MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • 25 ವರ್ಷದೊಳಗಿನವರಿಗೆ ಉದ್ಯಮಿ ನಿಖಿಲ್ ಕಾಮತ್ ಮಹತ್ವದ ಸಲಹೆ, ಶ್ರೀಮಂತರಾಗಲು ಇಷ್ಟು ಸಾಕು

25 ವರ್ಷದೊಳಗಿನವರಿಗೆ ಉದ್ಯಮಿ ನಿಖಿಲ್ ಕಾಮತ್ ಮಹತ್ವದ ಸಲಹೆ, ಶ್ರೀಮಂತರಾಗಲು ಇಷ್ಟು ಸಾಕು

25 ವರ್ಷದೊಳಗಿನವರಿಗೆ ಉದ್ಯಮಿ ನಿಖಿಲ್ ಕಾಮತ್ ಮಹತ್ವದ ಸಲಹೆ, ಇದು ಹೂಡಿಕೆ, ದೊಡ್ಡ ಹಣದ ಬಗ್ಗೆ ಅಲ್ಲ. ಆದರೆ ಈ ಮಹತ್ವದ ಸಲಹೆ ಪಾಲಿಸಿದರೆ ಉದ್ಯಮದಲ್ಲಿ ಯಶಸ್ಸು ಮಾತ್ರವಲ್ಲ ಹಣ ಹೊಳೆ ಹರಿಯಲಿದೆ ಎಂದಿದ್ದಾರೆ. 

1 Min read
Author : Chethan Kumar
Published : Jan 31 2026, 03:58 PM IST
Share this Photo Gallery
  • FB
  • TW
  • Linkdin
  • Whatsapp
15
ಯುವ ಸಮೂಹಕ್ಕೆ ನಿಖಿಲ್ ಕಾಮತ್ ಸಲಹೆ
Image Credit : stockPhoto

ಯುವ ಸಮೂಹಕ್ಕೆ ನಿಖಿಲ್ ಕಾಮತ್ ಸಲಹೆ

ಭಾರತದ ಯುವ ಉದ್ಯಮಿಗಳ ಪೈಕಿ ನಿಖಿಲ್ ಕಾಮತ್ ಮುಂಚೂಣಿಯಲ್ಲಿದ್ದಾರೆ. ಝಿರೋಧಾ ಸಹ ಸಂಸ್ಥಾಪಕ ನಿಖಿಲ್ ಕಾಮತ್ ಇದೀಗ 25 ವರ್ಷದೊಳಗಿನವರಿಗೆ ಮಹತ್ವದ ಸಲಹೆ ನೀಡಿದ್ದಾರೆ. ಹೌದು, 25 ವರ್ಷದೊಳಗಿನ ಸ್ಟಾರ್ಟ್ಅಪ್ ಸಂಸ್ಥಾಪಕರು, ಉದ್ಯಮಿಗಳಿಗೆ ನಿಖಿಲ್ ಕಾಮತ್ ಸೂಚನೆ ನೀಡಿದ್ದಾರೆ. ಅತೀ ಚಿಕ್ಕ ವಯಸ್ಸಿನ ಯಶಸ್ವಿ ಉದ್ಯಮ ನಡೆಸುವುದು ಮಾತ್ರವಲ್ಲ, ಉತ್ತಮ ಆದಾಯ ಪಡೆಯುವ ಕುರಿತು ಸಲಹೆ ನೀಡಿದ್ದಾರೆ.

