Asianet Suvarna News Asianet Suvarna News

Chandra Grahan ಸಮಯದಲ್ಲಿ ಹೀಗೆ ಮಾಡಿ, ಹಣದ ಸಮಸ್ಯೆಯಿಂದ ಮುಕ್ತರಾಗಿ!

ಸಿಕ್ಕಾಪಟ್ಟೆ ಹಣದ ಸಮಸ್ಯೆಯೇ? ಹಾಗಿದ್ದರೆ ಇದೋ ಬಂದಿದೆ ಅವಕಾಶ. ಚಂದ್ರಗ್ರಹಣ ಸಂದರ್ಭದಲ್ಲಿ ನೀವು ಯಾವೆಲ್ಲ ಪರಿಹಾರ ಕ್ರಮಗಳನ್ನು ಕೈಗೊಂಡರೆ ಹಣದ ಸಮಸ್ಯೆಗಳಿಂದ ಪಾರಾಗಬಹುದು ಎಂಬುದನ್ನು ನಾವು ಹೇಳುತ್ತೇವೆ.

Take these measures during lunar eclipse to remove money related problems skr
Author
Bangalore, First Published May 14, 2022, 2:18 PM IST

ವರ್ಷದ ಮೊದಲ ಚಂದ್ರಗ್ರಹಣ(Lunar Eclipse)ಕ್ಕೆ ಹೆಚ್ಚು ದಿನಗಳು ಉಳಿದಿಲ್ಲ. ಈ ಗ್ರಹಣವು ಮೇ 16ರಂದು ಸಂಭವಿಸುತ್ತದೆ. ಧಾರ್ಮಿಕ ದೃಷ್ಟಿಕೋನದಿಂದ ಗ್ರಹಣವನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಆದ್ದರಿಂದ, ಈ ಸಮಯದಲ್ಲಿ ಅನೇಕ ರೀತಿಯ ಕೆಲಸಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಹಾಗೆಯೇ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಣದ ಸಮಯದಲ್ಲಿ ಕೆಲವೊಂದು ಕ್ರಮಗಳನ್ನು ಕೈಗೊಂಡರೆ ಗ್ರಹಣದ ದುಷ್ಪರಿಣಾಮಗಳು ದೂರವಾಗುವುದಲ್ಲದೆ ಲಕ್ಷ್ಮಿ ದೇವಿಯ ಅನುಗ್ರಹವನ್ನು ಕೂಡಾ ಪಡೆಯಬಹುದು. ಇದರಿಂದ ಹಣದ ಸಮಸ್ಯೆಗಳು ದೂರವಾಗುತ್ತವೆ. ಈ ಪರಿಹಾರಗಳು ಯಾವೆಲ್ಲ ನೋಡೋಣ.

ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು, ಗ್ರಹಣದ ಸಮಯದಲ್ಲಿ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಿ..

