ವಿವಾದಗಳಿಗೆ ಹೆದರಿ ಮಹಾಭಾರತ ಪ್ರಾಜೆಕ್ಟ್ ಕೈ ಬಿಟ್ರಾ ಆಮೀರ್ ಖಾನ್?
ಬಾಲಿವುಡ್ನ ಮಿಸ್ಟರ್ ಪರ್ಫೇಕ್ಷನಿಸ್ಟ್ ಆಮೀರ್ ಖಾನ್ ಸಿನಿಮಾಗಳು ಯಾವಾಗಲೂ ಯೂನಿಕ್ ಆಗಿರುತ್ತದೆ. ವರ್ಷಕ್ಕೆ ಒಂದು ಸಿನಿಮಾ ಮಾಡಿದರು ಹೆಚ್ಚು ಇವರು. ಈನ ನಟ ಸಿನಿಮಾಕ್ಕಾಗಿ ಫ್ಯಾನ್ಸ್ ಕಾತುರದಿಂದ ಕಾಯುತ್ತಾರೆ. ಆದರೆ ಈಗ ಆಮೀರ್ ಖಾನ್ ತಮ್ಮ ಕನಸಿನ ಪ್ರಾಜೆಕ್ಟ್ 'ಮಹಾಭಾರತ'ದಿಂದ ಹಿಂದೆ ಸರಿದಿದ್ದಾರೆ ಎಂದು ವರದಿಗಳು ಹೇಳುತ್ತವೆ. ಇದಕ್ಕೆ ಕಾರಣವೇನು ಗೊತ್ತಾ?
ಆಮೀರ್ ಖಾನ್ ತಮ್ಮ ಕನಸಿನ ಪ್ರಾಜೆಕ್ಟ್ 'ಮಹಾಭಾರತ'ದಿಂದ ಹಿಂದೆ ಸರಿದಿದ್ದಾರೆ ಎಂದು ವರದಿಗಳು ಹೇಳುತ್ತಿವೆ.
ಬಹು ನಿರಿಕ್ಷೀತ ಮಹಾಭಾರತದಲ್ಲಿ ತಮ್ಮ ನೆಚ್ಚಿನ ನಟನ ಪ್ರದರ್ಶನ ನೋಡಲು ಕಾಯುತ್ತಿದ್ದ ಆಭಿಮಾನಿಗಳಿಗೆ ಭಾರಿ ನಿರಾಸೆಯುಂಟು ಮಾಡಿದ್ದಾರೆ ಆಮೀರ್ ಖಾನ್.
ಎರಡು ವರ್ಷಗಳ ಸಂಶೋಧನೆಯ ನಂತರ, ಈ ಯೋಜನೆಯನ್ನು ಕೈಬಿಡಲು ಆಮೀರ್ ನಿರ್ಧರಿಸಿದ್ದಾರೆ.
ಆಮೀರ್ ಖಾನ್ ಮಹಾಭಾರತದ ಪ್ಲಾನ್ ಆನೌನ್ಸ್ ಮಾಡಿದಾಗ, ಭವ್ಯವಾದ ಮತ್ತು ಬೃಹತ್ ಸಿನಿಮಾವಾಗುವುದರಲ್ಲಿ ಯಾವುದೇ ಸಂದೇಹವಿರಲಿಲ್ಲ. ಆದರೆ, ಈಗ ಅಮೀರ್ ತಮ್ಮ ಕನಸಿನ ಯೋಜನೆಯಿಂದ ಹೆಜ್ಜೆ ಹಿಂದಕ್ಕೆ ಇಟ್ಟಿದ್ದಾರೆ.
ಎರಡು ವರ್ಷಗಳ ರಜೆ ತೆಗೆದುಕೊಂಡು ಈ ಯೋಜನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಆಮೀರ್ ಅರಿತುಕೊಂಡರು ಎಂದು ಬಾಲಿವುಡ್ ಹಂಗಾಮಾ ವರದಿ ಮಾಡಿದೆ.
ಶೋ ಬಗ್ಗೆ ಅಥವಾ ಅಂತಹ ಯಾವುದೇ ಧಾರ್ಮಿಕ ವಿಷಯಗಳ ಬಗ್ಗೆ ಜನರು ಆಕ್ಷೇಪಿಸುತ್ತಾರೆ ಎಂಬ ಭಯವು ಅವರನ್ನು ಕಾಡಿದೆ ಎನ್ನಲಾಗಿದೆ.
ಆದ್ದರಿಂದ ವಿವಾದವನ್ನು ತಪ್ಪಿಸಲು ಅವರು ಈ ಪ್ರಾಜೆಕ್ಟ್ ಕೈಬಿಡಲು ನಿರ್ಧರಿಸಿದ್ದಾರೆ.
ಮಹಾಭಾರತವನ್ನು ಮಾಡುವ ಯೋಜನೆಯನ್ನು ನಿರಾಕರಿಸಿದ್ದರು. ಅವರು ಎಂದಿಗೂ ಚಿತ್ರವನ್ನು ಘೋಷಿಸಿಲ್ಲ. ಅದು ಜನರು ಊಹೆ ಮತ್ತು ಊಹಾಪೋಹಗಳಿಗೆ ಪ್ರತಿಕ್ರಿಯಿಸಲು ಅವರು ಬಯಸುವುದಿಲ್ಲ ಎಂದು ಸಂದರ್ಶನವೊಂದರಲ್ಲಿ ಆಮೀರ್ ಹೇಳಿದರು.
ಮಹಾಭಾರತ್ ಚಿತ್ರದ ಪಾತ್ರವನ್ನು ಶಾರುಖ್ ಖಾನ್ಗೆ ಪಾಸ್ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಮಹಾಭಾರತದಲ್ಲಿ ಆಮೀರ್ ಕೃಷ್ಣನ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದು ಹೇಳಲಾಗಿತ್ತು.