25
ಹಣಕಾಸು, ಫಂಡಿಂಗ್ ಸಲಹೆ ಅಲ್ಲ
Image Credit : Gemini AI

ಹಣಕಾಸು, ಫಂಡಿಂಗ್ ಸಲಹೆ ಅಲ್ಲ

ಸಾಮಾನ್ಯವಾಗಿ ಸ್ಟಾರ್ಟ್ಅಪ್ ಸಂಸ್ಥಾಪಕರು ಎದುರಿಸುವ ಸಮಸ್ಯೆ ಫಂಡಿಂಗ್. ಆರ್ಥಿಕ ಸಂಪನ್ಮೂಲ ಕೊರತೆ. ಆದರೆ ಯುವ ಉದ್ಯಮಿಗಳಿಗೆ ಹಣ ಸಮಸ್ಯೆಗಿಂತ ಯಾವ ವಿಚಾರವನ್ನು ಪ್ರಮುಖವಾಗಿ ಗಮನಿಸಬೇಕು ಎಂದು ಸೂಚಿಸಿದ್ದಾರೆ. ಹಣಕಾಸು, ಫಂಡಿಂಗ್ ಕುರಿತು ಚಿಂತಿಸುವ ಬದಲು ಸಾಫ್ಟ್ ಸ್ಕಿಲ್ ಬಗ್ಗೆ ಗಂಭೀರವಾಗಿ ಯೋಚಿಸಬೇಕು ಎಂದಿದ್ದಾರೆ. ಇದಕ್ಕಾಗಿ ಕೆಲ ಸರಳ ಟಿಪ್ಸ್ ನೀಡಿದ್ದಾರೆ.

Related Articles

Related image1
25ನೇ ವಯಸ್ಸಿನಲ್ಲಿ ಎಂಬಿಎ ಓದುವವರು ಮೂರ್ಖರು, ನಿಖಿಲ್ ಕಾಮತ್ ಹೀಗೆ ಹೇಳಿದ್ದೇಕೆ?
Related image2
ಶಾರುಖ್ ಖಾನ್, ಆರ್ಯನ್ ಖಾನ್, ನಿಖಿಲ್ ಕಾಮತ್ ಜೊತೆ ಸೇರಿ ಹೊಸ ಮದ್ಯ ಬ್ರ್ಯಾಂಡ್ ಲಾಂಚ್
35
ಸರಳವಾಗಿ ಜನರಿಗೆ ತಿಳಿಸಬೇಕು
Image Credit : Twitter

ಸರಳವಾಗಿ ಜನರಿಗೆ ತಿಳಿಸಬೇಕು

ಯುವ ಸ್ಟಾರ್ಟ್ಅಪ್ ಉದ್ಯಮಿಗಳು ಉತ್ಪನ್ನಗಳನ್ನು( Product) ಅತ್ಯಂತ ಕಾಳಜಿ ವಹಿಸಿ ಮಾಡುತ್ತಾರೆ. ಎಲ್ಲಾ ಗಮನಹರಿಸುತ್ತಾರೆ. ಆದರೆ ನಿಮ್ಮ ಉತ್ಪನ್ನಗಳನ್ನು ಜನರಿಗೆ ಅರ್ಥವಾಗದಿದ್ದರೆ, ನೀವು ಉತ್ಪನ್ನವನ್ನು ಸರಳವಾಗಿ ಜನರಿಗೆ ತಿಳಿಸಲು ಸಾಧ್ಯವಾಗದಿದ್ದರೆ ಎಲ್ಲವೂ ವ್ಯರ್ಥವಾಗಲಿದೆ. ನಿಮ್ಮ ಉದ್ಯಮವನ್ನು, ಉತ್ಪನ್ನವನ್ನು ಅತ್ಯಂತ ಆಕರ್ಷಕವಾಗಿ, ಅತ್ಯಂತ ಸರಳವಾಗಿ ಎಲ್ಲರಿಗೂ ಅರ್ಥವಾಗುವಂತೆ ಹೇಳುವಂತೆ ಕಲಿಯಬೇಕು. ಇದು ಉದ್ಯಮಕ್ಕೆ ಮಾತ್ರವಲ್ಲ, ಬದುಕಿಗೂ ಮುಖ್ಯ ಎಂದು ನಿಖಿಲ್ ಕಾಮತ್ ಹೇಳಿದ್ದಾರೆ.

45
ಕಮ್ಯೂನಿಕೇಶನ್ ಸ್ಕಿಲ್
Image Credit : Asianet News

ಕಮ್ಯೂನಿಕೇಶನ್ ಸ್ಕಿಲ್

ಉದ್ಯಮ ಸಂಸ್ಥಾಪಕರಿಗೆ ಅತೀ ಮುಖ್ಯವಾಗಿ ಸಂವಹನ ಕಲೆ ಇರಬೇಕು. ಭಾಷಣ ಮಾಡಲು ಗೊತ್ತಿರಬೇಕು, ನಿಮ್ಮ ಉದ್ಯಮ, ಉತ್ಪನ್ನಗಳ ಕುರಿತು ಅಂತಾರಾಷ್ಟ್ರೀಯ ವೇದಿಕೆಗಳಲ್ಲೂ ಹೆಮ್ಮೆಯಿಂದ ಯಾವುದೇ ಅಡೆ ತಡೆ ಇಲ್ಲದೆ ಸ್ಪಷ್ಟವಾಗಿ ಹೇಳುವಂತಿರಬೇಕು. ಉದ್ಯಮದಲ್ಲಿ ಸಂವಹನ ಕೂಡ ಅಷ್ಟೇ ಮುಖ್ಯವಾಗುತ್ತದೆ. ನಾನು ಉತ್ತಮ ಭಾಷಣಕಾರ, ಸಂವಹನಕಾರನಾಗಿರಲಿಲ್ಲ. ಬಳಿಕ ತರಬೇತಿ ಪಡೆದಿದ್ದೆ ಎಂದಿದ್ದಾರೆ.

55
ಟೀಕೆಗಳನ್ನು ಎದುರಿಸಲು ಕಲಿಯಿರಿ
Image Credit : others

ಟೀಕೆಗಳನ್ನು ಎದುರಿಸಲು ಕಲಿಯಿರಿ

ಉದ್ಯಮ ಕ್ಷೇತ್ರದಲ್ಲಿ ಪ್ರಶಂಸೆಗಳಿಂದ ಟೀಕೆಗಳೇ ಹೆಚ್ಚು ಕೇಳುತ್ತದೆ. ಟೀಕೆಗಳನ್ನು ಎದುರಿಸಲು ಕಲಿಯಬೇಕು. ತಾಳ್ಮೆ ಕಳೆದುಕೊಳ್ಳದೆ, ಎಲ್ಲವನ್ನೂ ಎದುರಿಸಬೇಕು. ಈ ವಿಚಾರದಲ್ಲ ಯುವ ಸ್ಟಾರ್ಟ್‌ಅಪ್ ಉದ್ಯಮಿಗಳು ವಯಸ್ಸಿಗಿಂತ ಹೆಚ್ಚಿನ ಪ್ರಭುದ್ಧತೆ ತೋರಬೇಕು ಎಂದು ನಿಖಿಲ್ ಕಾಮತ್ ಹೇಳಿದ್ದಾರೆ.

ಟೀಕೆಗಳನ್ನು ಎದುರಿಸಲು ಕಲಿಯಿರಿ

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ವ್ಯಾಪಾರ ಕಲ್ಪನೆ
ವ್ಯವಹಾರ
ಭಾರತ ಸುದ್ದಿ
ಬೆಂಗಳೂರು

Latest Videos
Recommended Stories
Recommended image1
ಚಿನ್ನದ ಬೆಲೆ ಇಳಿಯುತ್ತಿದೆ ಅಂತ ಖರೀದಿಸುತ್ತಿದ್ದೀರಾ? ಒಂದು ನಿಮಿಷ, ಇಲ್ಲಿದೆ ನೋಡಿ ಮತ್ತೊಂದು ಗುಡ್‌ ನ್ಯೂಸ್!
Recommended image2
Union Budget 2026 Expectations LIVE Update: ಕೇಂದ್ರ ಬಜೆಟ್‌ನ ನಮ್ಮ ನಿರೀಕ್ಷೆಗಳೇನು?
Recommended image3
ಉದ್ಯಮಿ ಸಿ ಜೆ ರಾಯ್ ವಿರುದ್ಧ ಐಟಿ ಅಧಿಕಾರಿಗಳು ಯಾವ ವಿಚಾರಕ್ಕೆ ಹಿಂದೆ ಬಿದ್ರು? ಅವರ ಮೇಲಿನ ಆರೋಪ ಏನು ಗೊತ್ತಾ?
Related Stories
Recommended image1
25ನೇ ವಯಸ್ಸಿನಲ್ಲಿ ಎಂಬಿಎ ಓದುವವರು ಮೂರ್ಖರು, ನಿಖಿಲ್ ಕಾಮತ್ ಹೀಗೆ ಹೇಳಿದ್ದೇಕೆ?
Recommended image2
ಶಾರುಖ್ ಖಾನ್, ಆರ್ಯನ್ ಖಾನ್, ನಿಖಿಲ್ ಕಾಮತ್ ಜೊತೆ ಸೇರಿ ಹೊಸ ಮದ್ಯ ಬ್ರ್ಯಾಂಡ್ ಲಾಂಚ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved