Asianet Suvarna News Asianet Suvarna News

ಬೆಳ್‌ಬೆಳ್ಗೆ ಈ ರೀತಿ ಗೋಸುಂಬೆ ಕಾಣಿಸಿಕೊಂಡ್ರೆ ಹಣ ಕೈಗೆ ಬರುತ್ತಂತ ಅರ್ಥ!

ಗೋಸುಂಬೆ ಕಾಣಿಸಿಕೊಳ್ಳುವುದು, ಅದರ ನೋಟ, ಅದರ ಕ್ರಿಯೆಗಳೆಲ್ಲವನ್ನೂ ಕೆಲವು ಸೂಚನೆಗಳಾಗಿ ಪರಿಗಣಿಸಲಾಗುತ್ತದೆ. ನೀವು ದಾರಿಯಲ್ಲಿ ಹೋಗುವಾಗ ಗೋಸುಂಬೆ ಕಾಣಿಸಿಕೊಂಡರೆ ಮಂಗಳವೋ, ಅಶುಭವೋ ಇಲ್ಲಿ ತಿಳಿಯಿರಿ. 

Seeing a chameleon like this early in the morning is a sign of getting money skr
Author
First Published Jan 17, 2023, 11:04 AM IST

ಶ್ರೀಮದ್ ಭಗವದ್ಗೀತೆಯ 64ನೇ ಅಧ್ಯಾಯದ ಕಥೆಯ ಪ್ರಕಾರ, ಶ್ರೀಕೃಷ್ಣನ ಮಕ್ಕಳು ಕಾಡಿನಲ್ಲಿ ಆಟವಾಡುತ್ತಿದ್ದರು. ಅಲ್ಲಿ ಒಂದು ಊಸರವಳ್ಳಿ ಬಾವಿಯಲ್ಲಿ ಸಿಕ್ಕಿಹಾಕಿಕೊಂಡಿರುವುದು ಕಾಣಿಸಿತು. ಮಕ್ಕಳು ತಮ್ಮ ತಂದೆ ದ್ವಾರಕಾಧೀಶರನ್ನು ತಲುಪಿ ಊಸರವಳ್ಳಿ ಸಿಕ್ಕಿಬಿದ್ದಿರುವ ಬಗ್ಗೆ ತಿಳಿಸಿದಾಗ ದ್ವಾರಕಾಧೀಶ ತಕ್ಷಣ ಬಾವಿಯ ಬಳಿ ತಲುಪಿ ಊಸರವಳ್ಳಿಯನ್ನು ಅಲ್ಲಿಂದ ಹೊರಕ್ಕೆ ತಂದನು.

ಬಾವಿಯಿಂದ ಹೊರಬಂದ ಕೂಡಲೇ ಊಸರವಳ್ಳಿ ರಾಜನ ರೂಪ ತಾಳಿತು. ಆಗ ಶ್ರೀ ಕೃಷ್ಣನು ರಾಜನಿಗೆ ಗೋಸುಂಬೆಯಾದ ಬಗ್ಗೆ ಕೇಳಿದನು. ಆಗ ರಾಜನು ಇದು ನನ್ನ ಪಾಪದ ಫಲವೆಂದು ಹೇಳಿದನು ಮತ್ತು ನೀನು ನನ್ನನ್ನು ಮುಟ್ಟಿದ ಕೂಡಲೇ ನಾನು ಮತ್ತೆ ಮನುಷ್ಯ ರೂಪಕ್ಕೆ ಬಂದೆನು. ಹೀಗೆ ಹೇಳುತ್ತಾ ರಾಜನು ಸ್ವರ್ಗಕ್ಕೆ ಹೋದನು. ಅವನಿಗೆ ಮೋಕ್ಷ ದೊರಕಿತು. ಶಾಪದಿಂದ ಮುಕ್ತಿ ಸಿಕ್ಕಿತು. ಅಂದಿನಿಂದ, ಹಿಂದೂ ಧರ್ಮದಲ್ಲಿ ಗೋಸುಂಬೆಯ ದರ್ಶನವನ್ನು ಮಂಗಳಕರವೆಂದು ಪರಿಗಣಿಸಲಾಗಿದೆ. ಗೋಸುಂಬೆಯ ನೋಟವು ಶುಭ ಮತ್ತು ಅಶುಭಕರ ಚಿಹ್ನೆಗಳನ್ನು ನೀಡುತ್ತದೆ.

ಗೋಸುಂಬೆಯ ಬಗ್ಗೆ ನಮ್ಮಲ್ಲಿ ಹಲವು ನಂಬಿಕೆಗಳಿವೆ. ಕೆಲವರಿಗೆ ಅವನ್ನು ನೋಡಿದರೆ ಮೈ ಚಳಿ ಬರುತ್ತದೆ. ಮತ್ತೆ ಕೆಲವರಿಗೆ ಬಣ್ಣ ಬದಲಿಸುವ ಅವು ಮೋಸಗಾರರಾಗಿ ಕಾಣುತ್ತವೆ. ಮೋಸಗಾರರಿಗೆ ಗೋಸುಂಬೆ ಎನ್ನುವುದೂ ಇದೆ. ಆದರೆ, ಪಾಶ್ಚಾತ್ಯರು ಈ ಗೋಸುಂಬೆಗಳನ್ನೂ ಪ್ರೀತಿಯಿಂದ ಸಾಕುತ್ತಾರೆ. ಅವುಗಳ ಯೋಗಕ್ಷೇಮ ನೋಡಿಕೊಳ್ಳುತ್ತಾರೆ. 

ಶನಿ ರವಿ ಸಂಘರ್ಷ: ನಾಲ್ಕು ರಾಶಿಯ ರಾಜಕಾರಣಿಗಳಿಗೆ ತಪ್ಪದ ಸಂಕಷ್ಟ

ಗೋಸುಂಬೆಗಳನ್ನು ಅನೇಕ ಸಂಸ್ಕೃತಿಗಳಲ್ಲಿ ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗಿದೆ. ಪ್ರಾಚೀನ ಈಜಿಪ್ಟ್ನಲ್ಲಿ, ಗೋಸುಂಬೆಯನ್ನು ಫಲವತ್ತತೆಯ ದೇವತೆ ಹಾಥೋರ್ನೊಂದಿಗೆ ಸಂಬಂಧ ಕಲ್ಪಿಸಲಾಗಿತ್ತು. ಗ್ರೀಸ್ ಮತ್ತು ರೋಮ್ನಲ್ಲಿ, ಅದು ದುಷ್ಟಶಕ್ತಿಗಳನ್ನು ದೂರವಿಡುವ ಶಕ್ತಿಯನ್ನು ಹೊಂದಿದೆ ಎಂದು ನಂಬಲಾಗಿತ್ತು. ಮಧ್ಯಯುಗದಲ್ಲಿ, ಅವು ಪ್ಲೇಗ್ ಅನ್ನು ಗುಣಪಡಿಸಲು ಸಮರ್ಥವಾಗಿವೆ ಎಂದು ಭಾವಿಸಲಾಗಿತ್ತು. ಇಂದು, ಗೋಸುಂಬೆಗಳನ್ನು ಇನ್ನೂ ಅನೇಕ ಜನರು ಅದೃಷ್ಟದ ಸಂಕೇತವೆಂದು ಪರಿಗಣಿಸುತ್ತಾರೆ. ಅದೇನೇ ಇರಲಿ, ಇಂದು ಗೋಸುಂಬೆಯು ನೀಡುವ ಶುಭ, ಅಶುಭ ಚಿಹ್ನೆಗಳ ಬಗ್ಗೆ ತಿಳಿಯೋಣ. 

ಊಸರವಳ್ಳಿಯ ಅಶುಭ ಚಿಹ್ನೆಗಳು
ನಿಮ್ಮ ಕಣ್ಣುಗಳ ಮುಂದೆ ಊಸರವಳ್ಳಿ ಬಣ್ಣ ಬದಲಾಯಿಸುವುದನ್ನು ನೀವು ನೋಡಿದರೆ, ನಿಮ್ಮ ಹತ್ತಿರವಿರುವ ಯಾರಾದರೂ ನಿಮಗೆ ಹಾನಿ ಮಾಡುತ್ತಾರೆ ಎಂದರ್ಥ. ನೀವು ಬಹಳ ನಂಬಿರುವವರು ಗೋಸುಂಬೆಯಂತೆಯೇ ಬಣ್ಣ ಬದಲಿಸಿ ನಿಮಗೆ ನಂಬಿಕೆದ್ರೋಹ ಮಾಡಬಹುದು. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಸುತ್ತಲಿನ ಜನರ ಬಗ್ಗೆ ನೀವು ತಿಳಿದಿರಬೇಕು.

ಊಸರವಳ್ಳಿಯು ನಿಮ್ಮ ಮುಂದೆ ಸಾಯುವುದು ಮತ್ತು ಅದನ್ನು ಕೊಲ್ಲುವುದು ಅಶುಭ. ಅದಕ್ಕಾಗಿಯೇ ಗೋಸುಂಬೆಯನ್ನು ಓಡಿಸಲು ಪ್ರಯತ್ನಿಸುವಾಗ ಅದನ್ನು ಕೊಲ್ಲಬಾರದು. ಇದು ನಿಮ್ಮ ಕೆಲಸಕ್ಕೆ ಅಡ್ಡಿಯಾಗುತ್ತದೆ ಅಥವಾ ನಿಮ್ಮ ಕೆಲಸವು ಹಾಳಾಗುತ್ತದೆ.

Shani Gochar 2023: ಈ ರಾಶಿಗಳಿಗೆ ಸಾಡೇಸಾತಿ, ಧೈಯ್ಯಾ ಶುರು; ಧನು, ತುಲಾ, ಮಿಥುನ ಬಿಡಬಹುದು ನಿಟ್ಟುಸಿರು

ಊಸರವಳ್ಳಿಯ ಮಂಗಳಕರ ಚಿಹ್ನೆ
ಸೋಮವಾರ ಮತ್ತು ಶನಿವಾರದಂದು ಊಸರವಳ್ಳಿ ಕಾಣಿಸಿಕೊಂಡರೆ ಅದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದು ನಿಮಗೆ ಆರ್ಥಿಕ ಲಾಭವನ್ನು ನೀಡುತ್ತದೆ. ನೀವು ಸ್ಥಗಿತಗೊಂಡ ಹಣವನ್ನು ಮರಳಿ ಪಡೆಯುತ್ತೀರಿ ಅಥವಾ ಇದ್ದಕ್ಕಿದ್ದಂತೆ ನೀವು ಎಲ್ಲಿಂದಲಾದರೂ ಹಣವನ್ನು ಪಡೆಯಬಹುದು.
ನೀವು ಯಾವುದಾದರೂ ಕೆಲಸಕ್ಕೆ ಹೋಗುತ್ತಿರುವಾಗ ಇದ್ದಕ್ಕಿದ್ದಂತೆ ಗೋಸುಂಬೆ ಕಂಡರೆ ಅದು ಶುಭ. ಗೋಸುಂಬೆ ನಿಮ್ಮ ದಾರಿಗೆ ಅಡ್ಡ ಬಂದರೆ ನಿಮ್ಮ ಕೆಲಸ ಯಶಸ್ವಿಯಾಗುತ್ತದೆ ಎಂದು ಅರ್ಥ ಮಾಡಿಕೊಳ್ಳಿ.
ಊಸರವಳ್ಳಿ ಕೆಳಗೆ ಬೀಳುವುದು ಕೂಡ ಮಂಗಳಕರ. ಇದು ಹಣವನ್ನು ಪಡೆಯುವ ಸಂಕೇತವಾಗಿದೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios