ಐಶ್ವರ್ಯಾ ರೈ ಮಂಗಳಸೂತ್ರ ಚೇಂಜ್ ಮಾಡಿದ್ದು ಈ ಕಾರಣಕ್ಕಂತೆ!
ಐಶ್ವರ್ಯಾ ರೈ ಬಾಲಿವುಡ್ನ ಅತ್ಯಂತ ಪವರ್ಫುಲ್ ಹಾಗೂ ಲವಿಂಗ್ ನಟಿಯರಲ್ಲಿ ಒಬ್ಬರು. ಈ ಸೆಲೆಬ್ರೆಟಿಯ ಕೆರಿಯರ್ನಿಂದ ಹಿಡಿದು ಪರ್ಸನಲ್ ಲೈಫ್ವರೆಗೆ ಎಲ್ಲಾ ಮೀಡಿಯಾದ ಸ್ಕ್ಯಾನರ್ನಡಿಯಲ್ಲಿರುತ್ತದೆ. ಅವರಿಗೆ ಸಂಬಂಧಿಸಿದ ವಿಷಯಗಳು ಹೆಡ್ಲೈನ್ ಸೆಳೆಯುತ್ತವೆ ಹಾಗೂ ಬಿ ಟೌನ್ನಲ್ಲಿ ಚರ್ಚೆಯಾಗುತ್ತಲೇ ಇರುತ್ತದೆ, ಅದೇ ರೀತಿ ಈಗ ಐಶ್ವರ್ಯಾ ರೈ ವಿಷಯವೊಂದು ವೈರಲ್ ಆಗಿದೆ. ಅದು ಅವರ ಮಂಗಳಸೂತ್ರಕ್ಕೆ ಸಂಬಂಧಿಸಿದ ವಿಷಯ.
ಅಭಿಷೇಕ್ ಹಾಗೂ ಐಶ್ವರ್ಯಾ ಬಾಲಿವುಡ್ನ ಪವರ್ ಫುಲ್ ಹಾಗೂ ಫೇಮಸ್ ಕಪಲ್.
ಸಾರ್ವಜನಿಕವಾಗಿ ಹೊರಬಂದಾಗಲೆಲ್ಲಾ ಕ್ಯಾಮೆರಾಗಳು ಅವರನ್ನು ಫಾಲೋ ಮಾಡುತ್ತವೆ. ಅಷ್ಟೇ ಅಲ್ಲ, ಅವರ ಪರ್ಸನಲ್ ಲೈಫ್ ಕೂಡ ರಾಷ್ಟ್ರೀಯ ಸುದ್ದಿಯಾಗುತ್ತದೆ.
ಐಶ್ವರ್ಯಾ ರೈ ಅಭಿಷೇಕ್ ಬಚ್ಚನ್ ಜೊತೆ ಮದುವೆಯಾದ ಕೆಲವು ವರ್ಷಗಳ ನಂತರ 45 ಲಕ್ಷಗಳಷ್ಟು ಬೆಲೆಯ ಮಂಗಳಸೂತ್ರವನ್ನು ಚೇಂಜ್ ಮಾಡಿದ ವಿಷಯ ಚರ್ಚೆಯಾಗಿತ್ತು.
ಐಶ್ವರ್ಯಾರ ಪರ್ಸನಲ್ ಲೈಫ್ ಸದಾ ಚರ್ಚೆಯಲ್ಲಿರುತ್ತದೆ. ನಟಿ ಜೀವನದ ಸಣ್ಣ ಬದಲಾವಣೆಯನ್ನೂ ಗಮನಿಸುವ ಫ್ಯಾನ್ಸ್ ಮದುವೆಯಾದ ಕೆಲವು ವರ್ಷಗಳ ನಂತರ ಮಂಗಳಸೂತ್ರ ಬದಲಿಸಲು ಕಾರಣವೇನೆಂದು ಪ್ರಶ್ನಿಸಲಾರಂಭಿಸಿದ್ದರು.
2007ರಲ್ಲಿ ಅಭಿಷೇಕ್ ಜೊತೆ ಸಪ್ತಪದಿ ತುಳಿದ ವಿಶ್ವಸುಂದರಿ.
ಮದುವೆಯಲ್ಲಿ ಐಶ್ವರ್ಯಾ ಉಟ್ಟಿದ್ದ 75 ಲಕ್ಷದ ಕೆಂಪು ಕಾಂಜೀವರಂ ಸೀರೆ ಬಾರಿ ಸುದ್ದಿಯಾಗಿದ್ದರ ಜೊತೆಗೆ ಆಕೆಯ ತಾಳಿಸರ ಸುಮಾರು 45 ಲಕ್ಷದಷ್ಟು ಬೆಲೆಬಾಳುವುದು ಎಂದು ಹೇಳಲಾಗುತ್ತಿತ್ತು.
ಮದುವೆಯ ನಂತರ ದಂಪತಿ ತಿರುಪತಿಗೆ ಭೇಟಿ ನೀಡಿದ ಸಮಯದಲ್ಲಿ ಐಶ್ವರ್ಯಾರ ಮಂಗಳಸೂತ್ರ ಕಣ್ಣಿಗೆ ಬಿದ್ದಿತ್ತು ಆದ್ಯಾಗಿಯೂ ಅವರು ಮದುವೆಯ ಕೆಲವು ವರ್ಷಗಳ ನಂತರ ಆ ಸರವನ್ನು ಬದಲಾಯಿಸಿದ್ದು ವೈರಲ್ ಆಗಿದೆ.
ನಟಿಯ ಕರಿಮಣಿಸರ ಎರಡು ಎಳೆಯ ಉದ್ದ ಸರವಾಗಿತ್ತು ಆದರೆ ನಂತರ ಆಕೆಯ ತಾಳಿಸರ ಕೇವಲ ನೆಕ್ಲೈನ್ ವರೆಗೆ ಮಾತ್ರ ಆಗಿತ್ತು. ಹಾಗೆ ಅದರೆ ಎಳೆಯು ತೆಳುವಾಗಿದೆ ಎಂಬುದನ್ನು ಗಮನಿಸಲಾಗಿದೆ.
ವರದಿಗಳು ಹೇಳುವಂತೆ ಈ ಬಲಾವಣೆಯಾಗಿದ್ದು ಮಗಳು ಆರಾಧ್ಯ ಹುಟ್ಟಿದ ನಂತರವಂತೆ.
ಮಗಳಿಗೆ ಬಾರಿ ಆಭರಣದಿಂದ ಕಷ್ಟವಾಗಬಾರದೆಂದು ಅಮ್ಮ ಐಶ್ವರ್ಯಾ ಈ ನಿರ್ಧಾರ ತೆಗೆದು ಕೊಂಡಿದ್ದರು ಎಂದು ವರದಿಗಳು ಹೇಳುತ್ತವೆ.ಈಗ ಮಗಳು ಆರಾಧ್ಯಾ 8 ವರ್ಷದವಳಾಗಿದ್ದಾಳೆ.