ಸೋನಂಗೆ 'ಕರ್ಮ-ಧರ್ಮದ ಪಾಠ ಹೇಳಿದ ನೆಟ್ಟಿಗರು, ಬೇಕಿತ್ತಾ ಇದೆಲ್ಲಾ!
ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ನಂತರ ನೆಟ್ಟಿಗರು ನಿರ್ದೇಶಕ ಕರಣ್ ಜೋಹರ್, ನಟಿ ಸೋನಂ ಕಪೂರ್ ಮತ್ತು ಆಲಿಯಾ ಭಟ್ ಮೇಲೆ ರಾಂಗ್ ಆಗಿದ್ದಾರೆ. ನೆಟ್ಟಿಗರ ಕಾಟ ತಾಳಲಾರದೇ ಸೋನಂ ಕಪೂರ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಅದಕ್ಕೂ ತರೇವಾರಿ ಪ್ರತಿಕ್ರಿಯೆ ಎದುರಿಸಬೇಕಾಗಿ ಬಂದಿದೆ.
ಸೋನಂ ಕಪೂರ್ ಇಸ್ಟಾ ಗ್ರ್ಯಾಮ್ ಮೂಲಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು.
ನಾವು ಈಗ ಎಲ್ಲಿದ್ದೇವೆ ಎನ್ನುವುದಕ್ಕೆ ನಾವು ಹಿಂದೆ ಮಾಡಿದ ಕರ್ಮ ಕಾರಣವಾಗುತ್ತದೆ ಎಂದು ವ್ಯಾಖ್ಯಾನ ಮಾಡಿದ್ದರು.
ಧರ್ಮದ ವ್ಯಾಖ್ಯಾನ ಮಾಡಿದ್ದ ಸೋನಂ ಇಂಥ ಕಮೆಂಟ್ ಗಳ ಮೂಲಕ ನೀವು ನಿಮ್ಮ ತನ ಕಳೆದುಕೊಳ್ಳುತ್ತಿದ್ದೀರಿ ಎಂದಿದ್ದರು.
ಇದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಭಿನ್ನವಾದ ಪ್ರತಿಕ್ರಿಯೆ ಎದುರಾಯಿತು.
ಧರ್ಮ, ಸಂಸ್ಕೃತಿ, ಸಂಪ್ರದಾಯದ ಪ್ರಶ್ನೆಗಳನ್ನು ಸೋನಂಗೆ ಎಸೆಯಲಾಗಿದೆ.
ಹಿಂದೂ ಧರ್ಮ ಎಂದರೆ ಏನು ಎಂಬುದನ್ನು ಮೊದಲು ನೀವು ಅರ್ಥ ಮಾಡಿಕೊಂಡು ಮಾತನಾಡಿ. ಇನ್ನೊಬ್ಬರ ಬಗ್ಗೆ ಗೌರವ ಕೊಡುವುದನ್ನು ಕಲಿತುಕೊಳ್ಳಿ ಎಂಬ ಸಲಹೆಯನ್ನು ನೀಡಲಾಗಿದೆ.
ಯಾರನ್ನು ನೀವು ಮೂರ್ಖರನ್ನಾಗಿಸ ಹೊರಟಿದ್ದೀರಿ ಎಂದು ಸೋನಂಗೆ ಕೇಳಲಾಗಿದೆ.
ಕೆಲವೊಂದು ಅಶ್ಲೀಲ ಕಮೆಂಟ್ ಗಳು ಎದುರಾಗಿದ್ದು ಸೋನಂ ಕಪೂರ್ ಅವರನ್ನು ಮನಸಿಗೆ ಬಂದಂತೆ ತರಾಟೆಗೆ ತೆಗೆದುಕೊಳ್ಳಲಾಗಿದೆ.
ಫಾದರ್ ಡೇ ಸಂಬಂಧವೂ ಸೋನಂ ಕಪೂರ್ ಟ್ವೀಟ್ ಮಾಡಿ ಧರ್ಮದ ಪಾಠ ಹೇಳಿದ್ದರು.
ಅನೇಕರು ಹಸಿವಿನಿಂದ ಸಾಯುತ್ತಿದ್ದಾರೆ. ಮೊದಲು ಅವರ ನೆರವಿಗೆ ನಿಲ್ಲಿ ಎಂಬ ಸಲಹೆಯನ್ನು ನೀಡಲಾಗಿದೆ.