'ಅಲ್ಲಿಗೆ ಹೋಗಿ' ನೇಪಾಳ ಕೊಂಡಾಡಿದ ಮನೀಷಾ ಝಾಡಿಸಿದ ನೆಟ್ಟಿಗರು
ನವದೆಹಲಿ(ಜೂ. 23) ನೇಪಾಳ ಮೂಲದ ನಟಿ ಮನೀಷಾ ಕೊಯಿರಾಲಾ ಅವರನ್ನು ಸೋಶೀಯಲ್ ಮೀಡಿಯಾ ಸರಿಯಾಗಿ ತರಾಟೆಗೆ ತೆಗೆದುಕೊಂಡಿದೆ. ಇದಕ್ಕೆ ಕಾರಣ ನೇಪಾಳದ ಬಗ್ಗೆ ನಟಿ ವ್ಯಕ್ತಪಡಿಸಿದ ಅನುಕಂಪ. ಸೋಶಿಯಲ್ ಮೀಡಿಯಾ ಕಮೆಂಟ್ ಕಂಡು ನಟಿ ಹೌಹಾರಿದ್ದಾರೆ.
ಗಡಿಯಲ್ಲಿ ಸಾರ್ವಭೌಮತ್ವ, ರಾಜಕೀಯ ಸಾರ್ವಭೌಮತ್ವ ಮತ್ತು ಆರ್ಥಿಕ ಸಾರ್ವಭೌಮತ್ವ ಸೇರಿ ಒಂದು ಸದೃಢ ಸಾರ್ವಭೌಮ ದೇಶ ಈ ಬಗ್ಗೆ ಕೆಲಸ ಮಾಡೋಣ ಎಂದು ನೇಪಾಳವನ್ನು ಉದ್ದೇಶಿಸಿ ಬರೆದುಕೊಂಡಿದ್ದು ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ನೇಪಾಳದ ಭವಿಷ್ಯದತ್ತ ಹೆಜ್ಜೆ ಇಡಬೇಕಾಗಿದೆ. ಒಳ್ಳೆಯದೋ ಕೆಟ್ಟದ್ದೋ ಹೊಸ ಆಲೋಚನೆಗಳನ್ನು ಮಾಡಲೇಬೇಕು ಎಂದು ಮನೀಷಾ ಬರೆದುಕೊಂಡಿದ್ದರು.
ಇದಕ್ಕೆ ವ್ಯಾಪಕ ಪ್ರತಿಕ್ರಿಯೆಗಳು ಬಂದವು. ನೇಪಾಳ ಕೆಲವೇ ದಿನದಲ್ಲಿ ಚೀನಾನ ಕಾಲೋನಿ ಆಗಲಿದೆ ಎಂದು ಕೊಯಿರಾಲಾ ಅವರಗೆ ಕಮೆಂಟ್ ಒಂದು ಖಾರವಾಗಿ ಉತ್ತರ ನೀಡಿತು.
ನೇಪಾಳವನ್ನು ಅಷ್ಟೊಂದು ಪ್ರೀತಿ ಮಾಡುವವರು ದಯವಿಟ್ಟು ಭಾರತ ಬಿಟ್ಟು ಹೊರಡಿ ಎಂಬ ಸಂದೇಶಗಳು ಹರಿದು ಬಂದವು.
ನೇಪಾಳದ ಹೊಸ ಭೂಪಟಕ್ಕೆ ಬೆಂಬಲ ವ್ಯಕ್ತಪಡಿಸಿದ ಕಾರಣಕ್ಕೂ ಮನೀಷಾ ಟ್ರೋಲ್ ಆಗಿದ್ದರು.
'ಬಾಯ್ಕಾಟ್ ಮನೀಷಾ ಕೊಯಿರಾಲ' ಎಂಬ ಹ್ಯಾಷ್ಟ್ಯಾಗ್ನಡಿಯಲ್ಲಿ ಅವರ ವಿರುದ್ಧ ಜನರು ಟೀಕೆಗಳ ಸರಮಾಲೆ ಹರಿದು ಬಂದಿತ್ತು.