MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • Bengaluru Urban
  • ಕಣ್ಣೀರು ತರಿಸುತ್ತೆ ಚೆನ್ನಮ್ಮರ ಕೊನೆಯ ನಮಸ್ಕಾರ.. ಆಸ್ಪತ್ರೆ ಸೇರುವ 3 ದಿನದ ಹಿಂದೆ ದೇವೇಗೌಡರ ಕೈಹಿಡಿದು ಹೇಳಿದ್ದರು 'ಮೌನ ಸಂದೇಶ'

ಕಣ್ಣೀರು ತರಿಸುತ್ತೆ ಚೆನ್ನಮ್ಮರ ಕೊನೆಯ ನಮಸ್ಕಾರ.. ಆಸ್ಪತ್ರೆ ಸೇರುವ 3 ದಿನದ ಹಿಂದೆ ದೇವೇಗೌಡರ ಕೈಹಿಡಿದು ಹೇಳಿದ್ದರು 'ಮೌನ ಸಂದೇಶ'

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ನಿಧನದ ಬೆನ್ನಲ್ಲೇ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಚೆನ್ನಮ್ಮ ಆಸ್ಪತ್ರೆ ಸೇರುವ ಮೂರು ದಿನಗಳ ಹಿಂದಿನ ವಿಡಿಯೋ ಅದಾಗಿದ್ದು, ನೋಡುಗರ ಕಣ್ಣಾಲೆಗಳನ್ನ ಒದ್ದೆ ಮಾಡುತ್ತಿದೆ...

2 Min read
Author : Ganesh Mabla Gowda
Published : Jul 19 2026, 12:47 PM IST
Share this Photo Gallery
  • FB
  • TW
  • Linkdin
  • Whatsapp
16
ಜೊತೆ ಜೊತೆಯಾಗಿ ನಡೆದವರು
Image Credit : Asianet News

ಜೊತೆ ಜೊತೆಯಾಗಿ ನಡೆದವರು

ಬದುಕಿನ ದಾರಿಯಲ್ಲಿ ಏಳು ದಶಕಗಳ ಕಾಲ ಹೆಜ್ಜೆಗೆ ಹೆಜ್ಜೆಯಾಗಿ ನಡೆದವರು.. ಸುಖದಲ್ಲೂ, ಕಷ್ಟದಲ್ಲೂ ನೆರಳಿನಂತೆ ಪತಿಯ ಬೆನ್ನಿಗೆ ನಿಂತವರು.. ಕನ್ನಡ ನಾಡಿನ 'ದೊಡ್ಡಗೌಡರ' ಬದುಕಿನ ಶಕ್ತಿಯಾಗಿದ್ದ ಚೆನ್ನಮ್ಮ ಅವರು ಇಂದು ನೆನಪು ಮಾತ್ರ. ಆದರೆ, ಅವರು ದೈಹಿಕವಾಗಿ ಮರೆಯಾಗುವ ಕೇವಲ ಮೂರು ದಿನಗಳ ಮುನ್ನ ನಡೆದ ಆ ಒಂದು ದೃಶ್ಯ ಮಾತ್ರ ಈಗ ಕೋಟ್ಯಂತರ ಕನ್ನಡಿಗರ ಕಣ್ಣಾಲಿಗಳನ್ನು ಒದ್ದೆ ಮಾಡುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಆದರ್ಶ ದಂಪತಿಯ ಕೊನೆಯ ಆಪ್ತ ಕ್ಷಣಗಳು
Image Credit : Asianet News

ಆದರ್ಶ ದಂಪತಿಯ ಕೊನೆಯ ಆಪ್ತ ಕ್ಷಣಗಳು

ಅನಾರೋಗ್ಯದಿಂದ ಆಸ್ಪತ್ರೆ ಸೇರುವ ಕೇವಲ ಮೂರು ದಿನಗಳ ಮೊದಲು ಚಿತ್ರೀಕರಿಸಲಾದ ಈ ವಿಡಿಯೋ, ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಎಂಥವರ ಹೃದಯವನ್ನೂ ಚುಚ್ಚುವಂತಿದೆ. ಎದುರು ಬದರು ವೀಲ್ ಚೇರ್ ಮೇಲೆ ಕುಳಿತಿರುವ ಆ ಹಿರಿಯ ಜೀವಗಳು, ಪರಸ್ಪರ ಕಣ್ಣಲ್ಲೇ ಮಾತನಾಡಿಕೊಳ್ಳುತ್ತಿರುವ ದೃಶ್ಯ "ಪ್ರೀತಿ ಎಂದರೆ ಹೀಗಿರಬೇಕು" ಎಂಬುದಕ್ಕೆ ಸಾಕ್ಷಿಯಂತಿದೆ.

Related Articles

Related image1
ತವರೂರು ಅಂದರೆ ಚೆನ್ನಮ್ಮಗೆ ತಾಯಿಯಂಥ ಪ್ರೀತಿ.. 3 ದೇವಸ್ಥಾನ, ಹೈಸ್ಕೂಲ್, ಆಸ್ಪತ್ರೆ ಏನೆಲ್ಲ ಕಟ್ಟಿಸಿಕೊಟ್ಟಿದ್ದರು?
Related image2
ಅಜ್ಜಿ ಅಗಲಿಕೆ ಸುದ್ದಿ ತಿಳಿದು ಜೈಲಿನಲ್ಲೇ ಕಣ್ಣೀರಿಟ್ಟ ಪ್ರಜ್ವಲ್ ರೇವಣ್ಣ..
36
ನಾನಿದ್ದೇನೆ.. ಹೆದರಬೇಡ: ಗೌಡರ ಆ ಅಭಯ ಹಸ್ತ!
Image Credit : Asianet News

ನಾನಿದ್ದೇನೆ.. ಹೆದರಬೇಡ: ಗೌಡರ ಆ ಅಭಯ ಹಸ್ತ!

ವಿಡಿಯೋದಲ್ಲಿ ಚೆನ್ನಮ್ಮ ಅವರು ಸ್ವಲ್ಪ ಆಹಾರ ಸೇವಿಸುತ್ತಿರುತ್ತಾರೆ. ಎದುರಿಗೆ ಕುಳಿತಿರುವ ದೇವೇಗೌಡರು, ಮುಗುಳ್ನಗುತ್ತಲೇ ತಮ್ಮ ಪ್ರೀತಿಯ ಪತ್ನಿಯ ಬಲಗೈಯನ್ನು ಹಿಡಿದು ಸವರುತ್ತಾರೆ. "ಏನೂ ಆಗಲ್ಲ, ಧೈರ್ಯವಾಗಿರು" ಎಂದು ಕೈತಟ್ಟುತ್ತಾ ಅಭಯ ನೀಡುತ್ತಾರೆ. ಅಷ್ಟಕ್ಕೇ ನಿಲ್ಲದ ಗೌಡರು, ಪತ್ನಿಯ ಭುಜದ ಮೇಲೆ ಮೆಲ್ಲಗೆ ಕೈಹಾಕಿ ಸಮಾಧಾನಪಡಿಸುತ್ತಾರೆ. ಏಳು ದಶಕಗಳ ಕಾಲ ತನ್ನನ್ನು ಕಾಯ್ದ ತಾಯಿಗೆ, ಆಪತ್ಕಾಲದಲ್ಲಿ ಮಗನಂತೆ ಬೆಂಬಲವಾಗಿ ನಿಂತ ಗೌಡರ ಆ ಪ್ರೀತಿ ಮೈ ಜುಂ ಎನ್ನುವಂತಿದೆ.

46
ಕೊನೆಯವರೆಗೂ ಬಿಡದ ಪತಿ ಭಕ್ತಿ
Image Credit : Asianet News

ಕೊನೆಯವರೆಗೂ ಬಿಡದ ಪತಿ ಭಕ್ತಿ

ಚೆನ್ನಮ್ಮನವರಿಗೆ ಹಣ್ಣು ತಿನ್ನಲು ಸ್ವಲ್ಪ ಕಷ್ಟವಾದಾಗ, ದೇವೇಗೌಡರು ತಾವೇ ಕೈಯಿಂದ ಸಹಾಯ ಮಾಡುತ್ತಾರೆ. ಆದರೆ, ಅಷ್ಟೊಂದು ಅಶಕ್ತತೆಯಲ್ಲೂ ಚೆನ್ನಮ್ಮನವರಿಗೆ ಪತಿಯ ಮೇಲಿನ ಕಾಳಜಿ ಮಾತ್ರ ಕಿಂಚಿತ್ತೂ ಕಡಿಮೆಯಾಗಿರಲಿಲ್ಲ. ದೇವೇಗೌಡರ ಪಂಚೆಯ ಮೇಲೆ ಬಿದ್ದಿದ್ದ ಸಣ್ಣ ದೂಳು ಅಥವಾ ಆಹಾರದ ಕಣವನ್ನು ಕಂಡ ತಕ್ಷಣ, ತಮ್ಮ ನಡುಗುವ ಕೈಗಳಿಂದಲೇ ಅದನ್ನು ಸವರುತ್ತಾ ಕ್ಲೀನ್ ಮಾಡುತ್ತಾರೆ. ಜೀವನದುದ್ದಕ್ಕೂ ಪತಿಯನ್ನು ಅಚ್ಚುಕಟ್ಟಾಗಿ ನೋಡಿಕೊಂಡ ಆ ತಾಯಿಯ ಗುಣಕ್ಕೆ ಬೆಲೆ ಕಟ್ಟಲು ಸಾಧ್ಯವೇ?

56
ಹೃದಯ ಹಿಂಡುವ ನಮಸ್ಕಾರ!
Image Credit : Asianet News

ಹೃದಯ ಹಿಂಡುವ ನಮಸ್ಕಾರ!

ಈ ಎಲ್ಲದಕ್ಕಿಂತ ಹೆಚ್ಚಾಗಿ ನೋಡುಗರ ಎದೆಯಲ್ಲಿ ಭಾರವಾಗುವುದು ವಿಡಿಯೋದ ಕೊನೆಯ ಕ್ಷಣ. ತಾವು ಕುಳಿತಿದ್ದ ವೀಲ್ ಚೇರ್‌ನಿಂದಲೇ ಬಾಗಿ, ಪತಿ ದೇವೇಗೌಡರ ಕಾಲುಗಳನ್ನ ಮುಟ್ಟಿ ಚೆನ್ನಮ್ಮ ನಮಸ್ಕರಿಸುತ್ತಾರೆ. ಬಹುಶಃ ಆ ತಾಯಿಗೆ ತಾನು ಮರೆಯಾಗುತ್ತೇನೆ ಎಂಬ ಸಣ್ಣ ಸುಳಿವು ಸಿಕ್ಕಿತ್ತೇನೋ? ಅಥವಾ ಮುಂದಿನ ಜನ್ಮದಲ್ಲೂ ನೀವೇ ಪತಿಯಾಗಿ ಸಿಗಲಿ ಎಂಬ ಮೌನ ಪ್ರಾರ್ಥನೆಯೋ? ಆ ಪಾದ ನಮಸ್ಕಾರದ ದೃಶ್ಯ ಈಗ ಎಂಥವರ ಕಣ್ಣಲ್ಲೂ ನೀರು ತರಿಸುತ್ತಿದೆ.

66
ಹೋಗಿ ಬನ್ನಿ ಚೆನ್ನಮ್ಮಮ್ಮ.. ನಿಮ್ಮ ಈ ಪ್ರೀತಿ ಎಂದಿಗೂ ಅಮರ..
Image Credit : Asianet News

ಹೋಗಿ ಬನ್ನಿ ಚೆನ್ನಮ್ಮಮ್ಮ.. ನಿಮ್ಮ ಈ ಪ್ರೀತಿ ಎಂದಿಗೂ ಅಮರ..

ಚೆನ್ನಮ್ಮ ಅವರು ಈಗ ಇಲ್ಲದಿರಬಹುದು. ಆದರೆ, ವೀಲ್ ಚೇರ್ ಮೇಲೆ ಕುಳಿತು ಒಬ್ಬರಿಗೊಬ್ಬರು ಸಾಂತ್ವನ ನೀಡಿದ, ಪರಸ್ಪರರ ಕೈಹಿಡಿದು ಬೆಚ್ಚಗೆ ಸವರಿದ ಈ ದೃಶ್ಯಗಳು ಮಾತ್ರ ಇತಿಹಾಸದಲ್ಲಿ ಉಳಿಯಲಿವೆ. ರಾಜಕೀಯದ ಏಳು-ಬೀಳುಗಳ ನಡುವೆ, ಪ್ರೀತಿ ಮತ್ತು ನಿಷ್ಠೆಯ ಸುಂದರ ಕಾವ್ಯದಂತೆ ಬದುಕಿದ ಈ ದಂಪತಿಗಳಿಗೆ ಇಡೀ ನಾಡು ಇಂದು ಕಣ್ಣೀರಿನ ವಿದಾಯ ಕೋರುತ್ತಿದೆ.

About the Author

GM
Ganesh Mabla Gowda
ಎಚ್‌.ಡಿ. ದೇವೇಗೌಡ
ಬೆಂಗಳೂರು
ಸುದ್ದಿ
ಹೆಚ್.ಡಿ. ಕುಮಾರಸ್ವಾಮಿ

Latest Videos
Recommended Stories
Recommended image1
ಬೆಂಗಳೂರು ಹವಾಮಾನ vs EMI... ಕಾಮಿಡಿಯನ್ ಕೊಟ್ಟ ಪಂಚ್... ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್!
Recommended image2
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಎಂಟ್ರಿ-ಎಕ್ಸಿಟ್‌ ಪಾಯಿಂಟ್‌ ಬಂದ್: NHAI ನಿರ್ಧಾರಕ್ಕೆ ಸ್ಥಳೀಯರ ತೀವ್ರ ಆಕ್ರೋಶ!
Recommended image3
DK Shivakumar: ಮುಂಗಾರು ಮಳೆ ಕೊರತೆ: ಬರದ ನಾಡಿಗೆ ಸಿಎಂ ಸಿದ್ಧತೆ; ಇಂದು ಸರಣಿ ಸಭೆ
Related Stories
Recommended image1
ತವರೂರು ಅಂದರೆ ಚೆನ್ನಮ್ಮಗೆ ತಾಯಿಯಂಥ ಪ್ರೀತಿ.. 3 ದೇವಸ್ಥಾನ, ಹೈಸ್ಕೂಲ್, ಆಸ್ಪತ್ರೆ ಏನೆಲ್ಲ ಕಟ್ಟಿಸಿಕೊಟ್ಟಿದ್ದರು?
Recommended image2
ಅಜ್ಜಿ ಅಗಲಿಕೆ ಸುದ್ದಿ ತಿಳಿದು ಜೈಲಿನಲ್ಲೇ ಕಣ್ಣೀರಿಟ್ಟ ಪ್ರಜ್ವಲ್ ರೇವಣ್ಣ..
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved