MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ನವವಿವಾಹಿತೆ ಶೃತಿ ಅನುಮಾನಾಸ್ಪದ ಸಾವು, ಗಂಡ ಪವನ್ ಕಲ್ಯಾಣ್ ಅರೆಸ್ಟ್: ಪತಿಯಿಂದಲೇ ಕೊಲೆ ಮಾಡಿ ಆತ್ಮ*ಹತ್ಯೆ ಆರೋಪ!

ನವವಿವಾಹಿತೆ ಶೃತಿ ಅನುಮಾನಾಸ್ಪದ ಸಾವು, ಗಂಡ ಪವನ್ ಕಲ್ಯಾಣ್ ಅರೆಸ್ಟ್: ಪತಿಯಿಂದಲೇ ಕೊಲೆ ಮಾಡಿ ಆತ್ಮ*ಹತ್ಯೆ ಆರೋಪ!

ಬೆಂಗಳೂರಿನ ಯಲಹಂಕದಲ್ಲಿ 24 ವರ್ಷದ ನವವಿವಾಹಿತೆ ಶೃತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ವರದಕ್ಷಿಣೆ ಕಿರುಕುಳದಿಂದ ಪತಿ ಪವನ್ ಕಲ್ಯಾಣ್ ಮತ್ತು ಆತನ ಕುಟುಂಬವೇ ಕೊಲೆ ಮಾಡಿ ಆತ್ಮ*ಹತ್ಯೆ ಎಂದು ಬಿಂಬಿಸುತ್ತಿದ್ದಾರೆ ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ.

2 Min read
Author : Sathish Kumar KH
Published : Mar 15 2026, 10:15 AM IST
Share this Photo Gallery
  • FB
  • TW
  • Linkdin
  • Whatsapp
16
ನವ ವಿವಾಹಿತೆ ಶೃತಿ ಸಾವು
Image Credit : Asianet News

ನವ ವಿವಾಹಿತೆ ಶೃತಿ ಸಾವು

ಬೆಂಗಳೂರು (ಮಾ.15): ನಗರದ ಯಲಹಂಕ ನ್ಯೂ ಟೌನ್ ವ್ಯಾಪ್ತಿಯಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದ್ದು, 24 ವರ್ಷದ ನವವಿವಾಹಿತೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಇದನ್ನು ಆತ್ಮ*ಹತ್ಯೆ ಎಂದು ಬಿಂಬಿಸಲು ಪತಿ ಮತ್ತು ಕುಟುಂಬಸ್ಥರು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದ್ದು, ಸದ್ಯ ಯಲಹಂಕ ನ್ಯೂ ಟೌನ್ ಪೊಲೀಸರು ಮೃತಳ ಪತಿ ಪವನ್ ಕಲ್ಯಾಣ್ ಎಂಬಾತನನ್ನು ಬಂಧಿಸಿದ್ದಾರೆ.

26
ಘಟನೆಯ ವಿವರ:
Image Credit : Asianet News

ಘಟನೆಯ ವಿವರ:

ಯಲಹಂಕ ನ್ಯೂ ಟೌನ್‌ನ ಬೃಂದಾವನ ಲೇಔಟ್‌ನಲ್ಲಿ ವಾಸವಿದ್ದ ಶೃತಿ (24) ಮೃತಪಟ್ಟ ದುರ್ದೈವಿ. ಕಳೆದ 2024ರ ಡಿಸೆಂಬರ್‌ನಲ್ಲಿ ಪವನ್ ಕಲ್ಯಾಣ್ ಮತ್ತು ಶೃತಿ ಅವರ ವಿವಾಹ ಅತ್ಯಂತ ಸಡಗರದಿಂದ ನೆರವೇರಿತ್ತು. ಮದುವೆಯಾದ ಹೊಸತರಲ್ಲಿ ಅನ್ಯೋನ್ಯವಾಗಿದ್ದ ದಂಪತಿಗಳ ನಡುವೆ ಕೆಲವೇ ತಿಂಗಳುಗಳಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಶುಕ್ರವಾರ ಶೃತಿ ಅವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೇಲ್ನೋಟಕ್ಕೆ ಇದು ಆತ್ಮಹತ್ಯೆಯಂತೆ ಕಂಡರೂ, ಶೃತಿಯ ಪೋಷಕರು ಇದು ವ್ಯವಸ್ಥಿತ ಕೊಲೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

Related Articles

Related image1
ಟ್ರೋಲಿಗರಿಗೆ ಉತ್ತರಿಸುತ್ತಲೇ ಪತಿಯನ್ನು ಬೀಳ್ಕೊಟ್ಟ ನವ ವಿವಾಹಿತೆ ನಟಿ ರಜಿನಿ ಹೇಳಿದ್ದೇನು?
Related image2
ಪ್ರತಿದಿನವೂ ನೈಟ್‌ಗೌನ್ ಧರಿಸುವಂತೆ ಒತ್ತಡ; ಗಂಡನ ವಿರುದ್ಧ ದೂರು ದಾಖಲಿಸಿದ 21ರ ವಿವಾಹಿತೆ
36
ವರದಕ್ಷಿಣೆ ಕಿರುಕುಳ ಮತ್ತು ಕಲಹ
Image Credit : Asianet News

ವರದಕ್ಷಿಣೆ ಕಿರುಕುಳ ಮತ್ತು ಕಲಹ

ಮೃತರ ಕುಟುಂಬಸ್ಥರ ಆರೋಪದ ಪ್ರಕಾರ, ಮದುವೆಯಾದ ಕೆಲವೇ ದಿನಗಳಿಂದ ಪವನ್ ಕಲ್ಯಾಣ್ ಮತ್ತು ಆತನ ಕುಟುಂಬದವರು ಶೃತಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರು. ಮುಖ್ಯವಾಗಿ ಹೆಚ್ಚಿನ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದರು ಎನ್ನಲಾಗಿದೆ. ಈ ವಿಷಯವಾಗಿ ಶೃತಿ ಮತ್ತು ಪತಿ ಕುಟುಂಬದ ನಡುವೆ ಪದೇ ಪದೇ ಜಗಳಗಳು ನಡೆಯುತ್ತಿದ್ದವು. ಈ ಹಿಂದೆ ಮನೆಯ ಹಿರಿಯರ ಸಮ್ಮುಖದಲ್ಲಿ ರಾಜಿ ಪಂಚಾಯ್ತಿ ಕೂಡ ಮಾಡಲಾಗಿತ್ತು. ಜಗಳ ಬಿಟ್ಟು ಸುಖವಾಗಿ ಸಂಸಾರ ನಡೆಸುವಂತೆ ಬುದ್ಧಿವಾದ ಹೇಳಿ ಕಳುಹಿಸಲಾಗಿತ್ತು. ಆದರೂ ಪವನ್ ಕಲ್ಯಾಣ್ ತನ್ನ ಚಾಳಿ ಮುಂದುವರಿಸಿದ್ದ ಎನ್ನಲಾಗಿದೆ.

46
ಕೊಲೆ ಮಾಡಿ ಆತ್ಮ*ಹತ್ಯೆ ಎಂದು ಬಿಂಬಿಸಿದ ಆರೋಪ
Image Credit : Asianet News

ಕೊಲೆ ಮಾಡಿ ಆತ್ಮ*ಹತ್ಯೆ ಎಂದು ಬಿಂಬಿಸಿದ ಆರೋಪ

'ನನ್ನ ಮಗಳನ್ನು ಪವನ್ ಕಲ್ಯಾಣ್ ಮತ್ತು ಆತನ ಕುಟುಂಬದವರೇ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ. ನಂತರ ಪ್ರಕರಣವನ್ನು ಆತ್ಮ*ಹತ್ಯೆ ಎಂದು ತೋರಿಸಲು ಶವವನ್ನು ನೇಣು ಹಾಕಿದ್ದಾರೆ' ಎಂದು ಶೃತಿಯ ತಂದೆ-ತಾಯಿ ದೂರಿನಲ್ಲಿ ತಿಳಿಸಿದ್ದಾರೆ. ಶೃತಿಯ ದೇಹದ ಮೇಲೆ ಕೆಲವು ಗಾಯದ ಗುರುತುಗಳು ಕಂಡುಬಂದಿದ್ದು, ಇದು ಸಾವಿನ ಬಗ್ಗೆ ಹೆಚ್ಚಿನ ಅನುಮಾನಗಳನ್ನು ಹುಟ್ಟುಹಾಕಿದೆ.

56
ಪೊಲೀಸ್ ಕ್ರಮ ಮತ್ತು ಕಾನೂನು ಪ್ರಕ್ರಿಯೆ:
Image Credit : Asianet News

ಪೊಲೀಸ್ ಕ್ರಮ ಮತ್ತು ಕಾನೂನು ಪ್ರಕ್ರಿಯೆ:

ಘಟನೆ ನಡೆದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಯಲಹಂಕ ನ್ಯೂ ಟೌನ್ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮೃತರ ಪೋಷಕರು ನೀಡಿದ ದೂರಿನ ಆಧಾರದ ಮೇಲೆ ಪತಿ ಪವನ್ ಕಲ್ಯಾಣ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

66
ದಾಖಲಾದ ಸೆಕ್ಷನ್‌ಗಳು
Image Credit : Asianet News

ದಾಖಲಾದ ಸೆಕ್ಷನ್‌ಗಳು

ಆರೋಪಿಗಳ ವಿರುದ್ಧ BNS 103(1) (ಕೊಲೆ), 3(5) (ಸಮಾನ ಉದ್ದೇಶದಿಂದ ಎಸಗಿದ ಕೃತ್ಯ), ಹಾಗೂ 80(8) (ವರದಕ್ಷಿಣೆ ಸಾವು ಅಥವಾ ವಿವಾಹಿತ ಮಹಿಳೆಗೆ ಕಿರುಕುಳ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಶೃತಿ ಸಾವಿನ ಅಸಲಿ ರಹಸ್ಯ ಹೊರಬೀಳಲಿದೆ. ಮಗಳ ಸಾವಿನಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲಿ ಎಂದು ಆಗ್ರಹಿಸಿದ್ದಾರೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಬೆಂಗಳೂರು
ಪತ್ನಿ
ಗಂಡ
ಕರ್ನಾಟಕ ಸುದ್ದಿ
ಮದುವೆ
Latest Videos
Recommended Stories
Recommended image1
ಯುದ್ಧ ನಡೆತಿರೋದು ಇರಾನ್‌ನಲ್ಲಿ, ಬರೆ ಪಾಕಿಸ್ತಾನಕ್ಕೆ, ಸಚಿವರು, ಸರ್ಕಾರಿ ನೌಕರರ 30% ಸಂಬಳ ಕಟ್!
Recommended image2
ಭೀಕರ ಅಪಘಾತದಲ್ಲಿ ಮೂವರು ಸಬ್ ಇನ್‌ಸ್ಪೆಕ್ಟರ್‌ ಸಾವು, ಇಬ್ಬರು ಎಸ್‌ಐಗಳಿಗೆ ಗಂಭೀರ ಗಾಯ
Recommended image3
ಗಿಳಿಶಾಸ್ತ್ರ ನಂಬಿ 35 ಲಕ್ಷ ರೂ. ಕಳೆದುಕೊಂಡ ಐಟಿ ಅಧಿಕಾರಿ! ವರ್ಗಾವಣೆಗಾಗಿ ಪಂಗನಾಮ ಹಾಕಿಸಿಕೊಂಡ ಆಫೀಸರ್ ಕಥೆ..
Related Stories
Recommended image1
ಟ್ರೋಲಿಗರಿಗೆ ಉತ್ತರಿಸುತ್ತಲೇ ಪತಿಯನ್ನು ಬೀಳ್ಕೊಟ್ಟ ನವ ವಿವಾಹಿತೆ ನಟಿ ರಜಿನಿ ಹೇಳಿದ್ದೇನು?
Recommended image2
ಪ್ರತಿದಿನವೂ ನೈಟ್‌ಗೌನ್ ಧರಿಸುವಂತೆ ಒತ್ತಡ; ಗಂಡನ ವಿರುದ್ಧ ದೂರು ದಾಖಲಿಸಿದ 21ರ ವಿವಾಹಿತೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved