MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • Bengaluru Urban
  • ಉದ್ಯಮಿ ಸಿಜೆ ರಾಯ್ ಪ್ರಕರಣ: ಸಮಜಾಯಿಷಿಗೆ ಇಳಿದು ಕೇಂದ್ರದ ಮೊರೆ ಹೋದ ಐಟಿ ಅಧಿಕಾರಿಗಳು

ಉದ್ಯಮಿ ಸಿಜೆ ರಾಯ್ ಪ್ರಕರಣ: ಸಮಜಾಯಿಷಿಗೆ ಇಳಿದು ಕೇಂದ್ರದ ಮೊರೆ ಹೋದ ಐಟಿ ಅಧಿಕಾರಿಗಳು

ಉದ್ಯಮಿ ಸಿ.ಜೆ. ರಾಯ್ ಅವರ ಸಾವಿನ ಪ್ರಕರಣವು ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಸೋದರನ ಆರೋಪಗಳ ಬೆನ್ನಲ್ಲೇ, ಆದಾಯ ತೆರಿಗೆ ಇಲಾಖೆಯು ಗೃಹ ಸಚಿವಾಲಯಕ್ಕೆ ಸ್ಪಷ್ಟೀಕರಣ ಪತ್ರವನ್ನು ಕಳುಹಿಸಿದ್ದು, ತಾವು ಯಾವುದೇ ಒತ್ತಡ ಹೇರಿಲ್ಲ ಮತ್ತು ತೆರಿಗೆ ವಂಚನೆ ತನಿಖೆ ನಡೆಸುತ್ತಿದ್ದೆವು ಎಂದು ತಿಳಿಸಿದೆ.

2 Min read
Author : Mahmad Rafik
Published : Jan 31 2026, 11:25 AM IST
Share this Photo Gallery
  • FB
  • TW
  • Linkdin
  • Whatsapp
15
ಉದ್ಯಮಿ ಸಿ.ಜೆ. ರಾಯ್ ಪ್ರಕರಣ
Image Credit : Asianet News

ಉದ್ಯಮಿ ಸಿ.ಜೆ. ರಾಯ್ ಪ್ರಕರಣ

ಉದ್ಯಮಿ ಸಿ.ಜೆ. ರಾಯ್ ಪ್ರಕರಣ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಸಿ.ಜೆ.ರಾಯ್ ಅವರ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಒತ್ತಡವಿತ್ತು ಎಂದು ಸೋದರ ಬಾಬು ರಾಯ್ ಹೇಳಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ ಐಟಿ ಅಧಿಕಾರಿಗಳು ಪ್ರಕರಣ ಸಂಬಂಧ ಸಮಜಾಯಿಷಿಗೆ ಇಳಿದಿದ್ದಾರೆ.

25
 ಆದಾಯ ತೆರಿಗೆ ಇಲಾಖೆ
Image Credit : Asianet News

ಆದಾಯ ತೆರಿಗೆ ಇಲಾಖೆ

ಸಿ.ಜೆ. ರಾಯ್ ಅವರ ಆತ್ಮ*ಹತ್ಯೆ ಪ್ರಕರಣದ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆ ನೇರವಾಗಿ ಗೃಹ ಸಚಿವಾಲಯಕ್ಕೆ (Ministry of Home Affairs) ನೀಡಿದೆ ಎಂದು ತಿಳಿದು ಬಂದಿದೆ. ತನಿಖೆ ಬಗ್ಗೆ ಗಮನಹರಿಸುವಂತೆ ಮನವಿ ಮಾಡಿಕೊಂಡಿದೆಯಂತೆ. ಗೃಹ ಸಚಿವಾಲಯಕ್ಕೆ ಮೂರು ಪುಟಗಳ ಸ್ಪಷ್ಟನೆಯನ್ನು ಅಧಿಕಾರಿಗಳು ನೀಡಿದ್ದಾರೆ.

Related Articles

Related image1
CJ Roy Death: ಲಾಭ ಮಾಡದೆ, ಮಗಳಿಗೋಸ್ಕರ ತಗೊಂಡ ಜಾಗವನ್ನು ಪುನೀತ್‌ ರಾಜ್‌ಕುಮಾರ್‌ಗೆ ಕೊಟ್ಟಿದ್ದ ಸಿಜೆ ರಾಯ್!
Related image2
Confident Group CJ Roy ಮಗಳು ಯಾರು? ಈ ವಯಸ್ಸಿಗೆ ಅಷ್ಟೆಲ್ಲ ಫಾಲೋವರ್ಸ್‌ ಇರೋದ್ಯಾಕೆ?
35
ಪತ್ರದಲ್ಲಿ ಏನಿದೆ?
Image Credit : Asianet News

ಪತ್ರದಲ್ಲಿ ಏನಿದೆ?

ಉದ್ಯಮಿ ಸಿ.ಜೆ.ರಾಯ್ ಅವರು ಆದಾಯ ತೆರಿಗೆ ವಂಚನೆ ಮಾಡಿದ್ದರ ಬಗ್ಗೆ ತನಿಖೆ ನಡೆಸಲಾಗುತ್ತಿತ್ತು. ಒಂದು ತಿಂಗಳ ಹಿಂದೆ ದಾಳಿ ನಡೆಸಿ ದಾಖಲೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ರಾಯ್ ಅವರ ಆಡಿಟಿಂಗ್‌ನಲ್ಲಿ ವ್ಯತ್ಯಾಸ ಕಂಡು ಬಂದಿದ್ದರಿಂದ ಮತ್ತೊಮ್ಮೆ ಪರಿಶೀಲನೆ ನಡೆಸಲಾಗುತ್ತಿತ್ತು ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.

45
ಸುದೀರ್ಘ ಮೂರು ಪುಟಗಳ ಸ್ಪಷ್ಟನೆ
Image Credit : CJ Roy Confidence Group

ಸುದೀರ್ಘ ಮೂರು ಪುಟಗಳ ಸ್ಪಷ್ಟನೆ

ಶುಕ್ರವಾರ ಸಿ.ಜೆ.ರಾಯ್ ಅವರಿಂದ ಯಾವುದೇ ಹೇಳಿಕೆಗಳನ್ನು ದಾಖಲಿಸಿಕೊಂಡಿಲ್ಲ. ನಾವು ಯಾವುದೇ ರೀತಿಯ ಒತ್ತಡವನ್ನು ಸಹ ರಾಯ್ ಮೇಲೆ ಹೇರಿಲ್ಲ. ರಾಜಕೀಯ ಪ್ರೇರಿತವಾಗಿ ತನಿಖೆ ನಡೆಯುವ ಸಾಧ್ಯತೆಗಳಿರೋದರಿಂದ ಗೃಹ ಸಚಿವಾಲಯ ಪ್ರಕರಣದ ಮೇಲೆ ಗಮನ ನೀಡಬೇಕೆಂದು ಮನವಿ ಮಾಡಿಕೊಳ್ಳಲಾಗಿದೆ. ಜಂಟಿ ನಿರ್ದೇಶಕ ನಿತೀನ್ ಬಿಜು ಹೇಳಿಕೆ ಆಧರಿಸಿ ಸುದೀರ್ಘ ಮೂರು ಪುಟಗಳ ಸ್ಪಷ್ಟನೆಯನ್ನು ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಖ್ಯಾತ ನಟಿ, ಮಾಡೆಲ್ & ರೆಸಾರ್ಟ್: ಇದೆಲ್ಲವೂ ಆಗರ್ಭ ಶ್ರೀಮಂತರ ತೆವಲುಗಳು ಎಂದ ಚಂದ್ರಚೂಡ

55
ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ
Image Credit : Asianet News

ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಕಳೆದ 10 ವರ್ಷದಿಂದ ಉದ್ಯಮಿಗಳ ಮೇಲೆ ದಾಳಿ ಆಗ್ತಿದೆ. ರಾಜ್ಯದಲ್ಲಿ ಈ ರೀತಿಯಾಗಿ 2-3 ಘಟನೆಗಳು ಆಗಿವೆ. ಕೇಂದ್ರ ಸರ್ಕಾರದ ಮಾತು ಕೇಳದವರ ಮೇಲೆ ದಾಳಿ ಆಗ್ತಿದೆ. ಕೇಂದ್ರ ಸರ್ಕಾರ ಅದಾನಿ- ಅಂಬಾನಿ ಪರವಾಗಿ ಕೆಲಸ ಮಾಡುತ್ತಿದೆ. ಎಷ್ಟು ಕಿರುಕುಳ ಆಗಿದೆ ಅನ್ನೋದನ್ನ ನೀವೂ ಯೋಚಿಸಬೇಕಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಇದನ್ನೂ ಓದಿ: CJ Roy Case: ಸಾಲ, ಬೆದರಿಕೆ, ಒತ್ತಡ: ಸೋದರನ ಸಾವಿನ ಕಾರಣ ಬಿಚ್ಚಿಟ್ರಾ ಬಾಬು ರಾಯ್?

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಸಿ.ಜೆ. ರಾಯ್
ಐಟಿ ದಾಳಿ
ಆದಾಯ ತೆರಿಗೆ
ಬೆಂಗಳೂರು

Latest Videos
Recommended Stories
Recommended image1
CJ Roy Case: ಸಾಲ, ಬೆದರಿಕೆ, ಒತ್ತಡ: ಸೋದರನ ಸಾವಿನ ಕಾರಣ ಬಿಚ್ಚಿಟ್ರಾ ಬಾಬು ರಾಯ್?
Recommended image2
ಕೇರಳ ಟು ದುಬೈವರೆಗೆ ರಾಯ್‌ ಕಟ್ಟಿದ್ದ ಕಾನ್ಫಿಡೆಂಟ್‌ ಸಾಮ್ರಾಜ್ಯ! ಸೇಲ್ಸ್ ಮ್ಯಾನ್ ಬೈದಿದ್ದಕ್ಕೆ ಶಪಥ ಮಾಡಿದ್ದ ರಾಯ್
Recommended image3
ಹೋಂ ವರ್ಕ್‌ ಮಾಡದ್ದಕ್ಕೆ ಬಾಲಕನಿಗೆ ಭಯಾನಕ ಶಿಕ್ಷೆ! ಬಲವಂತದಿಂದ ಶಾಲೆಗೆ ಕಳಿಸಿದರೆ ಸಾಯುವೆ ಎಂದ ವಿದ್ಯಾರ್ಥಿ
Related Stories
Recommended image1
CJ Roy Death: ಲಾಭ ಮಾಡದೆ, ಮಗಳಿಗೋಸ್ಕರ ತಗೊಂಡ ಜಾಗವನ್ನು ಪುನೀತ್‌ ರಾಜ್‌ಕುಮಾರ್‌ಗೆ ಕೊಟ್ಟಿದ್ದ ಸಿಜೆ ರಾಯ್!
Recommended image2
Confident Group CJ Roy ಮಗಳು ಯಾರು? ಈ ವಯಸ್ಸಿಗೆ ಅಷ್ಟೆಲ್ಲ ಫಾಲೋವರ್ಸ್‌ ಇರೋದ್ಯಾಕೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved