ಸಂಬಂಧಿಸಿದ ನಕಾರಾತ್ಮಕ ವಿಷಯಗಳನ್ನು ತೋರಿಸಲಿಲ್ಲ. ಈ ಚಿತ್ರದಲ್ಲಿ ನಾಟಕೀಯತೆ ಇಲ್ಲ ಎಂಬ ಮಾತುಗಳು ಬಂದವು. ಒಟ್ಟಾರೆಯಾಗಿ ತಂದೆಗಾಗಿ ಬಾಲಯ್ಯ ಮಾಡಿದ ಸಾಹಸ ವಿಫಲವಾಯಿತು. ಭೀಕರ ನಷ್ಟ ತಂದಿತು.