Asianet Suvarna News Asianet Suvarna News

Dattatreya Jayanti 2022 ಯಾವಾಗ? ದತ್ತಾತ್ರೇಯರ ಕತೆಯೇನು?

ಈ ಬಾರಿ ದತ್ತಾತ್ರೇಯ ಜಯಂತಿಯದು ಎರಡು ಶುಭ ಯೋಗಗಳು ಉಂಟಾಗುತ್ತಿವೆ.. ಅಂದ ಹಾಗೆ ದತ್ತಾತ್ರೇಯ ಜಯಂತಿ ಯಾವಾಗ? ಈ ದಿನದ ಮಹತ್ವವೇನು?

When is Dattatreya Jayanti 2022 know the worship method and importance skr
Author
First Published Dec 3, 2022, 11:59 AM IST

ಉಪವಾಸ, ಪೂಜೆ ಮತ್ತು ಧಾರ್ಮಿಕ ಕಾರ್ಯಗಳಿಗೆ ವರ್ಷದ ಕೊನೆಯ ತಿಂಗಳನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಈ ತಿಂಗಳಲ್ಲಿ ಅನೇಕ ಉಪವಾಸಗಳನ್ನು ಆಚರಿಸಲಾಗುತ್ತದೆ. ದತ್ತಾತ್ರೇಯ ಜಯಂತಿಯನ್ನು ಮಾರ್ಗಶಿರ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ದತ್ತಾತ್ರೇಯ ಪೂರ್ಣಿಮೆ ಅಂದರೆ ಭಗವಾನ್ ದತ್ತಾತ್ರೇಯ ಜಯಂತಿಯನ್ನು ಈ ಬಾರಿ ಡಿಸೆಂಬರ್ 7ರಂದು ಆಚರಿಸಲಾಗುತ್ತದೆ. ಈ ದಿನದಂದು ದತ್ತಾತ್ರೇಯನ ಆರಾಧನೆಗೆ ವಿಶೇಷ ಮಹತ್ವವಿದೆ.

ದತ್ತ ಜಯಂತಿಯಂದು ಶುಭ ಯೋಗ
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ದತ್ತಾತ್ರೇಯ ಜಯಂತಿಯಂದು ಎರಡು ಮಂಗಳಕರ ಯೋಗಗಳು ರೂಪುಗೊಳ್ಳುತ್ತವೆ. ಸರ್ವಾರ್ಥ ಸಿದ್ಧಿ ಮತ್ತು ಸದ್ಯ ಯೋಗವನ್ನು ಮಾಡಲಾಗುತ್ತಿದ್ದು, ಇದು ಡಿಸೆಂಬರ್ 7 ರಂದು ಇಡೀ ದಿನ ಉಳಿಯುತ್ತದೆ. ಹುಣ್ಣಿಮೆಯು ಡಿಸೆಂಬರ್ 7ರಂದು ಬೆಳಿಗ್ಗೆ 8ರಿಂದ ಪ್ರಾರಂಭವಾಗಲಿದೆ ಮತ್ತು ಮರುದಿನ ಡಿಸೆಂಬರ್ 8ರಂದು ಬೆಳಿಗ್ಗೆ 9.38ರವರೆಗೆ ಇರುತ್ತದೆ. ದತ್ತಾತ್ರೇಯ ದೇವರನ್ನು ಸಂಜೆ ಪೂಜಿಸಲಾಗುತ್ತದೆ.

ದತ್ತಾತ್ರೇಯ ಜಯಂತಿ 2022ರ ಮಹತ್ವ
ಈ ದಿನ ದತ್ತಾತ್ರೇಯನನ್ನು ಪೂಜಿಸುವುದರಿಂದ ಶಿವ, ವಿಷ್ಣು ಮತ್ತು ಬ್ರಹ್ಮದೇವರ ಆಶೀರ್ವಾದ ಸಿಗುತ್ತದೆ ಎಂದು ನಂಬಲಾಗಿದೆ. ಇದರಿಂದಾಗಿ ಆರ್ಥಿಕ ಬೆಳವಣಿಗೆ ಸೇರಿದಂತೆ ಅನೇಕ ಇತರ ಪ್ರಯೋಜನಗಳಿಗೆ ಮನ್ನಣೆ ಇದೆ.

ಶುಕ್ರ ಬುಧರ ಆಶೀರ್ವಾದದಿಂದ 3 ರಾಶಿಗಳಿಗೆ Laxmi Narayan RajYog

ಭಗವಾನ್ ದತ್ತಾತ್ರೇಯ ಯಾರು?
ದಂತಕಥೆ ಮತ್ತು ನಂಬಿಕೆಯ ಪ್ರಕಾರ, ಮಹರ್ಷಿ ಅತ್ರಿ ಮುನಿಯ ಪತ್ನಿ ಅನುಸೂಯಾ ತುಂಬಾ ಧರ್ಮನಿಷ್ಠೆ ಉಳ್ಳವಳು ಮತ್ತು ತನ್ನ ಗಂಡನ ಧರ್ಮವನ್ನು ಅತ್ಯಂತ ನಿಜವಾದ ಹೃದಯದಿಂದ ಅನುಸರಿಸುತ್ತಿದ್ದಳು. ಒಮ್ಮೆ ತಾಯಿ ಪಾರ್ವತಿ, ಸರಸ್ವತಿ ಮತ್ತು ಲಕ್ಷ್ಮಿ ಅನುಸೂಯಾಳ ಪರಿಶುದ್ಧತೆಯನ್ನು ಪರೀಕ್ಷಿಸಲು ನಿರ್ಧರಿಸಿದರು. ಮೂರು ದೇವತೆಗಳು ವಿಷ್ಣು, ಶಂಕರ ಮತ್ತು ಬ್ರಹ್ಮನನ್ನು ಋಷಿಗಳ ರೂಪದಲ್ಲಿ ಆಕೆಯ ಆಶ್ರಮಕ್ಕೆ ಕಳುಹಿಸಿದರು.

ಋಷಿಗಳ ರೂಪದಲ್ಲಿ ಅವರು ಅತ್ರಿಗಳ ಆಶ್ರಮವನ್ನು ತಲುಪಿದ ತಕ್ಷಣ, ಆಹಾರವನ್ನು ಹೊಂದುವ ಬಯಕೆಯನ್ನು ವ್ಯಕ್ತಪಡಿಸಿದರು. ಅನುಸೂಯಾಳನ್ನು ಗೌರವದಿಂದ ಕುಳಿತುಕೊಳ್ಳುವಂತೆ ಮಾಡಿದರು ಮತ್ತು ಆಹಾರವನ್ನು ಸೇವಿಸುವಂತೆ ಒತ್ತಾಯಿಸಿದರು. ನೀವು ನಮಗೆ ಬೆತ್ತಲೆಯಾಗಿ ತಿನ್ನಿಸಿದಾಗ ಮಾತ್ರ ನಾವು ಆಹಾರವನ್ನು ತೆಗೆದುಕೊಳ್ಳುತ್ತೇವೆ ಎಂದು ಮೂವರು ಸಾಧುಗಳು ಹೇಳಿದರು.

vastu tips: ಮನೆಯಲ್ಲಿದ್ದರೆ ಕುಬೇರ, ಲಕ್ಷ್ಮಿಯ ಈ ಪೋಟೋ, ಹಣಕಾಸಿಗಿರದು ಕೊರತೆ

ಇದನ್ನು ಕೇಳಿದ ಆಕೆ ಆಳವಾದ ಯೋಚನೆಗೆ ಬಿದ್ದಳು. ಆಹಾರ ಅರಸಿ ಬಂದವರನ್ನು ಹಾಗೆಯೇ ಕಳಿಸುವಂತಿರಲಿಲ್ಲ. ಆದರೆ ಅವರ ಷರತ್ತು ವಿಚಿತ್ರವಾಗಿತ್ತು. ಆಗ ಆಕೆ ಮಹರ್ಷಿ ಅತ್ರಿ ಮುನಿಯನ್ನು ಧ್ಯಾನಿಸಿದಾಗ ತ್ರಿಮೂರ್ತಿಗಳೇ ಋಷಿಗಳ ರೂಪದಲ್ಲಿ ಕಾಣಿಸಿಕೊಂಡಿರುವ ಅರಿವಾಯಿತು. ಆಕೆ ಮಹರ್ಷಿಗಳ ಕಮಂಡಲದಿಂದ ನೀರನ್ನು ಹೊರತೆಗೆದು ಮೂರು ಋಷಿಗಳ ಮೇಲೆ ಸಿಂಪಡಿಸುತ್ತಿದ್ದಂತೆ ಅವರೆಲ್ಲರೂ 6 ತಿಂಗಳ ಶಿಶುಗಳಾದರು. ಅದರ ನಂತರ ಅನುಸೂಯಾ ಅವರ ಬೇಡಿಕೆಯಂತೆ ಬೆತ್ತಲಾಗಿ ಮಕ್ಕಳಿಗೆ ಆಹಾರ ತಿನ್ನಿಸಿದಳು. 

ಹಲವಾರು ತಿಂಗಳವರೆಗೆ, ಮೂವರು ದೇವತೆಗಳು ತಮ್ಮ ಗಂಡನ ಅಗಲಿಕೆಯಿಂದ ವಿಚಲಿತರಾಗಿದ್ದರು ಮತ್ತು ತಮ್ಮ ತಪ್ಪಿಗೆ ಕ್ಷಮೆ ಕೇಳಲು ಭೂಮಿಯನ್ನು ತಲುಪಿದರು. ಕಥೆಯ ಪ್ರಕಾರ, ಎಲ್ಲಾ ಮೂರು ದೇವತೆಗಳು ಸಹ ತಮ್ಮ ತಪ್ಪಿಗೆ ಕ್ಷಮೆ ಯಾಚಿಸಿದರು. ಅನುಸೂಯ ಗರ್ಭದಿಂದ ಜನಿಸುವ ಮಗುವಿನಲ್ಲಿ ತ್ರಿಮೂರ್ತಿಗಳ ಸ್ವರೂಪವಿರುತ್ತದೆ ಎಂದು ಆಶೀರ್ವದಿಸಿದರು. ಅದರ ನಂತರ ಜನಿಸಿದ ಮಗುವಿಗೆ ಎಲ್ಲಾ ಮೂರು ದೇವತೆಗಳ ಅಂಶವಿತ್ತು, ಅದನ್ನು ದತ್ತಾತ್ರೇಯ ಎಂದು ಕರೆಯಲಾಯಿತು. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios