ಕೇಂದ್ರ ಬಜೆಟ್ 2020: ನಿರ್ಮಲಾ ಸೀತಾರಾಮನ್ ಮಂಡಿಸಿದ್ದು ಹೀಗೆ...!
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಬಹು ನಿರೀಕ್ಷಿತ ಕೇಂದ್ರ ಮುಂಗಡ ಪತ್ರ ಮಂಡಿಸಿದ್ದಾರೆ. ಬೆಳಗ್ಗೆ 11 ಗಂಟೆಗೆ ಸಂಸತ್ತಿನಲ್ಲಿ ತಮ್ಮ 2ನೇ ಬಜೆಟ್ ಭಾಷಣ ಆರಂಭಿಸಿದರು ವಿತ್ತ ಸಚಿವೆ. ಅವರ ಭಾಷಣದಲ್ಲಿ ಹೈಲೇಟ್ ಆಗಿದ್ದೇನು?
ಸಾರಿಗೆ ಮತ್ತು ಸಂಪರ್ಕ ವ್ಯವಸ್ಥೆ ಬದಲಾವಣೆಯಿಂದ ಶೇ.20 ಇಂಧನ ಉಳಿತಾಯ ಹಾಗೂ 5 ವರ್ಷದ ಬ್ಯಾಂಕಿಂಗ್ ವಲಯ ಸ್ವಚ್ಛೆತೆಗೆ ಆದ್ಯತೆ.
ಡಿವಿಡೆಂಡ್ ಡಿಸ್ಟ್ರಿಬ್ಯೂಟ್ ತೆರಿಗೆ ರದ್ದು.
ಸರಕಾರಿ ಕಾರ್ಯಕ್ರಮಗಳು ಜನರಿಗೆ ಸುಲಭವಾಗಿ ತಲುಪಲು ಡಿಜಿಟಲ್ ಪೇಮೆಂಟ್ಗೆ ಒತ್ತು.
40 ಕೋಟಿ ಜನರಿಗೆ ಈ ವರ್ಷ GST ಪಾವತಿಸಿಲಾಗಿದ್ದು, ಪ್ರತಿ ಕುಟುಂಬಕ್ಕೂ ತಿಂಗಳಿಗೆ 4 ಸಾವಿರ ರೂ. ಉಳಿತಾಯವಾಗಿದೆ, ಎಂದ ನಿರ್ಮಲಾ.
ರೈತರ ಆದಾಯ 2022ರೊಳಗೆ ದ್ವಿಗುಣಗೊಳಿಸಲು ಅಗತ್ಯ ಕ್ರಮ ಘೋಷಿಸಿದ ಮೋದಿ ಸರಕಾರ.
ರೈತ ಮಹಿಳೆಯರಿಗಾಗಿ ಧನ ಲಕ್ಷ್ಮಿ ಯೋಜನೆ ಜಾರಿ, ದೀನ್ ದಯಾಳ್ ಅಂತ್ಯೋದಯ ಯೋಜನೆ ವಿಸ್ತರಣೆ.
20 ಸಾವಿರಕ್ಕೂ ಹೆಚ್ಚು ಆಸ್ಪತ್ರೆಯಲ್ಲಿ ಆಯುಷ್ಮಾನ್ ಭಾರತ್ ಯೋಜನೆ ಸಹಭಾಗಿತ್ವ.
ಸ್ವಚ್ಛ ಭಾರತ್ ಯೋಜನೆಗೆ ಒಟ್ಟು 12,300 ಕೋಟಿ ರೂ. ಅನುದಾನ.
ಸಾಮಾನ್ಯರ ನಿರೀಕ್ಷೆಯಂತೆ ನಿರ್ಮಲಾ ಟ್ಯಾಕ್ಸ್ ಸ್ಲ್ಯಾಬ್ ಪರಿಚಯಿಸಿದ್ದಾರೆ.