  • ಗ್ರಹಣದ ಮೊದಲು ಸ್ನಾನ ಮಾಡಿ ಮತ್ತು ಹಳದಿ ಬಟ್ಟೆ(yellow cloths)ಗಳನ್ನು ಧರಿಸಿ.
  • ನಂತರ ಗ್ರಹಣ ಪ್ರಾರಂಭವಾದ ತಕ್ಷಣ ಉತ್ತರಾಭಿಮುಖವಾಗಿ ಮನೆಯ ಪೂಜಾ ಸ್ಥಳ(Pooja room)ದಲ್ಲಿ ಕುಳಿತುಕೊಳ್ಳಿ.
  • ನಿಮ್ಮ ಮುಂದೆ ಮರದ ಮಣೆಯನ್ನಿಟ್ಟು ಅದರ ಮೇಲೆ ತಟ್ಟೆಯನ್ನು ಇರಿಸಿ ಮತ್ತು ಅದರ ಮೇಲೆ ಸ್ವಸ್ತಿಕ ಅಥವಾ ಕುಂಕುಮದಿಂದ ಓಂ ಬಿಡಿಸಿ.
  • ನಂತರ ಮಾಡಿದ ಓಂ ಅಥವಾ ಸ್ವಸ್ತಿಕ ಚಿಹ್ನೆಯ ಮೇಲೆ ಮಹಾಲಕ್ಷ್ಮಿ ಯಂತ್ರ(Mahalakshmi Yantra)ವನ್ನು ಸ್ಥಾಪಿಸಿ.
  • ನಂತರ ಇನ್ನೊಂದು ತಟ್ಟೆಯನ್ನು ತೆಗೆದುಕೊಂಡು ಅದನ್ನು ಮಹಾಲಕ್ಷ್ಮಿ ಯಂತ್ರದ ಮುಂದೆ ಇರಿಸಿ. ಆ ತಟ್ಟೆಯಲ್ಲಿ ಶಂಖ(Conch)ವನ್ನು ಇರಿಸಿ.
  • ನಂತರ ಒಂದು ಹಿಡಿ ಅಕ್ಕಿಯನ್ನು ತೆಗೆದುಕೊಂಡು ಅದಕ್ಕೆ ಕೇಸರಿ(Saffron) ಬಣ್ಣ ಹಾಕಿ.
  • ನಂತರ ಆ ಕೇಸರಿ ಅನ್ನವನ್ನು ಶಂಖಕ್ಕೆ ಹಾಕಿ.
  • ಇದರ ನಂತರ, ಯಂತ್ರದ ಮುಂದೆ ತುಪ್ಪದ ದೀಪವನ್ನು ಬೆಳಗಿಸಿ ಮತ್ತು ಹರಳುಗಳ ಮಾಲೆಯೊಂದಿಗೆ ಕೆಳಗೆ ನೀಡಲಾದ ಮಂತ್ರವನ್ನು ಜಪಿಸಿ.
  • 'ಸಿದ್ಧಿ ಬುದ್ಧಿ ಪ್ರದೇ ದೇವಿ ಭುಕ್ತಿ ಮುಕ್ತಿ ಪ್ರದಾಯಿನಿ
  • ಮಂತ್ರಮೂರ್ತೇ ಮಹಾದೇವಿ ಮಹಾಲಕ್ಷ್ಮಿ ನಮೋಸ್ತುತೇ' 
  • ಚಂದ್ರಗ್ರಹಣದ ಅಂತ್ಯದ ನಂತರ, ಈ ಸಂಪೂರ್ಣ ವಸ್ತುವನ್ನು(ಶಂಖವನ್ನು) ನದಿ ಅಥವಾ ಯಾವುದೇ ಹರಿಯುವ ನೀರಿನಲ್ಲಿ ಎಸೆಯಿರಿ.
  • ಈ ಪರಿಹಾರವನ್ನು ಮಾಡುವುದರಿಂದ ಲಾಭದ ಸಾಧ್ಯತೆಗಳು ಹೆಚ್ಚಾಗುತ್ತವೆ.

    ವರ್ಷದ ಮೊದಲ ಚಂದ್ರಗ್ರಹಣ ವೀಕ್ಷಣೆ ಹೇಗೆ?

ವ್ಯಾಪಾರದಲ್ಲಿ ಯಶಸ್ಸನ್ನು ಪಡೆಯಲು, ಚಂದ್ರಗ್ರಹಣದ ಸಮಯದಲ್ಲಿ ಈ ಕ್ರಮಗಳನ್ನು ಕೈಗೊಳ್ಳಿ:

  • ಚಂದ್ರಗ್ರಹಣದ ಮೊದಲು ಸ್ನಾನ ಮಾಡಿ, ಬಿಳಿ(White) ಅಥವಾ ಕೆಂಪು(red) ಬಟ್ಟೆಗಳನ್ನು ಧರಿಸಿ.
  • ಇದರ ನಂತರ, ಮನೆಯ ಪೂಜಾ ಸ್ಥಳದಲ್ಲಿ ಶುದ್ಧವಾದ ಆಸನದ ಮೇಲೆ ಉತ್ತರ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳಿ.
  • ಗ್ರಹಣ ಸಂಭವಿಸಿದ ಕೂಡಲೇ ಮಲ್ಲಿಗೆ ಎಣ್ಣೆಯ ದೀಪವನ್ನು ಹಚ್ಚಿ.
  • ಇದರ ನಂತರ, ನಿಮ್ಮ ಬಲಗೈಯಲ್ಲಿ ರುದ್ರಾಕ್ಷಿಯ ಜಪಮಾಲೆಯನ್ನು ತೆಗೆದುಕೊಳ್ಳಿ ಮತ್ತು ನಿಮ್ಮ ಎಡಗೈಯಲ್ಲಿ 5 ಗೋಮತಿ ಚಕ್ರಗಳನ್ನು ತೆಗೆದುಕೊಳ್ಳಿ.
  • ನಂತರ ತಾಯಿ ಭಗವತಿ ಕಾಳಿ ಮತ್ತು ಶಿವನನ್ನು ಧ್ಯಾನಿಸುವಾಗ, 'ಓಂ ಕ್ರೀಂ ಕಾಳಿಕೇ ಸ್ವಾಹಾ ಓಂ' ಎಂಬ ಮಂತ್ರದ ಜಪಮಾಲೆಯನ್ನು ಪಠಿಸಿ.
  • ಪಠಣವನ್ನು ಪೂರ್ಣಗೊಳಿಸಿದ ನಂತರ, ಗೋಮತಿ ಚಕ್ರಗಳನ್ನು ಪೆಟ್ಟಿಗೆಯಲ್ಲಿ ಇರಿಸಿ.

    ಅಬ್ಬಬ್ಬಾ ಲಾಟ್ರಿ! ಇನ್ನೊಂದು ತಿಂಗಳ ಕಾಲ ಈ ಐದು ರಾಶಿಗಳಿಗೆ ಬುಧಾದಿತ್ಯ ಯೋಗ!
     
  • ಇದರ ನಂತರ 5 ಹೆಸರು ಕಾಳು ತೆಗೆದುಕೊಳ್ಳಿ. ನಂತರ ತಾಯಿ ಭಗವತಿ ಕಾಳಿ ಮತ್ತು ಭಗವಾನ್ ಶಿವನನ್ನು ಸ್ಮರಿಸುತ್ತಾ "ಓಂ ಕ್ರೀಂ ಕಾಲಿಕೇ ಸ್ವಾಹಾ ಓಂ" ಎಂಬ ಮಂತ್ರ ಪಠಿಸಿ.
  • ಮಂತ್ರವನ್ನು ಜಪಿಸಿದ ನಂತರ, ನೀವು ಗೋಮತಿ ಚಕ್ರವನ್ನು ಇರಿಸಿರುವ ಪೆಟ್ಟಿಗೆಯಲ್ಲಿ ಅವನ್ನು ಸಹ ಇರಿಸಿ. 
  • ಇದರ ನಂತರ, ಮಲ್ಲಿಗೆ ದೀಪವನ್ನು ನಂದಿಸಿ ಮತ್ತು ಅದರ ಎಣ್ಣೆಯನ್ನು ಪೆಟ್ಟಿಗೆಯಲ್ಲಿ ಹಾಕಿ.
  • ನಂತರ ಗ್ರಹಣ ಅವಧಿ ಮುಗಿದ ನಂತರ, ಈ ಪೆಟ್ಟಿಗೆಯನ್ನು ಮುಚ್ಚಿ ಮತ್ತು ಕಚೇರಿ ಅಥವಾ ವ್ಯಾಪಾರ ಸ್ಥಳದ ಪೂಜಾ ಸ್ಥಳದಲ್ಲಿ ಇರಿಸಿ.
     
Follow Us:
Download App:
  • android
  • ios