Asianet Suvarna News Asianet Suvarna News

Santosh Trophy: ಇಂದು ಕರ್ನಾ​ಟಕ-ಮೇಘಾ​ಲ​ಯ ಫೈನಲ್‌ ಹಣಾ​ಹಣಿ, ಇತಿಹಾಸ ಬರೆಯುತ್ತಾ ರಾಜ್ಯ ತಂಡ?

ಸಂತೋಷ್ ಟ್ರೋಫಿ ಫೈನಲ್‌ನಲ್ಲಿ ಕರ್ನಾಟಕ-ಮೇಘಾಲಯ ಫೈನಲ್‌ ಫೈಟ್‌
ಐದು ದಶಕಗಳ ಬಳಿಕ ಸಂತೋಷ್ ಟ್ರೋಫಿ ಗೆಲ್ಲುವ ನಿರೀಕ್ಷೆಯಲ್ಲಿ ಕರ್ನಾಟಕ
5ನೇ ಬಾರಿಗೆ ಸಂತೋಷ್ ಟ್ರೋಫಿ ಗೆಲ್ಲುವ ಕನವರಿಕೆಯಲ್ಲಿ ರಾಜ್ಯ ತಂಡ

Santosh Trophy Final Karnataka to cross swords with Meghalaya kvn
Author
First Published Mar 4, 2023, 9:29 AM IST

ರಿಯಾ​ದ್‌(ಮಾ.04): 54 ವರ್ಷ​ಗಳ ಬಳಿಕ ಮತ್ತೊಮ್ಮೆ ಪ್ರತಿ​ಷ್ಠಿತ ಸಂತೋಷ್‌ ಟ್ರೋಫಿ ಫುಟ್ಬಾಲ್‌ ಟೂರ್ನಿಯಲ್ಲಿ ಚಾಂಪಿ​ಯನ್‌ ಪಟ್ಟಅಲಂಕ​ರಿ​ಸಲು ಎದುರು ನೋಡು​ತ್ತಿ​ರುವ ಕರ್ನಾ​ಟಕ ತಂಡ ಶನಿ​ವಾರ ಫೈನ​ಲ್‌​ನಲ್ಲಿ ಮೇಘಾ​ಲಯ ವಿರುದ್ಧ ಸೆಣ​ಸಾ​ಡ​ಲಿದೆ. ಪಂದ್ಯಕ್ಕೆ ರಿಯಾ​ದ್‌ನ ಕಿಂಗ್‌ ಫಹದ್‌ ಕ್ರೀಡಾಂಗಣ ಆತಿಥ್ಯ ವಹಿ​ಸ​ಲಿ​ದೆ.

ಟೂರ್ನಿಯ ಅಂತಿಮ ಸುತ್ತಿ​ನಲ್ಲಿ ಹಾಲಿ ಚಾಂಪಿ​ಯನ್‌ ಕೇರ​ಳ​ವನ್ನು ಸೋಲಿ​ಸಿ ಅಚ್ಚರಿ ಮೂಡಿ​ಸಿ​ದ್ದ ಕರ್ನಾ​ಟಕ, ಸೆಮಿ​ಫೈ​ನ​ಲ್‌​ನಲ್ಲಿ 6 ಬಾರಿ ಚಾಂಪಿ​ಯನ್‌ ಸರ್ವಿ​ಸಸ್‌ ವಿರುದ್ಧ ಗೆಲುವು ಸಾಧಿ​ಸಿತ್ತು. 1968-69ರಲ್ಲಿ ಕೊನೆ ಬಾರಿ ಪ್ರಶಸ್ತಿ ಗೆದ್ದಿದ್ದ ರಾಜ್ಯ ತಂಡ, ಕೊನೆ ಬಾರಿಗೆ ಫೈನಲ್‌ನಲ್ಲಿ ಆಡಿದ್ದು 1975-76ರಲ್ಲಿ. ಇದೀಗ 5ನೇ ಪ್ರಶ​ಸ್ತಿ ತನ್ನ​ದಾ​ಗಿ​ಸಿ​ಕೊ​ಳ್ಳುವ ನಿರೀ​ಕ್ಷೆ​ಯ​ಲ್ಲಿದೆ.

ಮತ್ತೊಂದೆಡೆ ಮೇಘಾ​ಲಯ ಸೆಮೀ​ಸ್‌​ನಲ್ಲಿ ಮಾಜಿ ಚಾಂಪಿ​ಯ​ನ್‌ ಪಂಜಾ​ಬ್‌ಗೆ ಸೋಲು​ಣಿ​ಸಿದ್ದು, ಚೊಚ್ಚಲ ಪ್ರಯ​ತ್ನ​ದಲ್ಲೇ ಐತಿ​ಹಾ​ಸಿಕ ಟ್ರೋಫಿ ಗೆಲ್ಲುವ ತವ​ಕ​ದ​ಲ್ಲಿ​ದೆ. ಎರಡೂ ತಂಡಗಳು ಯುವ ಹಾಗೂ ಅನುಭವಿ ಆಟಗಾರರಿಂದ ಕೂಡಿದ್ದು, ಭಾರೀ ಪೈಪೋಟಿ ನಿರೀಕ್ಷಿಸಲಾಗಿದೆ.

ಪಂದ್ಯ: ರಾತ್ರಿ 9ಕ್ಕೆ, ನೇರ​ಪ್ರ​ಸಾ​ರ: ಫ್ಯಾನ್‌​ಕೋ​ಡ್‌

ಭಾರತದ ಪುರುಷರ ಹಾಕಿ ತಂಡಕ್ಕೆ ದಕ್ಷಿಣ ಆಫ್ರಿಕಾದ ಫುಲ್ಟನ್‌ ಕೋಚ್

ನವ​ದೆ​ಹ​ಲಿ(ಮಾ.04): ಭಾರ​ತದ ಪುರು​ಷರ ಹಾಕಿ ತಂಡಕ್ಕೆ ದಕ್ಷಿಣ ಆ​ಫ್ರಿ​ಕಾದ ಕ್ರೇಗ್‌ ಫುಲ್ಟನ್‌ ನೂತನ ಕೋಚ್‌ ಆಗಿ ನೇಮ​ಕ​ಗೊಂಡಿ​ದ್ದಾರೆ. ತಂಡ ಹಾಕಿ ವಿಶ್ವ​ಕಪ್‌ನಲ್ಲಿ ಸಾಧಾರಣ ಪ್ರದರ್ಶನ ತೋರಿದ ಬಳಿಕ ಆಸ್ಪ್ರೇಲಿಯಾದ ಗ್ರಹಾಂ ರೀಡ್‌ ರಾಜೀನಾಮೆ ನೀಡಿದ್ದರು. ಇದರಿಂದ ತೆರವುಗೊಂಡಿದ್ದ ಸ್ಥಾನವನ್ನು ಫುಲ್ಟನ್‌ ತುಂಬಲಿದ್ದಾರೆ.

ದಕ್ಷಿಣ ಆ​ಫ್ರಿಕಾ ಪರ 195 ಪಂದ್ಯ​ಗ​ಳ​ನ್ನಾ​ಡಿ​ರುವ ಫುಲ್ಟನ್‌ಗೆ ಕೋಚಿಂಗ್‌​ನಲ್ಲಿ 25 ವರ್ಷ​ಗಳ ಅನುಭವವಿದೆ. ಅವರ ಮಾರ್ಗದರ್ಶನದಲ್ಲಿ ಐರ್ಲೆಂಡ್‌ 100 ವರ್ಷಗಳಲ್ಲೇ ಮೊದಲ ಬಾರಿಗೆ 2016ರಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿತ್ತು. ಹಾಲಿ ಒಲಿಂಪಿಕ್‌ ಚಾಂಪಿಯನ್‌ ಬೆಲ್ಜಿಯಂ ತಂಡದೊಂದಿಗೂ ಕೆಲಸ ಮಾಡಿದ ಅನುಭವವಿರುವ ಪುಲ್ಟ​ನ್‌​ಗೆ 2015ರ ಎಫ್‌ಐಎಚ್‌ ಶ್ರೇಷ್ಠ ಕೋಚ್‌ ಪ್ರಶಸ್ತಿ ಲಭಿ​ಸಿತ್ತು. ಅವರು ಸದ್ಯದಲ್ಲೇ ತಂಡ ಕೂಡಿಕೊಳ್ಳಲಿದ್ದಾರೆ ಎಂದು ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್‌ ಟಿರ್ಕೆ ತಿಳಿಸಿದ್ದಾರೆ.

Indian Super League: ಸೆಮೀಸ್‌ಗೆ ಬೆಂಗಳೂರು ಎಫ್‌ಸಿ ಲಗ್ಗೆ..! ವಿವಾದ ಮಾಡಿ ಮೈದಾನ ತೊರೆದ ಕೇರಳ

ಕಬಡ್ಡಿ ಫೈನಲ್‌ಗೆ ಭಾರತ

ಉರ್ಮಿಯಾ: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಸೋಲಿಸಿ ಎರಡನೇ ಆವೃತ್ತಿಯ ಕಿರಿಯರ ಕಬಡ್ಡಿ ವಿಶ್ವ ಚಾಂಪಿಯನ್‌ಶಿಪ್‌ ಫೈನಲ್‌ಗೇರಲಿದೆ. ಚೊಚ್ಚಲ ಬಾರಿ ಟೂರ್ನಿಯಲ್ಲಿ ಆಡುತ್ತಿರುವ ಭಾರತ ಶುಕ್ರವಾರ ಸೆಮೀಸ್‌ನಲ್ಲಿ 75-29ರಲ್ಲಿ ಜಯಿಸಿತು. ಮತ್ತೊಂದು ಸೆಮೀಸ್‌ನಲ್ಲಿ ನೇಪಾಳವನ್ನು ಹಾಲಿ ಚಾಂಪಿಯನ್‌ ಇರಾನ್ 60-37ರಲ್ಲಿ ಮಣಿಸಿತು. ಭಾನುವಾರ ಫೈನಲ್‌ ನಡೆಯಲಿದೆ.

Follow Us:
Download App:
  • android
  • ios