Asianet Suvarna News Asianet Suvarna News

ವೆಂಕಟೇಶನ ಭಕ್ತರಿಗೇ ನಾಮ: ತಿರುಪತಿ ದೇಗುಲ ಸಿಬ್ಬಂದಿ ಬಂಧನ

ತಲಾ 3000 ರು.ಮುಖಬೆಲೆಯ ವಿಐಪಿ ದರ್ಶನದ ಟಿಕೆಟ್‌ಗಳನ್ನು ತಿರುಪತಿ ದೇಗುಲದ ಸಿಬ್ಬಂದಿಯೊಬ್ಬ ಭರ್ಜರಿ 42 ಸಾವಿರ ರು.ಗೆ ಮಾರಾಟ ಮಾಡಿ ಸಿಕ್ಕಿಬಿದ್ದ ಘಟನೆ ನಡೆದಿದೆ. ಪ್ರಕರಣ ಸಂಬಂಧ ಶಂಕರ್‌ ಎಂಬ ಸಿಬ್ಬಂದಿಯನ್ನು ಬಂಧಿಸಿರುವ ಟಿಟಿಡಿಯ ವಿಚಕ್ಷಣಾ ದಳ, ಈ ಕುರಿತು ತನಿಖೆ ಮುಂದುವರೆಸಿದೆ.

Tirupati staff arrested for cheating who sold tickets for 42 thousand which actually price was only 3000 akb
Author
First Published Jul 9, 2023, 7:09 AM IST | Last Updated Jul 9, 2023, 7:13 AM IST

ತಿರುಪತಿ: ತಲಾ 3000 ರು.ಮುಖಬೆಲೆಯ ವಿಐಪಿ ದರ್ಶನದ ಟಿಕೆಟ್‌ಗಳನ್ನು ತಿರುಪತಿ ದೇಗುಲದ ಸಿಬ್ಬಂದಿಯೊಬ್ಬ ಭರ್ಜರಿ 42 ಸಾವಿರ ರು.ಗೆ ಮಾರಾಟ ಮಾಡಿ ಸಿಕ್ಕಿಬಿದ್ದ ಘಟನೆ ನಡೆದಿದೆ. ಪ್ರಕರಣ ಸಂಬಂಧ ಶಂಕರ್‌ ಎಂಬ ಸಿಬ್ಬಂದಿಯನ್ನು ಬಂಧಿಸಿರುವ ಟಿಟಿಡಿಯ ವಿಚಕ್ಷಣಾ ದಳ, ಈ ಕುರಿತು ತನಿಖೆ ಮುಂದುವರೆಸಿದೆ. ಕೆಲ ಸಿಬ್ಬಂದಿ ಟಿಕೆಟ್‌ಗಳನ್ನು ಕಾಳಸಂತೆಯಲ್ಲಿ ಮಾರಿಕೊಳ್ಳುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪಡೆದಿದ್ದ ವಿಚಕ್ಷಣಾ ದಳದ ಸಿಬ್ಬಂದಿ, ಇತ್ತೀಚೆಗೆ ವಿಐಪಿ ಟಿಕೆಟ್‌ ಪಡೆದು ದರ್ಶನಕ್ಕೆ ಬಂದಿದ್ದ ಹೈದರಾಬಾದ್‌ನ 6 ಯಾತ್ರಿಗಳನ್ನು, ‘ಖಚಿತ ಟಿಕೆಟ್‌ ಹೇಗೆ ಸಿಕ್ಕಿತು?’ ಎಂದು ಪ್ರಶ್ನಿಸಿದ್ದರು. ಈ ವೇಳೆ ಅವರು ಶಂಕರ್‌ ಎಂಬ ಸಿಬ್ಬಂದಿ ತಮಗೆ 42 ಸಾವಿರ ರು.ಹಣ ಪಡೆದು ಟಿಕೆಟ್‌ ನೀಡಿದ್ದ ವಿಷಯವನ್ನು ಬಹಿರಂಗಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಶಂಕರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಶಾಸಕರೊಬ್ಬರ ಶಿಫಾರಸು ಪತ್ರವನ್ನು ನಕಲು ಮಾಡಿ ಅದರ ಮೂಲಕ 6 ಟಿಕೆಟ್‌ಗಳನ್ನು ಖರೀದಿಸಿ ಅದನ್ನು ಭಕ್ತರಿಗೆ 42 ಸಾವಿರ ರು.ಗೆ ಮಾರಿದ್ದ ವಿಷಯವನ್ನು ಬಹಿರಂಗಪಡಿಸಿದ್ದಾನೆ. ಹೀಗಾಗಿ ಆತನನ್ನು ವಶಕ್ಕೆ ಪಡೆದಿರುವ ಸಿಬ್ಬಂದಿ, ಇಂಥ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರಬಹುದಾದ ಇತರರ ಬಗ್ಗೆ ಮಾಹಿತಿ ಕಲೆ ಹಾಕುವ ಕೆಲಸ ಆರಂಭಿಸಿದ್ದಾರೆ.

ತಿರುಪತಿಗೆ ಮುಡಿಕೊಟ್ಟ ನಟ ಧನುಷ್ ಮತ್ತು ಮಕ್ಕಳು: ಹೊಸ ಲುಕ್ ವೈರಲ್

ಅಬ್ಬಬ್ಬಾ! ವೆಂಕಟೇಶ್ವರನ ಮೈ ಮೇಲೆ ಏನೆಲ್ಲ ಆಭರಣಗಳಿವೆ ಎಂದು ಬಲ್ಲಿರಾ?

Latest Videos
Follow Us:
Download App:
  • android
  • ios